<p>ಜೈಸಲ್ಮೇರ್. `ಚಿನ್ನದ ನಗರ~ ಎಂದೇ ಪ್ರಸಿದ್ಧಿ. ಥಾರ್ ಮರುಭೂಮಿಯ ಮಡಿಲಲ್ಲಿರುವ ಈ ನಗರದಲ್ಲಿ ಅಲೆಅಲೆಯಾಗಿ ಹರಡಿರುವ ಹೊಂಬಣ್ಣದ ಮರಳು, ಹಳದಿ ಬಣ್ಣದ ಕಲ್ಲಿನಿಂದ ಕಡೆದ ದೇವಾಲಯಗಳು, ಹವೇಲಿಗಳು, ಅರಮನೆ, ದ್ವಾರ ಮತ್ತು ಬೃಹದಾಕಾರದ ಮನೆಗಳಿವೆ. ಆ ಕಾರಣದಿಂದಲೇ ಜೈಸಲ್ಮೇರ್ಗೆ `ಚಿನ್ನದ ನಗರ~ ಎನ್ನುವ ವಿಶೇಷಣ.<br /> <br /> ಚೀನಾ, ಭಾರತ, ಈಜಿಪ್ಟ್, ಪರ್ಷಿಯಾ, ಅರೇಬಿಯಾ ಮತ್ತು ರೋಮ್ ದೇಶಗಳ ಸಂಪರ್ಕ ಕೊಂಡಿಯಾಗಿ `ಸಿಲ್ಕ್ ರೂಟ್~ ಎನ್ನುವ ವಿಶೇಷಣವೂ ಈ ನಗರಕ್ಕಿತ್ತು. ಮಳೆಗೆ ಕೊರೆಯಾದರೇನು; ವ್ಯಾಪಾರೀ ಮಾರ್ಗದ ದೆಸೆಯಿಂದ ಇಲ್ಲಿ ಆರ್ಥಿಕ ಅಭಿವೃದ್ಧಿ ಸಾಕಷ್ಟಾಯಿತು. ಹಲವರು ವ್ಯಾಪಾರಿಗಳನ್ನು ದೋಚಿಯೇ ಸಿರಿವಂತರಾದರು!<br /> <br /> ಹಡಗಿನ ಮೂಲಕ ವ್ಯಾಪಾರ ಬೆಳೆದಂತೆ ಈ ನಗರ ತನ್ನ ಹೊಳಪು ಕಳೆದುಕೊಳ್ಳತೊಡಗಿತು. ಭಾರತ-ಪಾಕಿಸ್ತಾನ ವಿಭಜನೆಯ ನಂತರ ವ್ಯಾಪಾರದ ಮಾರ್ಗ ತುಂಡಾಯಿತು. ನೀರಿನ ಕೊರತೆಯೂ ಈ ನಗರದ ಅವಸಾನಕ್ಕೆ ಕಾರಣವಾಯಿತು. ಆದರೆ ಭಾರತ-ಪಾಕ್ ಯುದ್ಧಗಳಿಂದ ಇದೊಂದು ಪ್ರಮುಖ ಸೇನಾನೆಲೆಯಾಯಿತು. ಇಂದಿರಾ ಗಾಂಧಿ ನಾಲೆಯು ಬಂದ ಮೇಲೆ ಮರುಭೂಮಿಗೆ ಜೀವಜಲ ಸಿಕ್ಕಿತು. ಈಗ ಪ್ರವಾಸಿಗರಿಂದಾಗಿ ಈ ನಗರಕ್ಕೆ ಜೀವಕಳೆ.<br /> <br /> `ಜೈಸಲ್ಮೇರಿಗೆ ಪ್ರವಾಸಿಗರು ಬರುವುದು ಹೆಚ್ಚೆಂದರೆ ಆರು ತಿಂಗಳು ಮಾತ್ರ. ಆಗ ಮಾತ್ರ ಇಲ್ಲಿ ವ್ಯಾಪಾರ -ವಹಿವಾಟು. ಮರುಭೂಮಿಯ ಮರಳು, ರಾಜಸ್ತಾನದ ಸೊಗಡು - ಸಂಸ್ಕೃತಿ ಕಣ್ತುಂಬಿಕೊಳ್ಳಲು ಪ್ರವಾಸಿಗರು ಬರುತ್ತಾರೆ.<br /> <br /> ಜೈಸಲ್ಮೇರಿನ ಪ್ರಮುಖ ಆಕರ್ಷಣೆ ಒಂಟೆ ಮತ್ತು ಮರಳು. ಒಂಟೆಯ ಮೇಲೆ ಕುಳಿತು ಮರುಭೂಮಿಯಲ್ಲಿ ಸುತ್ತಾಡಲು ಪ್ರವಾಸಿಗರು ಬರುತ್ತಾರೆ. ಶಾರುಕ್ ಖಾನ್, ಮೈಕೆಲ್ ಜಾಕ್ಸನ್, ರಾಕೆಟ್- ಇವೆಲ್ಲ ಇಲ್ಲಿನ ಒಂಟೆಗಳ ಹೆಸರು! `50 ರೂಪಾಯಿ ಕೊಡಿ, ಸುತ್ತೊಡೆಸುತ್ತೇವೆ, 100 ರೂಪಾಯಿ ಕೊಡಿ, ಸೂರ್ಯಾಸ್ತ ತೋರಿಸುತ್ತೇವೆ~ ಎಂದು ಒಂಟೆಯ ಒಡೆಯರು ಪ್ರಲೋಭನೆ ಒಡ್ಡುತ್ತಾರೆ. <br /> <br /> ಮರುಭೂಮಿ ಈಗ ಮರಳಿನ ಗುಡ್ಡಗಳಾಗಿ ಉಳಿದಿಲ್ಲ. ಮರಳು ದಿಬ್ಬದ ಮೇಲೆ ಎಲ್ಲೆಲ್ಲೂ ಮೂಡಿರುವ ಹೆಜ್ಜೆ ಗುರುತುಗಳು ಸಂತೆಯ ಗಿಜಿಗಿಜಿ ನೆನಪಾಗಿಸುತ್ತದೆ. ಒಂದಷ್ಟು ದೂರ ಒಂಟೆಯ ಮೇಲೆ ಕುಳಿತು, ಮರಳಿನ ಮೇಲೆ ಸಾಗಿ, `ನಿಲ್ಲಿಸಪ್ಪಾ~ ಎಂದು ಸುತ್ತಲಿನ ಥಾರ್ ಮರುಭೂಮಿಯನ್ನು ಕಣ್ಣುತುಂಬಿಕೊಳ್ಳುವಷ್ಟರಲ್ಲಿ ಹಾಡು ಕೇಳಿಸುತ್ತದೆ! ಹೌದು. ಒಂಟೆಯ ಮಾಲೀಕರಾದ ಯುವಕರ ಮೊಬೈಲ್ನಿಂದ ಹೊಮ್ಮುತ್ತದೆ ಹಾಡು. ಸಂಜೆಯ ಇಳಿ ಬಿಸಿಲು ಬಿದ್ದು ಬಂಗಾರದ ಬಣ್ಣದಿಂದಿರುವ ಮರಳನ್ನು ಕಂಡು ನೀರು ನೆನಪಾಗುತ್ತದೆ. `ಡರ್ ಕೆ ಆಗೆ ಜೀತ್ ಹೈ, ಪೀಲೋ~ ಎಂದೊಬ್ಬ ತಂಪು ಪಾನೀಯ ಹಿಡಿದು ಮುಂದೆ ನಿಂತಿರುತ್ತಾನೆ. <br /> ನಾವು ಒಂಟೆಯ ಮೇಲೆ ಸಾಗಿ ಬಂದಷ್ಟು ದೂರ ಅವನು ಹೊಟ್ಟೆಪಾಡಿಗಾಗಿ ತಂಪುಪಾನೀಯಗಳನ್ನು ಹೊತ್ತು ತಂದಿರುವುದನ್ನು ನೆನಪಿಸಿಕೊಂಡರೆ, ಬೇಡವೆನ್ನಲು ಮನಸ್ಸಾಗುವುದಿಲ್ಲ.<br /> <br /> `ರಾಜಸ್ತಾನಿ ನೃತ್ಯ ಪ್ರದರ್ಶಿಸುವ ಜನಪದರು ಹಿಂದೆ ಅಲೆಮಾರಿಗಳಾಗಿದ್ದರು. ಈಗ ನಮ್ಮ ರೆಸಾರ್ಟಿನಲ್ಲಿ ಅವರಿಗೆ ಸಂಬಳ ಕೊಡುತ್ತೇವೆ. ಪ್ರತಿ ಸಂಜೆ ರಾಜಸ್ತಾನಿ ಜಾನಪದ ನೃತ್ಯ ಸಂಗೀತವನ್ನು ನಡೆಸಿಕೊಡುತ್ತಾರೆ. ಪ್ರವಾಸಿಗರು ಖುಷಿಯಿಂದ ಬಕ್ಷೀಸು ಕೊಡುತ್ತಾರೆ. ಹಾಗಾಗಿ ಅವರು ಸ್ವಂತ ಮನೆಯನ್ನು ಕಟ್ಟಿಕೊಂಡಿದ್ದಾರೆ. ಜಂಗಮರು ಸ್ಥಾವರರಾಗಿದ್ದಾರೆ~. ಇದು ಮರುಳುಗಾಡಿನ ಪರಿಸರದಲ್ಲಿನ ಕಾಲಪಲ್ಲಟದ ಕುರಿತು `ಮೆಹರ್ ರೆಸಾರ್ಟ್~ನ ಅಕ್ರಂಭಾಯ್ ವಿಶ್ಲೇಷಣೆ.<br /> <br /> ಜೈಸಲ್ಮೇರ್ ಕೋಟೆ, ಮಹಾರಾಜರ ಮಹಲ್, ಜೈನ ಮಂದಿರಗಳು, ಹಿಂದೂ ದೇಗುಲಗಳು, ಪುರಾತನ ಹವೇಲಿಗಳು, ಗಡೀ ಸಾಗರ್ ಸರೋವರ, ವ್ಯಾಸ ಛತ್ರಿ, ಸಂಗ್ರಹಾಲಯ, ಸಮ್ ಮತ್ತು ಕುರಿ ಮರಳಿನ ಪ್ರದೇಶ ಇಲ್ಲಿನ ಪ್ರವಾಸಿ ತಾಣಗಳು. <br /> <br /> ಕಚ್ಚೆ ಪಂಚೆ, ವಿವಿಧ ಬಣ್ಣಗಳ ಪಗಡಿ ಧರಿಸಿ ಚೂಪು ಮೀಸೆ ತೀಡುವ ಗಂಡಸು, ಕೆಂಪು, ಹಸಿರು, ಹಳದಿ, ನೀಲಿ ಬಣ್ಣಗಳ ದಿರಿಸು ಧರಿಸಿರುವ ಮಹಿಳೆ, ಅವರ ವೈವಿಧ್ಯಮಯ ಒಡವೆಗಳು, ರಾಜಸ್ತಾನಿ ಸಂಗೀತ, ಸಿಹಿ ಖಾದ್ಯ, ಅವರ ಹಸನ್ಮುಖ ಮತ್ತು ಆತ್ಮೀಯತೆ- ಮತ್ತೆ ಮತ್ತೆ ಕರೆಯುತ್ತದೆ ಜೈಸಲ್ಮೇರ್, ರಾಜಸ್ತಾನ. <br /> ಮರಳೆಂದರೆ ಬರಿ ಮರಳಲ್ಲ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜೈಸಲ್ಮೇರ್. `ಚಿನ್ನದ ನಗರ~ ಎಂದೇ ಪ್ರಸಿದ್ಧಿ. ಥಾರ್ ಮರುಭೂಮಿಯ ಮಡಿಲಲ್ಲಿರುವ ಈ ನಗರದಲ್ಲಿ ಅಲೆಅಲೆಯಾಗಿ ಹರಡಿರುವ ಹೊಂಬಣ್ಣದ ಮರಳು, ಹಳದಿ ಬಣ್ಣದ ಕಲ್ಲಿನಿಂದ ಕಡೆದ ದೇವಾಲಯಗಳು, ಹವೇಲಿಗಳು, ಅರಮನೆ, ದ್ವಾರ ಮತ್ತು ಬೃಹದಾಕಾರದ ಮನೆಗಳಿವೆ. ಆ ಕಾರಣದಿಂದಲೇ ಜೈಸಲ್ಮೇರ್ಗೆ `ಚಿನ್ನದ ನಗರ~ ಎನ್ನುವ ವಿಶೇಷಣ.<br /> <br /> ಚೀನಾ, ಭಾರತ, ಈಜಿಪ್ಟ್, ಪರ್ಷಿಯಾ, ಅರೇಬಿಯಾ ಮತ್ತು ರೋಮ್ ದೇಶಗಳ ಸಂಪರ್ಕ ಕೊಂಡಿಯಾಗಿ `ಸಿಲ್ಕ್ ರೂಟ್~ ಎನ್ನುವ ವಿಶೇಷಣವೂ ಈ ನಗರಕ್ಕಿತ್ತು. ಮಳೆಗೆ ಕೊರೆಯಾದರೇನು; ವ್ಯಾಪಾರೀ ಮಾರ್ಗದ ದೆಸೆಯಿಂದ ಇಲ್ಲಿ ಆರ್ಥಿಕ ಅಭಿವೃದ್ಧಿ ಸಾಕಷ್ಟಾಯಿತು. ಹಲವರು ವ್ಯಾಪಾರಿಗಳನ್ನು ದೋಚಿಯೇ ಸಿರಿವಂತರಾದರು!<br /> <br /> ಹಡಗಿನ ಮೂಲಕ ವ್ಯಾಪಾರ ಬೆಳೆದಂತೆ ಈ ನಗರ ತನ್ನ ಹೊಳಪು ಕಳೆದುಕೊಳ್ಳತೊಡಗಿತು. ಭಾರತ-ಪಾಕಿಸ್ತಾನ ವಿಭಜನೆಯ ನಂತರ ವ್ಯಾಪಾರದ ಮಾರ್ಗ ತುಂಡಾಯಿತು. ನೀರಿನ ಕೊರತೆಯೂ ಈ ನಗರದ ಅವಸಾನಕ್ಕೆ ಕಾರಣವಾಯಿತು. ಆದರೆ ಭಾರತ-ಪಾಕ್ ಯುದ್ಧಗಳಿಂದ ಇದೊಂದು ಪ್ರಮುಖ ಸೇನಾನೆಲೆಯಾಯಿತು. ಇಂದಿರಾ ಗಾಂಧಿ ನಾಲೆಯು ಬಂದ ಮೇಲೆ ಮರುಭೂಮಿಗೆ ಜೀವಜಲ ಸಿಕ್ಕಿತು. ಈಗ ಪ್ರವಾಸಿಗರಿಂದಾಗಿ ಈ ನಗರಕ್ಕೆ ಜೀವಕಳೆ.<br /> <br /> `ಜೈಸಲ್ಮೇರಿಗೆ ಪ್ರವಾಸಿಗರು ಬರುವುದು ಹೆಚ್ಚೆಂದರೆ ಆರು ತಿಂಗಳು ಮಾತ್ರ. ಆಗ ಮಾತ್ರ ಇಲ್ಲಿ ವ್ಯಾಪಾರ -ವಹಿವಾಟು. ಮರುಭೂಮಿಯ ಮರಳು, ರಾಜಸ್ತಾನದ ಸೊಗಡು - ಸಂಸ್ಕೃತಿ ಕಣ್ತುಂಬಿಕೊಳ್ಳಲು ಪ್ರವಾಸಿಗರು ಬರುತ್ತಾರೆ.<br /> <br /> ಜೈಸಲ್ಮೇರಿನ ಪ್ರಮುಖ ಆಕರ್ಷಣೆ ಒಂಟೆ ಮತ್ತು ಮರಳು. ಒಂಟೆಯ ಮೇಲೆ ಕುಳಿತು ಮರುಭೂಮಿಯಲ್ಲಿ ಸುತ್ತಾಡಲು ಪ್ರವಾಸಿಗರು ಬರುತ್ತಾರೆ. ಶಾರುಕ್ ಖಾನ್, ಮೈಕೆಲ್ ಜಾಕ್ಸನ್, ರಾಕೆಟ್- ಇವೆಲ್ಲ ಇಲ್ಲಿನ ಒಂಟೆಗಳ ಹೆಸರು! `50 ರೂಪಾಯಿ ಕೊಡಿ, ಸುತ್ತೊಡೆಸುತ್ತೇವೆ, 100 ರೂಪಾಯಿ ಕೊಡಿ, ಸೂರ್ಯಾಸ್ತ ತೋರಿಸುತ್ತೇವೆ~ ಎಂದು ಒಂಟೆಯ ಒಡೆಯರು ಪ್ರಲೋಭನೆ ಒಡ್ಡುತ್ತಾರೆ. <br /> <br /> ಮರುಭೂಮಿ ಈಗ ಮರಳಿನ ಗುಡ್ಡಗಳಾಗಿ ಉಳಿದಿಲ್ಲ. ಮರಳು ದಿಬ್ಬದ ಮೇಲೆ ಎಲ್ಲೆಲ್ಲೂ ಮೂಡಿರುವ ಹೆಜ್ಜೆ ಗುರುತುಗಳು ಸಂತೆಯ ಗಿಜಿಗಿಜಿ ನೆನಪಾಗಿಸುತ್ತದೆ. ಒಂದಷ್ಟು ದೂರ ಒಂಟೆಯ ಮೇಲೆ ಕುಳಿತು, ಮರಳಿನ ಮೇಲೆ ಸಾಗಿ, `ನಿಲ್ಲಿಸಪ್ಪಾ~ ಎಂದು ಸುತ್ತಲಿನ ಥಾರ್ ಮರುಭೂಮಿಯನ್ನು ಕಣ್ಣುತುಂಬಿಕೊಳ್ಳುವಷ್ಟರಲ್ಲಿ ಹಾಡು ಕೇಳಿಸುತ್ತದೆ! ಹೌದು. ಒಂಟೆಯ ಮಾಲೀಕರಾದ ಯುವಕರ ಮೊಬೈಲ್ನಿಂದ ಹೊಮ್ಮುತ್ತದೆ ಹಾಡು. ಸಂಜೆಯ ಇಳಿ ಬಿಸಿಲು ಬಿದ್ದು ಬಂಗಾರದ ಬಣ್ಣದಿಂದಿರುವ ಮರಳನ್ನು ಕಂಡು ನೀರು ನೆನಪಾಗುತ್ತದೆ. `ಡರ್ ಕೆ ಆಗೆ ಜೀತ್ ಹೈ, ಪೀಲೋ~ ಎಂದೊಬ್ಬ ತಂಪು ಪಾನೀಯ ಹಿಡಿದು ಮುಂದೆ ನಿಂತಿರುತ್ತಾನೆ. <br /> ನಾವು ಒಂಟೆಯ ಮೇಲೆ ಸಾಗಿ ಬಂದಷ್ಟು ದೂರ ಅವನು ಹೊಟ್ಟೆಪಾಡಿಗಾಗಿ ತಂಪುಪಾನೀಯಗಳನ್ನು ಹೊತ್ತು ತಂದಿರುವುದನ್ನು ನೆನಪಿಸಿಕೊಂಡರೆ, ಬೇಡವೆನ್ನಲು ಮನಸ್ಸಾಗುವುದಿಲ್ಲ.<br /> <br /> `ರಾಜಸ್ತಾನಿ ನೃತ್ಯ ಪ್ರದರ್ಶಿಸುವ ಜನಪದರು ಹಿಂದೆ ಅಲೆಮಾರಿಗಳಾಗಿದ್ದರು. ಈಗ ನಮ್ಮ ರೆಸಾರ್ಟಿನಲ್ಲಿ ಅವರಿಗೆ ಸಂಬಳ ಕೊಡುತ್ತೇವೆ. ಪ್ರತಿ ಸಂಜೆ ರಾಜಸ್ತಾನಿ ಜಾನಪದ ನೃತ್ಯ ಸಂಗೀತವನ್ನು ನಡೆಸಿಕೊಡುತ್ತಾರೆ. ಪ್ರವಾಸಿಗರು ಖುಷಿಯಿಂದ ಬಕ್ಷೀಸು ಕೊಡುತ್ತಾರೆ. ಹಾಗಾಗಿ ಅವರು ಸ್ವಂತ ಮನೆಯನ್ನು ಕಟ್ಟಿಕೊಂಡಿದ್ದಾರೆ. ಜಂಗಮರು ಸ್ಥಾವರರಾಗಿದ್ದಾರೆ~. ಇದು ಮರುಳುಗಾಡಿನ ಪರಿಸರದಲ್ಲಿನ ಕಾಲಪಲ್ಲಟದ ಕುರಿತು `ಮೆಹರ್ ರೆಸಾರ್ಟ್~ನ ಅಕ್ರಂಭಾಯ್ ವಿಶ್ಲೇಷಣೆ.<br /> <br /> ಜೈಸಲ್ಮೇರ್ ಕೋಟೆ, ಮಹಾರಾಜರ ಮಹಲ್, ಜೈನ ಮಂದಿರಗಳು, ಹಿಂದೂ ದೇಗುಲಗಳು, ಪುರಾತನ ಹವೇಲಿಗಳು, ಗಡೀ ಸಾಗರ್ ಸರೋವರ, ವ್ಯಾಸ ಛತ್ರಿ, ಸಂಗ್ರಹಾಲಯ, ಸಮ್ ಮತ್ತು ಕುರಿ ಮರಳಿನ ಪ್ರದೇಶ ಇಲ್ಲಿನ ಪ್ರವಾಸಿ ತಾಣಗಳು. <br /> <br /> ಕಚ್ಚೆ ಪಂಚೆ, ವಿವಿಧ ಬಣ್ಣಗಳ ಪಗಡಿ ಧರಿಸಿ ಚೂಪು ಮೀಸೆ ತೀಡುವ ಗಂಡಸು, ಕೆಂಪು, ಹಸಿರು, ಹಳದಿ, ನೀಲಿ ಬಣ್ಣಗಳ ದಿರಿಸು ಧರಿಸಿರುವ ಮಹಿಳೆ, ಅವರ ವೈವಿಧ್ಯಮಯ ಒಡವೆಗಳು, ರಾಜಸ್ತಾನಿ ಸಂಗೀತ, ಸಿಹಿ ಖಾದ್ಯ, ಅವರ ಹಸನ್ಮುಖ ಮತ್ತು ಆತ್ಮೀಯತೆ- ಮತ್ತೆ ಮತ್ತೆ ಕರೆಯುತ್ತದೆ ಜೈಸಲ್ಮೇರ್, ರಾಜಸ್ತಾನ. <br /> ಮರಳೆಂದರೆ ಬರಿ ಮರಳಲ್ಲ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>