<p>ನವದೆಹಲಿ (ಐಎಎನ್ಎಸ್): ಬುಧವಾರ ಸಂಭವಿಸಿದ ಹಿಂಸಾಚಾರದ ಕಾರಣಗಳ ಬಗ್ಗೆ ಸಂಪೂರ್ಣ ತನಿಖೆಯಾಗುವವರೆಗೆ ತನ್ನ ಮಾನೆಸರ್ ಘಟಕದಲ್ಲಿ ಉತ್ಪಾದನೆ ಪುನರಾರಂಭಗೊಳ್ಳುವುದಿಲ್ಲ ಎಂದು ಮಾರುತಿ ಸುಜುಕಿ ಶನಿವಾರ ಪ್ರಕಟಿಸಿತು.<br /> <br /> ~ಮಾನೆಸರ್ ಘಟಕದಲ್ಲಿ ಅನಿರ್ದಿಷ್ಟ ಲಾಕೌಟ್ ಘೋಷಿಸಲಾಗಿದೆ~ ಎಂದು ಅಧ್ಯಕ್ಷ ಆರ್.ಸಿ. ಭಾರ್ಗವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.<br /> <br /> ~ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಕೆಲವು ಕಾರುಗಳನ್ನು ತಯಾರಿಸುವುದು ಮತ್ತು ಹಣ ಸಂಪಾದನೆಗಿಂತ ಸಹೋದ್ಯೋಗಿಗಳ ಸುರಕ್ಷತೆ ಹೆಚ್ಚು ಮಹತ್ವದ್ದು~ ಎಂದು ಅವರು ನುಡಿದರು.<br /> <br /> ಒಂಬತ್ತು ತಿಂಗಳ ಹಿಂದೆ ನಡೆದ ಮುಷ್ಕರ ಕಾಲದಲ್ಲಿ ಕಾರ್ಮಿಕರ ಜೊತೆಗೆ ಎಲ್ಲ ವಿಷಯಗಳನ್ನೂ ಆಡಳಿತ ಮಂಡಳಿ ಚರ್ಚಿಸಿ ಸಮಸ್ಯೆ ಬಗೆ ಹರಿಸಿತ್ತು ಎಂದು ಅವರು ನುಡಿದರು.<br /> <br /> ಕಾರ್ಮಿಕರು ಮತ್ತು ಆಡಳಿತ ವರ್ಗದ ಮಧ್ಯೆ ಬುಧವಾರ ಸಂಭವಿಸಿದ ಘರ್ಷಣೆಯಲ್ಲಿ ಹಿರಿಯ ಕಾರ್ಯ ನಿರ್ವಾಹಕ ಅಧಿಕಾರಿಯೊಬ್ಬರು ಮೃತರಾಗಿ ಇತರ ಹಲವರು ಗಾಯಗೊಂಡಿದ್ದರು.<br /> <br /> ಕಾರ್ಖಾನೆಯನ್ನು ಮಾನೆಸರ್ ದಿಂದ ಬೇರೆ ಕಡೆಗೆ ಸ್ಥಳಾಂತರಿಸುವ ಯೋಜನೆಗಳಿವೆ ಎಂಬ ಪುಕಾರುಗಳನ್ನು ಅವರು ನಿರಾಕರಿಸಿದರು. ~ಇಲ್ಲಿಂದ ಬೇರೆ ಕಡೆಗೆ ಕಾರ್ಖಾನೆಯನ್ನು ಸ್ಥಳಾಂತರಿಸಲಾಗುವುದು ಎಂಬುದು ಸಂಪೂರ್ಣ ಕಟ್ಟುಕಥೆ ಎಂದು ಅವರು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್): ಬುಧವಾರ ಸಂಭವಿಸಿದ ಹಿಂಸಾಚಾರದ ಕಾರಣಗಳ ಬಗ್ಗೆ ಸಂಪೂರ್ಣ ತನಿಖೆಯಾಗುವವರೆಗೆ ತನ್ನ ಮಾನೆಸರ್ ಘಟಕದಲ್ಲಿ ಉತ್ಪಾದನೆ ಪುನರಾರಂಭಗೊಳ್ಳುವುದಿಲ್ಲ ಎಂದು ಮಾರುತಿ ಸುಜುಕಿ ಶನಿವಾರ ಪ್ರಕಟಿಸಿತು.<br /> <br /> ~ಮಾನೆಸರ್ ಘಟಕದಲ್ಲಿ ಅನಿರ್ದಿಷ್ಟ ಲಾಕೌಟ್ ಘೋಷಿಸಲಾಗಿದೆ~ ಎಂದು ಅಧ್ಯಕ್ಷ ಆರ್.ಸಿ. ಭಾರ್ಗವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.<br /> <br /> ~ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭಿಸುವ ಸ್ಥಿತಿಯಲ್ಲಿ ನಾವು ಇಲ್ಲ. ಕೆಲವು ಕಾರುಗಳನ್ನು ತಯಾರಿಸುವುದು ಮತ್ತು ಹಣ ಸಂಪಾದನೆಗಿಂತ ಸಹೋದ್ಯೋಗಿಗಳ ಸುರಕ್ಷತೆ ಹೆಚ್ಚು ಮಹತ್ವದ್ದು~ ಎಂದು ಅವರು ನುಡಿದರು.<br /> <br /> ಒಂಬತ್ತು ತಿಂಗಳ ಹಿಂದೆ ನಡೆದ ಮುಷ್ಕರ ಕಾಲದಲ್ಲಿ ಕಾರ್ಮಿಕರ ಜೊತೆಗೆ ಎಲ್ಲ ವಿಷಯಗಳನ್ನೂ ಆಡಳಿತ ಮಂಡಳಿ ಚರ್ಚಿಸಿ ಸಮಸ್ಯೆ ಬಗೆ ಹರಿಸಿತ್ತು ಎಂದು ಅವರು ನುಡಿದರು.<br /> <br /> ಕಾರ್ಮಿಕರು ಮತ್ತು ಆಡಳಿತ ವರ್ಗದ ಮಧ್ಯೆ ಬುಧವಾರ ಸಂಭವಿಸಿದ ಘರ್ಷಣೆಯಲ್ಲಿ ಹಿರಿಯ ಕಾರ್ಯ ನಿರ್ವಾಹಕ ಅಧಿಕಾರಿಯೊಬ್ಬರು ಮೃತರಾಗಿ ಇತರ ಹಲವರು ಗಾಯಗೊಂಡಿದ್ದರು.<br /> <br /> ಕಾರ್ಖಾನೆಯನ್ನು ಮಾನೆಸರ್ ದಿಂದ ಬೇರೆ ಕಡೆಗೆ ಸ್ಥಳಾಂತರಿಸುವ ಯೋಜನೆಗಳಿವೆ ಎಂಬ ಪುಕಾರುಗಳನ್ನು ಅವರು ನಿರಾಕರಿಸಿದರು. ~ಇಲ್ಲಿಂದ ಬೇರೆ ಕಡೆಗೆ ಕಾರ್ಖಾನೆಯನ್ನು ಸ್ಥಳಾಂತರಿಸಲಾಗುವುದು ಎಂಬುದು ಸಂಪೂರ್ಣ ಕಟ್ಟುಕಥೆ ಎಂದು ಅವರು ಟೀಕಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>