<p>ಟೋಕಿಯೊ (ಪಿಟಿಐ): ಪಾಕಿಸ್ತಾನವು ಉಗ್ರರಿಗೆ ಸುರಕ್ಷಿತ ನೆಲೆಯಾಗಿದೆ ಎನ್ನುವ ಸೂಚನೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ, `ಗಡಿಯಾಚೆಗಿನ ಭಯೋತ್ಪಾದನೆಯಿಂದ ಆಫ್ಘಾನಿಸ್ತಾನಕ್ಕೆ ಆತಂಕ ಎದುರಾಗಿದ್ದು, ಈ ಪಿಡುಗಿನಿಂದ ಹೊರಬರಲು ಆ ದೇಶಕ್ಕೆ ವಿಶ್ವ ಸಮುದಾಯ ನೆರವು ನೀಡಬೇಕಿದೆ~ ಎಂದಿದ್ದಾರೆ.<br /> <br /> `ಸ್ವಾವಲಂಬನೆಯನ್ನು ಸಾಧಿಸುವ ಆಫ್ಘಾನಿಸ್ತಾನದ ಬಹು ದಿನಗಳ ಕನಸು ನನಸಾಗಲು ನಾವು ನೆರವು ನೀಡುತ್ತಿದ್ದೇವೆ. ಇದರಲ್ಲಿ ಯಶ ಕಂಡರೂ ಅಲ್ಲಿ ಭಯೋತ್ಪಾದನೆ ಬೇರೆ ಬೇರೆ ಸ್ವರೂಪದಲ್ಲಿ ಬೇರು ಬಿಟ್ಟಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು~ ಎಂದು ಆಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಇಲ್ಲಿ ನಡೆಯುತ್ತಿರುವ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.<br /> <br /> `ಸದೃಢ ದೇಶ ಕಟ್ಟಲು ಒಳ್ಳೆಯ ಆಡಳಿತ ಬಹು ಮುಖ್ಯವಾಗುತ್ತದೆ ಎನ್ನುವುದು ಭಾರತದ ಭಾವನೆ. ಉತ್ತಮ ಆಡಳಿತಕ್ಕೆ ಒಂದು ದೇಶವು ತನ್ನ ಭೂಪ್ರದೇಶದ ಮೇಲೆ ಸಂಪೂರ್ಣ ಹಿಡಿತ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ಆಫ್ಘನ್ ವಿಷಯದಲ್ಲಿ ಇದು ಇನ್ನೂ ಈಡೇರಿಲ್ಲ~ ಎಂದು ಅವರು ವಿಶ್ಲೇಷಿಸಿದರು.<br /> <br /> ಈ ಸಮಾವೇಶದಲ್ಲಿ ಸುಮಾರು 70 ದೇಶಗಳು ಹಾಗೂ ಅಂತರರಾಷ್ಟ್ರೀಯ ಮಂಡಳಿಗಳು ಭಾಗವಹಿಸಿವೆ. ಆಫ್ಘಾನಿಸ್ತಾನವು ಸುಸ್ಥಿರ ಅಭಿವೃದ್ಧಿಯ ಕಡೆ ಸಾಗುವಂತೆ ಮಾಡುವುದು ಹಾಗೂ 2014ರ ವರೆಗೆ ಆಫ್ಘನ್ ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಮುದಾಯದ ನಡುವಿನ ಸಹಭಾಗಿತ್ವವನ್ನು ಮತ್ತೆ ದೃಢೀಕರಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ.<br /> <br /> ಕೃಷ್ಣ-ಖರ್ ಭೇಟಿ: ಸಮಾವೇಶದಲ್ಲಿ ಪಾಕ್ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್ ಅವರನ್ನು ಭೇಟಿಯಾದ ಕೃಷ್ಣ, ಪಾಕ್ ನೆಲದಿಂದ ನಡೆಯುತ್ತಿರುವ ಭಾರತ ವಿರೋಧಿ ಕೃತ್ಯಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದರು. ಅಲ್ಲದೇ ಇದಕ್ಕೆ ಭಾರತವು ಹೆಚ್ಚುವರಿಯಾಗಿ ನಿರ್ದಿಷ್ಟ ಪುರಾವೆಗಳನ್ನು ನೀಡಿದೆ ಎಂದೂ ಹೇಳಿದರು.<br /> <br /> ಪಾಕ್ ನೆಲದಿಂದ ಭಾರತದ ವಿರುದ್ಧ ನಡೆಯುವ ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಸಚಿವರು ರಬ್ಬಾನಿ ಅವರಿಗೆ ತಿಳಿಸಿದರು.<br /> <br /> 26/11ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದ ಅಬು ಜುಂದಾಲ್ನ ಹೇಳಿಕೆ, ಲಷ್ಕರ್-ಎ-ತೊಯ್ಬಾ ಸ್ಥಾಪಕ ಹಫೀಜ್ ಸಯೀದ್ ಸೆರೆ, ಸರಬ್ಜಿತ್ ಸಿಂಗ್ ಬಿಡುಗಡೆ ಇತ್ಯಾದಿ ವಿಷಯಗಳು ಉಭಯ ನಾಯಕರ ಮಧ್ಯೆ ಪ್ರಮುಖವಾಗಿ ಚರ್ಚೆಯಾದವು ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<table align="center" border="2" cellpadding="1" cellspacing="1" width="450"> <tbody> <tr> <td>ಆಫ್ಘಾನಿಸ್ತಾನಕ್ಕೆ 16 ಕೋಟಿ ನೆರವು</td> </tr> <tr> <td>ಆಫ್ಘಾನಿಸ್ತಾನಕ್ಕೆ 16 ಶತಕೋಟಿ ಡಾಲರ್ ಅಭಿವೃದ್ಧಿ ನೆರವು ನೀಡಲು ದಾನಿ ರಾಷ್ಟ್ರಗಳು ಮುಂದಾಗಿವೆ. ಈ ಹಣ ದುರ್ಬಳಕೆಯಾಗದಂತೆ ನಿಗಾ ವಹಿಸಬೇಕೆಂದೂ ಅವು ಹೇಳಿವೆ.</td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಟೋಕಿಯೊ (ಪಿಟಿಐ): ಪಾಕಿಸ್ತಾನವು ಉಗ್ರರಿಗೆ ಸುರಕ್ಷಿತ ನೆಲೆಯಾಗಿದೆ ಎನ್ನುವ ಸೂಚನೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಎಂ. ಕೃಷ್ಣ, `ಗಡಿಯಾಚೆಗಿನ ಭಯೋತ್ಪಾದನೆಯಿಂದ ಆಫ್ಘಾನಿಸ್ತಾನಕ್ಕೆ ಆತಂಕ ಎದುರಾಗಿದ್ದು, ಈ ಪಿಡುಗಿನಿಂದ ಹೊರಬರಲು ಆ ದೇಶಕ್ಕೆ ವಿಶ್ವ ಸಮುದಾಯ ನೆರವು ನೀಡಬೇಕಿದೆ~ ಎಂದಿದ್ದಾರೆ.<br /> <br /> `ಸ್ವಾವಲಂಬನೆಯನ್ನು ಸಾಧಿಸುವ ಆಫ್ಘಾನಿಸ್ತಾನದ ಬಹು ದಿನಗಳ ಕನಸು ನನಸಾಗಲು ನಾವು ನೆರವು ನೀಡುತ್ತಿದ್ದೇವೆ. ಇದರಲ್ಲಿ ಯಶ ಕಂಡರೂ ಅಲ್ಲಿ ಭಯೋತ್ಪಾದನೆ ಬೇರೆ ಬೇರೆ ಸ್ವರೂಪದಲ್ಲಿ ಬೇರು ಬಿಟ್ಟಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕು~ ಎಂದು ಆಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಇಲ್ಲಿ ನಡೆಯುತ್ತಿರುವ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.<br /> <br /> `ಸದೃಢ ದೇಶ ಕಟ್ಟಲು ಒಳ್ಳೆಯ ಆಡಳಿತ ಬಹು ಮುಖ್ಯವಾಗುತ್ತದೆ ಎನ್ನುವುದು ಭಾರತದ ಭಾವನೆ. ಉತ್ತಮ ಆಡಳಿತಕ್ಕೆ ಒಂದು ದೇಶವು ತನ್ನ ಭೂಪ್ರದೇಶದ ಮೇಲೆ ಸಂಪೂರ್ಣ ಹಿಡಿತ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ಆಫ್ಘನ್ ವಿಷಯದಲ್ಲಿ ಇದು ಇನ್ನೂ ಈಡೇರಿಲ್ಲ~ ಎಂದು ಅವರು ವಿಶ್ಲೇಷಿಸಿದರು.<br /> <br /> ಈ ಸಮಾವೇಶದಲ್ಲಿ ಸುಮಾರು 70 ದೇಶಗಳು ಹಾಗೂ ಅಂತರರಾಷ್ಟ್ರೀಯ ಮಂಡಳಿಗಳು ಭಾಗವಹಿಸಿವೆ. ಆಫ್ಘಾನಿಸ್ತಾನವು ಸುಸ್ಥಿರ ಅಭಿವೃದ್ಧಿಯ ಕಡೆ ಸಾಗುವಂತೆ ಮಾಡುವುದು ಹಾಗೂ 2014ರ ವರೆಗೆ ಆಫ್ಘನ್ ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಮುದಾಯದ ನಡುವಿನ ಸಹಭಾಗಿತ್ವವನ್ನು ಮತ್ತೆ ದೃಢೀಕರಿಸುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ.<br /> <br /> ಕೃಷ್ಣ-ಖರ್ ಭೇಟಿ: ಸಮಾವೇಶದಲ್ಲಿ ಪಾಕ್ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್ ಅವರನ್ನು ಭೇಟಿಯಾದ ಕೃಷ್ಣ, ಪಾಕ್ ನೆಲದಿಂದ ನಡೆಯುತ್ತಿರುವ ಭಾರತ ವಿರೋಧಿ ಕೃತ್ಯಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದರು. ಅಲ್ಲದೇ ಇದಕ್ಕೆ ಭಾರತವು ಹೆಚ್ಚುವರಿಯಾಗಿ ನಿರ್ದಿಷ್ಟ ಪುರಾವೆಗಳನ್ನು ನೀಡಿದೆ ಎಂದೂ ಹೇಳಿದರು.<br /> <br /> ಪಾಕ್ ನೆಲದಿಂದ ಭಾರತದ ವಿರುದ್ಧ ನಡೆಯುವ ಭಯೋತ್ಪಾದಕ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಸಚಿವರು ರಬ್ಬಾನಿ ಅವರಿಗೆ ತಿಳಿಸಿದರು.<br /> <br /> 26/11ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾಗಿದ್ದ ಅಬು ಜುಂದಾಲ್ನ ಹೇಳಿಕೆ, ಲಷ್ಕರ್-ಎ-ತೊಯ್ಬಾ ಸ್ಥಾಪಕ ಹಫೀಜ್ ಸಯೀದ್ ಸೆರೆ, ಸರಬ್ಜಿತ್ ಸಿಂಗ್ ಬಿಡುಗಡೆ ಇತ್ಯಾದಿ ವಿಷಯಗಳು ಉಭಯ ನಾಯಕರ ಮಧ್ಯೆ ಪ್ರಮುಖವಾಗಿ ಚರ್ಚೆಯಾದವು ಎಂದು ಅಧಿಕೃತ ಮೂಲಗಳು ತಿಳಿಸಿವೆ.</p>.<table align="center" border="2" cellpadding="1" cellspacing="1" width="450"> <tbody> <tr> <td>ಆಫ್ಘಾನಿಸ್ತಾನಕ್ಕೆ 16 ಕೋಟಿ ನೆರವು</td> </tr> <tr> <td>ಆಫ್ಘಾನಿಸ್ತಾನಕ್ಕೆ 16 ಶತಕೋಟಿ ಡಾಲರ್ ಅಭಿವೃದ್ಧಿ ನೆರವು ನೀಡಲು ದಾನಿ ರಾಷ್ಟ್ರಗಳು ಮುಂದಾಗಿವೆ. ಈ ಹಣ ದುರ್ಬಳಕೆಯಾಗದಂತೆ ನಿಗಾ ವಹಿಸಬೇಕೆಂದೂ ಅವು ಹೇಳಿವೆ.</td> </tr> </tbody> </table>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>