<p><strong style="font-size: 26px;">ಉತ್ತನೂರು ರಾಜಮ್ಮ ಮಂಟಪ (ಶಿಡ್ಲಘಟ್ಟ): </strong><span style="font-size: 26px;">`ಕನ್ನಡ ಮತ್ತು ಕನ್ನಡತನದ ವ್ಯಾಪ್ತಿ ತುಂಬ ವಿಶಾಲವಾಗಿದೆ. ಯಾವುದೇ ಭಾಷೆ ಅಥವಾ ಸಂಸ್ಕೃತಿಯನ್ನು ಸೀಮಿತ ಚೌಕಟ್ಟಿನಲ್ಲಿ ಕಟ್ಟಿಡಲು ಸಾಧ್ಯವಿಲ್ಲ. ಭಾಷೆ ಮತ್ತು ಸಂಸ್ಕೃತಿ ವ್ಯಾಪ್ತಿ ಮೀರಿ ವಿಸ್ತಾರವಾದಷ್ಟು ಇನ್ನಷ್ಟು ಪ್ರಭಾವಶಾಲಿಯಾಗುತ್ತದೆ' ಎಂದು ಸಮ್ಮೇಳನಾಧ್ಯಕ್ಷೆ ಗುಡಿಬಂಡೆ ಪೂರ್ಣಿಮಾ ಅಭಿಪ್ರಾಯಪಟ್ಟರು.</span><br /> <br /> ಸಾಹಿತ್ಯ ಸಮ್ಮೇಳನದ ಪ್ರಮುಖ ಗೋಷ್ಠಿಗಳಲ್ಲಿ ಒಂದಾದ ಸಮ್ಮೇಳನಾಧ್ಯಕ್ಷೆಯೊಂದಿಗೆ ಸಂವಾದದಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ಮುಕ್ತವಾಗಿ ವ್ಯಕ್ತಪಡಿಸಿದ ಅವರು, ಸಾಮಾಜಿಕ ನೆಲೆಯನ್ನು ಗಟ್ಟಿಗೊಳಿಸುವಲ್ಲಿ ಮತ್ತು ಉತ್ತಮ ವಿಚಾರ-ಚಿಂತನೆಗಳು ಹರಿಯುವಲ್ಲಿ ಭಾಷೆ, ಸಂಸ್ಕೃತಿ ಗಾಢವಾದ ಪ್ರಭಾವ ಬೀರತ್ತದೆ. ಈ ಕಾರಣಕ್ಕಾಗಿ ಅವುಗಳನ್ನು ಒಂದೇ ಚೌಕಟ್ಟಿನಲ್ಲಿ ಕೂಡಿಡುವುದು ಕಷ್ಟ ಎಂದರು.<br /> <br /> ಕನ್ನಡಾಭಿಮಾನ ನವೆಂಬರ್, ಡಿಸೆಂಬರ್ ತಿಂಗಳಿಗೆ ಅಥವಾ ಉತ್ಸವ ಆಚರಣೆಗೆ ಮಾತ್ರ ಸೀಮಿತವಾಗಬಾರದು. ವರ್ಷದ 365 ದಿನವೂ ಕನ್ನಡಿಗನೆಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ವಾತಾವರಣ ಮೂಡಿಸಬೇಕು. ಪರ ಭಾಷೆ ಕಲಿಯುವ ಜೊತೆ ನಮ್ಮ ಭಾಷೆ ಅವರಿಗೆ ಕಲಿಸಬೇಕು. ಆಗ ಸಹಜವಾಗಿ ಸೌಹಾರ್ದ ಸೇತುವಾಗುತ್ತದೆ ಎಂದರು.<br /> <br /> ನಾಡಧ್ವಜ ಹಾರಿಸುವುದು, ತಾಯಿ ಭುವನೇಶ್ವರಿ ದೇವಿ ಪೂಜಿಸುವುದು ಮಾತ್ರ ಅಭಿಮಾನ ವ್ಯಕ್ತಪಡಿಸುವ ಪರಿಭಾಷೆಯೆಂದು ಭಾವಿಸಿದ್ದಾರೆ. ಆದರೆ ಇವುಗಳಲ್ಲದೇ ಪ್ರತಿಯೊಂದು ಕಾರ್ಯದಲ್ಲೂ ಕನ್ನಡ ಬಳಸುವ, ಕನ್ನಡದಲ್ಲಿ ಮಾತನಾಡುವ, ಪತ್ರಿಕೆ-ಪುಸ್ತಕ ಓದುವ, ಸಿನಿಮಾ ನೋಡುವ, ಗೀತೆಗಳನ್ನು ಕೇಳುವ ಮೂಲಕ ಅಭಿಮಾನ ವ್ಯಕ್ತಪಡಿಸಬಹುದು ಎಂದು ಹೇಳಿದರು.<br /> <br /> ಸಂವಾದದಲ್ಲಿ ಸಾಹಿತಿಗಳು ಮತ್ತು ವಿಚಾರವಂತರು ಚಿಂತನೆಗೆ ಆಸ್ಪದ ಕೊಡುವಂತಹ ಹಲವು ಪ್ರಶ್ನೆಗಳನ್ನು ಕೇಳಿದರು. `ಸಮ್ಮೇಳನದಲ್ಲಿ ನಡೆಯುವ ಗೋಷ್ಠಿಗಳು ಜನಸಾಮಾನ್ಯರಿಗೆ ತಲುಪಬೇಕಲ್ಲವೆ? ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಜ್ಞರನ್ನು ಕರೆದು ಗೋಷ್ಠಿಗಳನ್ನು ನಡೆಸುವುದು ಒಳ್ಳೆಯದಲ್ಲವೇ' ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಕೇಳಿದರೆ, `ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎನ್ನುತ್ತ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿದೆ. ಇದಕ್ಕೆ ಪರಿಹಾರವೇನು' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಸಿ.ಬಿ.ಹನುಮಂತಪ್ಪ ಪ್ರಶ್ನಿಸಿದರು.<br /> <br /> `ಭಾಷಣದಲ್ಲಿ ಮಾತ್ರ ಕನ್ನಡವಿದೆ. ಆದರೆ ಅನುಷ್ಠಾನದಲ್ಲಿ ಕನ್ನಡ ಸೊರಗಿದೆ. ಇದಕ್ಕೆ ಕಾರಣಗಳೇನು? ಪರಿಹಾರ ಇಲ್ಲವೇ' ಎಂದು ಉಪನ್ಯಾಸಕ ಎನ್.ಚಂದ್ರಶೇಖರ್ ಕೇಳಿದರೆ, `ಕನ್ನಡನಾಡು-ನುಡಿ ಕಟ್ಟುವಂತೆ ಪ್ರತಿಯೊಬ್ಬರು ಸಲಹೆ ನೀಡುತ್ತಾರೆ. ಆದರೆ ಹೇಗೆ ತೊಡಗಿಸಿಕೊಳ್ಳಬಹುದೆಂದು ಹೇಳುವುದಿಲ್ಲ. ಕನ್ನಡ ಕಟ್ಟಾಳುಗಳಾಗಿ ಹೇಗೆ ನಾಡು ಕಟ್ಟಬಹುದು' ಎಂದು ಶಿಕ್ಷಕಿ ಕೆ.ಸುಮಾ ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong style="font-size: 26px;">ಉತ್ತನೂರು ರಾಜಮ್ಮ ಮಂಟಪ (ಶಿಡ್ಲಘಟ್ಟ): </strong><span style="font-size: 26px;">`ಕನ್ನಡ ಮತ್ತು ಕನ್ನಡತನದ ವ್ಯಾಪ್ತಿ ತುಂಬ ವಿಶಾಲವಾಗಿದೆ. ಯಾವುದೇ ಭಾಷೆ ಅಥವಾ ಸಂಸ್ಕೃತಿಯನ್ನು ಸೀಮಿತ ಚೌಕಟ್ಟಿನಲ್ಲಿ ಕಟ್ಟಿಡಲು ಸಾಧ್ಯವಿಲ್ಲ. ಭಾಷೆ ಮತ್ತು ಸಂಸ್ಕೃತಿ ವ್ಯಾಪ್ತಿ ಮೀರಿ ವಿಸ್ತಾರವಾದಷ್ಟು ಇನ್ನಷ್ಟು ಪ್ರಭಾವಶಾಲಿಯಾಗುತ್ತದೆ' ಎಂದು ಸಮ್ಮೇಳನಾಧ್ಯಕ್ಷೆ ಗುಡಿಬಂಡೆ ಪೂರ್ಣಿಮಾ ಅಭಿಪ್ರಾಯಪಟ್ಟರು.</span><br /> <br /> ಸಾಹಿತ್ಯ ಸಮ್ಮೇಳನದ ಪ್ರಮುಖ ಗೋಷ್ಠಿಗಳಲ್ಲಿ ಒಂದಾದ ಸಮ್ಮೇಳನಾಧ್ಯಕ್ಷೆಯೊಂದಿಗೆ ಸಂವಾದದಲ್ಲಿ ತಮ್ಮ ಅಭಿಪ್ರಾಯ, ಅನಿಸಿಕೆಯನ್ನು ಮುಕ್ತವಾಗಿ ವ್ಯಕ್ತಪಡಿಸಿದ ಅವರು, ಸಾಮಾಜಿಕ ನೆಲೆಯನ್ನು ಗಟ್ಟಿಗೊಳಿಸುವಲ್ಲಿ ಮತ್ತು ಉತ್ತಮ ವಿಚಾರ-ಚಿಂತನೆಗಳು ಹರಿಯುವಲ್ಲಿ ಭಾಷೆ, ಸಂಸ್ಕೃತಿ ಗಾಢವಾದ ಪ್ರಭಾವ ಬೀರತ್ತದೆ. ಈ ಕಾರಣಕ್ಕಾಗಿ ಅವುಗಳನ್ನು ಒಂದೇ ಚೌಕಟ್ಟಿನಲ್ಲಿ ಕೂಡಿಡುವುದು ಕಷ್ಟ ಎಂದರು.<br /> <br /> ಕನ್ನಡಾಭಿಮಾನ ನವೆಂಬರ್, ಡಿಸೆಂಬರ್ ತಿಂಗಳಿಗೆ ಅಥವಾ ಉತ್ಸವ ಆಚರಣೆಗೆ ಮಾತ್ರ ಸೀಮಿತವಾಗಬಾರದು. ವರ್ಷದ 365 ದಿನವೂ ಕನ್ನಡಿಗನೆಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ವಾತಾವರಣ ಮೂಡಿಸಬೇಕು. ಪರ ಭಾಷೆ ಕಲಿಯುವ ಜೊತೆ ನಮ್ಮ ಭಾಷೆ ಅವರಿಗೆ ಕಲಿಸಬೇಕು. ಆಗ ಸಹಜವಾಗಿ ಸೌಹಾರ್ದ ಸೇತುವಾಗುತ್ತದೆ ಎಂದರು.<br /> <br /> ನಾಡಧ್ವಜ ಹಾರಿಸುವುದು, ತಾಯಿ ಭುವನೇಶ್ವರಿ ದೇವಿ ಪೂಜಿಸುವುದು ಮಾತ್ರ ಅಭಿಮಾನ ವ್ಯಕ್ತಪಡಿಸುವ ಪರಿಭಾಷೆಯೆಂದು ಭಾವಿಸಿದ್ದಾರೆ. ಆದರೆ ಇವುಗಳಲ್ಲದೇ ಪ್ರತಿಯೊಂದು ಕಾರ್ಯದಲ್ಲೂ ಕನ್ನಡ ಬಳಸುವ, ಕನ್ನಡದಲ್ಲಿ ಮಾತನಾಡುವ, ಪತ್ರಿಕೆ-ಪುಸ್ತಕ ಓದುವ, ಸಿನಿಮಾ ನೋಡುವ, ಗೀತೆಗಳನ್ನು ಕೇಳುವ ಮೂಲಕ ಅಭಿಮಾನ ವ್ಯಕ್ತಪಡಿಸಬಹುದು ಎಂದು ಹೇಳಿದರು.<br /> <br /> ಸಂವಾದದಲ್ಲಿ ಸಾಹಿತಿಗಳು ಮತ್ತು ವಿಚಾರವಂತರು ಚಿಂತನೆಗೆ ಆಸ್ಪದ ಕೊಡುವಂತಹ ಹಲವು ಪ್ರಶ್ನೆಗಳನ್ನು ಕೇಳಿದರು. `ಸಮ್ಮೇಳನದಲ್ಲಿ ನಡೆಯುವ ಗೋಷ್ಠಿಗಳು ಜನಸಾಮಾನ್ಯರಿಗೆ ತಲುಪಬೇಕಲ್ಲವೆ? ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಜ್ಞರನ್ನು ಕರೆದು ಗೋಷ್ಠಿಗಳನ್ನು ನಡೆಸುವುದು ಒಳ್ಳೆಯದಲ್ಲವೇ' ಎಂದು ಸಾಹಿತಿ ಗೋಪಾಲಗೌಡ ಕಲ್ವಮಂಜಲಿ ಕೇಳಿದರೆ, `ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎನ್ನುತ್ತ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿದೆ. ಇದಕ್ಕೆ ಪರಿಹಾರವೇನು' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಉಪನಿರ್ದೇಶಕ ಸಿ.ಬಿ.ಹನುಮಂತಪ್ಪ ಪ್ರಶ್ನಿಸಿದರು.<br /> <br /> `ಭಾಷಣದಲ್ಲಿ ಮಾತ್ರ ಕನ್ನಡವಿದೆ. ಆದರೆ ಅನುಷ್ಠಾನದಲ್ಲಿ ಕನ್ನಡ ಸೊರಗಿದೆ. ಇದಕ್ಕೆ ಕಾರಣಗಳೇನು? ಪರಿಹಾರ ಇಲ್ಲವೇ' ಎಂದು ಉಪನ್ಯಾಸಕ ಎನ್.ಚಂದ್ರಶೇಖರ್ ಕೇಳಿದರೆ, `ಕನ್ನಡನಾಡು-ನುಡಿ ಕಟ್ಟುವಂತೆ ಪ್ರತಿಯೊಬ್ಬರು ಸಲಹೆ ನೀಡುತ್ತಾರೆ. ಆದರೆ ಹೇಗೆ ತೊಡಗಿಸಿಕೊಳ್ಳಬಹುದೆಂದು ಹೇಳುವುದಿಲ್ಲ. ಕನ್ನಡ ಕಟ್ಟಾಳುಗಳಾಗಿ ಹೇಗೆ ನಾಡು ಕಟ್ಟಬಹುದು' ಎಂದು ಶಿಕ್ಷಕಿ ಕೆ.ಸುಮಾ ಕೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>