<p><strong>ತೀರ್ಥಹಳ್ಳಿ: </strong>ಹಲವು ದಶಕಗಳ ಚಂಗಾರು ಸೇತುವೆ ಕನಸು ಇನ್ನೂ ಈಡೇರಿಲ್ಲ. ಕಣ್ಣಳತೆಯಲ್ಲಿ ಕಾಣುವ ಶಾಲೆಯ ದಾರಿ ತಲುಪಲು ಇಲ್ಲಿನ ವಿದ್ಯಾರ್ಥಿಗಳು ಕನಿಷ್ಠ 20 ಕಿಲೋಮೀಟರ್ ಕ್ರಮಿಸಬೇಕಿದೆ. ತುಂಬಿದ ನದಿ ದಾಟಲು ಇದ್ದ ದೋಣಿಗೆ ನಾವಿಕನಿಲ್ಲ. ಈ ಊರಿನ ಜನರ ಗೋಳಿಗೆ ಕೊನೆಯೇ ಇಲ್ಲದಂತಾಗಿದೆ.<br /> <br /> ಇದು ಆಗುಂಬೆ ಹೋಬಳಿಯ ಚಂಗಾರು, ಹೊಸಪೇಟೆ, ಕುಂದಾ ಗ್ರಾಮದ ಗ್ರಾಮಸ್ಥರ ನಿತ್ಯದ ಗೋಳಿನ ಕಥೆ. ಚಂಗಾರು, ಹೊಸಪೇಟೆ ಸಮೀಪ ಹಾದು ಹೋಗುವ ಮಾಲತಿ ನದಿ ಈಗ ತುಂಬಿ ಹರಿಯುತ್ತಿದೆ. ಹಿಂದಿನಿಂದಲೂ ಬಳಕೆಯಲ್ಲಿದ್ದ ನಾಡ ದೋಣಿ ಕೆಟ್ಟು ನಿಂತಿದೆ. <br /> <br /> ಕಳೆದ ವರ್ಷ ನದಿ ದಾಟಲು ಅನುಕೂಲವಾಗಲೆಂದು ಫೈಬರ್ ದೋಣಿಯನ್ನು ಜಿಲ್ಲಾಡಳಿತ ನೀಡಿದ್ದರೂ ಇದನ್ನು ನಡೆಸಲು ನಾವಿಕನಿಲ್ಲದಂತಾಗಿದೆ. ನದಿಯ ಇಕ್ಕೆಲೆಯಲ್ಲಿನ ಹೊನ್ನೇತಾಳು ಗ್ರಾಮ ಪಂಚಾಯ್ತಿ ಹಾಗೂ ಆರೇಹಳ್ಳಿ ಗ್ರಾಮ ಪಂಚಾಯ್ತಿ ಆಡಳಿತ ನದಿ ದಾಟಿಸುವ ವ್ಯವಸ್ಥೆಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ದೂರು ಗ್ರಾಮಸ್ಥರದ್ದು.<br /> <br /> ಮಾಲತಿ ನದಿಗೆ ಚಂಗಾರು ಸೇತುವೆ ನಿರ್ಮಾಣವಾಗಿದ್ದರೆ ನದಿಯ ಇಕ್ಕೆಲಗಳ ಕಮ್ಮರಡಿ, ಸುರಳೀಬೈಲು, ಹುಂಚಿಕೊಪ್ಪ, ಹೊಸಕೊಪ್ಪ, ಕುಂದಾ, ಚಂಗಾರು, ಹಾಲ್ಕುಂದ ಕರಡಿಕೋಡು ಸೇರಿದಂತೆ ಅನೇಕ ಹಳ್ಳಿಗಳ ಜನರು ತೀರ್ಥಹಳ್ಳಿ ತಲುಪಲು 8 ಕಿ.ಮೀ. ಪ್ರಯಾಣ ಬೆಳೆಸಿದರೆ ಸಾಕಿತ್ತು. ಈಗ ಕಲ್ಮನೆ ಸೇತುವೆ ಸುತ್ತಿಬಳಸಿ 20 ಕಿ.ಮೀ ಪ್ರಯಾಣಿಸಬೇಕಾಗಿದೆ.<br /> <br /> ಸರ್ಕಾರ ಫೈಬರ್ ದೋಣಿ ನೀಡಿದ್ದರೂ ದೋಣಿ ನಡೆಸುವ ನಾವಿಕನನ್ನು ನೇಮಕ ಮಾಡಿಲ್ಲ. ಆತನ ಕೆಲಸಕ್ಕೆ ಹಣ ನೀಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ನದಿ ದಡದ ಎರಡು ಗ್ರಾಮ ಪಂಚಾಯ್ತಿಗಳು ಈ ಹೊಣೆಗಾರಿಕೆಯಿಂದ ದೂರ ಉಳಿದಿವೆ.<br /> <br /> ಹಿಂದಿನಿಂದಲೂ ಅಂಬಿಗನಿಗೆ ಗ್ರಾಮಸ್ಥರು ವರ್ಷಕ್ಕೆ ಇಂತಿಷ್ಟು ಹಣ, ಅಥವಾ ತಾವು ಬೆಳೆದ ಭತ್ತವನ್ನು ಮನೆಗೆ ಇಂತಿಷ್ಟು ಎಂದು ನೀಡುವ ಪರಿಪಾಠವಿತ್ತು. ಈಗ ಈ ಪದ್ಧತಿ ಉಳಿದಿಲ್ಲ. ಗ್ರಾಮ ಪಂಚಾಯ್ತಿ ಆಡಳಿತ ಅಥವಾ ತಾಲ್ಲೂಕು, ಜಿಲ್ಲಾಡಳಿತ ಅಂಬಿಗನ ಸೇವೆಯನ್ನು ಪರಿಗಣಿಸಿ ಆತನಿಗೆ ವೇತನ ನೀಡುವ ಗೋಜಿಗೆ ಹೋಗದೇ ಇದ್ದುದರಿಂದ ಈ ಕೆಲಸಕ್ಕೆ ಯಾರೂ ಮುಂದೆ ಬರುತ್ತಿಲ್ಲ.<br /> <br /> ಈಗ ಮಳೆಗಾಲ ಆರಂಭವಾಗಿದೆ. ಚಂಗಾರು, ಹೊಸಪೇಟೆ, ಕುಂದಾ ಸೇರಿದಂತೆ ಅನೇಕ ಗ್ರಾಮದ ಜನರು ನದಿ ದಾಟಿ ಆರೇಹಳ್ಳಿ, ಕಮ್ಮರಡಿ ಭಾಗದ ಶಾಲೆಗಳಿಗೆ ಹೋಗುವಂತಿಲ್ಲ. ಕಡ್ತೂರು ಕಮ್ಮರಡಿ, ಅರೇಹಳ್ಳಿ ಭಾಗದವರು ಹೊಸಪೇಟೆಕಡೆಗೆ ತೆರಳುವಂತಿಲ್ಲ. ಪ್ರತಿ ಚುನಾವಣೆಯಲ್ಲಿ ಈ ಭಾಗದ ಜನರು ಚಂಗಾರು ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ<br /> <br /> ಹಾಕುತ್ತಲೇ ಬಂದಿದ್ದಾರೆ. ಆ ಕ್ಷಣದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಈ ಚುನಾವಣೆ ನಂತರ ಸೇತುವೆಯನ್ನು ಮಂಜೂರು ಮಾಡಿಸುವ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ, ಚಂಗಾರು ಸೇತುವೆ ನಿರ್ಮಾಣದ ಕನಸು ಚಿಗುರಲೇ ಇಲ್ಲ.<br /> <br /> ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಡಳಿತದಲ್ಲಿ ಚಂಗಾರು ಸೇತುವೆ ನಿರ್ಮಾಣಕ್ಕೆ ್ಙ3 ಕೋಟಿ ಹಣ ಮಂಜೂರು ಮಾಡಿದ್ದರೂ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಹಣ ಇಲ್ಲವೆಂದು ಘೋಷಿತ ಹಣವನ್ನು ಬಿಡುಗಡೆಗೊಳಿಸದೇ ರದ್ದುಗೊಳಿಸಿತು. <br /> <br /> ಈ ಭಾಗದಲ್ಲಿ ಸುಮಾರು 30 ರಿಂದ 40 ಮಂದಿ ವಿದ್ಯಾರ್ಥಿಗಳು ಪ್ರತಿ ನಿತ್ಯ ಕಮ್ಮರಡಿ, ತೀರ್ಥಹಳ್ಳಿಯ ಶಾಲೆ, ಕಾಲೇಜುಗಳಿಗೆ ತೆರಳು ತ್ತಾರೆ. ವಯೋವೃದ್ಧರು, ರೋಗಿಗಳ ಓಡಾಟಕ್ಕೆ ಇಂದಿಗೂ ಮಳೆಗಾಲದಲ್ಲಿ ದೋಣಿಯನ್ನೇ ಅವಲಂಭಿಸಿದ್ದಾರೆ. ಇವರ ನಿತ್ಯದ ಗೋಳು ಅಂಬಿಗನಿಲ್ಲದ ದೋಣಿಯಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ: </strong>ಹಲವು ದಶಕಗಳ ಚಂಗಾರು ಸೇತುವೆ ಕನಸು ಇನ್ನೂ ಈಡೇರಿಲ್ಲ. ಕಣ್ಣಳತೆಯಲ್ಲಿ ಕಾಣುವ ಶಾಲೆಯ ದಾರಿ ತಲುಪಲು ಇಲ್ಲಿನ ವಿದ್ಯಾರ್ಥಿಗಳು ಕನಿಷ್ಠ 20 ಕಿಲೋಮೀಟರ್ ಕ್ರಮಿಸಬೇಕಿದೆ. ತುಂಬಿದ ನದಿ ದಾಟಲು ಇದ್ದ ದೋಣಿಗೆ ನಾವಿಕನಿಲ್ಲ. ಈ ಊರಿನ ಜನರ ಗೋಳಿಗೆ ಕೊನೆಯೇ ಇಲ್ಲದಂತಾಗಿದೆ.<br /> <br /> ಇದು ಆಗುಂಬೆ ಹೋಬಳಿಯ ಚಂಗಾರು, ಹೊಸಪೇಟೆ, ಕುಂದಾ ಗ್ರಾಮದ ಗ್ರಾಮಸ್ಥರ ನಿತ್ಯದ ಗೋಳಿನ ಕಥೆ. ಚಂಗಾರು, ಹೊಸಪೇಟೆ ಸಮೀಪ ಹಾದು ಹೋಗುವ ಮಾಲತಿ ನದಿ ಈಗ ತುಂಬಿ ಹರಿಯುತ್ತಿದೆ. ಹಿಂದಿನಿಂದಲೂ ಬಳಕೆಯಲ್ಲಿದ್ದ ನಾಡ ದೋಣಿ ಕೆಟ್ಟು ನಿಂತಿದೆ. <br /> <br /> ಕಳೆದ ವರ್ಷ ನದಿ ದಾಟಲು ಅನುಕೂಲವಾಗಲೆಂದು ಫೈಬರ್ ದೋಣಿಯನ್ನು ಜಿಲ್ಲಾಡಳಿತ ನೀಡಿದ್ದರೂ ಇದನ್ನು ನಡೆಸಲು ನಾವಿಕನಿಲ್ಲದಂತಾಗಿದೆ. ನದಿಯ ಇಕ್ಕೆಲೆಯಲ್ಲಿನ ಹೊನ್ನೇತಾಳು ಗ್ರಾಮ ಪಂಚಾಯ್ತಿ ಹಾಗೂ ಆರೇಹಳ್ಳಿ ಗ್ರಾಮ ಪಂಚಾಯ್ತಿ ಆಡಳಿತ ನದಿ ದಾಟಿಸುವ ವ್ಯವಸ್ಥೆಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ದೂರು ಗ್ರಾಮಸ್ಥರದ್ದು.<br /> <br /> ಮಾಲತಿ ನದಿಗೆ ಚಂಗಾರು ಸೇತುವೆ ನಿರ್ಮಾಣವಾಗಿದ್ದರೆ ನದಿಯ ಇಕ್ಕೆಲಗಳ ಕಮ್ಮರಡಿ, ಸುರಳೀಬೈಲು, ಹುಂಚಿಕೊಪ್ಪ, ಹೊಸಕೊಪ್ಪ, ಕುಂದಾ, ಚಂಗಾರು, ಹಾಲ್ಕುಂದ ಕರಡಿಕೋಡು ಸೇರಿದಂತೆ ಅನೇಕ ಹಳ್ಳಿಗಳ ಜನರು ತೀರ್ಥಹಳ್ಳಿ ತಲುಪಲು 8 ಕಿ.ಮೀ. ಪ್ರಯಾಣ ಬೆಳೆಸಿದರೆ ಸಾಕಿತ್ತು. ಈಗ ಕಲ್ಮನೆ ಸೇತುವೆ ಸುತ್ತಿಬಳಸಿ 20 ಕಿ.ಮೀ ಪ್ರಯಾಣಿಸಬೇಕಾಗಿದೆ.<br /> <br /> ಸರ್ಕಾರ ಫೈಬರ್ ದೋಣಿ ನೀಡಿದ್ದರೂ ದೋಣಿ ನಡೆಸುವ ನಾವಿಕನನ್ನು ನೇಮಕ ಮಾಡಿಲ್ಲ. ಆತನ ಕೆಲಸಕ್ಕೆ ಹಣ ನೀಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ನದಿ ದಡದ ಎರಡು ಗ್ರಾಮ ಪಂಚಾಯ್ತಿಗಳು ಈ ಹೊಣೆಗಾರಿಕೆಯಿಂದ ದೂರ ಉಳಿದಿವೆ.<br /> <br /> ಹಿಂದಿನಿಂದಲೂ ಅಂಬಿಗನಿಗೆ ಗ್ರಾಮಸ್ಥರು ವರ್ಷಕ್ಕೆ ಇಂತಿಷ್ಟು ಹಣ, ಅಥವಾ ತಾವು ಬೆಳೆದ ಭತ್ತವನ್ನು ಮನೆಗೆ ಇಂತಿಷ್ಟು ಎಂದು ನೀಡುವ ಪರಿಪಾಠವಿತ್ತು. ಈಗ ಈ ಪದ್ಧತಿ ಉಳಿದಿಲ್ಲ. ಗ್ರಾಮ ಪಂಚಾಯ್ತಿ ಆಡಳಿತ ಅಥವಾ ತಾಲ್ಲೂಕು, ಜಿಲ್ಲಾಡಳಿತ ಅಂಬಿಗನ ಸೇವೆಯನ್ನು ಪರಿಗಣಿಸಿ ಆತನಿಗೆ ವೇತನ ನೀಡುವ ಗೋಜಿಗೆ ಹೋಗದೇ ಇದ್ದುದರಿಂದ ಈ ಕೆಲಸಕ್ಕೆ ಯಾರೂ ಮುಂದೆ ಬರುತ್ತಿಲ್ಲ.<br /> <br /> ಈಗ ಮಳೆಗಾಲ ಆರಂಭವಾಗಿದೆ. ಚಂಗಾರು, ಹೊಸಪೇಟೆ, ಕುಂದಾ ಸೇರಿದಂತೆ ಅನೇಕ ಗ್ರಾಮದ ಜನರು ನದಿ ದಾಟಿ ಆರೇಹಳ್ಳಿ, ಕಮ್ಮರಡಿ ಭಾಗದ ಶಾಲೆಗಳಿಗೆ ಹೋಗುವಂತಿಲ್ಲ. ಕಡ್ತೂರು ಕಮ್ಮರಡಿ, ಅರೇಹಳ್ಳಿ ಭಾಗದವರು ಹೊಸಪೇಟೆಕಡೆಗೆ ತೆರಳುವಂತಿಲ್ಲ. ಪ್ರತಿ ಚುನಾವಣೆಯಲ್ಲಿ ಈ ಭಾಗದ ಜನರು ಚಂಗಾರು ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ<br /> <br /> ಹಾಕುತ್ತಲೇ ಬಂದಿದ್ದಾರೆ. ಆ ಕ್ಷಣದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಈ ಚುನಾವಣೆ ನಂತರ ಸೇತುವೆಯನ್ನು ಮಂಜೂರು ಮಾಡಿಸುವ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ, ಚಂಗಾರು ಸೇತುವೆ ನಿರ್ಮಾಣದ ಕನಸು ಚಿಗುರಲೇ ಇಲ್ಲ.<br /> <br /> ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಡಳಿತದಲ್ಲಿ ಚಂಗಾರು ಸೇತುವೆ ನಿರ್ಮಾಣಕ್ಕೆ ್ಙ3 ಕೋಟಿ ಹಣ ಮಂಜೂರು ಮಾಡಿದ್ದರೂ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಹಣ ಇಲ್ಲವೆಂದು ಘೋಷಿತ ಹಣವನ್ನು ಬಿಡುಗಡೆಗೊಳಿಸದೇ ರದ್ದುಗೊಳಿಸಿತು. <br /> <br /> ಈ ಭಾಗದಲ್ಲಿ ಸುಮಾರು 30 ರಿಂದ 40 ಮಂದಿ ವಿದ್ಯಾರ್ಥಿಗಳು ಪ್ರತಿ ನಿತ್ಯ ಕಮ್ಮರಡಿ, ತೀರ್ಥಹಳ್ಳಿಯ ಶಾಲೆ, ಕಾಲೇಜುಗಳಿಗೆ ತೆರಳು ತ್ತಾರೆ. ವಯೋವೃದ್ಧರು, ರೋಗಿಗಳ ಓಡಾಟಕ್ಕೆ ಇಂದಿಗೂ ಮಳೆಗಾಲದಲ್ಲಿ ದೋಣಿಯನ್ನೇ ಅವಲಂಭಿಸಿದ್ದಾರೆ. ಇವರ ನಿತ್ಯದ ಗೋಳು ಅಂಬಿಗನಿಲ್ಲದ ದೋಣಿಯಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>