<p>ಚಾಮರಾಜನಗರ: `ಮನುಷ್ಯ ಸನ್ನಡತೆಯ ಮಾರ್ಗದಲ್ಲಿ ಸಾಗಲು ಕಾನೂನು ಅವಶ್ಯ~ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಮಾಸ್ಟರ್ ಆರ್. ಕೆ. ಜಿ. ಎಂ.ಎಂ. ಮಹಾಸ್ವಾಮೀಜಿ ಅವರು ಹೇಳಿದರು. <br /> <br /> ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಕಾರಾಗೃಹ ಇಲಾಖೆಯಿಂದ ಸೋಮವಾರ ನಡೆದ `ವಿಚಾರಣಾಧೀನ ಬಂದಿಗಳಿಗೆ ಶಿಕ್ಷೆ ಪ್ರಮಾಣದಲ್ಲಿ ಚೌಕಾಸಿ ಮತ್ತು ಕಾನೂನು ಸಾಕ್ಷರತಾ ಕಾರ್ಯಕ್ರಮ~ ಉದ್ಘಾಟಿಸಿ ಅವರು ಮಾತನಾಡಿದರು. <br /> <br /> `ಅಪರಾಧ ಮಾಡಿದವರು ಕಾನೂನಿನಡಿ ದೋಷಾರೋಪಣಕ್ಕೆ ಒಳಗಾಗಿರುತ್ತಾರೆ. ಬಂಧಿತ ಆರೋಪಿ ನ್ಯಾಯಾಲಯದ ಮುಂದೆ ಬಂದಾಗ ಆಪಾದಿತ ಎಂದು ಕರೆಯುತ್ತಾರೆ. ಆದರೆ, ಆರೋಪಪಟ್ಟಿ ದಾಖಲಿಸುವ ಮೊದಲು ಅಪರಾಧದ ಬಗ್ಗೆ ಚೌಕಾಸಿ ಮಾಡಬಹುದು. ಅದನ್ನು ಸ್ವಯಂಪೇರಿತರಾಗಿ ಮಾಡಬೇಕಾಗುತ್ತದೆ. ಅದನ್ನು ನ್ಯಾಯಾಧೀಶರು ಪರಿಶೀಲಿಸುತ್ತಾರೆ~ ಎಂದರು. <br /> <br /> ಆದರೆ, 7 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಅನುಭವಿಸುತ್ತಿರುವವರು, ಜೀವಾವಧಿ, ಮರಣದಂಡನೆಗೆ ಗುರಿಯಾದವರು ಮತ್ತು 14ವರ್ಷದ ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ವಿಚಾರಣಾಧೀನ ಬಂದಿಗಳಿಗೆ ಸಾಕಷ್ಟು ಅವಕಾಶಗಳಿವೆ. ಆದರೆ, ಅವುಗಳು ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ತಿಳಿಸಿದರು. <br /> <br /> ವಕೀಲ ಎ.ಡಿ. ಶ್ರೀಕಂಠೇರಾಜೇ ಅರಸ್ ಮಾತನಾಡಿ, ಶಿಕ್ಷೆ ಪ್ರಮಾಣದ ಚೌಕಾಸಿಯು 7 ವರ್ಷದೊಳಗೆ ಶಿಕ್ಷೆ ಅನುಭವಿಸುವಂತಹ ಅಪರಾಧಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂತಹವರು ಅರ್ಜಿ ಸಲ್ಲಿಸಬೇಕು. ಆ ಅರ್ಜಿಯಲ್ಲಿ ಆರೋಪದ ಬಗ್ಗೆ ವರದಿ ಇರಬೇಕು. ಆನಂತರ ಅರ್ಜಿ ಶಪಥ ಕೊಟ್ಟಾಗ ನ್ಯಾಯಾಲಯ ದಿನಾಂಕವನ್ನು ನೀಡುತ್ತದೆ ಎಂದರು. <br /> <br /> ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಯಧೀಶ ಕೆ.ಎಚ್. ಮಲ್ಲಪ್ಪ, ಕೆ.ಎಸ್. ಗಂಗಣ್ಣನವರ್, ಕೆ.ಎಂ. ರಾಧಾಕೃಷ್ಣ, ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕ ಡಿ.ಎಸ್. ಹಟ್ಟಿ, ಚೂಡೇಗೌಡ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: `ಮನುಷ್ಯ ಸನ್ನಡತೆಯ ಮಾರ್ಗದಲ್ಲಿ ಸಾಗಲು ಕಾನೂನು ಅವಶ್ಯ~ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಮಾಸ್ಟರ್ ಆರ್. ಕೆ. ಜಿ. ಎಂ.ಎಂ. ಮಹಾಸ್ವಾಮೀಜಿ ಅವರು ಹೇಳಿದರು. <br /> <br /> ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಕಾರಾಗೃಹ ಇಲಾಖೆಯಿಂದ ಸೋಮವಾರ ನಡೆದ `ವಿಚಾರಣಾಧೀನ ಬಂದಿಗಳಿಗೆ ಶಿಕ್ಷೆ ಪ್ರಮಾಣದಲ್ಲಿ ಚೌಕಾಸಿ ಮತ್ತು ಕಾನೂನು ಸಾಕ್ಷರತಾ ಕಾರ್ಯಕ್ರಮ~ ಉದ್ಘಾಟಿಸಿ ಅವರು ಮಾತನಾಡಿದರು. <br /> <br /> `ಅಪರಾಧ ಮಾಡಿದವರು ಕಾನೂನಿನಡಿ ದೋಷಾರೋಪಣಕ್ಕೆ ಒಳಗಾಗಿರುತ್ತಾರೆ. ಬಂಧಿತ ಆರೋಪಿ ನ್ಯಾಯಾಲಯದ ಮುಂದೆ ಬಂದಾಗ ಆಪಾದಿತ ಎಂದು ಕರೆಯುತ್ತಾರೆ. ಆದರೆ, ಆರೋಪಪಟ್ಟಿ ದಾಖಲಿಸುವ ಮೊದಲು ಅಪರಾಧದ ಬಗ್ಗೆ ಚೌಕಾಸಿ ಮಾಡಬಹುದು. ಅದನ್ನು ಸ್ವಯಂಪೇರಿತರಾಗಿ ಮಾಡಬೇಕಾಗುತ್ತದೆ. ಅದನ್ನು ನ್ಯಾಯಾಧೀಶರು ಪರಿಶೀಲಿಸುತ್ತಾರೆ~ ಎಂದರು. <br /> <br /> ಆದರೆ, 7 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಅನುಭವಿಸುತ್ತಿರುವವರು, ಜೀವಾವಧಿ, ಮರಣದಂಡನೆಗೆ ಗುರಿಯಾದವರು ಮತ್ತು 14ವರ್ಷದ ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ವಿಚಾರಣಾಧೀನ ಬಂದಿಗಳಿಗೆ ಸಾಕಷ್ಟು ಅವಕಾಶಗಳಿವೆ. ಆದರೆ, ಅವುಗಳು ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ತಿಳಿಸಿದರು. <br /> <br /> ವಕೀಲ ಎ.ಡಿ. ಶ್ರೀಕಂಠೇರಾಜೇ ಅರಸ್ ಮಾತನಾಡಿ, ಶಿಕ್ಷೆ ಪ್ರಮಾಣದ ಚೌಕಾಸಿಯು 7 ವರ್ಷದೊಳಗೆ ಶಿಕ್ಷೆ ಅನುಭವಿಸುವಂತಹ ಅಪರಾಧಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂತಹವರು ಅರ್ಜಿ ಸಲ್ಲಿಸಬೇಕು. ಆ ಅರ್ಜಿಯಲ್ಲಿ ಆರೋಪದ ಬಗ್ಗೆ ವರದಿ ಇರಬೇಕು. ಆನಂತರ ಅರ್ಜಿ ಶಪಥ ಕೊಟ್ಟಾಗ ನ್ಯಾಯಾಲಯ ದಿನಾಂಕವನ್ನು ನೀಡುತ್ತದೆ ಎಂದರು. <br /> <br /> ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಯಧೀಶ ಕೆ.ಎಚ್. ಮಲ್ಲಪ್ಪ, ಕೆ.ಎಸ್. ಗಂಗಣ್ಣನವರ್, ಕೆ.ಎಂ. ರಾಧಾಕೃಷ್ಣ, ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕ ಡಿ.ಎಸ್. ಹಟ್ಟಿ, ಚೂಡೇಗೌಡ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>