ಮಂಗಳವಾರ, 12-4-1961
ಆಂಧ್ರ ಸಂಪುಟ ವಿಸ್ತರಣೆಗೆ ನೆಹರೂ ವಿರೋಧ
ಹೈದರಾಬಾದ್, ಏ. 11 - ಆಂಧ್ರ ಸಂಪುಟ ವಿಸ್ತರಣೆಗೆ ಪ್ರಧಾನ ಮಂತ್ರಿ ನೆಹರೂರವರು ಸಮ್ಮತಿ ನೀಡಿಲ್ಲವೆಂದು ಇಲ್ಲಿ ತಿಳಿದು ಬಂದಿದೆ. ನೆಹರೂರವರು ತಮ್ಮ ಅಭಿಪ್ರಾಯವನ್ನು ಶ್ರೀ ಡಿ. ಸಂಜೀವಯ್ಯ ಮತ್ತು ಆರ್ಥಿಕ ಮಂತ್ರಿ ಶ್ರೀ ಕೆ. ಬ್ರಹ್ಮಾನಂದರೆಡ್ಡಿಯವರಿಗೆ ತಿಳಿಸಿದ್ದಾರೆಂದು ಹೇಳಲಾಗಿದೆ.
ರಾಜ್ಯದ ಹೆಸರು ‘ಕರ್ನಾಟಕ’ ಎಂದು ಬದಲಾಗಲಿ
ಬೆಂಗಳೂರು, ಏ. 11 - ಈಗಾಗಲೇ ಎರಡು ಬಾರಿ ಅಪೂರ್ಣವಾಗಿ ಚರ್ಚೆಯಾಗಿರುವ ರಾಜ್ಯದ ಹೆಸರು ‘ಕರ್ನಾಟಕ’ ವೆಂದಾಗಬೇಕೆಂಬ ಸಲಹೆಯನ್ನು ಕುರಿತು ವಿಧಾನ ಸಭೆ ಈ ಅಧಿವೇಶನದಲ್ಲಿ ಒಂದು ತೀರ್ಮಾನ ಕೈಗೊಳ್ಳುವಂತೆ ಕಾಂಗ್ರೆಸ್ ಪಕ್ಷದ ಸುಮಾರು 40 ಮಂದಿ ಸದಸ್ಯರು ಒಂದು ನಿಶ್ಚಿತ ಕ್ರಮವನ್ನು ಕೈಗೊಂಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.