<p><strong>ಬೆಂಗಳೂರು:</strong> ಮೊದಲನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟಿರುವ ದಾರುಣ ಘಟನೆ ಗಂಗಮ್ಮನಗುಡಿಯ ಅಬ್ಬಿಗೆರೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.</p>.<p>ಕೇಶವ ಮತ್ತು ಗೀತಾ ದಂಪತಿಯ ಪುತ್ರ ಆಕಾಶ್ ಮೃತಪಟ್ಟ ಮಗು. ಕೊಳಾಯಿ ಕೆಲಸ ಮಾಡುವ ಕೇಶವ ಅವರು ನೆಲ ಮಹಡಿಯಲ್ಲಿ ವಾಸವಿದ್ದಾರೆ. ಮೊದಲನೇ ಮಹಡಿಯಲ್ಲಿ ಇನ್ನೊಂದು ಕುಟುಂಬ ಇದೆ.</p>.<p>ಮಗುವನ್ನು ಎತ್ತಿಕೊಂಡು ಮೊದಲನೇ ಮಹಡಿಗೆ ಹೋದ ಗೀತಾ ಗೆಳತಿಯ ಜತೆ ಮಾತನಾಡುತ್ತಿದ್ದರು. ಈ ವೇಳೆ ತರಕಾರಿ ಗಾಡಿ ಬಂದಿದೆ. ಮಗುವನ್ನು ಮಹಡಿಯಲ್ಲೇ ಬಿಟ್ಟ ಅವರು ಗೆಳತಿಯ ಜತೆ ಕೆಳಗೆ ಹೋಗಿದ್ದಾರೆ. ತಾಯಿಯನ್ನು ನೋಡಲು ಆಕಾಶ್ ತಡೆಗೋಡೆಯಿಂದ ಬಗ್ಗಿ ನೋಡಿದಾಗ ಜಾರಿ ಬಿದ್ದಿದ್ದಾನೆ.</p>.<p>ತೀವ್ರವಾಗಿ ಗಾಯಗೊಂಡಿದ್ದ ಆಕಾಶ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗೆ ಮಗು ಮೃತಪಟ್ಟಿತ್ತು. ಎರಡು ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿಯ ಒಬ್ಬನೇ ಮಗ ಆಕಾಶ್ ಎಂದು ಇನ್ಸ್ಪೆಕ್ಟರ್ ಎಚ್. ನಾಗರಾಜು ತಿಳಿಸಿದ್ದಾರೆ.</p>.<p>ಮಹಡಿಯ ತಡೆಗೋಡೆ ಸುಮಾರು ಎರಡೂವರೆ ಅಡಿ ಎತ್ತರ ಇದೆ. ಆದರೆ ಅದರ ವಿನ್ಯಾಸಕ್ಕಾಗ ಜಾಗ ಬಿಡಲಾಗಿದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಮೊದಲನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟಿರುವ ದಾರುಣ ಘಟನೆ ಗಂಗಮ್ಮನಗುಡಿಯ ಅಬ್ಬಿಗೆರೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.</p>.<p>ಕೇಶವ ಮತ್ತು ಗೀತಾ ದಂಪತಿಯ ಪುತ್ರ ಆಕಾಶ್ ಮೃತಪಟ್ಟ ಮಗು. ಕೊಳಾಯಿ ಕೆಲಸ ಮಾಡುವ ಕೇಶವ ಅವರು ನೆಲ ಮಹಡಿಯಲ್ಲಿ ವಾಸವಿದ್ದಾರೆ. ಮೊದಲನೇ ಮಹಡಿಯಲ್ಲಿ ಇನ್ನೊಂದು ಕುಟುಂಬ ಇದೆ.</p>.<p>ಮಗುವನ್ನು ಎತ್ತಿಕೊಂಡು ಮೊದಲನೇ ಮಹಡಿಗೆ ಹೋದ ಗೀತಾ ಗೆಳತಿಯ ಜತೆ ಮಾತನಾಡುತ್ತಿದ್ದರು. ಈ ವೇಳೆ ತರಕಾರಿ ಗಾಡಿ ಬಂದಿದೆ. ಮಗುವನ್ನು ಮಹಡಿಯಲ್ಲೇ ಬಿಟ್ಟ ಅವರು ಗೆಳತಿಯ ಜತೆ ಕೆಳಗೆ ಹೋಗಿದ್ದಾರೆ. ತಾಯಿಯನ್ನು ನೋಡಲು ಆಕಾಶ್ ತಡೆಗೋಡೆಯಿಂದ ಬಗ್ಗಿ ನೋಡಿದಾಗ ಜಾರಿ ಬಿದ್ದಿದ್ದಾನೆ.</p>.<p>ತೀವ್ರವಾಗಿ ಗಾಯಗೊಂಡಿದ್ದ ಆಕಾಶ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ವೇಳೆಗೆ ಮಗು ಮೃತಪಟ್ಟಿತ್ತು. ಎರಡು ವರ್ಷದ ಹಿಂದೆ ವಿವಾಹವಾಗಿದ್ದ ದಂಪತಿಯ ಒಬ್ಬನೇ ಮಗ ಆಕಾಶ್ ಎಂದು ಇನ್ಸ್ಪೆಕ್ಟರ್ ಎಚ್. ನಾಗರಾಜು ತಿಳಿಸಿದ್ದಾರೆ.</p>.<p>ಮಹಡಿಯ ತಡೆಗೋಡೆ ಸುಮಾರು ಎರಡೂವರೆ ಅಡಿ ಎತ್ತರ ಇದೆ. ಆದರೆ ಅದರ ವಿನ್ಯಾಸಕ್ಕಾಗ ಜಾಗ ಬಿಡಲಾಗಿದೆ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>