<p><strong>ಇಸ್ಲಾಮಾಬಾದ್ (ಪಿಟಿಐ): </strong>ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ಸಹಜ ಸ್ಥಿತಿಗೆ ತರಲು ಪಾಕಿಸ್ತಾನ ಬಯಸುತ್ತಿದ್ದು, ಇದಕ್ಕಾಗಿ ಕಳೆದ ನಲವತ್ತು ವರ್ಷಗಳಿಂದ ರಾಷ್ಟ್ರದಲ್ಲಿ ಜಾರಿಯಲ್ಲಿರುವ ಹಲವು ನಿಯಮಗಳನ್ನು ಸಡಿಲಗೊಳಿಸುವ ಸ್ಪಷ್ಟ ಸೂಚನೆಯನ್ನು ನೀಡಿದೆ.<br /> <br /> `ಆದರೆ ದೇಶದ ಈ ನಿಲುವು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಅಡ್ಡಿಯಾಗಿರುವ ಹಾಗೂ ಕಳೆದ 60 ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿರುವ ಕಾಶ್ಮೀರದಂತಹ ಸಂಕೀರ್ಣ ವಿಷಯಗಳಿಗೆ ಸಂಬಂಧಪಡುವುದಿಲ್ಲ~ ಎಂದು ವಿದೇಶಾಂಗ ಸಚಿವೆ ಹೀನಾ ರಬ್ಬಾನಿಖರ್ ಸ್ಪಷ್ಟಪಡಿಸಿದ್ದಾರೆ. <br /> <br /> `ಭಾರತದೊಂದಿಗಿನ ಸಹಜ ವ್ಯಾಪಾರ ಸಂಬಂಧದಿಂದ ಉಭಯ ರಾಷ್ಟ್ರಗಳೂ ಲಾಭ ಪಡೆಯುವ ವಿಶ್ವಾಸ ನಮಗಿದೆ. ಇದರೊಂದಿಗೆ ಇದು ಪಾಕಿಸ್ತಾನದ ಆರ್ಥಿಕತೆಯ ಉತ್ತೇಜನಕ್ಕೂ ನಾಂದಿ ಹಾಡಲಿದೆ~ ಎಂದು ಖರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. <br /> <br /> ಭಾರತದಿಂದ ಆಮದು ಮಾಡಿಕೊಳ್ಳಲು ಬಯಸದ ವಸ್ತುಗಳಿರುವ `ನಿರ್ಬಂಧಿತ ಪಟ್ಟಿ~ಗೆ ಸಚಿವ ಸಂಪುಟ ಅನುಮತಿ ನೀಡಿದ ಮರುದಿನವೇ ಸಚಿವೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p><strong>ಮುಷರಫ್ ಬಂಧನಕ್ಕೆ ಮನವಿ</strong></p>.<p><strong>ಇಸ್ಲಾಮಾಬಾದ್ (ಪಿಟಿಐ): </strong>ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣದ ವಿಚಾರಣೆಗಾಗಿ, ಪಾಕಿಸ್ತಾನದ ಮಾಜಿ ಸೇನಾ ಆಡಳಿತಾಧಿಕಾರಿ ಪರ್ವೇಜ್ ಮುಷರಫ್ ಅವರನ್ನು ಬಂಧಿಸಲು `ಕಟ್ಟೆಚ್ಚರದ ನೋಟಿಸ್~ ಹೊರಡಿಸುವಂತೆ ಅಧಿಕಾರಿಗಳು ಇಂಟರ್ಪೋಲ್ಗೆ ಅಧಿಕೃತ ಮನವಿ ಮಾಡಿಕೊಂಡಿದ್ದಾರೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಸ್ಲಾಮಾಬಾದ್ (ಪಿಟಿಐ): </strong>ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ಸಹಜ ಸ್ಥಿತಿಗೆ ತರಲು ಪಾಕಿಸ್ತಾನ ಬಯಸುತ್ತಿದ್ದು, ಇದಕ್ಕಾಗಿ ಕಳೆದ ನಲವತ್ತು ವರ್ಷಗಳಿಂದ ರಾಷ್ಟ್ರದಲ್ಲಿ ಜಾರಿಯಲ್ಲಿರುವ ಹಲವು ನಿಯಮಗಳನ್ನು ಸಡಿಲಗೊಳಿಸುವ ಸ್ಪಷ್ಟ ಸೂಚನೆಯನ್ನು ನೀಡಿದೆ.<br /> <br /> `ಆದರೆ ದೇಶದ ಈ ನಿಲುವು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಅಡ್ಡಿಯಾಗಿರುವ ಹಾಗೂ ಕಳೆದ 60 ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿರುವ ಕಾಶ್ಮೀರದಂತಹ ಸಂಕೀರ್ಣ ವಿಷಯಗಳಿಗೆ ಸಂಬಂಧಪಡುವುದಿಲ್ಲ~ ಎಂದು ವಿದೇಶಾಂಗ ಸಚಿವೆ ಹೀನಾ ರಬ್ಬಾನಿಖರ್ ಸ್ಪಷ್ಟಪಡಿಸಿದ್ದಾರೆ. <br /> <br /> `ಭಾರತದೊಂದಿಗಿನ ಸಹಜ ವ್ಯಾಪಾರ ಸಂಬಂಧದಿಂದ ಉಭಯ ರಾಷ್ಟ್ರಗಳೂ ಲಾಭ ಪಡೆಯುವ ವಿಶ್ವಾಸ ನಮಗಿದೆ. ಇದರೊಂದಿಗೆ ಇದು ಪಾಕಿಸ್ತಾನದ ಆರ್ಥಿಕತೆಯ ಉತ್ತೇಜನಕ್ಕೂ ನಾಂದಿ ಹಾಡಲಿದೆ~ ಎಂದು ಖರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. <br /> <br /> ಭಾರತದಿಂದ ಆಮದು ಮಾಡಿಕೊಳ್ಳಲು ಬಯಸದ ವಸ್ತುಗಳಿರುವ `ನಿರ್ಬಂಧಿತ ಪಟ್ಟಿ~ಗೆ ಸಚಿವ ಸಂಪುಟ ಅನುಮತಿ ನೀಡಿದ ಮರುದಿನವೇ ಸಚಿವೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>.<p><strong>ಮುಷರಫ್ ಬಂಧನಕ್ಕೆ ಮನವಿ</strong></p>.<p><strong>ಇಸ್ಲಾಮಾಬಾದ್ (ಪಿಟಿಐ): </strong>ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣದ ವಿಚಾರಣೆಗಾಗಿ, ಪಾಕಿಸ್ತಾನದ ಮಾಜಿ ಸೇನಾ ಆಡಳಿತಾಧಿಕಾರಿ ಪರ್ವೇಜ್ ಮುಷರಫ್ ಅವರನ್ನು ಬಂಧಿಸಲು `ಕಟ್ಟೆಚ್ಚರದ ನೋಟಿಸ್~ ಹೊರಡಿಸುವಂತೆ ಅಧಿಕಾರಿಗಳು ಇಂಟರ್ಪೋಲ್ಗೆ ಅಧಿಕೃತ ಮನವಿ ಮಾಡಿಕೊಂಡಿದ್ದಾರೆ.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>