<p>ಲಿಂಗಸುಗೂರ: ಕಳೆದ ಆರೂವರೆ ದಶಕಗಳಲ್ಲಿ ಸಮಾಜದಲ್ಲಿನ ಅಂಧಕಾರ, ಮೌಢ್ಯತೆ, ಅಸ್ಪೃಶ್ಯತೆ, ಅಸಮಾತನೆ ತೊಲಗಿಸಲು ಸಾಕಷ್ಟು ಹೋರಾಟಗಳು ನಡೆದಿವೆ. ಸಮಾಜ ವಿರೋಧಿ ಕೃತ್ಯಗಳ ನಿಷೇಧಿಸಿ ಕೆಲ ಕಾನೂನುಗಳನ್ನು ತಂದಿದ್ದರು ಕೂಡ ಮಡೆಸ್ನಾನ ಎಂಬ ಮೌಢ್ಯ ಸಂಪ್ರದಾಯ ನಡೆದಿರುವುದು ದುರದೃಷ್ಟಕರ. <br /> <br /> ಸರ್ಕಾರ ಮಡೆಸ್ನಾನ ನಿಷೇಧಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ ಜಿ. ಮುನಿರಾಜಪ್ಪ ಅವರಿಗೆ ಅರ್ಪಿಸಲಾಯಿತು.<br /> <br /> ಶನಿವಾರ ಸಿಪಿಐ (ಎಂ) ಸಾರಥ್ಯದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ತಹಸೀಲ್ದಾರ ಕಚೇರಿ ಮುಂದೆ ಧರಣಿ ನಡೆಸಿದರು. ಕೆಲ ರಂಗಗಳಲ್ಲಿ ದಲಿತರು, ಸವರ್ಣಿಯರು ಎಂದು ಪಂಕ್ತಿಭೇದ ಮಾಡುವುದಕ್ಕೆ ಕಡಿವಾಣ ಹಾಕಬೇಕು. <br /> ದೇವದಾಸಿಯರ ಮಾಶಾಸನ ಹೆಚ್ಚಿಸಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಿಸಬೇಕು. ಬಜೆಟ್ನಲ್ಲಿ ದಲಿತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಮನವಿಯಲ್ಲಿ ವಿವರಿಸಿದ್ದಾರೆ.<br /> <br /> ಪ್ರತಿಭಟನೆ ನೇತೃತ್ವವನ್ನು ಸಿಪಿಐ (ಎಂ) ಕಾರ್ಯದರ್ಶಿ ಶಿವಾನಂದ ಹಟ್ಟಿ, ದಲಿತ ಹಕ್ಕುಗಳ ಹೋರಾಟ ಸಮಿತಿ ಸಂಚಾಲಕ ಹನುಮಂತ ಓಲೆಕಾರ, ಮುಖಂಡರಾದ ಶಾಂತಾಬಾಯಿ ನಾಗರಹಾಳ, ಎಸ್.ಸರಸ್ವತಿ, ಮೌನೇಶ ಲೆಕ್ಕಿಹಾಳ, ಪರಶುರಾಮ, ಹುಲಿಗೆಮ್ಮ, ದೌಲಸಾಬ, ರಂಗನಾಥ, ಛತ್ರಗೌಡ, ಮರಿಯಮ್ಮ, ಪ್ರಶಾಂತ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಿಂಗಸುಗೂರ: ಕಳೆದ ಆರೂವರೆ ದಶಕಗಳಲ್ಲಿ ಸಮಾಜದಲ್ಲಿನ ಅಂಧಕಾರ, ಮೌಢ್ಯತೆ, ಅಸ್ಪೃಶ್ಯತೆ, ಅಸಮಾತನೆ ತೊಲಗಿಸಲು ಸಾಕಷ್ಟು ಹೋರಾಟಗಳು ನಡೆದಿವೆ. ಸಮಾಜ ವಿರೋಧಿ ಕೃತ್ಯಗಳ ನಿಷೇಧಿಸಿ ಕೆಲ ಕಾನೂನುಗಳನ್ನು ತಂದಿದ್ದರು ಕೂಡ ಮಡೆಸ್ನಾನ ಎಂಬ ಮೌಢ್ಯ ಸಂಪ್ರದಾಯ ನಡೆದಿರುವುದು ದುರದೃಷ್ಟಕರ. <br /> <br /> ಸರ್ಕಾರ ಮಡೆಸ್ನಾನ ನಿಷೇಧಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ ಜಿ. ಮುನಿರಾಜಪ್ಪ ಅವರಿಗೆ ಅರ್ಪಿಸಲಾಯಿತು.<br /> <br /> ಶನಿವಾರ ಸಿಪಿಐ (ಎಂ) ಸಾರಥ್ಯದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ತಹಸೀಲ್ದಾರ ಕಚೇರಿ ಮುಂದೆ ಧರಣಿ ನಡೆಸಿದರು. ಕೆಲ ರಂಗಗಳಲ್ಲಿ ದಲಿತರು, ಸವರ್ಣಿಯರು ಎಂದು ಪಂಕ್ತಿಭೇದ ಮಾಡುವುದಕ್ಕೆ ಕಡಿವಾಣ ಹಾಕಬೇಕು. <br /> ದೇವದಾಸಿಯರ ಮಾಶಾಸನ ಹೆಚ್ಚಿಸಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಿಸಬೇಕು. ಬಜೆಟ್ನಲ್ಲಿ ದಲಿತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಮನವಿಯಲ್ಲಿ ವಿವರಿಸಿದ್ದಾರೆ.<br /> <br /> ಪ್ರತಿಭಟನೆ ನೇತೃತ್ವವನ್ನು ಸಿಪಿಐ (ಎಂ) ಕಾರ್ಯದರ್ಶಿ ಶಿವಾನಂದ ಹಟ್ಟಿ, ದಲಿತ ಹಕ್ಕುಗಳ ಹೋರಾಟ ಸಮಿತಿ ಸಂಚಾಲಕ ಹನುಮಂತ ಓಲೆಕಾರ, ಮುಖಂಡರಾದ ಶಾಂತಾಬಾಯಿ ನಾಗರಹಾಳ, ಎಸ್.ಸರಸ್ವತಿ, ಮೌನೇಶ ಲೆಕ್ಕಿಹಾಳ, ಪರಶುರಾಮ, ಹುಲಿಗೆಮ್ಮ, ದೌಲಸಾಬ, ರಂಗನಾಥ, ಛತ್ರಗೌಡ, ಮರಿಯಮ್ಮ, ಪ್ರಶಾಂತ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>