<p>ಬೆಂಗಳೂರು: ಕ್ರಿಸ್ ಗೇಲ್ ಅಬ್ಬರದ ಆಟವನ್ನು ನೋಡಬೇಕೆಂಬ ಆಸೆಯೊಂದಿಗೆ ಉದ್ಯಾನನಗರಿಯ ಕ್ರಿಕೆಟ್ ಪ್ರೇಮಿಗಳು ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ ವೆಸ್ಟ್ ಇಂಡೀಸ್ನ ಈ ಬ್ಯಾಟ್ಸ್ಮನ್ ಕಣಕ್ಕಿಳಿಯದೇ ಇದ್ದುದು ಹೆಚ್ಚಿನವರ ನಿರಾಸೆಗೆ ಕಾರಣವಾಯಿತು.<br /> <br /> ಈ ಪಂದ್ಯದಲ್ಲಿ ಗೇಲ್ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ್ಯಂಡ್ರ್ಯೂ ಮೆಕ್ಡೊನಾಲ್ಡ್ ಮತ್ತು ಚೇತೇಶ್ವರ ಪೂಜಾರ ಆರ್ಸಿಬಿ ಇನಿಂಗ್ಸ್ ಆರಂಭಿಸಲು ಕಣಕ್ಕಿಳಿದಾಗ ಕ್ರೀಡಾಂಗಣದಲ್ಲಿ ಒಂದು ಕ್ಷಣ ಮೌನ ಆವರಿಸಿತ್ತು. ಗೇಲ್ ಆಡುವುದಿಲ್ಲ ಎಂಬುದು ಎಲ್ಲರಿಗೂ ಖಚಿತವಾಯಿತು.<br /> <br /> ಈ ಅಪಾಯಕಾರಿ ಬ್ಯಾಟ್ಸ್ಮನ್ ಗಾಯದ ಸಮಸ್ಯೆಯೊಂದಿಗೆಯೇ ಉದ್ಯಾನನಗರಿಗೆ ಆಗಮಿಸಿದ್ದರು. ಇದೀಗ ಪೂರ್ಣವಾಗಿ ಚೇತರಿಸಿಕೊಂಡಿರುವರಾದರೂ ಪಂದ್ಯಕ್ಕೆ ಬೇಕಾಗುವಷ್ಟು ಫಿಟ್ನೆಸ್ ಹೊಂದಿರಲಿಲ್ಲ. ಈ ಕಾರಣ ಅಂತಿಮ ಇಲೆವೆನ್ನಲ್ಲಿ ಸ್ಥಾನ ಪಡೆಯಲಿಲ್ಲ. `ಗೇಲ್ ಶ್ರೇಷ್ಠ ಬ್ಯಾಟ್ಸ್ಮನ್. ಆದರೆ ಈ ಪಂದ್ಯದಲ್ಲಿ ತಂಡಕ್ಕೆ ಅವರ ನೆರವು ಲಭಿಸಲಿಲ್ಲ. ಗೇಲ್ ಶೇ. 100 ರಷ್ಟು ಫಿಟ್ನೆಸ್ ಹೊಂದಿಲ್ಲ. ಈ ಕಾರಣ ಅವರನ್ನು ಕಣಕ್ಕಿಳಿಸಿ ಅಪಾಯವನ್ನು ಆಹ್ವಾನಿಸಲು ತಂಡ ಬಯಸಲಿಲ್ಲ. ಮುಂದಿನ ಪಂದ್ಯಕ್ಕೆ ಅವರು ಲಭ್ಯರಿರುವರು~ ಎಂದು ಎಬಿ ಡಿವಿಲಿಯರ್ಸ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.<br /> <br /> ಆರ್ಸಿಬಿ ಎರಡನೇ ಪಂದ್ಯ ಮಂಗಳವಾರ ಬೆಂಗಳೂರಿನಲ್ಲೇ ನಡೆಯಲಿದೆ. ಈ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.<br /> <br /> ಮುತ್ತಯ್ಯ ಮುರಳೀಧರನ್ ಬೌಲಿಂಗ್ ಪ್ರದರ್ಶನವನ್ನು `ಪಂದ್ಯಶ್ರೇಷ್ಠ~ ವಿಲಿಯರ್ಸ್ ಶ್ಲಾಘಿಸಿದರು. `ಅವರು ಕ್ರಿಕೆಟ್ನ ದಂತಕತೆ. ನಾನು ಇದೇ ಮೊದಲ ಬಾರಿಗೆ ಮುರಳಿ ಬೌಲಿಂಗ್ ವೇಳೆ ವಿಕೆಟ್ಕೀಪಿಂಗ್ ನಡೆಸಿದ್ದೇನೆ. ನನ್ನ ಕನಸು ನನಸಾಗಿದೆ. ಪಂದ್ಯಶ್ರೇಷ್ಠ ಪ್ರಶಸ್ತಿ ಅವರಿಗೆ ನೀಡಬೇಕಿತ್ತು~ ಎಂದು ವಿಲಿಯರ್ಸ್ ನುಡಿದರು. <br /> <br /> ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯಲು ಮುರಳಿ ಮತ್ತು ಡಿರ್ಕ್ ನಾನೆಸ್ ನಡುವೆ ಸ್ಪರ್ಧೆ ಇದೆ ಎಂದು ಆರ್ಸಿಬಿ ನಾಯಕ ಡೇನಿಯಲ್ ವೆಟೋರಿ ಕೆಲ ದಿನಗಳ ಹಿಂದೆ ಹೇಳಿದ್ದರು. ಶನಿವಾರ ತೋರಿದ ಪ್ರದರ್ಶನದ ಮೂಲಕ ಮುರಳಿ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.<br /> <br /> `ಆಲ್ರೌಂಡ್ ಪ್ರದರ್ಶನದಿಂದಾಗಿ ಗೆಲುವು ಪಡೆದಿದ್ದೇವೆ. ಡಿವಿಲಿಯರ್ಸ್ ಮತ್ತು ವಿನಯ್ ಕುಮಾರ್ ನಡುವಿನ ಜೊತೆಯಾಟ ಮಹತ್ವದ್ದಾಗಿತ್ತು. 157 ರನ್ಗಳ ಒಳಗೆ ಎದುರಾಳಿ ತಂಡವನ್ನು ನಿಯಂತ್ರಿಸುವುದು ಕಠಿಣವೇ ಸರಿ. ಆದರೆ ನಮ್ಮ ಬೌಲರ್ಗಳು ಕೊನೆಯಲ್ಲಿ ಒತ್ತಡವನ್ನು ಮೆಟ್ಟಿನಿಂತರು~ ಎಂದು ವೆಟೋರಿ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.<br /> <br /> <strong>ಉಮೇಶ್ ಯಾದವ್ಗೆ ಗಾಯ:</strong> ಡೆಲ್ಲಿ ತಂಡ ಕೂಡಾ ಪಂದ್ಯದ ವೇಳೆ ಗಾಯದ ಸಮಸ್ಯೆ ಎದುರಿಸಿತು. ಉಮೇಶ್ ಯಾದವ್ ಅವರು ಸ್ನಾಯು ಸೆಳೆತದ ಕಾರಣ ಅರ್ಧದಲ್ಲೇ ಅಂಗಳದಿಂದ ಹೊರನಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಕ್ರಿಸ್ ಗೇಲ್ ಅಬ್ಬರದ ಆಟವನ್ನು ನೋಡಬೇಕೆಂಬ ಆಸೆಯೊಂದಿಗೆ ಉದ್ಯಾನನಗರಿಯ ಕ್ರಿಕೆಟ್ ಪ್ರೇಮಿಗಳು ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಆದರೆ ವೆಸ್ಟ್ ಇಂಡೀಸ್ನ ಈ ಬ್ಯಾಟ್ಸ್ಮನ್ ಕಣಕ್ಕಿಳಿಯದೇ ಇದ್ದುದು ಹೆಚ್ಚಿನವರ ನಿರಾಸೆಗೆ ಕಾರಣವಾಯಿತು.<br /> <br /> ಈ ಪಂದ್ಯದಲ್ಲಿ ಗೇಲ್ ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಆ್ಯಂಡ್ರ್ಯೂ ಮೆಕ್ಡೊನಾಲ್ಡ್ ಮತ್ತು ಚೇತೇಶ್ವರ ಪೂಜಾರ ಆರ್ಸಿಬಿ ಇನಿಂಗ್ಸ್ ಆರಂಭಿಸಲು ಕಣಕ್ಕಿಳಿದಾಗ ಕ್ರೀಡಾಂಗಣದಲ್ಲಿ ಒಂದು ಕ್ಷಣ ಮೌನ ಆವರಿಸಿತ್ತು. ಗೇಲ್ ಆಡುವುದಿಲ್ಲ ಎಂಬುದು ಎಲ್ಲರಿಗೂ ಖಚಿತವಾಯಿತು.<br /> <br /> ಈ ಅಪಾಯಕಾರಿ ಬ್ಯಾಟ್ಸ್ಮನ್ ಗಾಯದ ಸಮಸ್ಯೆಯೊಂದಿಗೆಯೇ ಉದ್ಯಾನನಗರಿಗೆ ಆಗಮಿಸಿದ್ದರು. ಇದೀಗ ಪೂರ್ಣವಾಗಿ ಚೇತರಿಸಿಕೊಂಡಿರುವರಾದರೂ ಪಂದ್ಯಕ್ಕೆ ಬೇಕಾಗುವಷ್ಟು ಫಿಟ್ನೆಸ್ ಹೊಂದಿರಲಿಲ್ಲ. ಈ ಕಾರಣ ಅಂತಿಮ ಇಲೆವೆನ್ನಲ್ಲಿ ಸ್ಥಾನ ಪಡೆಯಲಿಲ್ಲ. `ಗೇಲ್ ಶ್ರೇಷ್ಠ ಬ್ಯಾಟ್ಸ್ಮನ್. ಆದರೆ ಈ ಪಂದ್ಯದಲ್ಲಿ ತಂಡಕ್ಕೆ ಅವರ ನೆರವು ಲಭಿಸಲಿಲ್ಲ. ಗೇಲ್ ಶೇ. 100 ರಷ್ಟು ಫಿಟ್ನೆಸ್ ಹೊಂದಿಲ್ಲ. ಈ ಕಾರಣ ಅವರನ್ನು ಕಣಕ್ಕಿಳಿಸಿ ಅಪಾಯವನ್ನು ಆಹ್ವಾನಿಸಲು ತಂಡ ಬಯಸಲಿಲ್ಲ. ಮುಂದಿನ ಪಂದ್ಯಕ್ಕೆ ಅವರು ಲಭ್ಯರಿರುವರು~ ಎಂದು ಎಬಿ ಡಿವಿಲಿಯರ್ಸ್ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.<br /> <br /> ಆರ್ಸಿಬಿ ಎರಡನೇ ಪಂದ್ಯ ಮಂಗಳವಾರ ಬೆಂಗಳೂರಿನಲ್ಲೇ ನಡೆಯಲಿದೆ. ಈ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.<br /> <br /> ಮುತ್ತಯ್ಯ ಮುರಳೀಧರನ್ ಬೌಲಿಂಗ್ ಪ್ರದರ್ಶನವನ್ನು `ಪಂದ್ಯಶ್ರೇಷ್ಠ~ ವಿಲಿಯರ್ಸ್ ಶ್ಲಾಘಿಸಿದರು. `ಅವರು ಕ್ರಿಕೆಟ್ನ ದಂತಕತೆ. ನಾನು ಇದೇ ಮೊದಲ ಬಾರಿಗೆ ಮುರಳಿ ಬೌಲಿಂಗ್ ವೇಳೆ ವಿಕೆಟ್ಕೀಪಿಂಗ್ ನಡೆಸಿದ್ದೇನೆ. ನನ್ನ ಕನಸು ನನಸಾಗಿದೆ. ಪಂದ್ಯಶ್ರೇಷ್ಠ ಪ್ರಶಸ್ತಿ ಅವರಿಗೆ ನೀಡಬೇಕಿತ್ತು~ ಎಂದು ವಿಲಿಯರ್ಸ್ ನುಡಿದರು. <br /> <br /> ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯಲು ಮುರಳಿ ಮತ್ತು ಡಿರ್ಕ್ ನಾನೆಸ್ ನಡುವೆ ಸ್ಪರ್ಧೆ ಇದೆ ಎಂದು ಆರ್ಸಿಬಿ ನಾಯಕ ಡೇನಿಯಲ್ ವೆಟೋರಿ ಕೆಲ ದಿನಗಳ ಹಿಂದೆ ಹೇಳಿದ್ದರು. ಶನಿವಾರ ತೋರಿದ ಪ್ರದರ್ಶನದ ಮೂಲಕ ಮುರಳಿ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.<br /> <br /> `ಆಲ್ರೌಂಡ್ ಪ್ರದರ್ಶನದಿಂದಾಗಿ ಗೆಲುವು ಪಡೆದಿದ್ದೇವೆ. ಡಿವಿಲಿಯರ್ಸ್ ಮತ್ತು ವಿನಯ್ ಕುಮಾರ್ ನಡುವಿನ ಜೊತೆಯಾಟ ಮಹತ್ವದ್ದಾಗಿತ್ತು. 157 ರನ್ಗಳ ಒಳಗೆ ಎದುರಾಳಿ ತಂಡವನ್ನು ನಿಯಂತ್ರಿಸುವುದು ಕಠಿಣವೇ ಸರಿ. ಆದರೆ ನಮ್ಮ ಬೌಲರ್ಗಳು ಕೊನೆಯಲ್ಲಿ ಒತ್ತಡವನ್ನು ಮೆಟ್ಟಿನಿಂತರು~ ಎಂದು ವೆಟೋರಿ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.<br /> <br /> <strong>ಉಮೇಶ್ ಯಾದವ್ಗೆ ಗಾಯ:</strong> ಡೆಲ್ಲಿ ತಂಡ ಕೂಡಾ ಪಂದ್ಯದ ವೇಳೆ ಗಾಯದ ಸಮಸ್ಯೆ ಎದುರಿಸಿತು. ಉಮೇಶ್ ಯಾದವ್ ಅವರು ಸ್ನಾಯು ಸೆಳೆತದ ಕಾರಣ ಅರ್ಧದಲ್ಲೇ ಅಂಗಳದಿಂದ ಹೊರನಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>