<p>ಬೆಂಗಳೂರು ವಿಶ್ವವಿದ್ಯಾಲಯದ 15 ಲಲಿತ ಕಲಾ ಸ್ನಾತಕೋತ್ತರ ಪದವೀಧರರ `ಪ್ಯೂಪ~ ತಂಡ ಕಸ್ತೂರಬಾ ರಸ್ತೆ ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಆಯೋಜಿಸಿರುವ ಕಲಾ ಪ್ರದರ್ಶನ ಇಂದು ಮುಕ್ತಾಯವಾಗಲಿದೆ. ಆಧುನೀಕರಣದ ಪ್ರಭಾವ, ಸ್ವಂತಿಕೆಯ ಅಭಿವ್ಯಕ್ತಿಯೇ ಪ್ರದರ್ಶನದ ಹೈಲೈಟ್.<br /> <br /> ಮದರ್ ವೂಂಬ್ ಶೀರ್ಷಿಕೆಯಲ್ಲಿ ಇನ್ಸ್ಟಾಲೇಷನ್ ಕಲೆಯನ್ನು ಅಮೃತಾ ಅಭಿವ್ಯಕ್ತಿಸಿದ್ದಾರೆ. ಸಾಂಪ್ರದಾಯಿಕವಾಗಿ ಭಾರತೀಯ ಪರಂಪರೆಯಲ್ಲಿ ಸ್ತ್ರೀಗೆ ಮಹತ್ವ, ಪೂಜ್ಯಭಾವನೆ ನೀಡಲಾಗಿದೆ ಎನ್ನುವುದನ್ನು ಹತ್ತಿ ಬಟ್ಟೆಯ ಮೇಲೆ `ಹನಿಕೊಂಬ~ ಅಳವಡಿಸುವ ಮೂಲಕ ಪ್ರಕಟಪಡಿಸಿದ್ದಾರೆ.<br /> <br /> ಆರೋಗ್ಯ ಸ್ವಾಮಿಯವರು ತಮ್ಮ ಶರೀರದ ಭಾಗಗಳನ್ನೇ ಆಧರಿಸಿ ಕಲಾಕೃತಿ ಮುದ್ರಿಸಿದ್ದಾರೆ. ಹಂಸ ಅವರ ಕಲೆಯಲ್ಲಿ ಚಂಚಲ ಮನಸ್ಸಿನ ಖಿನ್ನತೆ ಒಡಮೂಡಿದೆ. ಕಿರಣ್ ಅವರ ಛಾಯಚಿತ್ರವು ಸ್ವಾಭಾವಿಕವಾಗಿದ್ದು ಮುಗ್ಧತೆಯನ್ನು ಸಂಕೇತಿಸುತ್ತದೆ. <br /> <br /> ಜೆ. ವಿದ್ಯಾ ಅವರ ಶೀರ್ಷಿಕೆ ರಹಿತ ಚಿತ್ರ ವಿದ್ಯುತ್ ಸ್ವಿಚ್ ಬೋರ್ಡ್ನ ಒಳವಿನ್ಯಾಸದ ಮೂಲಕ ನೈಜವಾಗಿ, ಮೂಡಿಬಂದಿದೆ. ಬ್ರಹ್ಮನಾಥ.ಎ. ಪಾಟೀಲರ `ಬ್ರೋಕನ್ ಬ್ರೇನ್~ ಚಿಂತನೆಗೆ ಹಚ್ಚುತ್ತದೆ. ಎನ್. ಬೈರಾಚಾರ್ ಅವರ ಅಮೂರ್ತ ಚಿತ್ರ, ದೀಪಕ್, ಮಹಮ್ಮದ್ ಯೂನೀಸ್, ರಾಕೇಶ ಕಲ್ಲೂರ, ಎ. ಸುಜಾ, ಕೆ.ಟಿ. ಶಿವಪ್ರಸಾದ, ಚಂದ್ರಕಾಂತ, ಶ್ವೇತಾ ಪ್ರಿಯದರ್ಶಿನಿ, ಉಲ್ಲಾಸ್ ಅವರ ಕಲಾಕೃತಿಗಳು ಮನ ಸೆಳೆಯುತ್ತವೆ. <br /> <br /> ಈಗಿನ ಯುವ ಕಲಾವಿದರ ಚಿಂತನೆ, ಯೋಚನೆ ಮತ್ತು ಅಭಿವ್ಯಕ್ತಿಯ ಹುಡುಕಾಟವನ್ನು ಅವರ ಕಲಾಕೃತಿಗಳಲ್ಲಿ ಗುರುತಿಸಬಹುದು. ಕಲಾ ಜಗತ್ತಿನ ಪ್ರಯಾಣ ಎತ್ತೆತ್ತಲೋ ಸಾಗುತ್ತಿದ್ದರೂ ಈ ಯುವ ಕಲಾವಿದರು, ಅದರ ಅನುಭವ ಪಡೆಯುತ್ತಿರುವುದು ಶ್ಲಾಘನೀಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು ವಿಶ್ವವಿದ್ಯಾಲಯದ 15 ಲಲಿತ ಕಲಾ ಸ್ನಾತಕೋತ್ತರ ಪದವೀಧರರ `ಪ್ಯೂಪ~ ತಂಡ ಕಸ್ತೂರಬಾ ರಸ್ತೆ ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಆಯೋಜಿಸಿರುವ ಕಲಾ ಪ್ರದರ್ಶನ ಇಂದು ಮುಕ್ತಾಯವಾಗಲಿದೆ. ಆಧುನೀಕರಣದ ಪ್ರಭಾವ, ಸ್ವಂತಿಕೆಯ ಅಭಿವ್ಯಕ್ತಿಯೇ ಪ್ರದರ್ಶನದ ಹೈಲೈಟ್.<br /> <br /> ಮದರ್ ವೂಂಬ್ ಶೀರ್ಷಿಕೆಯಲ್ಲಿ ಇನ್ಸ್ಟಾಲೇಷನ್ ಕಲೆಯನ್ನು ಅಮೃತಾ ಅಭಿವ್ಯಕ್ತಿಸಿದ್ದಾರೆ. ಸಾಂಪ್ರದಾಯಿಕವಾಗಿ ಭಾರತೀಯ ಪರಂಪರೆಯಲ್ಲಿ ಸ್ತ್ರೀಗೆ ಮಹತ್ವ, ಪೂಜ್ಯಭಾವನೆ ನೀಡಲಾಗಿದೆ ಎನ್ನುವುದನ್ನು ಹತ್ತಿ ಬಟ್ಟೆಯ ಮೇಲೆ `ಹನಿಕೊಂಬ~ ಅಳವಡಿಸುವ ಮೂಲಕ ಪ್ರಕಟಪಡಿಸಿದ್ದಾರೆ.<br /> <br /> ಆರೋಗ್ಯ ಸ್ವಾಮಿಯವರು ತಮ್ಮ ಶರೀರದ ಭಾಗಗಳನ್ನೇ ಆಧರಿಸಿ ಕಲಾಕೃತಿ ಮುದ್ರಿಸಿದ್ದಾರೆ. ಹಂಸ ಅವರ ಕಲೆಯಲ್ಲಿ ಚಂಚಲ ಮನಸ್ಸಿನ ಖಿನ್ನತೆ ಒಡಮೂಡಿದೆ. ಕಿರಣ್ ಅವರ ಛಾಯಚಿತ್ರವು ಸ್ವಾಭಾವಿಕವಾಗಿದ್ದು ಮುಗ್ಧತೆಯನ್ನು ಸಂಕೇತಿಸುತ್ತದೆ. <br /> <br /> ಜೆ. ವಿದ್ಯಾ ಅವರ ಶೀರ್ಷಿಕೆ ರಹಿತ ಚಿತ್ರ ವಿದ್ಯುತ್ ಸ್ವಿಚ್ ಬೋರ್ಡ್ನ ಒಳವಿನ್ಯಾಸದ ಮೂಲಕ ನೈಜವಾಗಿ, ಮೂಡಿಬಂದಿದೆ. ಬ್ರಹ್ಮನಾಥ.ಎ. ಪಾಟೀಲರ `ಬ್ರೋಕನ್ ಬ್ರೇನ್~ ಚಿಂತನೆಗೆ ಹಚ್ಚುತ್ತದೆ. ಎನ್. ಬೈರಾಚಾರ್ ಅವರ ಅಮೂರ್ತ ಚಿತ್ರ, ದೀಪಕ್, ಮಹಮ್ಮದ್ ಯೂನೀಸ್, ರಾಕೇಶ ಕಲ್ಲೂರ, ಎ. ಸುಜಾ, ಕೆ.ಟಿ. ಶಿವಪ್ರಸಾದ, ಚಂದ್ರಕಾಂತ, ಶ್ವೇತಾ ಪ್ರಿಯದರ್ಶಿನಿ, ಉಲ್ಲಾಸ್ ಅವರ ಕಲಾಕೃತಿಗಳು ಮನ ಸೆಳೆಯುತ್ತವೆ. <br /> <br /> ಈಗಿನ ಯುವ ಕಲಾವಿದರ ಚಿಂತನೆ, ಯೋಚನೆ ಮತ್ತು ಅಭಿವ್ಯಕ್ತಿಯ ಹುಡುಕಾಟವನ್ನು ಅವರ ಕಲಾಕೃತಿಗಳಲ್ಲಿ ಗುರುತಿಸಬಹುದು. ಕಲಾ ಜಗತ್ತಿನ ಪ್ರಯಾಣ ಎತ್ತೆತ್ತಲೋ ಸಾಗುತ್ತಿದ್ದರೂ ಈ ಯುವ ಕಲಾವಿದರು, ಅದರ ಅನುಭವ ಪಡೆಯುತ್ತಿರುವುದು ಶ್ಲಾಘನೀಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>