<p>ಕಂಪ್ಲಿ: ಕಳೆದ ಮೂರು ದಿನಗಳ ನಿರಂತರ ಮಳೆ ಪರಿಣಾಮ ಉಪ್ಪಾರಹಳ್ಳಿ ಕೆರೆ ಏರಿ ಒಡೆದು ಕೆರೆಯಲ್ಲಿ ಸಂಗ್ರಹವಿದ್ದ ನೀರು ಸಂಪೂರ್ಣ ಖಾಲಿಯಾಗಿದೆ. <br /> <br /> ಸುಮಾರು 15ಎಕರೆ ಪ್ರದೇಶದ ಈ ಕೆರೆಯಲ್ಲಿ ಸಂಗ್ರಹವಾಗುತ್ತಿದ್ದ ನೀರು ಕೃಷಿ ಚಟುವಟಿಕೆಗೆ ಬಳಸುತ್ತಿರಲಿಲ್ಲ. ಆದರೆ ಜನ, ಜಾನುವಾರು, ಕುರಿಗಳಿಗೆ ವರ್ಷಪೂರ್ತಿ ನೀರು ದೊರೆಯುವ ಮೂಲಕ ಕೆರೆ ಆಸರೆಯಾಗಿತ್ತು. ಜೊತೆಗೆ ಸುತ್ತಲಿನ ನೂರಾರು ಪಂಪ್ಸೆಟ್, ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಲೂ ಈ ಕೆರೆ ಕಾರಣವಾಗಿತ್ತು.<br /> <br /> ಜೀವನಾಡಿಯಾಗಿದ್ದ ಉಪ್ಪಾರಹಳ್ಳಿ ಕೆರೆ ಏರಿ ಒಡೆದು ಸದ್ಯ ನೀರೆಲ್ಲ ಖಾಲಿಯಾಗಿವೆ. ಕೆರೆಯನ್ನೇ ನೆಚ್ಚಿಕೊಂಡಿದ್ದ ಈ ಭಾಗದ ರೈತರು, ದನಗಾಹಿಗಳು, ಕುರಿಗಾರರಿಗೆ ಇದರಿಂದ ತೊಂದರೆಯಾಗಿದೆ. ಕೆರೆಗೆ ಹೊಂದಿಕೊಂಡಂತೆ ದರೋಜಿ ಕರಡಿಧಾಮವಿದ್ದು, ಅಲ್ಲಿನ ವನ್ಯಜೀವಿ, ಪ್ರಾಣಿ, ಪಕ್ಷಿ ಸಂಕುಲಕ್ಕೆ ಈ ಕೆರೆಯೂ ಆಸರೆಯಾಗಿತ್ತು ಎಂದು ರೈತರು ತಿಳಿಸಿದರು. <br /> <br /> ಇದೇ ಮಳೆಗಾಲದಲ್ಲಿಯೇ ಕೆರೆ ಏರಿ ದುರಸ್ತಿ ಮಾಡಿಸಿದಲ್ಲಿ ನೀರು ಸಂಗ್ರಹವಾಗಿ ಮೊದಲಿನ ಕಳೆ ಮರಳಿ ಎಲ್ಲರಿಗೂ ಅನುಕೂಲವಾಗಲಿದೆ ಎನ್ನುವುದು ಕೆರೆ ಸುತ್ತಲಿನ ಕೊಳವೆಬಾವಿ, ಪಂಪ್ಸೆಟ್ ಆಶ್ರಿತ ರೈತರ ಅನಿಸಿಕೆ.<br /> <br /> <strong>ಮಂಜೂರು:</strong> ಉಪ್ಪಾರಹಳ್ಳಿ ಕೆರೆ ಏರಿ ಒಡೆದ ಬಗ್ಗೆ ಜಿ.ಪಂ ಸದಸ್ಯ ಎಂ. ಅನ್ನದಾನರೆಡ್ಡಿ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, ತಾವು ಈಗಾಗಲೇ ಕೆರೆಗೆ ಭೇಟಿ ನೀಡಿದ್ದು, ಏರಿ ದುರಸ್ತಿಗಾಗಿ ಜಿಲ್ಲಾ ಪಂಚಾಯಿತಿಯಿಂದ ರೂ. 30 ಲಕ್ಷ ಮಂಜೂರು ಮಾಡಿಸಿರುವುದಾಗಿ ಹೇಳಿದರು. ಜಿ.ಪಂ.ದಿಂದ ಅನುಮೋದನೆ ದೊರೆಯುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಂಪ್ಲಿ: ಕಳೆದ ಮೂರು ದಿನಗಳ ನಿರಂತರ ಮಳೆ ಪರಿಣಾಮ ಉಪ್ಪಾರಹಳ್ಳಿ ಕೆರೆ ಏರಿ ಒಡೆದು ಕೆರೆಯಲ್ಲಿ ಸಂಗ್ರಹವಿದ್ದ ನೀರು ಸಂಪೂರ್ಣ ಖಾಲಿಯಾಗಿದೆ. <br /> <br /> ಸುಮಾರು 15ಎಕರೆ ಪ್ರದೇಶದ ಈ ಕೆರೆಯಲ್ಲಿ ಸಂಗ್ರಹವಾಗುತ್ತಿದ್ದ ನೀರು ಕೃಷಿ ಚಟುವಟಿಕೆಗೆ ಬಳಸುತ್ತಿರಲಿಲ್ಲ. ಆದರೆ ಜನ, ಜಾನುವಾರು, ಕುರಿಗಳಿಗೆ ವರ್ಷಪೂರ್ತಿ ನೀರು ದೊರೆಯುವ ಮೂಲಕ ಕೆರೆ ಆಸರೆಯಾಗಿತ್ತು. ಜೊತೆಗೆ ಸುತ್ತಲಿನ ನೂರಾರು ಪಂಪ್ಸೆಟ್, ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಲೂ ಈ ಕೆರೆ ಕಾರಣವಾಗಿತ್ತು.<br /> <br /> ಜೀವನಾಡಿಯಾಗಿದ್ದ ಉಪ್ಪಾರಹಳ್ಳಿ ಕೆರೆ ಏರಿ ಒಡೆದು ಸದ್ಯ ನೀರೆಲ್ಲ ಖಾಲಿಯಾಗಿವೆ. ಕೆರೆಯನ್ನೇ ನೆಚ್ಚಿಕೊಂಡಿದ್ದ ಈ ಭಾಗದ ರೈತರು, ದನಗಾಹಿಗಳು, ಕುರಿಗಾರರಿಗೆ ಇದರಿಂದ ತೊಂದರೆಯಾಗಿದೆ. ಕೆರೆಗೆ ಹೊಂದಿಕೊಂಡಂತೆ ದರೋಜಿ ಕರಡಿಧಾಮವಿದ್ದು, ಅಲ್ಲಿನ ವನ್ಯಜೀವಿ, ಪ್ರಾಣಿ, ಪಕ್ಷಿ ಸಂಕುಲಕ್ಕೆ ಈ ಕೆರೆಯೂ ಆಸರೆಯಾಗಿತ್ತು ಎಂದು ರೈತರು ತಿಳಿಸಿದರು. <br /> <br /> ಇದೇ ಮಳೆಗಾಲದಲ್ಲಿಯೇ ಕೆರೆ ಏರಿ ದುರಸ್ತಿ ಮಾಡಿಸಿದಲ್ಲಿ ನೀರು ಸಂಗ್ರಹವಾಗಿ ಮೊದಲಿನ ಕಳೆ ಮರಳಿ ಎಲ್ಲರಿಗೂ ಅನುಕೂಲವಾಗಲಿದೆ ಎನ್ನುವುದು ಕೆರೆ ಸುತ್ತಲಿನ ಕೊಳವೆಬಾವಿ, ಪಂಪ್ಸೆಟ್ ಆಶ್ರಿತ ರೈತರ ಅನಿಸಿಕೆ.<br /> <br /> <strong>ಮಂಜೂರು:</strong> ಉಪ್ಪಾರಹಳ್ಳಿ ಕೆರೆ ಏರಿ ಒಡೆದ ಬಗ್ಗೆ ಜಿ.ಪಂ ಸದಸ್ಯ ಎಂ. ಅನ್ನದಾನರೆಡ್ಡಿ ಅವರನ್ನು `ಪ್ರಜಾವಾಣಿ~ ಸಂಪರ್ಕಿಸಿದಾಗ, ತಾವು ಈಗಾಗಲೇ ಕೆರೆಗೆ ಭೇಟಿ ನೀಡಿದ್ದು, ಏರಿ ದುರಸ್ತಿಗಾಗಿ ಜಿಲ್ಲಾ ಪಂಚಾಯಿತಿಯಿಂದ ರೂ. 30 ಲಕ್ಷ ಮಂಜೂರು ಮಾಡಿಸಿರುವುದಾಗಿ ಹೇಳಿದರು. ಜಿ.ಪಂ.ದಿಂದ ಅನುಮೋದನೆ ದೊರೆಯುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>