<p><strong>ಮಂಗಳೂರು: </strong>`ಯಂತ್ರಗಳು ದೈಹಿಕ ಶ್ರಮವನ್ನು ಮಾನಸಿಕ ಶ್ರಮವನ್ನಾಗಿ ಪರಿವರ್ತಿಸಿವೆ. ಮಾನಸಿಕ ಶ್ರಮ ಸೃಷ್ಟಿಸುವ ಒತ್ತಡದಿಂದ ಮನುಷ್ಯರು ಕ್ರಮೇಣ ಮನೋರೋಗಿಗಳಾಗುವ ಅಪಾಯವಿದೆ~ ಎಂದು ಹಿರಿಯ ರಂಗಕರ್ಮಿ, ಸಾಹಿತಿ ಪ್ರಸನ್ನ ಹೆಗ್ಗೋಡು ಎಚ್ಚರಿಸಿದರು.<br /> <br /> ಪತ್ರಕರ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ರೋಶನಿ ನಿಲಯ ಕಾಲೇಜಿನಲ್ಲಿ ಶನಿವಾರ ನಡೆದ ಕನ್ನಡ ಪತ್ರಿಕೋದ್ಯಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ದೈಹಿಕ ಶ್ರಮ ಪ್ರಕೃತಿ ಸಹಜವಾದುದು. ಹಿಂದಿನವರು ದೈಹಿಕ ಶ್ರಮದ ಕೆಲಸಕ್ಕೆ ಆದ್ಯತೆ ನೀಡುತ್ತಿದರು. ಅದರಿಂದ ರಾತ್ರಿ ನೆಮ್ಮದಿಯ ನಿದ್ದೆ ಬರುತ್ತಿತ್ತು. ಹಿಂದಿನವರು ನಿಧಾನವಾಗಿ ಬದುಕುತ್ತಿದ್ದರು. <br /> <br /> ಇಂದಿನವರು ಅವಸರದಿಂದ ಬದುಕುತ್ತಿದ್ದಾರೆ. ಬದುಕನ್ನು ಯಾಂತ್ರೀಕರಣಗೊಳಿಸಿದ ಫಲವಾಗಿ ಜೀವನ ಸುಲಭಗೊಂಡಿದೆ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಯಂತ್ರ ಬಳಕೆ ಹೆಚ್ಚಿದಂತೆ ಮನುಷ್ಯರ ಚಡಪಡಿಕೆಯೂ ಹೆಚ್ಚಿದೆ. ನಾವು ಮತ್ತೆ ಹಿಂದಿನ, ನೆಮ್ಮದಿಯ ಬದುಕಿಗೆ ಮರಳುವ ನಿರ್ಧಾರ ತಳೆಯಬೇಕಿದೆ~ ಎಂದರು.<br /> <br /> `ಪತ್ರಕರ್ತ ಮಾನವೀಯತೆಯಲ್ಲಿ, ಪ್ರಾಮಾಣಿಕತೆಯಲ್ಲಿ ನಂಬಿಕೆ ಇಟ್ಟುಕೊಂಡು ಆ ಕ್ಷಣದ ಬೆಳವಣಿಗೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವುದು ಮುಖ್ಯ. ರಂಗ ಕಲಾವಿದನ ಮೂಲಕ ಪಾತ್ರ ಮಾತನಾಡುವಂತೆ ಪತ್ರಕರ್ತನ ಮೂಲಕ ವರದಿಗಳು ಸಂವಹನ ನಡೆಸಬೇಕು. ಪ್ರತಿ ವರದಿಯಲ್ಲೂ ಪತ್ರಕರ್ತನ ಮಾನವೀಯ ಮುಖ ವ್ಯಕ್ತವಾಗಬೇಕು~ ಎಂದರು. <br /> <br /> ಹಿರಿಯ ಪತ್ರಕರ್ತ ಶಶಿಧರ ಭಟ್ ಮಾತನಾಡಿ, `ಪತ್ರಕರ್ತರಲ್ಲಿ ಇಂದು ಪ್ರತಿಭಟನೆಯ ಧ್ವನಿ ಮರೆಯಾಗುತ್ತಿದೆ. ಪ್ರತಿ ಪತ್ರಕರ್ತನಲ್ಲಿ ಸಿಟ್ಟು ಇರಬೇಕು. ಅದು ಆಂತರ್ಯದಿಂದ ಹುಟ್ಟುವಂತಹದ್ದು. ಅದಕ್ಕೆ ನೈತಿಕತೆ ಬೇಕಾಗುತ್ತದೆ. ಈ ಸಾತ್ವಿಕ ಪ್ರತಿಭಟನೆ ಯಂತ್ರಗಳ ಪ್ರಾಧಾನ್ಯತೆಯನ್ನು ಕಡಿಮೆ ಮಾಡುತ್ತದೆ~ ಎಂದರು. <br /> `ಮಾಧ್ಯಮಗಳ ಆದ್ಯತೆಗಳು ಇಂದು ಬದಲಾಗಿವೆ. ಪ್ರಭುತ್ವವನ್ನು ಪ್ರಶ್ನಿಸುವ ದಿಟ್ಟತನ ಇಂದು ಉಳಿದಿಲ್ಲ. <br /> <br /> ಈ ಬೆಳವಣಿಗೆ ಬಗ್ಗೆ ಪತ್ರಕರ್ತರು ಸಿನಿಕರಾಗದೆ ಬಹುಜನರ ಹಿತಕ್ಕಾಗಿ ದುಡಿಯುವ ಬದ್ಧತೆ ಉಳಿಸಿಕೊಂಡು ಆಶಾವಾದ ಹೊಂದಬೇಕು~ ಎಂದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಆಶಾ ನಾಯಕ್ ಮಾತನಾಡಿ, `ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾನೂನಿನ ಬಗ್ಗೆ ಬಹುತೇಕರಿಗೆ ಪರಿಜ್ಞಾನ ಇಲ್ಲ. ಮಕ್ಕಳನ್ನೂ ಸರಕಿನಂತೆ ಕಾಣುವ ಪ್ರವೃತ್ತಿ ಹಲವರಲ್ಲಿದೆ. ಮಕ್ಕಳು ಹಿರಿಯರಿಂದ ಪ್ರೀತಿ ವಾತ್ಸಲ್ಯ ಬಯಸುತ್ತಾರೆ. <br /> <br /> ಹಿರಿಯರು ಮಕ್ಕಳ ಭಾವನೆಗೆ ಸ್ಪಂದಿಸಬೇಕು. ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗುವ ಪ್ರಸಂಗಗಳು ಕಂಡುಬಂದರೆ ಮಕ್ಕ ಸಹಾಯವಾಣಿ 1098ಕ್ಕೆ ಕರೆ ಮಾಡಬಹುದು. ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರಬಹುದು~ ಎಂದರು.ಸಂವಾದದಲ್ಲಿ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>`ಯಂತ್ರಗಳು ದೈಹಿಕ ಶ್ರಮವನ್ನು ಮಾನಸಿಕ ಶ್ರಮವನ್ನಾಗಿ ಪರಿವರ್ತಿಸಿವೆ. ಮಾನಸಿಕ ಶ್ರಮ ಸೃಷ್ಟಿಸುವ ಒತ್ತಡದಿಂದ ಮನುಷ್ಯರು ಕ್ರಮೇಣ ಮನೋರೋಗಿಗಳಾಗುವ ಅಪಾಯವಿದೆ~ ಎಂದು ಹಿರಿಯ ರಂಗಕರ್ಮಿ, ಸಾಹಿತಿ ಪ್ರಸನ್ನ ಹೆಗ್ಗೋಡು ಎಚ್ಚರಿಸಿದರು.<br /> <br /> ಪತ್ರಕರ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಇಲ್ಲಿನ ರೋಶನಿ ನಿಲಯ ಕಾಲೇಜಿನಲ್ಲಿ ಶನಿವಾರ ನಡೆದ ಕನ್ನಡ ಪತ್ರಿಕೋದ್ಯಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.`ದೈಹಿಕ ಶ್ರಮ ಪ್ರಕೃತಿ ಸಹಜವಾದುದು. ಹಿಂದಿನವರು ದೈಹಿಕ ಶ್ರಮದ ಕೆಲಸಕ್ಕೆ ಆದ್ಯತೆ ನೀಡುತ್ತಿದರು. ಅದರಿಂದ ರಾತ್ರಿ ನೆಮ್ಮದಿಯ ನಿದ್ದೆ ಬರುತ್ತಿತ್ತು. ಹಿಂದಿನವರು ನಿಧಾನವಾಗಿ ಬದುಕುತ್ತಿದ್ದರು. <br /> <br /> ಇಂದಿನವರು ಅವಸರದಿಂದ ಬದುಕುತ್ತಿದ್ದಾರೆ. ಬದುಕನ್ನು ಯಾಂತ್ರೀಕರಣಗೊಳಿಸಿದ ಫಲವಾಗಿ ಜೀವನ ಸುಲಭಗೊಂಡಿದೆ ಎಂಬ ಭ್ರಮೆಯಲ್ಲಿ ನಾವಿದ್ದೇವೆ. ಯಂತ್ರ ಬಳಕೆ ಹೆಚ್ಚಿದಂತೆ ಮನುಷ್ಯರ ಚಡಪಡಿಕೆಯೂ ಹೆಚ್ಚಿದೆ. ನಾವು ಮತ್ತೆ ಹಿಂದಿನ, ನೆಮ್ಮದಿಯ ಬದುಕಿಗೆ ಮರಳುವ ನಿರ್ಧಾರ ತಳೆಯಬೇಕಿದೆ~ ಎಂದರು.<br /> <br /> `ಪತ್ರಕರ್ತ ಮಾನವೀಯತೆಯಲ್ಲಿ, ಪ್ರಾಮಾಣಿಕತೆಯಲ್ಲಿ ನಂಬಿಕೆ ಇಟ್ಟುಕೊಂಡು ಆ ಕ್ಷಣದ ಬೆಳವಣಿಗೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎನ್ನುವುದು ಮುಖ್ಯ. ರಂಗ ಕಲಾವಿದನ ಮೂಲಕ ಪಾತ್ರ ಮಾತನಾಡುವಂತೆ ಪತ್ರಕರ್ತನ ಮೂಲಕ ವರದಿಗಳು ಸಂವಹನ ನಡೆಸಬೇಕು. ಪ್ರತಿ ವರದಿಯಲ್ಲೂ ಪತ್ರಕರ್ತನ ಮಾನವೀಯ ಮುಖ ವ್ಯಕ್ತವಾಗಬೇಕು~ ಎಂದರು. <br /> <br /> ಹಿರಿಯ ಪತ್ರಕರ್ತ ಶಶಿಧರ ಭಟ್ ಮಾತನಾಡಿ, `ಪತ್ರಕರ್ತರಲ್ಲಿ ಇಂದು ಪ್ರತಿಭಟನೆಯ ಧ್ವನಿ ಮರೆಯಾಗುತ್ತಿದೆ. ಪ್ರತಿ ಪತ್ರಕರ್ತನಲ್ಲಿ ಸಿಟ್ಟು ಇರಬೇಕು. ಅದು ಆಂತರ್ಯದಿಂದ ಹುಟ್ಟುವಂತಹದ್ದು. ಅದಕ್ಕೆ ನೈತಿಕತೆ ಬೇಕಾಗುತ್ತದೆ. ಈ ಸಾತ್ವಿಕ ಪ್ರತಿಭಟನೆ ಯಂತ್ರಗಳ ಪ್ರಾಧಾನ್ಯತೆಯನ್ನು ಕಡಿಮೆ ಮಾಡುತ್ತದೆ~ ಎಂದರು. <br /> `ಮಾಧ್ಯಮಗಳ ಆದ್ಯತೆಗಳು ಇಂದು ಬದಲಾಗಿವೆ. ಪ್ರಭುತ್ವವನ್ನು ಪ್ರಶ್ನಿಸುವ ದಿಟ್ಟತನ ಇಂದು ಉಳಿದಿಲ್ಲ. <br /> <br /> ಈ ಬೆಳವಣಿಗೆ ಬಗ್ಗೆ ಪತ್ರಕರ್ತರು ಸಿನಿಕರಾಗದೆ ಬಹುಜನರ ಹಿತಕ್ಕಾಗಿ ದುಡಿಯುವ ಬದ್ಧತೆ ಉಳಿಸಿಕೊಂಡು ಆಶಾವಾದ ಹೊಂದಬೇಕು~ ಎಂದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಆಶಾ ನಾಯಕ್ ಮಾತನಾಡಿ, `ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾನೂನಿನ ಬಗ್ಗೆ ಬಹುತೇಕರಿಗೆ ಪರಿಜ್ಞಾನ ಇಲ್ಲ. ಮಕ್ಕಳನ್ನೂ ಸರಕಿನಂತೆ ಕಾಣುವ ಪ್ರವೃತ್ತಿ ಹಲವರಲ್ಲಿದೆ. ಮಕ್ಕಳು ಹಿರಿಯರಿಂದ ಪ್ರೀತಿ ವಾತ್ಸಲ್ಯ ಬಯಸುತ್ತಾರೆ. <br /> <br /> ಹಿರಿಯರು ಮಕ್ಕಳ ಭಾವನೆಗೆ ಸ್ಪಂದಿಸಬೇಕು. ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗುವ ಪ್ರಸಂಗಗಳು ಕಂಡುಬಂದರೆ ಮಕ್ಕ ಸಹಾಯವಾಣಿ 1098ಕ್ಕೆ ಕರೆ ಮಾಡಬಹುದು. ಅಥವಾ ಮಕ್ಕಳ ಕಲ್ಯಾಣ ಸಮಿತಿಯ ಗಮನಕ್ಕೆ ತರಬಹುದು~ ಎಂದರು.ಸಂವಾದದಲ್ಲಿ ಪತ್ರಕರ್ತರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>