<p><strong>ಬಾದಾಮಿ:</strong> ಮಣ್ಣೆತ್ತಿನ ಅಮಾವಾಸ್ಯೆಯ ಅಂಗವಾಗಿ ಕೃಷಿಕರು ಮಣ್ಣಿನ ಎತ್ತುಗಳನ್ನು ಪೂಜಿಸಲು ಮಾರುಕಟ್ಟೆಯಲ್ಲಿ ಸೋಮವಾರ ಖರೀದಿಸಿದರು.<br /> <br /> ಉತ್ತರ ಕರ್ನಾಟಕದಲ್ಲಿ ಮಳೆ ಆರಂಭವಾಗಿ ಉಳುಮೆ ಮಾಡಿ ಹೊಲವನ್ನು ಬಿತ್ತಿದ ನಂತರ ಎತ್ತುಗಳಿಗೆ ವಿಶ್ರಾಂತಿ. ಮಣ್ಣೆತ್ತಿನ ಅಮಾವಾಸ್ಯೆ ದಿನ ಕೃಷಿಕರು ಮಣ್ಣಿನ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯ ಅನೇಕ ದಶಕಗಳಿಂದ ಬಂದಿದೆ.<br /> <br /> ಮನೆಯಲ್ಲಿ ಕೃಷಿಕರು ಸಿಹಿ ಹೋಳಿಗೆ, ಕರಿದ ಕಡಬು ಅಡುಗೆ ಮಾಡಿ ಎತ್ತುಗಳಿಗೆ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿ ನೈವೇದ್ಯ ಮಾಡಿದರು.<br /> ಮೊದಲು ಕೃಷಿಕರು ಹೊಲದಿಂದ ಕಪ್ಪು ಮಣ್ಣನ್ನು ಮನೆಗೆ ತಂದು ಭಕ್ತಿಯಿಂದ ಮಣ್ಣಿನ ಎತ್ತುಗಳನ್ನು ತಾವೇ ತಮ್ಮ ಎತ್ತುಗಳಂತೆ ಮಾಡುತ್ತಿದ್ದರು.ಈಗ ಮಾರುಕಟ್ಟೆಯಲ್ಲಿ ಎತ್ತುಗಳು ದೊರೆಯುವುದರಿಂದ ಮನೆಯಲ್ಲಿ ರೈತ ಯಜಮಾನ, ಮಹಿಳೆಯರು ಮತ್ತು ಮಕ್ಕಳು ಎತ್ತುಗಳನ್ನು ಮಾಡುವುದು ಕಡಿಮೆಯಾಗಿದೆ. ಈಗ ತಯಾರಿಸಿದ ಎತ್ತುಗಳನ್ನೇ ಖರೀದಿಸುವರು.<br /> <br /> ಗುಳೇದಗುಡ್ಡ ನಗರದ ಭಾರತಿ ಹೊಸಕೇರಿ, ಸಂಗಮ್ಮ ಮಸ್ಕಿ (ತೋಳಮಟ್ಟಿ) ಪ್ರತಿವರ್ಷ ಮಣ್ಣಿನ ಎತ್ತುಗಳ ಮಾರಾಟಕ್ಕೆ ಬರುವರು. `ಒಂದು ಜೋಡು ಎತ್ತನ್ನು ರೂ 20ರಿಂದ 30ರವರೆಗೆ ಮಾರಾಟ ಮಾಡುತ್ತೇವೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ಮಣ್ಣೆತ್ತಿನ ಅಮಾವಾಸ್ಯೆಯ ಅಂಗವಾಗಿ ಕೃಷಿಕರು ಮಣ್ಣಿನ ಎತ್ತುಗಳನ್ನು ಪೂಜಿಸಲು ಮಾರುಕಟ್ಟೆಯಲ್ಲಿ ಸೋಮವಾರ ಖರೀದಿಸಿದರು.<br /> <br /> ಉತ್ತರ ಕರ್ನಾಟಕದಲ್ಲಿ ಮಳೆ ಆರಂಭವಾಗಿ ಉಳುಮೆ ಮಾಡಿ ಹೊಲವನ್ನು ಬಿತ್ತಿದ ನಂತರ ಎತ್ತುಗಳಿಗೆ ವಿಶ್ರಾಂತಿ. ಮಣ್ಣೆತ್ತಿನ ಅಮಾವಾಸ್ಯೆ ದಿನ ಕೃಷಿಕರು ಮಣ್ಣಿನ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯ ಅನೇಕ ದಶಕಗಳಿಂದ ಬಂದಿದೆ.<br /> <br /> ಮನೆಯಲ್ಲಿ ಕೃಷಿಕರು ಸಿಹಿ ಹೋಳಿಗೆ, ಕರಿದ ಕಡಬು ಅಡುಗೆ ಮಾಡಿ ಎತ್ತುಗಳಿಗೆ ಶ್ರದ್ಧೆ ಭಕ್ತಿಯಿಂದ ಪೂಜೆ ಮಾಡಿ ನೈವೇದ್ಯ ಮಾಡಿದರು.<br /> ಮೊದಲು ಕೃಷಿಕರು ಹೊಲದಿಂದ ಕಪ್ಪು ಮಣ್ಣನ್ನು ಮನೆಗೆ ತಂದು ಭಕ್ತಿಯಿಂದ ಮಣ್ಣಿನ ಎತ್ತುಗಳನ್ನು ತಾವೇ ತಮ್ಮ ಎತ್ತುಗಳಂತೆ ಮಾಡುತ್ತಿದ್ದರು.ಈಗ ಮಾರುಕಟ್ಟೆಯಲ್ಲಿ ಎತ್ತುಗಳು ದೊರೆಯುವುದರಿಂದ ಮನೆಯಲ್ಲಿ ರೈತ ಯಜಮಾನ, ಮಹಿಳೆಯರು ಮತ್ತು ಮಕ್ಕಳು ಎತ್ತುಗಳನ್ನು ಮಾಡುವುದು ಕಡಿಮೆಯಾಗಿದೆ. ಈಗ ತಯಾರಿಸಿದ ಎತ್ತುಗಳನ್ನೇ ಖರೀದಿಸುವರು.<br /> <br /> ಗುಳೇದಗುಡ್ಡ ನಗರದ ಭಾರತಿ ಹೊಸಕೇರಿ, ಸಂಗಮ್ಮ ಮಸ್ಕಿ (ತೋಳಮಟ್ಟಿ) ಪ್ರತಿವರ್ಷ ಮಣ್ಣಿನ ಎತ್ತುಗಳ ಮಾರಾಟಕ್ಕೆ ಬರುವರು. `ಒಂದು ಜೋಡು ಎತ್ತನ್ನು ರೂ 20ರಿಂದ 30ರವರೆಗೆ ಮಾರಾಟ ಮಾಡುತ್ತೇವೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>