<p><strong>ಮದ್ದೂರು:</strong> ಮಳೆಗಾಗಿ ವರುಣದೇವನನ್ನು ಪ್ರಾರ್ಥಿಸಿ ಸಮೀಪದ ದೇಶಹಳ್ಳಿ ಕೆರೆ ಬಳಿ ಶುಕ್ರವಾರ ಹೊನ್ನಮ್ಮದೇವಿ ಹಾಗೂ ಗಡಿದೇವರುಗಳ ವಿಶೇಷ ಪೂಜೆ ನೆಡೆಯಿತು.<br /> <br /> ದೇಶಹಳ್ಳಿಯ ಹೊನ್ನದೇವಿ, ಪಟಲದಮ್ಮ, ಮದ್ದೂರಿನ ಮದ್ದೂರಮ್ಮ, ದಂಡಿನಮಾರಮ್ಮ, ವೆಂಕಟರಮಣಸ್ವಾಮಿ, ರೇಣುಕಾ ಎಲ್ಲಮ್ಮದೇವಿ, ಚನ್ನಸಂದ್ರದ ಮಾರಮ್ಮ, ಚನ್ನೇಗೌಡನದೊಡ್ಡಿಯ ಮಾರಮ್ಮ, ವೈದ್ಯನಾಥಪುರದ ಬಸವಪ್ಪ, ಶಿವಪುರದ ಬೋರೇದೇವರು, ಬಸವೇಶ್ವರ, ಮಾಸ್ತಮ್ಮದೇವಿ, ಚಾಮನಹಳ್ಳಿಯ ಮಹದೇಶ್ವರಸ್ವಾಮಿ ದೇವರುಗಳ ಪಟಗಳು ಪೂಜಾ ಕೈಂಕರ್ಯದಲ್ಲಿ ಬಳಸಲಾಯಿತು.<br /> <br /> ಮಳೆಗಾಗಿ ವರುಣದೇವನನ್ನು ಪ್ರಾರ್ಥಿಸಿ ನೂರಾರು ಹೆಂಗಳೆಯರು ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ತಂಬಿಟ್ಟಿನ ಆರತಿ ಸಲ್ಲಿಸಿದರು. ಕೆರೆಯ ಕೋಡಿಗೆ ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಏರ್ಪಡಿಸಲಾಯಿತು. ನಂತರ ಎ್ಲ್ಲಲ 14 ದೇವರುಗಳು ಮೆರವಣಿಗೆ ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಟ್ಟಣದ ಸೇರಿದಂತೆ ದೇಶಹಳ್ಳಿ, ಚನ್ನೇಗೌಡನದೊಡ್ಡಿ, ಚಾಮನಹಳ್ಳಿ, ವೈದ್ಯನಾಥಪುರ, ಚನ್ನಸಂದ್ರ ಸೇರಿದಂತೆ ವಿವಿಧ ಗ್ರಾಮಗಳ 2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಶಾಸಕಿ ಕಲ್ಪನಾ ಸಿದ್ದರಾಜು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮದ್ದೂರು:</strong> ಮಳೆಗಾಗಿ ವರುಣದೇವನನ್ನು ಪ್ರಾರ್ಥಿಸಿ ಸಮೀಪದ ದೇಶಹಳ್ಳಿ ಕೆರೆ ಬಳಿ ಶುಕ್ರವಾರ ಹೊನ್ನಮ್ಮದೇವಿ ಹಾಗೂ ಗಡಿದೇವರುಗಳ ವಿಶೇಷ ಪೂಜೆ ನೆಡೆಯಿತು.<br /> <br /> ದೇಶಹಳ್ಳಿಯ ಹೊನ್ನದೇವಿ, ಪಟಲದಮ್ಮ, ಮದ್ದೂರಿನ ಮದ್ದೂರಮ್ಮ, ದಂಡಿನಮಾರಮ್ಮ, ವೆಂಕಟರಮಣಸ್ವಾಮಿ, ರೇಣುಕಾ ಎಲ್ಲಮ್ಮದೇವಿ, ಚನ್ನಸಂದ್ರದ ಮಾರಮ್ಮ, ಚನ್ನೇಗೌಡನದೊಡ್ಡಿಯ ಮಾರಮ್ಮ, ವೈದ್ಯನಾಥಪುರದ ಬಸವಪ್ಪ, ಶಿವಪುರದ ಬೋರೇದೇವರು, ಬಸವೇಶ್ವರ, ಮಾಸ್ತಮ್ಮದೇವಿ, ಚಾಮನಹಳ್ಳಿಯ ಮಹದೇಶ್ವರಸ್ವಾಮಿ ದೇವರುಗಳ ಪಟಗಳು ಪೂಜಾ ಕೈಂಕರ್ಯದಲ್ಲಿ ಬಳಸಲಾಯಿತು.<br /> <br /> ಮಳೆಗಾಗಿ ವರುಣದೇವನನ್ನು ಪ್ರಾರ್ಥಿಸಿ ನೂರಾರು ಹೆಂಗಳೆಯರು ಈ ಸಂದರ್ಭದಲ್ಲಿ ದೇವರಿಗೆ ವಿಶೇಷ ತಂಬಿಟ್ಟಿನ ಆರತಿ ಸಲ್ಲಿಸಿದರು. ಕೆರೆಯ ಕೋಡಿಗೆ ಈ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ಏರ್ಪಡಿಸಲಾಯಿತು. ನಂತರ ಎ್ಲ್ಲಲ 14 ದೇವರುಗಳು ಮೆರವಣಿಗೆ ಪಟ್ಟಣದ ವಿವಿಧ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಟ್ಟಣದ ಸೇರಿದಂತೆ ದೇಶಹಳ್ಳಿ, ಚನ್ನೇಗೌಡನದೊಡ್ಡಿ, ಚಾಮನಹಳ್ಳಿ, ವೈದ್ಯನಾಥಪುರ, ಚನ್ನಸಂದ್ರ ಸೇರಿದಂತೆ ವಿವಿಧ ಗ್ರಾಮಗಳ 2 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಶಾಸಕಿ ಕಲ್ಪನಾ ಸಿದ್ದರಾಜು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>