<p><strong>ಬೀಜಿಂಗ್ (ಪಿಟಿಐ): </strong>ಯಿವು ವ್ಯಾಪಾರ ಕೇಂದ್ರದಲ್ಲಿ ಒತ್ತೆಯಾಳಾಗಿದ್ದ ಇಬ್ಬರು ಭಾರತೀಯ ವ್ಯಾಪಾರಸ್ಥರನ್ನು ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಹೋಟೆಲ್ಗೆ ಸ್ಥಳಾಂತರಿಸಿದ್ದಾರೆ. ಇದೇ ವೇಳೆ, ಯಿವು ವ್ಯಾಪಾರ ಕೇಂದ್ರದ ಚಟುವಟಿಕೆಗಳಿಂದ ದೂರವಿರುವಂತೆ ಭಾರತದ ವ್ಯಾಪಾರಿಗಳಿಗೆ ಭಾರತೀಯ ರಾಯಭಾರ ಕಚೇರಿಯು ಸಲಹಾ ಪ್ರಕಟಣೆ ಹೊರಡಿಸಿದೆ.<br /> <br /> ಶಾಂಘೈ ನಗರಕ್ಕೆ ಸಮೀಪವಿರುವ ಜೆಜಿಂಗ್ ಪ್ರಾಂತ್ಯದ ಯಿವು ವ್ಯಾಪಾರ ಕೇಂದ್ರದಲ್ಲಿ ಒತ್ತೆಯಾಳಾಗಿದ್ದ ಭಾರತದ ಶಾಮಸುಂದರ್ ಅಗರ್ವಾಲ್ ಮತ್ತು ದೀಪಕ್ ರಹೇಜಾ ಅವರನ್ನು ಪೊಲೀಸರು ಹೋಟೆಲ್ವೊಂದಕ್ಕೆ ಸ್ಥಳಾಂತರಿಸಿದ್ದು, ಅವರ ಕಾವಲಿಗೆ ಇಬ್ಬರು ಪೊಲೀಸರನ್ನು ನೇಮಿಸಲಾಗಿದೆ.<br /> <br /> ದೊಡ್ಡ ಸಂಖ್ಯೆಯಲ್ಲಿ ಸ್ಥಳೀಯರು ಹೋಟೆಲ್ ಸುತ್ತ ನೆರೆದಿರುವುದರಿಂದ ನಮಗೆ ಇನ್ನೂ ಅಪಾಯದ ಆತಂಕವಿದೆ ಎಂದು ರಹೇಜಾ ಅವರು ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಮಧ್ಯೆ ಈ ಇಬ್ಬರು ವ್ಯಾಪಾರಿಗಳನ್ನು ಶಾಂಘೈಗೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ತಾವು ಸ್ಥಳೀಯ ಕಂಪೆನಿಯೊಂದರ ಉದ್ಯೋಗಿಗಳಾಗಿದ್ದು, ಕಂಪೆನಿಯು ಸರಕು ಸರಬರಾಜು ಮಾಡಿದ ಸ್ಥಳೀಯ ವ್ಯಾಪಾರಿಗಳಿಗೆ ಹಣ ಪಾವತಿಸಬೇಕಾಗಿದೆ. ಅದಕ್ಕಾಗಿ ಕಂಪೆನಿಯ ಮಾಲೀಕನನ್ನು ಕೇಳುವುದನ್ನು ಬಿಟ್ಟು ತಮ್ಮನ್ನು ಡಿಸೆಂಬರ್ 15ರಂದು ಅಪಹರಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಅಗರ್ವಾಲ್ ಮತ್ತು ರಹೇಜಾ ದೂರಿದ್ದಾರೆ.<br /> <br /> ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿರುವ ಸ್ಥಳೀಯ ವ್ಯಾಪಾರಿಗಳು, ತಮಗೆ ಬರಬೇಕಿರುವ ಲಕ್ಷಾಂತರ ಯುವಾನ್ (ಚೀನಾದ ಹಣ) ಸಂದಾಯವಾಗುವವರೆಗೆ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.<br /> <br /> ಒತ್ತೆಯಾಳಾಗಿದ್ದ ವ್ಯಾಪಾರಿಗಳನ್ನು ಬಿಡಿಸಿಕೊಳ್ಳಲು ನ್ಯಾಯಾಲಯಕ್ಕೆ ಹೋಗಿದ್ದ ಭಾರತದ ರಾಜತಾಂತ್ರಿಕ ಅಧಿಕಾರಿ ಎಸ್. ಬಾಲಚಂದ್ರನ್ ಅವರ ಮೇಲೆ ನ್ಯಾಯಾಲಯದ್ಲ್ಲಲೇ ಹಲ್ಲೆ ಮಾಡಲಾಗಿದ್ದು, ಅವರು ಈಗ ಶಾಂಘೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.<br /> <br /> ಯಿವು ವ್ಯಾಪಾರ ಕೇಂದ್ರದಲ್ಲಿ ಯಾವುದೆ ರೀತಿಯ ವಹಿವಾಟು ನಡೆಸಬಾರದು ಎಂದು ಭಾರತೀಯ ವ್ಯಾಪಾರಿಗಳಿಗೆ ಭಾರತದ ರಾಯಭಾರ ಕಚೇರಿಯು ಸಲಹೆ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀಜಿಂಗ್ (ಪಿಟಿಐ): </strong>ಯಿವು ವ್ಯಾಪಾರ ಕೇಂದ್ರದಲ್ಲಿ ಒತ್ತೆಯಾಳಾಗಿದ್ದ ಇಬ್ಬರು ಭಾರತೀಯ ವ್ಯಾಪಾರಸ್ಥರನ್ನು ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ಹೋಟೆಲ್ಗೆ ಸ್ಥಳಾಂತರಿಸಿದ್ದಾರೆ. ಇದೇ ವೇಳೆ, ಯಿವು ವ್ಯಾಪಾರ ಕೇಂದ್ರದ ಚಟುವಟಿಕೆಗಳಿಂದ ದೂರವಿರುವಂತೆ ಭಾರತದ ವ್ಯಾಪಾರಿಗಳಿಗೆ ಭಾರತೀಯ ರಾಯಭಾರ ಕಚೇರಿಯು ಸಲಹಾ ಪ್ರಕಟಣೆ ಹೊರಡಿಸಿದೆ.<br /> <br /> ಶಾಂಘೈ ನಗರಕ್ಕೆ ಸಮೀಪವಿರುವ ಜೆಜಿಂಗ್ ಪ್ರಾಂತ್ಯದ ಯಿವು ವ್ಯಾಪಾರ ಕೇಂದ್ರದಲ್ಲಿ ಒತ್ತೆಯಾಳಾಗಿದ್ದ ಭಾರತದ ಶಾಮಸುಂದರ್ ಅಗರ್ವಾಲ್ ಮತ್ತು ದೀಪಕ್ ರಹೇಜಾ ಅವರನ್ನು ಪೊಲೀಸರು ಹೋಟೆಲ್ವೊಂದಕ್ಕೆ ಸ್ಥಳಾಂತರಿಸಿದ್ದು, ಅವರ ಕಾವಲಿಗೆ ಇಬ್ಬರು ಪೊಲೀಸರನ್ನು ನೇಮಿಸಲಾಗಿದೆ.<br /> <br /> ದೊಡ್ಡ ಸಂಖ್ಯೆಯಲ್ಲಿ ಸ್ಥಳೀಯರು ಹೋಟೆಲ್ ಸುತ್ತ ನೆರೆದಿರುವುದರಿಂದ ನಮಗೆ ಇನ್ನೂ ಅಪಾಯದ ಆತಂಕವಿದೆ ಎಂದು ರಹೇಜಾ ಅವರು ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಮಧ್ಯೆ ಈ ಇಬ್ಬರು ವ್ಯಾಪಾರಿಗಳನ್ನು ಶಾಂಘೈಗೆ ಕರೆತರಲು ಪ್ರಯತ್ನಿಸಲಾಗುತ್ತಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.<br /> <br /> ತಾವು ಸ್ಥಳೀಯ ಕಂಪೆನಿಯೊಂದರ ಉದ್ಯೋಗಿಗಳಾಗಿದ್ದು, ಕಂಪೆನಿಯು ಸರಕು ಸರಬರಾಜು ಮಾಡಿದ ಸ್ಥಳೀಯ ವ್ಯಾಪಾರಿಗಳಿಗೆ ಹಣ ಪಾವತಿಸಬೇಕಾಗಿದೆ. ಅದಕ್ಕಾಗಿ ಕಂಪೆನಿಯ ಮಾಲೀಕನನ್ನು ಕೇಳುವುದನ್ನು ಬಿಟ್ಟು ತಮ್ಮನ್ನು ಡಿಸೆಂಬರ್ 15ರಂದು ಅಪಹರಿಸಿ ಚಿತ್ರಹಿಂಸೆ ನೀಡಲಾಗಿದೆ ಎಂದು ಅಗರ್ವಾಲ್ ಮತ್ತು ರಹೇಜಾ ದೂರಿದ್ದಾರೆ.<br /> <br /> ಇಬ್ಬರನ್ನು ಪೊಲೀಸರಿಗೆ ಒಪ್ಪಿಸಿರುವ ಸ್ಥಳೀಯ ವ್ಯಾಪಾರಿಗಳು, ತಮಗೆ ಬರಬೇಕಿರುವ ಲಕ್ಷಾಂತರ ಯುವಾನ್ (ಚೀನಾದ ಹಣ) ಸಂದಾಯವಾಗುವವರೆಗೆ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.<br /> <br /> ಒತ್ತೆಯಾಳಾಗಿದ್ದ ವ್ಯಾಪಾರಿಗಳನ್ನು ಬಿಡಿಸಿಕೊಳ್ಳಲು ನ್ಯಾಯಾಲಯಕ್ಕೆ ಹೋಗಿದ್ದ ಭಾರತದ ರಾಜತಾಂತ್ರಿಕ ಅಧಿಕಾರಿ ಎಸ್. ಬಾಲಚಂದ್ರನ್ ಅವರ ಮೇಲೆ ನ್ಯಾಯಾಲಯದ್ಲ್ಲಲೇ ಹಲ್ಲೆ ಮಾಡಲಾಗಿದ್ದು, ಅವರು ಈಗ ಶಾಂಘೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.<br /> <br /> ಯಿವು ವ್ಯಾಪಾರ ಕೇಂದ್ರದಲ್ಲಿ ಯಾವುದೆ ರೀತಿಯ ವಹಿವಾಟು ನಡೆಸಬಾರದು ಎಂದು ಭಾರತೀಯ ವ್ಯಾಪಾರಿಗಳಿಗೆ ಭಾರತದ ರಾಯಭಾರ ಕಚೇರಿಯು ಸಲಹೆ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>