<p><strong>ನವದೆಹಲಿ, (ಐಎಎನ್ಎಸ್): </strong>ದೇಶದಲ್ಲಿ ಭೂಕಂಪದ ಅಪಾಯ ಹೆಚ್ಚುತ್ತಿದ್ದರೂ ಅಂತಹ ತುರ್ತು ಸ್ಥಿತಿಯನ್ನು ಸಮರ್ಪಕವಾಗಿ ಎದುರಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.<br /> <br /> `ದೇಶದ ಶೇಕಡಾ 60ರಷ್ಟು ಭಾಗವು ಭೂಕಂಪ ವಲಯದಲ್ಲಿ ಬರುತ್ತದೆ~ ಎಂದು ಭೂಕಂಪ ವಿಜ್ಞಾನ ಇಲಾಖೆಯ ನಿರ್ದೇಶಕ ಬಿ.ಆರ್.ವೈದ್ಯ ತಿಳಿಸಿದ್ದಾರೆ.<br /> <br /> ಹಿಮಾಲಯ ಪರ್ವತದ ಗಡಿಯಲ್ಲಿ ಎರಡು ಭೂಪದರಗಳ ಮಧ್ಯೆ ಉಂಟಾದ ಘರ್ಷಣೆಯಿಂದ ಕಳೆದ ಭಾನುವಾರ ದೇಶದ ಈಶಾನ್ಯ ಮತ್ತು ಪೂರ್ವ ಭಾಗದಲ್ಲಿ ಭೂಕಂಪ ಸಂಭವಿಸಿತ್ತು.<br /> <br /> `ಭಾರತದ ಭೂಪದರ ಚಲನೆಯು ಸಾಮಾನ್ಯವಾಗಿ ವಾಯವ್ಯ ಮತ್ತು ಉತ್ತರ ದಿಕ್ಕಿನತ್ತ ಇದೆ. ಆದರೆ ಕಳೆದ ನೂರು ವರ್ಷಗಳಲ್ಲಿ ಭೂಮಿಯ ಚಿಪ್ಪಿನ ರಚನೆಯಲ್ಲಿ ವ್ಯತ್ಯಾಸ ಉಂಟಾಗಿರುವುದರಿಂದ ಚಲನೆಯ ದಿಕ್ಕು ಪಶ್ಚಿಮದತ್ತ ಸಾಗಿ ಭೂಕಂಪದ ಸಾಧ್ಯತೆಗಳು ಹೆಚ್ಚಾಗಿವೆ~ ಎಂದು ಹೈದರಾಬಾದ್ನ ರಾಷ್ಟ್ರೀಯ ಭೂಭೌತ ವಿಜ್ಞಾನ ಸಂಶೋಧನಾ ಸಂಸ್ಥೆಯ ಆರ್.ಕೆ.ಛಡ್ಡಾ ತಿಳಿಸಿದ್ದಾರೆ.<br /> <br /> `2000ನೇ ಇಸವಿಯಿಂದ ಭೂಕಂಪ ಜಾಸ್ತಿಯಾಗಿದ್ದು, 2004ರಲ್ಲಿ ಸುಮಾತ್ರಾದಲ್ಲಿ ಸಂಭವಿಸಿದ 9.3 ತೀವ್ರತೆಯ ಭೂಕಂಪವು ಭೂಮಿಯ ದುರ್ಬಲ ವಲಯಗಳ ಮೇಲೆ ಭಾರಿ ಪ್ರಮಾಣದ ಒತ್ತಡವನ್ನು ಉಂಟು ಮಾಡಿದೆ~ ಎಂದು ಅವರು ಮಾಹಿತಿ ನೀಡಿದ್ದಾರೆ.<br /> <br /> `ಭಾನುವಾರದ ಭೂಕಂಪದ ನಂತರ ಭಾರತದ ಭೂಪದರವು ಸುಮಾರು 1- 2 ಮಿ.ಮೀನಷ್ಟು ಚಲಿಸಿದೆ. ದೇಶದ ಬಹುತೇಕ ಭಾಗಗಳು ಈಗ ಭೂಕಂಪದ ಅಪಾಯವನ್ನು ಎದುರಿಸುತ್ತಿದ್ದರೂ ನಾವು ಅದನ್ನು ಎದುರಿಸಲು ತಕ್ಕ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ~ ಎಂದು ಹೇಳಿದ್ದಾರೆ. <br /> <br /> `ಭಾನುವಾರದ ಭೂಕಂಪವಲ್ಲದೆ ಸೆಪ್ಟೆಂಬರ್ನಲ್ಲಿ ದೇಶದಲ್ಲಿ ಒಟ್ಟು ಐದು ಬಾರಿ ಭೂಕಂಪವಾಗಿದೆ. ಭೂಪದರಗಳ ಚಲನೆಯಿಂದ ಭೂಕಂಪಗಳು ಉಂಟಾಗುತ್ತಿದ್ದರೂ ತಪ್ಪು ಯೋಜನೆಗಳಿಂದಾಗಿ ಅಪಾರ ಹಾನಿ ಉಂಟಾಗುತ್ತಿದೆ. <br /> <br /> ದೆಹಲಿಯಲ್ಲಿ ಕಟ್ಟಡ ನಿರ್ಮಾಣ ಉಪನಿಯಮಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ನಿರ್ಮಿಸಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ~ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಗೌಹರ್ ಮಹಮೂದ್ ತಿಳಿಸಿದ್ದಾರೆ.<br /> <br /> 1995ರ ವರೆಗೆ ದೆಹಲಿಯು ಸಾಮಾನ್ಯ ಭೂಕಂಪ ವಲಯದಲ್ಲಿತ್ತು. ನಂತರ ಹೆಚ್ಚು ಅಪಾಯಕಾರಿ ವಲಯಕ್ಕೆ ಸೇರ್ಪಡೆಯಾಗಿದೆ. ಪದೇಪದೇ ಭೂಕಂಪ ಆಗುತ್ತಿರುವುದರಿಂದ ಭೂಕಂಪ ನಿರೋಧಕ ಕಟ್ಟಡ ನಿರ್ಮಾಣವನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ರಾಷ್ಟ್ರೀಯ ವಿಪತ್ತು ನಿರ್ವಣಾ ಪ್ರಾಧಿಕಾರ ಮನವಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ, (ಐಎಎನ್ಎಸ್): </strong>ದೇಶದಲ್ಲಿ ಭೂಕಂಪದ ಅಪಾಯ ಹೆಚ್ಚುತ್ತಿದ್ದರೂ ಅಂತಹ ತುರ್ತು ಸ್ಥಿತಿಯನ್ನು ಸಮರ್ಪಕವಾಗಿ ಎದುರಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.<br /> <br /> `ದೇಶದ ಶೇಕಡಾ 60ರಷ್ಟು ಭಾಗವು ಭೂಕಂಪ ವಲಯದಲ್ಲಿ ಬರುತ್ತದೆ~ ಎಂದು ಭೂಕಂಪ ವಿಜ್ಞಾನ ಇಲಾಖೆಯ ನಿರ್ದೇಶಕ ಬಿ.ಆರ್.ವೈದ್ಯ ತಿಳಿಸಿದ್ದಾರೆ.<br /> <br /> ಹಿಮಾಲಯ ಪರ್ವತದ ಗಡಿಯಲ್ಲಿ ಎರಡು ಭೂಪದರಗಳ ಮಧ್ಯೆ ಉಂಟಾದ ಘರ್ಷಣೆಯಿಂದ ಕಳೆದ ಭಾನುವಾರ ದೇಶದ ಈಶಾನ್ಯ ಮತ್ತು ಪೂರ್ವ ಭಾಗದಲ್ಲಿ ಭೂಕಂಪ ಸಂಭವಿಸಿತ್ತು.<br /> <br /> `ಭಾರತದ ಭೂಪದರ ಚಲನೆಯು ಸಾಮಾನ್ಯವಾಗಿ ವಾಯವ್ಯ ಮತ್ತು ಉತ್ತರ ದಿಕ್ಕಿನತ್ತ ಇದೆ. ಆದರೆ ಕಳೆದ ನೂರು ವರ್ಷಗಳಲ್ಲಿ ಭೂಮಿಯ ಚಿಪ್ಪಿನ ರಚನೆಯಲ್ಲಿ ವ್ಯತ್ಯಾಸ ಉಂಟಾಗಿರುವುದರಿಂದ ಚಲನೆಯ ದಿಕ್ಕು ಪಶ್ಚಿಮದತ್ತ ಸಾಗಿ ಭೂಕಂಪದ ಸಾಧ್ಯತೆಗಳು ಹೆಚ್ಚಾಗಿವೆ~ ಎಂದು ಹೈದರಾಬಾದ್ನ ರಾಷ್ಟ್ರೀಯ ಭೂಭೌತ ವಿಜ್ಞಾನ ಸಂಶೋಧನಾ ಸಂಸ್ಥೆಯ ಆರ್.ಕೆ.ಛಡ್ಡಾ ತಿಳಿಸಿದ್ದಾರೆ.<br /> <br /> `2000ನೇ ಇಸವಿಯಿಂದ ಭೂಕಂಪ ಜಾಸ್ತಿಯಾಗಿದ್ದು, 2004ರಲ್ಲಿ ಸುಮಾತ್ರಾದಲ್ಲಿ ಸಂಭವಿಸಿದ 9.3 ತೀವ್ರತೆಯ ಭೂಕಂಪವು ಭೂಮಿಯ ದುರ್ಬಲ ವಲಯಗಳ ಮೇಲೆ ಭಾರಿ ಪ್ರಮಾಣದ ಒತ್ತಡವನ್ನು ಉಂಟು ಮಾಡಿದೆ~ ಎಂದು ಅವರು ಮಾಹಿತಿ ನೀಡಿದ್ದಾರೆ.<br /> <br /> `ಭಾನುವಾರದ ಭೂಕಂಪದ ನಂತರ ಭಾರತದ ಭೂಪದರವು ಸುಮಾರು 1- 2 ಮಿ.ಮೀನಷ್ಟು ಚಲಿಸಿದೆ. ದೇಶದ ಬಹುತೇಕ ಭಾಗಗಳು ಈಗ ಭೂಕಂಪದ ಅಪಾಯವನ್ನು ಎದುರಿಸುತ್ತಿದ್ದರೂ ನಾವು ಅದನ್ನು ಎದುರಿಸಲು ತಕ್ಕ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ~ ಎಂದು ಹೇಳಿದ್ದಾರೆ. <br /> <br /> `ಭಾನುವಾರದ ಭೂಕಂಪವಲ್ಲದೆ ಸೆಪ್ಟೆಂಬರ್ನಲ್ಲಿ ದೇಶದಲ್ಲಿ ಒಟ್ಟು ಐದು ಬಾರಿ ಭೂಕಂಪವಾಗಿದೆ. ಭೂಪದರಗಳ ಚಲನೆಯಿಂದ ಭೂಕಂಪಗಳು ಉಂಟಾಗುತ್ತಿದ್ದರೂ ತಪ್ಪು ಯೋಜನೆಗಳಿಂದಾಗಿ ಅಪಾರ ಹಾನಿ ಉಂಟಾಗುತ್ತಿದೆ. <br /> <br /> ದೆಹಲಿಯಲ್ಲಿ ಕಟ್ಟಡ ನಿರ್ಮಾಣ ಉಪನಿಯಮಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ನಿರ್ಮಿಸಿರುವುದರಿಂದ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ~ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ. ಗೌಹರ್ ಮಹಮೂದ್ ತಿಳಿಸಿದ್ದಾರೆ.<br /> <br /> 1995ರ ವರೆಗೆ ದೆಹಲಿಯು ಸಾಮಾನ್ಯ ಭೂಕಂಪ ವಲಯದಲ್ಲಿತ್ತು. ನಂತರ ಹೆಚ್ಚು ಅಪಾಯಕಾರಿ ವಲಯಕ್ಕೆ ಸೇರ್ಪಡೆಯಾಗಿದೆ. ಪದೇಪದೇ ಭೂಕಂಪ ಆಗುತ್ತಿರುವುದರಿಂದ ಭೂಕಂಪ ನಿರೋಧಕ ಕಟ್ಟಡ ನಿರ್ಮಾಣವನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂದು ರಾಷ್ಟ್ರೀಯ ವಿಪತ್ತು ನಿರ್ವಣಾ ಪ್ರಾಧಿಕಾರ ಮನವಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>