<p>ಅರೆಕಣ್ಣುಮುಚ್ಚಿದ ಧ್ಯಾನಸ್ಥ ಬುದ್ಧನ ಮುಗುಳ್ನಗೆ- ಚಾಂಚಲ್ಯ- ಚಾಣಾಕ್ಷತನ, ಕೃಷ್ಣನ ತುಂಟತನ ಅನೇಕ ಕಲಾವಿದರನ್ನು ಆಕರ್ಷಿಸುವ ಭಾವಗಳು. ಇವರಿಬ್ಬರ ವ್ಯಕ್ತಿತ್ವ ಎಂಥ ಕಲಾವಿದರನ್ನೂ ಸೆಳೆಯುತ್ತದೆ. ಪ್ರತಿಯೊಬ್ಬ ಕಲಾವಿದನೂ ತನ್ನ ಒಂದಲ್ಲ ಒಂದು ಕೃತಿಯಲ್ಲಿ ಇವರಿಬ್ಬರನ್ನೂ ಬಿಂಬಿಸಿರುತ್ತಾರೆ. <br /> <br /> ನಾಗ್ಪುರ ವಿಶ್ವವಿದ್ಯಾಲಯದ ಅಂಜನಾ ಚಂದಕ್ ಅವರೂ ಕೃಷ್ಣ ಮತ್ತು ಬುದ್ಧನ ಸೆಳೆತದಿಂದ ಹೊರತಾಗಿಲ್ಲ. ಬದಲಿಗೆ ಈ ಸುಳಿವಿನಲ್ಲಿ ಸುಳಿದ ಎಲ್ಲ ಭಾವಗಳನ್ನೂ ಗೆರೆಗಳಲ್ಲಿ ಹಿಡಿದಿಟ್ಟಿದ್ದಾರೆ. ಬುದ್ಧನ ಶಾಂತಿ ಸೂಸುವ ಪ್ರೀತಿಯ ಕಂಗಳು, ಆತನ ಸಂದೇಶದ ಜೊತೆಗೆ ಕೃಷ್ಣನ ಜೀವನಪ್ರೀತಿ ಅವರನ್ನು ತುಂಬಾ ಕಾಡಿರಬೇಕು.<br /> <br /> ಅದಕ್ಕೇ ಬುದ್ಧ ಹಾಗೂ ಕೃಷ್ಣ ತಮ್ಮ ಆಧ್ಯಾತ್ಮಿಕ ಗುರುಗಳೆಂದು ಅಂಜನಾ ಒಪ್ಪಿಕೊಂಡಿದ್ದಾರೆ.ಬುದ್ಧ ಹಾಗೂ ಕೃಷ್ಣನನ್ನು ಧೇನಿಸುತ್ತಲೇ ಬದುಕಿನ ನಶ್ವರತೆಯೊಂದಿಗೆ ನಿರಂತರ ಹರಿವಿನ ಸೊಬಗನ್ನೂ ಚಿತ್ರದಲ್ಲಿ ತುಂಬುವ ಯತ್ನ ಮಾಡಿದ್ದೇನೆ ಎನ್ನುತ್ತಾರೆ ಅಂಜನಾ. <br /> <br /> ತಮ್ಮ ವೈವಿಧ್ಯಮಯ ತೈಲ ಚಿತ್ರಗಳು, ಮಿಶ್ರ ಮಾಧ್ಯಮದ ವರ್ಣಚಿತ್ರಗಳು ಮೈತಳೆದಿವೆ. ಇದರಲ್ಲಿ ಧ್ಯಾನಸ್ಥ ಬುದ್ಧನ ಚಿಂತನೆ ಮತ್ತು ಜೀವನೋಪದೇಶಗಳನ್ನು ನೆನಪಿಸುವಂತಿವೆ. ಕೃಷ್ಣ ಕರ್ಮಯೋಗಿ ಹಾಗೂ ಯುಕ್ತಿಪೂರ್ಣ ಗುಣದೊಂದಿಗೆ ತುಂಟತನವನ್ನೂ ಮೈಗೂಡಿಸಿಕೊಂಡಿರುವ ಹಲವಾರು ಚಿತ್ರಗಳು ಈ ಪ್ರದರ್ಶನದಲ್ಲಿವೆ. <br /> <br /> `ಆಧ್ಯಾತ್ಮಿಕ ವ್ಯಕ್ತಿಗಳ ಜೀವನದ ಒಂದು ನಿರ್ದಿಷ್ಟ ಘಟ್ಟದಲ್ಲಿ, ದೈವತ್ವ ಪ್ರಜ್ಞೆಯನ್ನು ಅರಿಯುವ ಹಾಗೂ ಆ ದೈವತ್ವದ ಅಂಶ ಕಾಣೆಯಾದಾಗ ಅವರಲ್ಲಿ ಆಗಬಹುದಾದ ಅಸಹಾಯಕತೆಯ ಭಾವ ಈ ಕೃತಿಗಳ ಜೀವಾಳವಾಗಿದೆ~ ಎನ್ನುತ್ತಾರೆ ಅಂಜನಾ.<br /> `ಚಿತ್ರದಲ್ಲಿ ಬಳಸಿರುವ ವರ್ಣಗಳೂ ಭಾವಸೂಚಕಗಳಾಗಿವೆ. <br /> <br /> ಬಿಳಿ ಬಣ್ಣ ಪರಿಶುದ್ಧತೆಯನ್ನು ಸಂಕೇತಿಸುತ್ತದೆ. ಜೊತೆಗೆ ಪ್ರತಿಯೊಬ್ಬರೂ ಪರಿಶುದ್ಧತೆಗಾಗಿ ತಮ್ಮ ಜೀವನದಲ್ಲಿ ಪರಿತಪಿಸುವ ತಹತಹಿಕೆ ಇದೆ. ಈ ಚಿತ್ರದಲ್ಲಿರುವ ಕೊಳಲಿನ ಐದು ವಿವಿಧ ಅಂಶಗಳು ಮಾನವನ ಪಂಚೇಂದ್ರಿಯಗಳನ್ನು ಸೂಚಿಸುತ್ತವೆ. ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಿದರೆ ನಮಗೆ ಬೇಕಿರುವ ರಾಗವನ್ನೇ ಬದುಕಿನಲ್ಲಿ ಪಡೆಯಬಹುದು ಎಂಬುದು ಚಿತ್ರದ ಅರ್ಥ~ ಎಂದೂ ಅವರು ವಿವರಿಸುತ್ತಾರೆ. <br /> <br /> ನಾಗ್ಪುರ ವಿಶ್ವವಿದ್ಯಾನಿಲಯದ ಇಂಟೀರಿಯರ್ ಡಿಸೈನಿಂಗ್ ಹಾಗೂ ಕಲೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಜನಾ ಚಂದಕ್ ಅವರ ಚಿತ್ರಗಳ ಪ್ರದರ್ಶನವನ್ನು ಇದೇ 15ರವರೆಗೆ ಚಿತ್ರಕಲಾ ಪರಿಷತ್ನಲ್ಲಿ ಹಮ್ಮಿಕೊಳ್ಳಲಾಗಿದೆ. ನಿವೃತ್ತಿ ದಿ ಆರ್ಟ್ ಕ್ವಾರ್ಟರ್ ಸಂಸ್ಥೆಯು `ಆತ್ಮದ ವಾಗ್ಝರಿ~ ಎಂಬ ಹೆಸರಿನಲ್ಲಿ ಈ ಪ್ರದರ್ಶನವನ್ನು ಏರ್ಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅರೆಕಣ್ಣುಮುಚ್ಚಿದ ಧ್ಯಾನಸ್ಥ ಬುದ್ಧನ ಮುಗುಳ್ನಗೆ- ಚಾಂಚಲ್ಯ- ಚಾಣಾಕ್ಷತನ, ಕೃಷ್ಣನ ತುಂಟತನ ಅನೇಕ ಕಲಾವಿದರನ್ನು ಆಕರ್ಷಿಸುವ ಭಾವಗಳು. ಇವರಿಬ್ಬರ ವ್ಯಕ್ತಿತ್ವ ಎಂಥ ಕಲಾವಿದರನ್ನೂ ಸೆಳೆಯುತ್ತದೆ. ಪ್ರತಿಯೊಬ್ಬ ಕಲಾವಿದನೂ ತನ್ನ ಒಂದಲ್ಲ ಒಂದು ಕೃತಿಯಲ್ಲಿ ಇವರಿಬ್ಬರನ್ನೂ ಬಿಂಬಿಸಿರುತ್ತಾರೆ. <br /> <br /> ನಾಗ್ಪುರ ವಿಶ್ವವಿದ್ಯಾಲಯದ ಅಂಜನಾ ಚಂದಕ್ ಅವರೂ ಕೃಷ್ಣ ಮತ್ತು ಬುದ್ಧನ ಸೆಳೆತದಿಂದ ಹೊರತಾಗಿಲ್ಲ. ಬದಲಿಗೆ ಈ ಸುಳಿವಿನಲ್ಲಿ ಸುಳಿದ ಎಲ್ಲ ಭಾವಗಳನ್ನೂ ಗೆರೆಗಳಲ್ಲಿ ಹಿಡಿದಿಟ್ಟಿದ್ದಾರೆ. ಬುದ್ಧನ ಶಾಂತಿ ಸೂಸುವ ಪ್ರೀತಿಯ ಕಂಗಳು, ಆತನ ಸಂದೇಶದ ಜೊತೆಗೆ ಕೃಷ್ಣನ ಜೀವನಪ್ರೀತಿ ಅವರನ್ನು ತುಂಬಾ ಕಾಡಿರಬೇಕು.<br /> <br /> ಅದಕ್ಕೇ ಬುದ್ಧ ಹಾಗೂ ಕೃಷ್ಣ ತಮ್ಮ ಆಧ್ಯಾತ್ಮಿಕ ಗುರುಗಳೆಂದು ಅಂಜನಾ ಒಪ್ಪಿಕೊಂಡಿದ್ದಾರೆ.ಬುದ್ಧ ಹಾಗೂ ಕೃಷ್ಣನನ್ನು ಧೇನಿಸುತ್ತಲೇ ಬದುಕಿನ ನಶ್ವರತೆಯೊಂದಿಗೆ ನಿರಂತರ ಹರಿವಿನ ಸೊಬಗನ್ನೂ ಚಿತ್ರದಲ್ಲಿ ತುಂಬುವ ಯತ್ನ ಮಾಡಿದ್ದೇನೆ ಎನ್ನುತ್ತಾರೆ ಅಂಜನಾ. <br /> <br /> ತಮ್ಮ ವೈವಿಧ್ಯಮಯ ತೈಲ ಚಿತ್ರಗಳು, ಮಿಶ್ರ ಮಾಧ್ಯಮದ ವರ್ಣಚಿತ್ರಗಳು ಮೈತಳೆದಿವೆ. ಇದರಲ್ಲಿ ಧ್ಯಾನಸ್ಥ ಬುದ್ಧನ ಚಿಂತನೆ ಮತ್ತು ಜೀವನೋಪದೇಶಗಳನ್ನು ನೆನಪಿಸುವಂತಿವೆ. ಕೃಷ್ಣ ಕರ್ಮಯೋಗಿ ಹಾಗೂ ಯುಕ್ತಿಪೂರ್ಣ ಗುಣದೊಂದಿಗೆ ತುಂಟತನವನ್ನೂ ಮೈಗೂಡಿಸಿಕೊಂಡಿರುವ ಹಲವಾರು ಚಿತ್ರಗಳು ಈ ಪ್ರದರ್ಶನದಲ್ಲಿವೆ. <br /> <br /> `ಆಧ್ಯಾತ್ಮಿಕ ವ್ಯಕ್ತಿಗಳ ಜೀವನದ ಒಂದು ನಿರ್ದಿಷ್ಟ ಘಟ್ಟದಲ್ಲಿ, ದೈವತ್ವ ಪ್ರಜ್ಞೆಯನ್ನು ಅರಿಯುವ ಹಾಗೂ ಆ ದೈವತ್ವದ ಅಂಶ ಕಾಣೆಯಾದಾಗ ಅವರಲ್ಲಿ ಆಗಬಹುದಾದ ಅಸಹಾಯಕತೆಯ ಭಾವ ಈ ಕೃತಿಗಳ ಜೀವಾಳವಾಗಿದೆ~ ಎನ್ನುತ್ತಾರೆ ಅಂಜನಾ.<br /> `ಚಿತ್ರದಲ್ಲಿ ಬಳಸಿರುವ ವರ್ಣಗಳೂ ಭಾವಸೂಚಕಗಳಾಗಿವೆ. <br /> <br /> ಬಿಳಿ ಬಣ್ಣ ಪರಿಶುದ್ಧತೆಯನ್ನು ಸಂಕೇತಿಸುತ್ತದೆ. ಜೊತೆಗೆ ಪ್ರತಿಯೊಬ್ಬರೂ ಪರಿಶುದ್ಧತೆಗಾಗಿ ತಮ್ಮ ಜೀವನದಲ್ಲಿ ಪರಿತಪಿಸುವ ತಹತಹಿಕೆ ಇದೆ. ಈ ಚಿತ್ರದಲ್ಲಿರುವ ಕೊಳಲಿನ ಐದು ವಿವಿಧ ಅಂಶಗಳು ಮಾನವನ ಪಂಚೇಂದ್ರಿಯಗಳನ್ನು ಸೂಚಿಸುತ್ತವೆ. ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಸಾಧಿಸಿದರೆ ನಮಗೆ ಬೇಕಿರುವ ರಾಗವನ್ನೇ ಬದುಕಿನಲ್ಲಿ ಪಡೆಯಬಹುದು ಎಂಬುದು ಚಿತ್ರದ ಅರ್ಥ~ ಎಂದೂ ಅವರು ವಿವರಿಸುತ್ತಾರೆ. <br /> <br /> ನಾಗ್ಪುರ ವಿಶ್ವವಿದ್ಯಾನಿಲಯದ ಇಂಟೀರಿಯರ್ ಡಿಸೈನಿಂಗ್ ಹಾಗೂ ಕಲೆ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಜನಾ ಚಂದಕ್ ಅವರ ಚಿತ್ರಗಳ ಪ್ರದರ್ಶನವನ್ನು ಇದೇ 15ರವರೆಗೆ ಚಿತ್ರಕಲಾ ಪರಿಷತ್ನಲ್ಲಿ ಹಮ್ಮಿಕೊಳ್ಳಲಾಗಿದೆ. ನಿವೃತ್ತಿ ದಿ ಆರ್ಟ್ ಕ್ವಾರ್ಟರ್ ಸಂಸ್ಥೆಯು `ಆತ್ಮದ ವಾಗ್ಝರಿ~ ಎಂಬ ಹೆಸರಿನಲ್ಲಿ ಈ ಪ್ರದರ್ಶನವನ್ನು ಏರ್ಪಡಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>