<p>ತೋವಿನಕೆರೆ: ಅನುಪಲು ಪಕ್ಕದ ಮಾರಿಪಾಳ್ಯದಲ್ಲೂ ಕಾಲು ಬಾಯಿ ರೋಗ ಕಾಣಿಸಿಕೊಂಡಿದ್ದು, ಮಂಗಳವಾರ ಎರಡು ಹಸು ಮೃತಪಟ್ಟಿವೆ. ಇನ್ನೂ ಕೆಲ ಹಸುಗಳ ಸ್ಥಿತಿ ಗಂಭೀರವಾಗಿದೆ.<br /> <br /> ಗ್ರಾಮದ ದಿನೇಶ್ ಎಂಬುವರ ಎರಡು ಹಸುಗಳು ಸತ್ತಿದ್ದು, ಉಳಿದ ಮೂರು ಹಸುಗಳ ಸ್ಥಿತಿ ಚಿಂತಾಜನಕವಾಗಿದೆ. ಮೃತ ಹಸುಗಳ ಮೌಲ್ಯ ₨ 80 ಸಾವಿರದ ಆಸುಪಾಸು ಎಂದು ಅಂದಾಜು ಮಾಡಲಾಗಿದೆ.<br /> <br /> ಹೈನೋದ್ಯಮವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ದಿನೇಶ್ ‘ಪ್ರಜಾವಾಣಿ’ ಜತೆ ಮಾತನಾಡಿ ಏನು ಮಾಡಬೇಕು ಎಂಬುದೇ ತೋಚದಾಗಿದೆ. ನನ್ನ ಹಸುಗಳು ಉಳಿದರೆ ನನ್ನ ಕುಟುಂಬ ಉಳಿದಂತೆ ಎಂದು ಗದ್ಗದಿತರಾದರು.<br /> <br /> ಈ ಭಾಗದಲ್ಲಿ ರೋಗ ಹಬ್ಬುತ್ತಿರುವುದರಿಂದ ಮಂಗಳವಾರ ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಜಂಟಿ ನಿರ್ದೇಶಕ ಡಾ.ಗಿರಿಧರ್, ವಿಜ್ಞಾನಿ ಡಾ.ಚಂದ್ರಶೇಖರ್ ಅನುಪಲು ಹಾಗೂ ಮಾರಿಪಾಳ್ಯಕ್ಕೆ ಭೇಟಿ ನೀಡಿ, ಹಸುಗಳನ್ನು ಪರೀಕ್ಷಿಸಿದರು. ಜತೆಗೆ ಸತ್ತ ಹಸುಗಳ ಮಾದರಿ ಸಂಗ್ರಹಿಸಿದರು.<br /> <br /> ಶಾಸಕ ಪಿ.ಆರ್.ಸುಧಾಕರಲಾಲ್ ಸೋಮವಾರ ರಾತ್ರಿ ಅನುಪಲು ಗ್ರಾಮಕ್ಕೆ ಭೇಟಿ ನೀಡಿ ನೊಂದ ರೈತರ ಜತೆ ಮಾತುಕತೆ ನಡೆಸಿದರು.<br /> <br /> ಜತೆಯಲ್ಲಿದ್ದ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಪರಮೇಶ್ವರಪ್ಪ ಅವರಿಗೆ ಕಾಯಿಲೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜ್ವರದಿಂದ ನರಳುತ್ತಿರುವ ಹಸುಗಳಿಗೆ ಸೂಕ್ತ ಚಿಕಿತ್ಸೆ, ಸತ್ತಿರುವ ಹಸು, ಮೇಕೆ, ಕುರಿಗಳಿಗೆ ಪರಿಹಾರ ವಿತರಿಸುವಂತೆ ಸೂಚಿಸಿದರು.<br /> <br /> ಕೊರಟಗೆರೆ ತಾಲ್ಲೂಕು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರವಿ, ತೋವಿನಕೆರೆ ಪಶುವೈದ್ಯಾಧಿಕಾರಿ ಮಂಜುನಾಥ, ವಿಸ್ತಾರಣಾಧಿಕಾರಿ ನಂಜೇಗೌಡ, ಟಿ.ಆರ್.ನಾಗರಾಜು, ಮುಖಂಡರಾದ ಮರಿರಂಗಯ್ಯ, ನಾಗಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತೋವಿನಕೆರೆ: ಅನುಪಲು ಪಕ್ಕದ ಮಾರಿಪಾಳ್ಯದಲ್ಲೂ ಕಾಲು ಬಾಯಿ ರೋಗ ಕಾಣಿಸಿಕೊಂಡಿದ್ದು, ಮಂಗಳವಾರ ಎರಡು ಹಸು ಮೃತಪಟ್ಟಿವೆ. ಇನ್ನೂ ಕೆಲ ಹಸುಗಳ ಸ್ಥಿತಿ ಗಂಭೀರವಾಗಿದೆ.<br /> <br /> ಗ್ರಾಮದ ದಿನೇಶ್ ಎಂಬುವರ ಎರಡು ಹಸುಗಳು ಸತ್ತಿದ್ದು, ಉಳಿದ ಮೂರು ಹಸುಗಳ ಸ್ಥಿತಿ ಚಿಂತಾಜನಕವಾಗಿದೆ. ಮೃತ ಹಸುಗಳ ಮೌಲ್ಯ ₨ 80 ಸಾವಿರದ ಆಸುಪಾಸು ಎಂದು ಅಂದಾಜು ಮಾಡಲಾಗಿದೆ.<br /> <br /> ಹೈನೋದ್ಯಮವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ದಿನೇಶ್ ‘ಪ್ರಜಾವಾಣಿ’ ಜತೆ ಮಾತನಾಡಿ ಏನು ಮಾಡಬೇಕು ಎಂಬುದೇ ತೋಚದಾಗಿದೆ. ನನ್ನ ಹಸುಗಳು ಉಳಿದರೆ ನನ್ನ ಕುಟುಂಬ ಉಳಿದಂತೆ ಎಂದು ಗದ್ಗದಿತರಾದರು.<br /> <br /> ಈ ಭಾಗದಲ್ಲಿ ರೋಗ ಹಬ್ಬುತ್ತಿರುವುದರಿಂದ ಮಂಗಳವಾರ ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಜಂಟಿ ನಿರ್ದೇಶಕ ಡಾ.ಗಿರಿಧರ್, ವಿಜ್ಞಾನಿ ಡಾ.ಚಂದ್ರಶೇಖರ್ ಅನುಪಲು ಹಾಗೂ ಮಾರಿಪಾಳ್ಯಕ್ಕೆ ಭೇಟಿ ನೀಡಿ, ಹಸುಗಳನ್ನು ಪರೀಕ್ಷಿಸಿದರು. ಜತೆಗೆ ಸತ್ತ ಹಸುಗಳ ಮಾದರಿ ಸಂಗ್ರಹಿಸಿದರು.<br /> <br /> ಶಾಸಕ ಪಿ.ಆರ್.ಸುಧಾಕರಲಾಲ್ ಸೋಮವಾರ ರಾತ್ರಿ ಅನುಪಲು ಗ್ರಾಮಕ್ಕೆ ಭೇಟಿ ನೀಡಿ ನೊಂದ ರೈತರ ಜತೆ ಮಾತುಕತೆ ನಡೆಸಿದರು.<br /> <br /> ಜತೆಯಲ್ಲಿದ್ದ ಪಶು ಸಂಗೋಪನೆ ಇಲಾಖೆಯ ಉಪ ನಿರ್ದೇಶಕ ಡಾ.ಪರಮೇಶ್ವರಪ್ಪ ಅವರಿಗೆ ಕಾಯಿಲೆ ಹರಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಜ್ವರದಿಂದ ನರಳುತ್ತಿರುವ ಹಸುಗಳಿಗೆ ಸೂಕ್ತ ಚಿಕಿತ್ಸೆ, ಸತ್ತಿರುವ ಹಸು, ಮೇಕೆ, ಕುರಿಗಳಿಗೆ ಪರಿಹಾರ ವಿತರಿಸುವಂತೆ ಸೂಚಿಸಿದರು.<br /> <br /> ಕೊರಟಗೆರೆ ತಾಲ್ಲೂಕು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರವಿ, ತೋವಿನಕೆರೆ ಪಶುವೈದ್ಯಾಧಿಕಾರಿ ಮಂಜುನಾಥ, ವಿಸ್ತಾರಣಾಧಿಕಾರಿ ನಂಜೇಗೌಡ, ಟಿ.ಆರ್.ನಾಗರಾಜು, ಮುಖಂಡರಾದ ಮರಿರಂಗಯ್ಯ, ನಾಗಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>