<p>ಬೆಂಗಳೂರು: ನೀರು ಶುದ್ಧೀಕರಣ ಸಾಧನಗಳ ಮಾರಾಟವನ್ನು ದಕ್ಷಿಣ ಭಾರತದಲ್ಲಿ ದುಪ್ಪಟ್ಟುಗೊಳಿಸುವ ಗುರಿ ಹೊಂದಲಾಗಿದೆ ಎಂದು `ಕೆಂಟ್ ಆರ್ಒ~ ಕಂಪೆನಿ ಅಧ್ಯಕ್ಷ ಮಹೇಶ್ ಗುಪ್ತ ಹೇಳಿದರು.<br /> <br /> ನಗರದಲ್ಲಿ `ಕೆಂಟ್ ಆರ್ಒ~ದ ದಕ್ಷಿಣ ಭಾರತ ವಲಯ ಕಚೇರಿ ಆರಂಭಿಸಿದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದಕ್ಷಿಣ ಭಾರತದಲ್ಲಿನ ಮೊದಲ ವಲಯ ಕಚೇರಿ. ಈ ಕಚೇರಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೆರಿ, ಅಂಡಮಾನ್-ನಿಕೊಬಾರ್ ದ್ವೀಪಗಳಲ್ಲಿನ ವಹಿವಾಟು ನೋಡಿಕೊಳ್ಳಲಿದೆ ಎಂದರು.<br /> <br /> ಬೆಂಗಳೂರಿನಲ್ಲಿ ಇತ್ತೀಚೆಗೆ ಅಂತರ್ಜಲ ಬಳಕೆ ಹೆಚ್ಚಿದ್ದು, ಬಹಳಷ್ಟು ಕಡೆ ಉಪ್ಪಿನಂಶವಿರುವ ನೀರೇ ಲಭಿಸುತ್ತಿದೆ. ಇದರಿಂದ ನಮ್ಮ `ಆರ್ಒ~ (ರಿವರ್ಸ್ ಓಸ್ಮೊಸಿಸ್) ತಂತ್ರಜ್ಞಾನ ಅಳವಡಿಸಿದ ನೀರು ಶುದ್ಧೀಕರಣ ಸಾಧನಗಳ ಮಾರಾಟವೂ ಹೆಚ್ಚಿದೆ ಆರ್ಒ ವಿಭಾಗದ ಮಾರುಕಟ್ಟೆಯಲ್ಲಿ `ಕೆಂಟ್ ಆರ್ಒ~ ಪಾಲು ಶೇ 50ರಷ್ಟಕ್ಕೆ ಹೆಚ್ಚಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.<br /> <br /> ದೇಶದ ನೀರು ಶುದ್ಧೀಕರಣ ಸಾಧನಗಳ ಮಾರುಕಟ್ಟೆ ಆರ್ಒ, ಅಲ್ಟ್ರಾವಾಯ್ಲೆಟ್ ಮತ್ತು ಗ್ರಾವಿಟಿ ವಾಟರ್ ಪ್ಯೂರಿಫೈಯರ್ ಎಂದು 3 ಬಗೆಯಲ್ಲಿದ್ದು, ಶೇ 20ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಒಟ್ಟಾರೆ ಮಾರುಕಟ್ಟೆ ಗಾತ್ರ ರೂ 1600 ಕೋಟಿಯದ್ದಾಗಿದೆ. `ಕೆಂಟ್ ಆರ್ಒ~ ಕಳೆದ ವರ್ಷ ರೂ 330 ಕೋಟಿ ವಹಿವಾಟು ನಡೆಸಿ ಮಾರುಕಟ್ಟೆಯಲ್ಲಿ ಶೇ 20.65ರಷ್ಟು ಪಾಲು ಪಡೆದಿದೆ.<br /> <br /> `ಆರ್ಒ~ ವಿಭಾಗದ ಮಾರುಕಟ್ಟೆಯಲ್ಲಿ ಕೆಂಟ್ ಪಾಲು ಶೇ 40ರಷ್ಟಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಮಾರುಕಟ್ಟೆಯಲ್ಲಿ ಕೆಂಟ್ ಮಾರಾಟ ಉತ್ತಮವಾಗಿದೆ. ಕರ್ನಾಟಕದ ರೂ 100 ಕೋಟಿ ಮೌಲ್ಯದ ಮಾರುಕಟ್ಟೆಯಲ್ಲಿ ಕೆಂಟ್ ರೂ 35 ಕೋಟಿಯಷ್ಟು ಪಾಲು ಹೊಂದಿದೆ ಎಂದು ವಿವರಿಸಿದರು.<br /> <br /> ನೊಯಿಡಾದಲ್ಲಿ ಕಂಪೆನಿಯ ಪ್ರಧಾನ ಕಚೇರಿಯಿದ್ದು, ಒಟ್ಟು 1800 ಮಂದಿ ಸಿಬ್ಬಂದಿ ಇದ್ದಾರೆ ಎಂದ ಗುಪ್ತ, ದಕ್ಷಿಣ ಭಾರತದಲ್ಲಿ ತಯಾರಿಕಾ ಘಟಕ ಆರಂಭಿಸುವ ಯೋಚನೆ ಸದ್ಯಕ್ಕಿಲ್ಲ ಎಂದರು. ಇದಕ್ಕೂ ಮುನ್ನ ಕೆಂಟ್ ವಲಯ ಕಚೇರಿಯನ್ನು ಶ್ರೀಶ್ರೀರವಿಶಂಕರ್ ಗುರೂಜಿ ಉದ್ಘಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ನೀರು ಶುದ್ಧೀಕರಣ ಸಾಧನಗಳ ಮಾರಾಟವನ್ನು ದಕ್ಷಿಣ ಭಾರತದಲ್ಲಿ ದುಪ್ಪಟ್ಟುಗೊಳಿಸುವ ಗುರಿ ಹೊಂದಲಾಗಿದೆ ಎಂದು `ಕೆಂಟ್ ಆರ್ಒ~ ಕಂಪೆನಿ ಅಧ್ಯಕ್ಷ ಮಹೇಶ್ ಗುಪ್ತ ಹೇಳಿದರು.<br /> <br /> ನಗರದಲ್ಲಿ `ಕೆಂಟ್ ಆರ್ಒ~ದ ದಕ್ಷಿಣ ಭಾರತ ವಲಯ ಕಚೇರಿ ಆರಂಭಿಸಿದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದಕ್ಷಿಣ ಭಾರತದಲ್ಲಿನ ಮೊದಲ ವಲಯ ಕಚೇರಿ. ಈ ಕಚೇರಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೆರಿ, ಅಂಡಮಾನ್-ನಿಕೊಬಾರ್ ದ್ವೀಪಗಳಲ್ಲಿನ ವಹಿವಾಟು ನೋಡಿಕೊಳ್ಳಲಿದೆ ಎಂದರು.<br /> <br /> ಬೆಂಗಳೂರಿನಲ್ಲಿ ಇತ್ತೀಚೆಗೆ ಅಂತರ್ಜಲ ಬಳಕೆ ಹೆಚ್ಚಿದ್ದು, ಬಹಳಷ್ಟು ಕಡೆ ಉಪ್ಪಿನಂಶವಿರುವ ನೀರೇ ಲಭಿಸುತ್ತಿದೆ. ಇದರಿಂದ ನಮ್ಮ `ಆರ್ಒ~ (ರಿವರ್ಸ್ ಓಸ್ಮೊಸಿಸ್) ತಂತ್ರಜ್ಞಾನ ಅಳವಡಿಸಿದ ನೀರು ಶುದ್ಧೀಕರಣ ಸಾಧನಗಳ ಮಾರಾಟವೂ ಹೆಚ್ಚಿದೆ ಆರ್ಒ ವಿಭಾಗದ ಮಾರುಕಟ್ಟೆಯಲ್ಲಿ `ಕೆಂಟ್ ಆರ್ಒ~ ಪಾಲು ಶೇ 50ರಷ್ಟಕ್ಕೆ ಹೆಚ್ಚಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.<br /> <br /> ದೇಶದ ನೀರು ಶುದ್ಧೀಕರಣ ಸಾಧನಗಳ ಮಾರುಕಟ್ಟೆ ಆರ್ಒ, ಅಲ್ಟ್ರಾವಾಯ್ಲೆಟ್ ಮತ್ತು ಗ್ರಾವಿಟಿ ವಾಟರ್ ಪ್ಯೂರಿಫೈಯರ್ ಎಂದು 3 ಬಗೆಯಲ್ಲಿದ್ದು, ಶೇ 20ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಒಟ್ಟಾರೆ ಮಾರುಕಟ್ಟೆ ಗಾತ್ರ ರೂ 1600 ಕೋಟಿಯದ್ದಾಗಿದೆ. `ಕೆಂಟ್ ಆರ್ಒ~ ಕಳೆದ ವರ್ಷ ರೂ 330 ಕೋಟಿ ವಹಿವಾಟು ನಡೆಸಿ ಮಾರುಕಟ್ಟೆಯಲ್ಲಿ ಶೇ 20.65ರಷ್ಟು ಪಾಲು ಪಡೆದಿದೆ.<br /> <br /> `ಆರ್ಒ~ ವಿಭಾಗದ ಮಾರುಕಟ್ಟೆಯಲ್ಲಿ ಕೆಂಟ್ ಪಾಲು ಶೇ 40ರಷ್ಟಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಮಾರುಕಟ್ಟೆಯಲ್ಲಿ ಕೆಂಟ್ ಮಾರಾಟ ಉತ್ತಮವಾಗಿದೆ. ಕರ್ನಾಟಕದ ರೂ 100 ಕೋಟಿ ಮೌಲ್ಯದ ಮಾರುಕಟ್ಟೆಯಲ್ಲಿ ಕೆಂಟ್ ರೂ 35 ಕೋಟಿಯಷ್ಟು ಪಾಲು ಹೊಂದಿದೆ ಎಂದು ವಿವರಿಸಿದರು.<br /> <br /> ನೊಯಿಡಾದಲ್ಲಿ ಕಂಪೆನಿಯ ಪ್ರಧಾನ ಕಚೇರಿಯಿದ್ದು, ಒಟ್ಟು 1800 ಮಂದಿ ಸಿಬ್ಬಂದಿ ಇದ್ದಾರೆ ಎಂದ ಗುಪ್ತ, ದಕ್ಷಿಣ ಭಾರತದಲ್ಲಿ ತಯಾರಿಕಾ ಘಟಕ ಆರಂಭಿಸುವ ಯೋಚನೆ ಸದ್ಯಕ್ಕಿಲ್ಲ ಎಂದರು. ಇದಕ್ಕೂ ಮುನ್ನ ಕೆಂಟ್ ವಲಯ ಕಚೇರಿಯನ್ನು ಶ್ರೀಶ್ರೀರವಿಶಂಕರ್ ಗುರೂಜಿ ಉದ್ಘಾಟಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>