<p><strong>ಶಿವಮೊಗ್ಗ:</strong> ಉಪ ನಾಯಕ ಕರುಣ್ ನಾಯರ್ (ಔಟಾಗದೆ 174; 267 ಎ, 14 ಬೌಂ, 3 ಸಿ) ಅವರ ಛಲದ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡ ಗೋವಾ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಕಲೆಹಾಕಿದೆ.</p><p>ಇಲ್ಲಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮಯಂಕ್ ಅಗರವಾಲ್ ಬಳಗ 110.1 ಓವರ್ಗಳಲ್ಲಿ 371 ರನ್ಗಳಿಗೆ ಆಲೌಟ್ ಆಯಿತು.</p><p>ಈ ಮೈದಾನದಲ್ಲಿ ಎರಡನೇ ಶತಕ ದಾಖಲಿಸಿದ ಕರುಣ್, ಭಾನುವಾರ ಎದುರಾಳಿ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು. </p><p>ಇವರಿಗೆ ಆಲ್ರೌಂಡರ್ ಶ್ರೇಯಸ್ ಗೋಪಾಲ್ (57; 109 ಎ, 6 ಬೌಂ, 1ಸಿ) ಮತ್ತು ವೇಗದ ಬೌಲರ್ ವೈಶಾಖ್ ವಿಜಯಕುಮಾರ್ (31; 53 ಎ, 4 ಬೌಂ) ಉತ್ತಮ ಬೆಂಬಲ ನೀಡಿದರು.</p><p>ಕರುಣ್ ಮತ್ತು ಶ್ರೇಯಸ್ 6ನೇ ವಿಕೆಟ್ ಜೊತೆಯಾಟದಲ್ಲಿ 117 ರನ್ ಗಳಿಸಿ ತಂಡವನ್ನು ಸುಸ್ಥಿತಿಗೆ ತಂದು ನಿಲ್ಲಿಸಿದರು.</p><p>ಶ್ರೇಯಸ್ ಔಟಾದ ನಂತರ ಕರುಣ್, 'ಬಾಲಂಗೋಚಿ' ಗಳೊಂದಿಗೆ ಸೇರಿ ಇನಿಂಗ್ಸ್ ಬೆಳೆಸಿದರು. 7ನೇ ವಿಕೆಟ್ಗೆ ಯಶೋವರ್ಧನ್ ಪರಂತಾಪ್ (14) ಜೊತೆ 26 ರನ್, 8 ನೇ ವಿಕೆಟ್ ಪಾಲುದಾರಿಕೆಯಲ್ಲಿ ವೈಶಾಖ್ ಜೊತೆ 99 ಎಸೆತಗಳಲ್ಲಿ 60 ರನ್ ದಾಖಲಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. </p><p>10ನೇ ವಿಕೆಟ್ಗೆ ವಿದ್ವತ್ ಕಾವೇರಪ್ಪ ಜೊತೆಗೂಡಿ 29 ರನ್ ಕಲೆಹಾಕಿದರು. ಈ ಪಾಲುದಾರಿಕೆಯಲ್ಲಿ ಬಂದ ರನ್ಗಳೆಲ್ಲವೂ ಅವರ ಬ್ಯಾಟ್ನಿಂದಲೇ ಸಿಡಿದಿದ್ದು ವಿಶೇಷ. </p><p>111ನೇ ಓವರ್ನ ಮೊದಲ ಎಸೆತವನ್ನು ಕರುಣ್, ಡೀಪ್ ಮಿಡ್ ವಿಕೆಟ್ನತ್ತ ಬಾರಿಸಿ ಒಂದು ರನ್ ಗಳಿಸಿದರು. ಕರುಣ್ ಬೇಡ ಎಂದರೂ ಮತ್ತೊಂದು ರನ್ಗಾಗಿ ಅನಗತ್ಯವಾಗಿ ಓಡಿದ ಕಾವೇರಪ್ಪ ರನೌಟ್ ಆದರು. ಇದರೊಂದಿಗೆ ಕರ್ನಾಟಕದ ಇನಿಂಗ್ಸ್ಗೆ ತೆರೆಬಿತ್ತು.</p><p>ಮೊದಲ ಇನಿಂಗ್ಸ್ ಆರಂಭಿಸಿರುವ ಗೋವಾ 3.5 ಓವರ್ಗಳಲ್ಲಿ 9 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.</p><p>ವೇಗಿ ಅಭಿಲಾಷ್ ಶೆಟ್ಟಿ, ಮಂಥನ್ ಖುಟ್ಕರ್ (9) ವಿಕೆಟ್ ಪಡೆದು ಆತಿಥೇಯರಿಗೆ ಮೇಲುಗೈ ತಂದುಕೊಟ್ಟಿದ್ದಾರೆ.</p>
<p><strong>ಶಿವಮೊಗ್ಗ:</strong> ಉಪ ನಾಯಕ ಕರುಣ್ ನಾಯರ್ (ಔಟಾಗದೆ 174; 267 ಎ, 14 ಬೌಂ, 3 ಸಿ) ಅವರ ಛಲದ ಬ್ಯಾಟಿಂಗ್ ಬಲದಿಂದ ಕರ್ನಾಟಕ ತಂಡ ಗೋವಾ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಕಲೆಹಾಕಿದೆ.</p><p>ಇಲ್ಲಿನ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಮಯಂಕ್ ಅಗರವಾಲ್ ಬಳಗ 110.1 ಓವರ್ಗಳಲ್ಲಿ 371 ರನ್ಗಳಿಗೆ ಆಲೌಟ್ ಆಯಿತು.</p><p>ಈ ಮೈದಾನದಲ್ಲಿ ಎರಡನೇ ಶತಕ ದಾಖಲಿಸಿದ ಕರುಣ್, ಭಾನುವಾರ ಎದುರಾಳಿ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು. </p><p>ಇವರಿಗೆ ಆಲ್ರೌಂಡರ್ ಶ್ರೇಯಸ್ ಗೋಪಾಲ್ (57; 109 ಎ, 6 ಬೌಂ, 1ಸಿ) ಮತ್ತು ವೇಗದ ಬೌಲರ್ ವೈಶಾಖ್ ವಿಜಯಕುಮಾರ್ (31; 53 ಎ, 4 ಬೌಂ) ಉತ್ತಮ ಬೆಂಬಲ ನೀಡಿದರು.</p><p>ಕರುಣ್ ಮತ್ತು ಶ್ರೇಯಸ್ 6ನೇ ವಿಕೆಟ್ ಜೊತೆಯಾಟದಲ್ಲಿ 117 ರನ್ ಗಳಿಸಿ ತಂಡವನ್ನು ಸುಸ್ಥಿತಿಗೆ ತಂದು ನಿಲ್ಲಿಸಿದರು.</p><p>ಶ್ರೇಯಸ್ ಔಟಾದ ನಂತರ ಕರುಣ್, 'ಬಾಲಂಗೋಚಿ' ಗಳೊಂದಿಗೆ ಸೇರಿ ಇನಿಂಗ್ಸ್ ಬೆಳೆಸಿದರು. 7ನೇ ವಿಕೆಟ್ಗೆ ಯಶೋವರ್ಧನ್ ಪರಂತಾಪ್ (14) ಜೊತೆ 26 ರನ್, 8 ನೇ ವಿಕೆಟ್ ಪಾಲುದಾರಿಕೆಯಲ್ಲಿ ವೈಶಾಖ್ ಜೊತೆ 99 ಎಸೆತಗಳಲ್ಲಿ 60 ರನ್ ದಾಖಲಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. </p><p>10ನೇ ವಿಕೆಟ್ಗೆ ವಿದ್ವತ್ ಕಾವೇರಪ್ಪ ಜೊತೆಗೂಡಿ 29 ರನ್ ಕಲೆಹಾಕಿದರು. ಈ ಪಾಲುದಾರಿಕೆಯಲ್ಲಿ ಬಂದ ರನ್ಗಳೆಲ್ಲವೂ ಅವರ ಬ್ಯಾಟ್ನಿಂದಲೇ ಸಿಡಿದಿದ್ದು ವಿಶೇಷ. </p><p>111ನೇ ಓವರ್ನ ಮೊದಲ ಎಸೆತವನ್ನು ಕರುಣ್, ಡೀಪ್ ಮಿಡ್ ವಿಕೆಟ್ನತ್ತ ಬಾರಿಸಿ ಒಂದು ರನ್ ಗಳಿಸಿದರು. ಕರುಣ್ ಬೇಡ ಎಂದರೂ ಮತ್ತೊಂದು ರನ್ಗಾಗಿ ಅನಗತ್ಯವಾಗಿ ಓಡಿದ ಕಾವೇರಪ್ಪ ರನೌಟ್ ಆದರು. ಇದರೊಂದಿಗೆ ಕರ್ನಾಟಕದ ಇನಿಂಗ್ಸ್ಗೆ ತೆರೆಬಿತ್ತು.</p><p>ಮೊದಲ ಇನಿಂಗ್ಸ್ ಆರಂಭಿಸಿರುವ ಗೋವಾ 3.5 ಓವರ್ಗಳಲ್ಲಿ 9 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.</p><p>ವೇಗಿ ಅಭಿಲಾಷ್ ಶೆಟ್ಟಿ, ಮಂಥನ್ ಖುಟ್ಕರ್ (9) ವಿಕೆಟ್ ಪಡೆದು ಆತಿಥೇಯರಿಗೆ ಮೇಲುಗೈ ತಂದುಕೊಟ್ಟಿದ್ದಾರೆ.</p>