<p><strong>ಚಿಕ್ಕಬಳ್ಳಾಪುರ: </strong>‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ತುಂಬಾ ಬೇಡಿಕೆಯಿತ್ತು. ಪ್ರತಿ ದಿನ ಒಬ್ಬೊಬ್ಬ ರಾಜಕೀಯ ಮುಖಂಡರು ಮನೆಗೆ ಬಂದು ಸಮಾವೇಶಕ್ಕೆ ಕರೆದೊಯ್ಯುತ್ತಿದ್ದರು. ಈ ಬಾರಿ ಚುನಾವಣೆಯೂ ಅದೇ ರೀತಿಯಲ್ಲಿ ಇರುತ್ತಾ? ನಮ್ಮನ್ನು ಮತ್ತೆ ಕರೀತಾರಾ?’<br /> <br /> ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೆಲೆಸಿರುವ ಅಪಾರ ಸಂಖ್ಯೆಯ ಸ್ತ್ರೀಶಕ್ತಿ ಸಂಘಟನೆ ಸದಸ್ಯರು, ಬಿಸಿಯೂಟದ ನೌಕರರು, ಆಶಾ ಕಾರ್ಯಕರ್ತೆಯರಿಗೆ ಈ ಪ್ರಶ್ನೆ ಗಾಢವಾಗಿ ಕಾಡುತ್ತಿದೆ.<br /> <br /> ಚುನಾವಣೆ ಖದರು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳು ಮತ್ತು ಮುಖಂಡರಿಂದ ತಮಗೆ ಕರೆಗಳು ಬರಬಹುದು. ಸಮಾವೇಶಕ್ಕೆ ಹೋಗಲು ವಾಹನದ ವ್ಯವಸ್ಥೆಯಾಗಬಹುದು. ಸಮಾವೇಶದಲ್ಲೇ ಊಟದ ವ್ಯವಸ್ಥೆಯಾಗಬಹುದು ಎಂದೆಲ್ಲ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ.<br /> <br /> ಆಸಕ್ತಿಕರ ಸಂಗತಿಯೆಂದರೆ, ಒಂದೆಡೆ ರಾಜಕೀಯ ಪಕ್ಷದವರು ಸಾಧ್ಯವಾದಷ್ಟು ಹೆಚ್ಚು ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಚುನಾವಣೆ ಆಯೋಗದ ಸೂಚನೆ ಮೇರೆಗೆ ಜಿಲ್ಲಾಡಳಿತದ ಅಧಿಕಾರಿಗಳು ಮತದಾನ ಪ್ರಮಾಣ ಹೆಚ್ಚಳ ಮಾಡಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಅವರಿಬ್ಬರೂ ಮಹಿಳೆಯರು ಮತ್ತು ಮಕ್ಕಳನ್ನೇ ಅವಲಂಬಿಸಿದ್ದಾರೆ!<br /> <br /> <strong>ಮನೆಗೆ ಬಂದು ಕರೆಯುತ್ತಾರೆ</strong>: ರಾಜಕೀಯ ಸಮಾವೇಶಗಳಲ್ಲಿ ಹೇಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೋ ಹಾಗೆಯೇ ಮತದಾನಕ್ಕೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಸಮಾವೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯ ಮುಖಂಡರ ಭಾಷಣ ಆಲಿಸುತ್ತಿರುವುದು ಕಂಡು ಬಂದರೆ, ಮತದಾನ ಜಾಗೃತಿ ಮತ್ತು ಚುನಾವಣೆ ಸಂಬಂಧಿಸಿದ ಕಾರ್ಯಗಳಲ್ಲೂ ಮಹಿಳೆಯರದ್ದೇ ಪ್ರಮುಖ ಪಾತ್ರವಿರುತ್ತದೆ.<br /> <br /> ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲ ರಾಜಕಿಯ ಪಕ್ಷಗಳ ಮುಖಂಡರು ಮತ್ತು ಅಭ್ಯರ್ಥಿಗಳು ಸ್ತ್ರೀಶಕ್ತಿ ಸಂಘಗಳು, ಅಂಗನವಾಡಿ ನೌಕರರ ಮೇಲೆ ಕಣ್ಣಿಟ್ಟಿದ್ದರು. ದಿನ ಬೆಳಗಾದರೆ ಸಾಕು, ನಮ್ಮ ಪ್ರದೇಶದ ಮುಖಂಡರೊಬ್ಬರು ಮನೆಬಾಗಿಲಿಗೆ ಬಂದು ಪ್ರಚಾರ ಸಭೆಗಳಿಗೆ ಇಲ್ಲವೇ ಮೆರವಣಿಗೆಗೆ ಕರೆದೊಯ್ಯುತ್ತಿದ್ದರು. ಊಟ ಮತ್ತು ಹಣದ ಆಸೆ ತೋರಿಸುತ್ತಿದ್ದ ಕಾರಣ ಬೇರೆ ಮಾರ್ಗವಿಲ್ಲದೇ ಅವರು ಹೇಳಿದ ಸಭೆಗಳಲ್ಲಿ ಕೂರುತ್ತಿದ್ದೆವು’ ಎಂದು ಅಂಗನವಾಡಿ ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಅವರ ಹೇಳಿಕೆಗೆ ಪೂರಕ ಎಂಬಂತೆ ಯಾವುದೇ ರಾಜಕೀಯ ಸಮಾವೇಶಗಳಲ್ಲಿ ಅಥವಾ ಸಭೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಕಾಣುತ್ತಿದ್ದರೆ ಹೊರತು ಪುರುಷರ ಸಂಖ್ಯೆ ತುಂಬಾ ಕಡಿಮೆ ಕಾಣಿಸುತ್ತಿತ್ತು. ಊಟ ಮತ್ತು ಹಣದ ಆಸೆಯಲ್ಲದೇ ಬೇರೆ ಏನೇನೋ ಸೌಲಭ್ಯ ಕೊಡುತ್ತೇವೆ ಎಂದು ಮಹಿಳೆಯರನ್ನು ಕರೆತಂದ ಸಮಾವೇಶದ ಆಯೋಜಕರು ಸೌಲಭ್ಯ ನೀಡಲಾಗದೇ ಪೇಚಿಗೆ ಸಿಲುಕಿ ಆಕ್ರೋಶಕ್ಕೆ ತುತ್ತಾದ ಘಟನೆಗಳು ಸಹ ನಡೆದಿವೆ.<br /> <br /> <strong>ಮಹಿಳೆಯರು, ಮಕ್ಕಳು ಅನಿವಾರ್ಯ: </strong>‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ಮುಂತಾದ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆಸಿಕೊಳ್ಳಲಾಗಿತ್ತು. ಬೆಳಿಗ್ಗೆ 11ಕ್ಕೆ ನಿಗದಿಯಾಗುತ್ತಿದ್ದ ಸಮಾವೇಶ ಮಧ್ಯಾಹ್ನ 3ರವರೆಗೆ ನಡೆದರೂ ಮಹಿಳೆಯರು ಹಾಗೆಯೇ ಕೂತಿರುತ್ತಿದ್ದರು’ ಎಂದು ರಾಜಕೀಯ ಮುಖಂಡರೊಬ್ಬರು ತಿಳಿಸಿದರು.<br /> <br /> ‘ಒಂದೆರಡು ದಿನಗಳಲ್ಲಿಯೇ ಭಾರಿ ಸಂಖ್ಯೆಯಲ್ಲಿ ಜನರನ್ನು ಕರೆತರಲಾಗುವುದಿಲ್ಲ. ಒಂದು ವೇಳೆ ಕರೆ ತಂದರೂ ಅವರು ದೀರ್ಘ ಕಾಲ ಭಾಷಣ ಕೇಳುವಂತಹ ಸ್ಥಿತಿಯಲ್ಲಿ ಇರುವುದಿಲ್ಲ. ಪುರುಷರು ಸ್ವಲ್ಪ ಅವಕಾಶ ಸಿಕ್ಕರೂ ಸಾಕು, ಏನಾದರೂ ನೆಪ ಹೇಳಿ ಹೊರಟು ಬಿಡುತ್ತಾರೆ. ಆದರೆ ಮಹಿಳೆಯರು ಮಾತ್ರ ನಿಷ್ಠೆಗೆ ಬದ್ಧರಾಗಿ ಮಕ್ಕಳ ಸಮೇತ ಸಮಾವೇಶ ಮುಗಿಯುವವರೆಗೆ ಕೂತಿರುತ್ತಾರೆ’ ಎಂದು ಅವರು ತಿಳಿಸಿದರು.<br /> <br /> <strong>ಇಬ್ಬರದ್ದೂ ದ್ವಿಪಾತ್ರ: </strong>ಚುನಾವಣಾ ಸಿದ್ಧತಾ ಕಾರ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಸ್ವೀಪ್ ಮತದಾನ ಜಾಗೃತಿ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಅವರೇ ಅಂಗನವಾಡಿ ನೌಕರರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಸದಸ್ಯರು ಮತ್ತು ಶಾಲಾ–ಕಾಲೇಜು ವಿದ್ಯಾರ್ಥಿಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದರು. ಉದಾಹರಣೆಗೆ ಎಂಬಂತೆ ಸೋಮವಾರ ನಡೆದ ಮತದಾನ ಜಾಗೃತಿ ಅಭಿಯಾನ ಜಾಥಾದಲ್ಲಿ ಶಾಲಾಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.<br /> <br /> ‘ಕಳೆದ ವಿಧಾನಸಭಾ ಚುನಾವಣೆಯಂತೆಯೇ ಈ ಸಲದ ಲೋಕಸಭಾ ಚುನಾವಣೆಯಲ್ಲೂ ಮಹಿಳೆಯರು ಮತ್ತು ಮಕ್ಕಳು ಚುನಾವಣೆಗೆ ಸಂಬಂಧಿಸಿದ ಕೆಲಸಕಾರ್ಯಗಳಲ್ಲಿ ಅಥವಾ ಸಮಾವೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರೆ ಅಚ್ಚರಿಪಡಬೇಕಿಲ್ಲ. ಒಟ್ಟಾರೆ ಮಹಿಳೆಯರು ಮತ್ತು ಮಕ್ಕಳು ದ್ವಿಪಾತ್ರ ನಿಭಾಯಿಸುತ್ತಾರೆ. ರಾಜಕೀಯ ಪಕ್ಷ ಅಥವಾ ಮುಖಂಡರ ಪರವಾಗಿ ಒಂದೆಡೆ ಮತಯಾಚಿಸಿದರೆ, ಮತ್ತೊಂದೆಡೆ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಮನವಿಯೂ ಮಾಡಿಕೊಳ್ಳುತ್ತಾರೆ. ಎಂತಹದ್ದೇ ಸಂದರ್ಭದಲ್ಲೂ<br /> <br /> ಅವರನ್ನು ಕಡೆಗಣಿಸುವುದಿಲ್ಲ’ ಎಂದು ರಾಜಕೀಯ ಮುತ್ಸದ್ದಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ: </strong>‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮಗೆ ತುಂಬಾ ಬೇಡಿಕೆಯಿತ್ತು. ಪ್ರತಿ ದಿನ ಒಬ್ಬೊಬ್ಬ ರಾಜಕೀಯ ಮುಖಂಡರು ಮನೆಗೆ ಬಂದು ಸಮಾವೇಶಕ್ಕೆ ಕರೆದೊಯ್ಯುತ್ತಿದ್ದರು. ಈ ಬಾರಿ ಚುನಾವಣೆಯೂ ಅದೇ ರೀತಿಯಲ್ಲಿ ಇರುತ್ತಾ? ನಮ್ಮನ್ನು ಮತ್ತೆ ಕರೀತಾರಾ?’<br /> <br /> ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೆಲೆಸಿರುವ ಅಪಾರ ಸಂಖ್ಯೆಯ ಸ್ತ್ರೀಶಕ್ತಿ ಸಂಘಟನೆ ಸದಸ್ಯರು, ಬಿಸಿಯೂಟದ ನೌಕರರು, ಆಶಾ ಕಾರ್ಯಕರ್ತೆಯರಿಗೆ ಈ ಪ್ರಶ್ನೆ ಗಾಢವಾಗಿ ಕಾಡುತ್ತಿದೆ.<br /> <br /> ಚುನಾವಣೆ ಖದರು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳು ಮತ್ತು ಮುಖಂಡರಿಂದ ತಮಗೆ ಕರೆಗಳು ಬರಬಹುದು. ಸಮಾವೇಶಕ್ಕೆ ಹೋಗಲು ವಾಹನದ ವ್ಯವಸ್ಥೆಯಾಗಬಹುದು. ಸಮಾವೇಶದಲ್ಲೇ ಊಟದ ವ್ಯವಸ್ಥೆಯಾಗಬಹುದು ಎಂದೆಲ್ಲ ಕಲ್ಪನೆ ಮಾಡಿಕೊಳ್ಳುತ್ತಿದ್ದಾರೆ.<br /> <br /> ಆಸಕ್ತಿಕರ ಸಂಗತಿಯೆಂದರೆ, ಒಂದೆಡೆ ರಾಜಕೀಯ ಪಕ್ಷದವರು ಸಾಧ್ಯವಾದಷ್ಟು ಹೆಚ್ಚು ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಚುನಾವಣೆ ಆಯೋಗದ ಸೂಚನೆ ಮೇರೆಗೆ ಜಿಲ್ಲಾಡಳಿತದ ಅಧಿಕಾರಿಗಳು ಮತದಾನ ಪ್ರಮಾಣ ಹೆಚ್ಚಳ ಮಾಡಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಅವರಿಬ್ಬರೂ ಮಹಿಳೆಯರು ಮತ್ತು ಮಕ್ಕಳನ್ನೇ ಅವಲಂಬಿಸಿದ್ದಾರೆ!<br /> <br /> <strong>ಮನೆಗೆ ಬಂದು ಕರೆಯುತ್ತಾರೆ</strong>: ರಾಜಕೀಯ ಸಮಾವೇಶಗಳಲ್ಲಿ ಹೇಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೋ ಹಾಗೆಯೇ ಮತದಾನಕ್ಕೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಸಮಾವೇಶಗಳಲ್ಲಿ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯ ಮುಖಂಡರ ಭಾಷಣ ಆಲಿಸುತ್ತಿರುವುದು ಕಂಡು ಬಂದರೆ, ಮತದಾನ ಜಾಗೃತಿ ಮತ್ತು ಚುನಾವಣೆ ಸಂಬಂಧಿಸಿದ ಕಾರ್ಯಗಳಲ್ಲೂ ಮಹಿಳೆಯರದ್ದೇ ಪ್ರಮುಖ ಪಾತ್ರವಿರುತ್ತದೆ.<br /> <br /> ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಲ ರಾಜಕಿಯ ಪಕ್ಷಗಳ ಮುಖಂಡರು ಮತ್ತು ಅಭ್ಯರ್ಥಿಗಳು ಸ್ತ್ರೀಶಕ್ತಿ ಸಂಘಗಳು, ಅಂಗನವಾಡಿ ನೌಕರರ ಮೇಲೆ ಕಣ್ಣಿಟ್ಟಿದ್ದರು. ದಿನ ಬೆಳಗಾದರೆ ಸಾಕು, ನಮ್ಮ ಪ್ರದೇಶದ ಮುಖಂಡರೊಬ್ಬರು ಮನೆಬಾಗಿಲಿಗೆ ಬಂದು ಪ್ರಚಾರ ಸಭೆಗಳಿಗೆ ಇಲ್ಲವೇ ಮೆರವಣಿಗೆಗೆ ಕರೆದೊಯ್ಯುತ್ತಿದ್ದರು. ಊಟ ಮತ್ತು ಹಣದ ಆಸೆ ತೋರಿಸುತ್ತಿದ್ದ ಕಾರಣ ಬೇರೆ ಮಾರ್ಗವಿಲ್ಲದೇ ಅವರು ಹೇಳಿದ ಸಭೆಗಳಲ್ಲಿ ಕೂರುತ್ತಿದ್ದೆವು’ ಎಂದು ಅಂಗನವಾಡಿ ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಅವರ ಹೇಳಿಕೆಗೆ ಪೂರಕ ಎಂಬಂತೆ ಯಾವುದೇ ರಾಜಕೀಯ ಸಮಾವೇಶಗಳಲ್ಲಿ ಅಥವಾ ಸಭೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಕಾಣುತ್ತಿದ್ದರೆ ಹೊರತು ಪುರುಷರ ಸಂಖ್ಯೆ ತುಂಬಾ ಕಡಿಮೆ ಕಾಣಿಸುತ್ತಿತ್ತು. ಊಟ ಮತ್ತು ಹಣದ ಆಸೆಯಲ್ಲದೇ ಬೇರೆ ಏನೇನೋ ಸೌಲಭ್ಯ ಕೊಡುತ್ತೇವೆ ಎಂದು ಮಹಿಳೆಯರನ್ನು ಕರೆತಂದ ಸಮಾವೇಶದ ಆಯೋಜಕರು ಸೌಲಭ್ಯ ನೀಡಲಾಗದೇ ಪೇಚಿಗೆ ಸಿಲುಕಿ ಆಕ್ರೋಶಕ್ಕೆ ತುತ್ತಾದ ಘಟನೆಗಳು ಸಹ ನಡೆದಿವೆ.<br /> <br /> <strong>ಮಹಿಳೆಯರು, ಮಕ್ಕಳು ಅನಿವಾರ್ಯ: </strong>‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ಮುಂತಾದ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಚುನಾವಣಾ ಪ್ರಚಾರ ಸಮಾವೇಶಗಳಲ್ಲಿ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆಸಿಕೊಳ್ಳಲಾಗಿತ್ತು. ಬೆಳಿಗ್ಗೆ 11ಕ್ಕೆ ನಿಗದಿಯಾಗುತ್ತಿದ್ದ ಸಮಾವೇಶ ಮಧ್ಯಾಹ್ನ 3ರವರೆಗೆ ನಡೆದರೂ ಮಹಿಳೆಯರು ಹಾಗೆಯೇ ಕೂತಿರುತ್ತಿದ್ದರು’ ಎಂದು ರಾಜಕೀಯ ಮುಖಂಡರೊಬ್ಬರು ತಿಳಿಸಿದರು.<br /> <br /> ‘ಒಂದೆರಡು ದಿನಗಳಲ್ಲಿಯೇ ಭಾರಿ ಸಂಖ್ಯೆಯಲ್ಲಿ ಜನರನ್ನು ಕರೆತರಲಾಗುವುದಿಲ್ಲ. ಒಂದು ವೇಳೆ ಕರೆ ತಂದರೂ ಅವರು ದೀರ್ಘ ಕಾಲ ಭಾಷಣ ಕೇಳುವಂತಹ ಸ್ಥಿತಿಯಲ್ಲಿ ಇರುವುದಿಲ್ಲ. ಪುರುಷರು ಸ್ವಲ್ಪ ಅವಕಾಶ ಸಿಕ್ಕರೂ ಸಾಕು, ಏನಾದರೂ ನೆಪ ಹೇಳಿ ಹೊರಟು ಬಿಡುತ್ತಾರೆ. ಆದರೆ ಮಹಿಳೆಯರು ಮಾತ್ರ ನಿಷ್ಠೆಗೆ ಬದ್ಧರಾಗಿ ಮಕ್ಕಳ ಸಮೇತ ಸಮಾವೇಶ ಮುಗಿಯುವವರೆಗೆ ಕೂತಿರುತ್ತಾರೆ’ ಎಂದು ಅವರು ತಿಳಿಸಿದರು.<br /> <br /> <strong>ಇಬ್ಬರದ್ದೂ ದ್ವಿಪಾತ್ರ: </strong>ಚುನಾವಣಾ ಸಿದ್ಧತಾ ಕಾರ್ಯದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಸ್ವೀಪ್ ಮತದಾನ ಜಾಗೃತಿ ಅಭಿಯಾನದ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಅವರೇ ಅಂಗನವಾಡಿ ನೌಕರರು, ಸ್ತ್ರೀಶಕ್ತಿ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ವಿವಿಧ ಸಂಘಟನೆಗಳ ಸದಸ್ಯರು ಮತ್ತು ಶಾಲಾ–ಕಾಲೇಜು ವಿದ್ಯಾರ್ಥಿಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬಗ್ಗೆ ಇಚ್ಛೆ ವ್ಯಕ್ತಪಡಿಸಿದ್ದರು. ಉದಾಹರಣೆಗೆ ಎಂಬಂತೆ ಸೋಮವಾರ ನಡೆದ ಮತದಾನ ಜಾಗೃತಿ ಅಭಿಯಾನ ಜಾಥಾದಲ್ಲಿ ಶಾಲಾಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.<br /> <br /> ‘ಕಳೆದ ವಿಧಾನಸಭಾ ಚುನಾವಣೆಯಂತೆಯೇ ಈ ಸಲದ ಲೋಕಸಭಾ ಚುನಾವಣೆಯಲ್ಲೂ ಮಹಿಳೆಯರು ಮತ್ತು ಮಕ್ಕಳು ಚುನಾವಣೆಗೆ ಸಂಬಂಧಿಸಿದ ಕೆಲಸಕಾರ್ಯಗಳಲ್ಲಿ ಅಥವಾ ಸಮಾವೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರೆ ಅಚ್ಚರಿಪಡಬೇಕಿಲ್ಲ. ಒಟ್ಟಾರೆ ಮಹಿಳೆಯರು ಮತ್ತು ಮಕ್ಕಳು ದ್ವಿಪಾತ್ರ ನಿಭಾಯಿಸುತ್ತಾರೆ. ರಾಜಕೀಯ ಪಕ್ಷ ಅಥವಾ ಮುಖಂಡರ ಪರವಾಗಿ ಒಂದೆಡೆ ಮತಯಾಚಿಸಿದರೆ, ಮತ್ತೊಂದೆಡೆ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಮನವಿಯೂ ಮಾಡಿಕೊಳ್ಳುತ್ತಾರೆ. ಎಂತಹದ್ದೇ ಸಂದರ್ಭದಲ್ಲೂ<br /> <br /> ಅವರನ್ನು ಕಡೆಗಣಿಸುವುದಿಲ್ಲ’ ಎಂದು ರಾಜಕೀಯ ಮುತ್ಸದ್ದಿಯೊಬ್ಬರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>