<p>ಇತ್ತೀಚಿನ ಒಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ರೌಂಡ್ಸ್ ಮುಗಿಸಿಕೊಂಡು, ಚಹಾ ಕುಡಿಯುತ್ತಾ ಕುಳಿತ್ದ್ದಿದೆ. ದೂರವಾಣಿ ಕರೆಯೊಂದು ಬಂತು. ನಮ್ಮ ವಿಭಾಗದ ಕಿರಿಯ ವೈದ್ಯರು ಕರೆ ಮಾಡಿ, `ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯನ್ನು ಎದೆ ನೋವೆಂದು ಕರೆದುಕೊಂಡು ಬಂದಿದ್ದಾರೆ. ಇ.ಸಿ.ಜಿ.ಯಲ್ಲಿ `ಅಕ್ಯೂಟ್ ಎಮ್ ಐ (ಹೃದಯಾಘಾತದ ಲಕ್ಷಣಗಳು)~ ಎಂದರು. ಇದು ಮತ್ತೊಂದು `ಹುಸಿ ಬಾಂಬ್ ಕರೆ~ ಇರಬೇಕೆಂದುಕೊಂಡೆ. <br /> <br /> ಬಹಳಷ್ಟು ಸಲ ಕಿರಿಯ ವೈದ್ಯರು ಇ.ಸಿ.ಜಿ. ನೋಡಿ ನಮ್ಮನ್ನು ತುರ್ತಾಗಿ ಕರೆಯುವುದುಂಟು. ನಾವು ಆತುರಾತುರವಾಗಿ ಓಡಿ ಹೋಗಿ ನೋಡಿದರೆ ಆ ರೀತಿಯೇನೂ ಆಗಿರುವುದಿಲ್ಲ. ಹಾಗಾಗಿ, ಅವರ ಆತಂಕದ ಕರೆಗಳನ್ನು `ಹುಸಿ ಬಾಂಬ್ ಕರೆಗಳು~ ಎಂದು ತಮಾಷೆ ಮಾಡುತ್ತೇವೆ. ಅಲ್ಲದೆ ರೋಗಿಯು ಚಿಕ್ಕ ಬಾಲೆ ಎಂದಾಗ ಹೃದಯಾಘಾತದ ಸಾಧ್ಯತೆ ಬಹಳ ಕಡಿಮೆ ಎಂದುಕೊಳ್ಳುತ್ತಲೇ ಅಲ್ಲಿಗೆ ಹೋದೆ. ಆದರೆ, ಇ.ಸಿ.ಜಿ.ಯನ್ನು ನೋಡಿದಾಗ ಬೆಪ್ಪನಾಗುವ ಸರದಿ ನನ್ನದಾಗಿತ್ತು. ಹದಿನಾಲ್ಕರ ಬಾಲೆಗೆ `ಹೃದಯಾಘಾತ~ವಾಗಿತ್ತು.<br /> <br /> ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ತಂಬಾಕು ಸೇವನೆ- ಇವೆಲ್ಲಕ್ಕೂ ಹೃದಯಾಘಾತಕ್ಕೂ ನಂಟು. ಆದರೆ, ಇತ್ತೀಚೆಗೆ ವಯಸ್ಸಿನ ಭೇದಭಾವ ಅಥವಾ ಲಿಂಗ ತಾರತಮ್ಯ ತೋರದೆ ಹೃದಯಾಘಾತ ವ್ಯಾಪಕವಾಗುತ್ತಿದೆ. ಗಂಡಸರಲ್ಲಿ ಮೊದಲೆಲ್ಲಾ ಐವತ್ತರ ನಂತರ ಬರುತ್ತಿದ್ದ ಹೃದ್ರೋಗ ಸಮಸ್ಯೆಗಳನ್ನು ಈಗ 20-30 ವಯಸ್ಸಿನ ಯುವಕರಲ್ಲಿ ನೋಡುತ್ತಿದ್ದೇವೆ. ಇದಕ್ಕೆ ಕಾರಣ- ಸ್ಪರ್ಧಾತ್ಮಕ ಜಗತ್ತಿನ ಮಾನಸಿಕ ಒತ್ತಡಗಳು ಹಾಗೂ ಮಿತಿಯಿಲ್ಲದ ಮೋಜಿನ ಜೀವನ. ಸಿಗರೇಟು, ಮದ್ಯ, ಕಣ್ಣಿಗೆ ಕಂಡದ್ದನ್ನೆಲ್ಲಾ ತಿನ್ನುವುದು- ಇವೆಲ್ಲ, ಹೃದಯದ ತೊಂದರೆಗೆ ಕಾರಣವಾಗುತ್ತವೆ. ಕೆಲವೊಮ್ಮೆ, ಪಿತ್ರಾರ್ಜಿತ ಆಸ್ತಿಯ ಜೊತೆಗೆ ತಂದೆ ತಾಯಿಯವರ ಬಳವಳಿಯಾಗಿ ಕೂಡ ಹೃದ್ರೋಗ ಬರುವುದಿದೆ.<br /> <br /> ಸಾಮಾನ್ಯವಾಗಿ ಸ್ತ್ರೀಯರಿಗೆ ಮುಟ್ಟುನಿಲ್ಲುವವರೆಗೆ `ಈಸ್ಟ್ರೋಜನ್~ ಎಂಬ ಹಾರ್ಮೋನು ಹೃದಯವನ್ನು ಆಘಾತದಿಂದ ರಕ್ಷಿಸುತ್ತದೆ. ಆದ್ದರಿಂದ ಸ್ತ್ರೀಯರಲ್ಲಿ ಹೃದಯ ಸಮಸ್ಯೆಗಳು 45-50ರ ನಂತರವೇ ಜಾಸ್ತಿ. ಆದರೆ ಬರಬರುತ್ತಾ ಮಹಿಳೆಯರಲ್ಲೂ ಮೂವತ್ತರ ಆಸುಪಾಸಿನಲ್ಲೇ ಹೃದ್ರೋಗ ಕಾಣಿಸಿಕೊಳ್ಳತೊಡಗಿದೆ. ಆದರೆ, ನನ್ನ ಈವರೆಗಿನ ಅನುಭವದಲ್ಲಿ ಹದಿನಾಲ್ಕನೇ ವಯಸ್ಸಿನ ಬಾಲಕಿಗೆ ಹೃದಯಾಘಾತವಾಗ್ದ್ದಿದನ್ನು ಕಂಡದ್ದು ಇದೇ ಮೊದಲು. <br /> <br /> ಈ ಹೆಣ್ಣುಮಗಳಿಗೆ ಹೃದಯಾಘಾತ ಆಗಲು ಕಾರಣಗಳಾದರೂ ಏನು ಎಂದು ಕೆದಕುತ್ತಾ ಹೋದೆ. ನನಗೆ ಸಿಕ್ಕಿದ್ದು ಮನಸ್ಸಿಗೆ ನೋವು ತರುವ ವಿಷಯಗಳು.<br /> <br /> ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ಬಡ ಕುಟುಂಬಕ್ಕೆ ಸೇರಿದವಳು. ತಂದೆ ಆಟೋ ಓಡಿಸುತ್ತಾರೆ. ಅವರ ದುಡಿಮೆಯಲ್ಲೇ ಕುಟುಂಬದ ನಿರ್ವಹಣೆ ನಡೆಯಬೇಕು. ಈ ಹುಡುಗಿಗೆ ಪದೇ ಪದೇ ಅನಾರೋಗ್ಯ. ಜ್ವರ, ಸುಸ್ತು, ಕೈಕಾಲು ನೋವು. ಮನೆಯವರು ದೇವರು ದಿಂಡಿರು ಮೊರೆಹೋದರು. ಹರಕೆ ಕಟ್ಟಿಕೊಂಡರು. ಯಾವುದೂ ಫಲ ನೀಡಲಿಲ್ಲ. <br /> <br /> ಇತ್ತೀಚೆಗೆ ಮುಖದ ಚರ್ಮ ಕಪ್ಪು ಬಣ್ಣಕ್ಕೆ ತಿರುಗತೊಡಗಿದಾಗ `ದೊಡ್ಡಾಸ್ಪತ್ರೆಗೆ~ ಕರೆದುಕೊಂಡು ಬಂದರು. ಪರೀಕ್ಷೆಗಳನ್ನು ಮಾಡಿದ ನಂತರ, ವೈದ್ಯರೆಲ್ಲಾ ಸೇರಿ ಬಾಲಕಿಯ ಕಾಯಿಲೆಗೆ ಕೊಟ್ಟ ಹೆಸರು- SLY (Systemic lupus erythematosus)..<br /> <br /> `ಎಸ್ಎಲ್ಇ~ ಬಿಳಿ ರಕ್ತಕಣಗಳನ್ನು ದುರ್ಬಲಗೊಳಿಸುತ್ತದೆ. ರೋಗಕಾರಕ ಬ್ಯಾಕ್ಟೀರಿಯಾ-ವೈರಸ್ಗಳನ್ನು ಮತ್ತು ಇತರೆ ಶತ್ರುಗಳನ್ನು ಹೊಡೆದೋಡಿಸಬೇಕಾದ ಬಿಳಿ ರಕ್ತಕಣಗಳು ತನ್ನ ಯಜಮಾನನ ದೇಹದ ವಿರುದ್ಧವೇ ಸಂಚು ರೂಪಿಸಿ, ದಾಳಿ ಮಾಡುವುದು `ಎಸ್ಎಲ್ಇ~ ವಿಶೇಷ. ಒಮ್ಮೆ `ಎಸ್ಎಲ್ಇ~ ವಕ್ರದೃಷ್ಟಿ ಬಿದ್ದಿತೆಂದರೆ, ಜೀವನ ಪರ್ಯಂತ ಅದನ್ನು ಅನುಭವಿಸಲೇಬೇಕು. <br /> <br /> ಈ ನತದೃಷ್ಟ ಹೆಣ್ಣುಮಗಳ ತಂದೆಗೆ ತನ್ನ ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಸಾಲ ಮಾಡಬೇಕಾಯಿತು. ದೊಡ್ಡಾಸ್ಪತ್ರೆಯಲ್ಲಿ ಮಗಳು ಇನ್ನೇನು ಚೇತರಿಸಿಕೊಂಡಳು ಎನ್ನುವಾಗ್ಗೆ `ಹೃದಯಾಘಾತ~ ಬರಸಿಡಿಲಿನಂತೆ ಎರಗಿತ್ತು. `ಎಸ್ಎಲ್ಇ~ ಕಾಯಿಲೆಯಲ್ಲಿ ರಕ್ತನಾಳಗಳಲ್ಲಿ ನಡೆಯುವ ಬದಲಾವಣೆಗಳು ರಕ್ತವನ್ನು ಹೆಪ್ಪುಗಟ್ಟಿಸಿ, ಹೃದಯಾಘಾತವನ್ನು ತಂದೊಡ್ಡುತ್ತವೆ.<br /> <br /> ರೋಗಿಯ ಕುಟುಂಬದ ಬಡತನದ ಹಿನ್ನೆಲೆಯಲ್ಲಿ ಆದಷ್ಟೂ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸುವ ಏರ್ಪಾಟನ್ನು ನಮ್ಮ ವಿಭಾಗದ ಹಿರಿಯ ತಜ್ಞ ವೈದ್ಯರು ಮಾಡಿದರು. <br /> <br /> ರೋಗಿಯನ್ನು ಸಿ.ಸಿ.ಯು.ಗೆ ಸೇರಿಸಿಕೊಂಡು, ಈ ರೋಗವನ್ನು ದೃಢೀಕರಿಸುವ ಕೆಲವು ಪ್ರಾರಂಭೀಕ ಪರೀಕ್ಷೆಗಳಾದ ಎಕೋಕಾರ್ಡಿಯೋಗ್ರಾಮ್, ಕಾರ್ಡಿಯಾಕ್ ಎನ್ಜೈಮ್ಸನ್ನು ಮಾಡಿ, ನಂತರ ಎಂಜಿಯೋಗ್ರಾಮ್ ಮಾಡಿದೆವು. ಆ್ಯಂಜಿಯೋಗ್ರಾಮ್ನಲ್ಲಿ ಹೃದಯದ ಅತೀ ಮುಖ್ಯ ರಕ್ತನಾಳವಾದ `ಎಲ್ಎಡಿ~ಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಆದರೆ ರಕ್ತನಾಳವೇನೂ ಪೂರ್ತಿಯಾಗಿ ಮುಚ್ಚಿರಲಿಲ್ಲ. ಹೆಪ್ಪುಗಟ್ಟಿದ ರಕ್ತವು ಮಾಮೂಲಿನ ಸ್ಥಿತಿಗೆ ಬಂದು ಸರಾಗವಾಗಿ ರಕ್ತ ಹರಿಯುವಂತೆ ಮಾಡಲು ದುಬಾರಿಯಾದ ಇಂಜಕ್ಷನ್ Integrillin ಎಂಬ ಔಷಧಿಯನ್ನು ನಮ್ಮ ವಿಭಾಗದ ಸಂಗ್ರಹದಿಂದ ಕೊಟ್ಟೆವು. <br /> <br /> ಮೂರ್ನಾಲ್ಕು ದಿವಸಗಳ ಚೇತರಿಕೆಯ ನಂತರ ಮತ್ತೆ ರಕ್ತ ಸಂಚಾರ ಹೇಗಿದೆಯೆಂದು ನೋಡಲು ಎಂಜಿಯೋಗ್ರಾಮ್ ಮಾಡಿದಾಗ, ಹೃದಯದ ರಕ್ತನಾಳದಲ್ಲಿ ರಕ್ತ ಮಾಮೂಲಿನಂತೆ ಹರಿಯುತ್ತಿತ್ತು. <br /> <br /> ನಾವು ಚಿಕಿತ್ಸೆ ನೀಡಿದ ಬಾಲಕಿಗೆ ತನಗಾಗಿರುವ ಹೃದಯಾಘಾತದ ತೀವ್ರತೆ ತಿಳಿದುಕೊಳ್ಳುವಷ್ಟು ಪ್ರಬುದ್ಧತೆ ಬಂದಿರಲಿಲ್ಲ. ತನ್ನ ತರಗತಿಯ `ಅಂತಿಮ ಪರೀಕ್ಷೆ~ ವೇಳೆಗೆ ನಾನು ಗುಣವಾಗುತ್ತೇನೋ ಇಲ್ಲವೋ ಎನ್ನುವ ಆತಂಕ ಅವಳದು. <br /> <br /> ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಆ ಬಾಲಕಿ ಅನೇಕ ಕುತೂಹಲದ ಪ್ರಶ್ನೆಗಳನ್ನು ಕೇಳುತ್ತಾ, `ತನಗೇನೂ ಆಗಿಲ್ಲವಲ್ಲವೇ~ ಎಂದು ಕೇಳುತ್ತಿದ್ದಳು. ಆಕೆ ಯಾವತ್ತೂ ಭರವಸೆ ಮತ್ತು ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಆಕೆಯ ಮುಖದಿಂದ ಮುಗುಳ್ನಗೆ ಮಾಸಿರಲಿಲ್ಲ. <br /> <br /> ನಮ್ಮಂದಿಗೆ ಹುಡುಗಾಟಿಕೆ ಮಾಡಿಕೊಂಡಿದ್ದ ಹುಡುಗಿ ಪೂರ್ತಿ ಚೇತರಿಸಿಕೊಂಡು ಮನೆಗೆ ಹೊರಟಾಗ, ಅವಳ ಕಣ್ಣಿನಲ್ಲಿ ಜೀವನೋತ್ಸಾಹ ಕಾಣಿಸುತ್ತಿತ್ತು.<br /> <br /> ಆ ಬಾಲಕಿಯನ್ನು ನೋಡಿದಾಗ, ವಿಧಿ ಒಡ್ಡುವ ಸಮಸ್ಯೆಗಳಿಗೆ ಜೀವನದ ಬಗೆಗೆ ಒಲವು, ಆತ್ಮವಿಶ್ವಾಸ ಮತ್ತು ನಗುವೇ ನಮ್ಮ ಉತ್ತರವಾಗಿರಬೇಕು ಅನ್ನಿಸಿತು.</p>.<p><strong>ಲೇಖಕರು ಬೆಂಗಳೂರಿನ ಎಂ.ಎಸ್. ರಾಮಯ್ಯ ನಾರಾಯಣ ಹಾರ್ಟ್ ಸೆಂಟರ್ನಲ್ಲಿ ವೈದ್ಯರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚಿನ ಒಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ರೌಂಡ್ಸ್ ಮುಗಿಸಿಕೊಂಡು, ಚಹಾ ಕುಡಿಯುತ್ತಾ ಕುಳಿತ್ದ್ದಿದೆ. ದೂರವಾಣಿ ಕರೆಯೊಂದು ಬಂತು. ನಮ್ಮ ವಿಭಾಗದ ಕಿರಿಯ ವೈದ್ಯರು ಕರೆ ಮಾಡಿ, `ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯನ್ನು ಎದೆ ನೋವೆಂದು ಕರೆದುಕೊಂಡು ಬಂದಿದ್ದಾರೆ. ಇ.ಸಿ.ಜಿ.ಯಲ್ಲಿ `ಅಕ್ಯೂಟ್ ಎಮ್ ಐ (ಹೃದಯಾಘಾತದ ಲಕ್ಷಣಗಳು)~ ಎಂದರು. ಇದು ಮತ್ತೊಂದು `ಹುಸಿ ಬಾಂಬ್ ಕರೆ~ ಇರಬೇಕೆಂದುಕೊಂಡೆ. <br /> <br /> ಬಹಳಷ್ಟು ಸಲ ಕಿರಿಯ ವೈದ್ಯರು ಇ.ಸಿ.ಜಿ. ನೋಡಿ ನಮ್ಮನ್ನು ತುರ್ತಾಗಿ ಕರೆಯುವುದುಂಟು. ನಾವು ಆತುರಾತುರವಾಗಿ ಓಡಿ ಹೋಗಿ ನೋಡಿದರೆ ಆ ರೀತಿಯೇನೂ ಆಗಿರುವುದಿಲ್ಲ. ಹಾಗಾಗಿ, ಅವರ ಆತಂಕದ ಕರೆಗಳನ್ನು `ಹುಸಿ ಬಾಂಬ್ ಕರೆಗಳು~ ಎಂದು ತಮಾಷೆ ಮಾಡುತ್ತೇವೆ. ಅಲ್ಲದೆ ರೋಗಿಯು ಚಿಕ್ಕ ಬಾಲೆ ಎಂದಾಗ ಹೃದಯಾಘಾತದ ಸಾಧ್ಯತೆ ಬಹಳ ಕಡಿಮೆ ಎಂದುಕೊಳ್ಳುತ್ತಲೇ ಅಲ್ಲಿಗೆ ಹೋದೆ. ಆದರೆ, ಇ.ಸಿ.ಜಿ.ಯನ್ನು ನೋಡಿದಾಗ ಬೆಪ್ಪನಾಗುವ ಸರದಿ ನನ್ನದಾಗಿತ್ತು. ಹದಿನಾಲ್ಕರ ಬಾಲೆಗೆ `ಹೃದಯಾಘಾತ~ವಾಗಿತ್ತು.<br /> <br /> ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ತಂಬಾಕು ಸೇವನೆ- ಇವೆಲ್ಲಕ್ಕೂ ಹೃದಯಾಘಾತಕ್ಕೂ ನಂಟು. ಆದರೆ, ಇತ್ತೀಚೆಗೆ ವಯಸ್ಸಿನ ಭೇದಭಾವ ಅಥವಾ ಲಿಂಗ ತಾರತಮ್ಯ ತೋರದೆ ಹೃದಯಾಘಾತ ವ್ಯಾಪಕವಾಗುತ್ತಿದೆ. ಗಂಡಸರಲ್ಲಿ ಮೊದಲೆಲ್ಲಾ ಐವತ್ತರ ನಂತರ ಬರುತ್ತಿದ್ದ ಹೃದ್ರೋಗ ಸಮಸ್ಯೆಗಳನ್ನು ಈಗ 20-30 ವಯಸ್ಸಿನ ಯುವಕರಲ್ಲಿ ನೋಡುತ್ತಿದ್ದೇವೆ. ಇದಕ್ಕೆ ಕಾರಣ- ಸ್ಪರ್ಧಾತ್ಮಕ ಜಗತ್ತಿನ ಮಾನಸಿಕ ಒತ್ತಡಗಳು ಹಾಗೂ ಮಿತಿಯಿಲ್ಲದ ಮೋಜಿನ ಜೀವನ. ಸಿಗರೇಟು, ಮದ್ಯ, ಕಣ್ಣಿಗೆ ಕಂಡದ್ದನ್ನೆಲ್ಲಾ ತಿನ್ನುವುದು- ಇವೆಲ್ಲ, ಹೃದಯದ ತೊಂದರೆಗೆ ಕಾರಣವಾಗುತ್ತವೆ. ಕೆಲವೊಮ್ಮೆ, ಪಿತ್ರಾರ್ಜಿತ ಆಸ್ತಿಯ ಜೊತೆಗೆ ತಂದೆ ತಾಯಿಯವರ ಬಳವಳಿಯಾಗಿ ಕೂಡ ಹೃದ್ರೋಗ ಬರುವುದಿದೆ.<br /> <br /> ಸಾಮಾನ್ಯವಾಗಿ ಸ್ತ್ರೀಯರಿಗೆ ಮುಟ್ಟುನಿಲ್ಲುವವರೆಗೆ `ಈಸ್ಟ್ರೋಜನ್~ ಎಂಬ ಹಾರ್ಮೋನು ಹೃದಯವನ್ನು ಆಘಾತದಿಂದ ರಕ್ಷಿಸುತ್ತದೆ. ಆದ್ದರಿಂದ ಸ್ತ್ರೀಯರಲ್ಲಿ ಹೃದಯ ಸಮಸ್ಯೆಗಳು 45-50ರ ನಂತರವೇ ಜಾಸ್ತಿ. ಆದರೆ ಬರಬರುತ್ತಾ ಮಹಿಳೆಯರಲ್ಲೂ ಮೂವತ್ತರ ಆಸುಪಾಸಿನಲ್ಲೇ ಹೃದ್ರೋಗ ಕಾಣಿಸಿಕೊಳ್ಳತೊಡಗಿದೆ. ಆದರೆ, ನನ್ನ ಈವರೆಗಿನ ಅನುಭವದಲ್ಲಿ ಹದಿನಾಲ್ಕನೇ ವಯಸ್ಸಿನ ಬಾಲಕಿಗೆ ಹೃದಯಾಘಾತವಾಗ್ದ್ದಿದನ್ನು ಕಂಡದ್ದು ಇದೇ ಮೊದಲು. <br /> <br /> ಈ ಹೆಣ್ಣುಮಗಳಿಗೆ ಹೃದಯಾಘಾತ ಆಗಲು ಕಾರಣಗಳಾದರೂ ಏನು ಎಂದು ಕೆದಕುತ್ತಾ ಹೋದೆ. ನನಗೆ ಸಿಕ್ಕಿದ್ದು ಮನಸ್ಸಿಗೆ ನೋವು ತರುವ ವಿಷಯಗಳು.<br /> <br /> ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ಬಡ ಕುಟುಂಬಕ್ಕೆ ಸೇರಿದವಳು. ತಂದೆ ಆಟೋ ಓಡಿಸುತ್ತಾರೆ. ಅವರ ದುಡಿಮೆಯಲ್ಲೇ ಕುಟುಂಬದ ನಿರ್ವಹಣೆ ನಡೆಯಬೇಕು. ಈ ಹುಡುಗಿಗೆ ಪದೇ ಪದೇ ಅನಾರೋಗ್ಯ. ಜ್ವರ, ಸುಸ್ತು, ಕೈಕಾಲು ನೋವು. ಮನೆಯವರು ದೇವರು ದಿಂಡಿರು ಮೊರೆಹೋದರು. ಹರಕೆ ಕಟ್ಟಿಕೊಂಡರು. ಯಾವುದೂ ಫಲ ನೀಡಲಿಲ್ಲ. <br /> <br /> ಇತ್ತೀಚೆಗೆ ಮುಖದ ಚರ್ಮ ಕಪ್ಪು ಬಣ್ಣಕ್ಕೆ ತಿರುಗತೊಡಗಿದಾಗ `ದೊಡ್ಡಾಸ್ಪತ್ರೆಗೆ~ ಕರೆದುಕೊಂಡು ಬಂದರು. ಪರೀಕ್ಷೆಗಳನ್ನು ಮಾಡಿದ ನಂತರ, ವೈದ್ಯರೆಲ್ಲಾ ಸೇರಿ ಬಾಲಕಿಯ ಕಾಯಿಲೆಗೆ ಕೊಟ್ಟ ಹೆಸರು- SLY (Systemic lupus erythematosus)..<br /> <br /> `ಎಸ್ಎಲ್ಇ~ ಬಿಳಿ ರಕ್ತಕಣಗಳನ್ನು ದುರ್ಬಲಗೊಳಿಸುತ್ತದೆ. ರೋಗಕಾರಕ ಬ್ಯಾಕ್ಟೀರಿಯಾ-ವೈರಸ್ಗಳನ್ನು ಮತ್ತು ಇತರೆ ಶತ್ರುಗಳನ್ನು ಹೊಡೆದೋಡಿಸಬೇಕಾದ ಬಿಳಿ ರಕ್ತಕಣಗಳು ತನ್ನ ಯಜಮಾನನ ದೇಹದ ವಿರುದ್ಧವೇ ಸಂಚು ರೂಪಿಸಿ, ದಾಳಿ ಮಾಡುವುದು `ಎಸ್ಎಲ್ಇ~ ವಿಶೇಷ. ಒಮ್ಮೆ `ಎಸ್ಎಲ್ಇ~ ವಕ್ರದೃಷ್ಟಿ ಬಿದ್ದಿತೆಂದರೆ, ಜೀವನ ಪರ್ಯಂತ ಅದನ್ನು ಅನುಭವಿಸಲೇಬೇಕು. <br /> <br /> ಈ ನತದೃಷ್ಟ ಹೆಣ್ಣುಮಗಳ ತಂದೆಗೆ ತನ್ನ ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಸಾಲ ಮಾಡಬೇಕಾಯಿತು. ದೊಡ್ಡಾಸ್ಪತ್ರೆಯಲ್ಲಿ ಮಗಳು ಇನ್ನೇನು ಚೇತರಿಸಿಕೊಂಡಳು ಎನ್ನುವಾಗ್ಗೆ `ಹೃದಯಾಘಾತ~ ಬರಸಿಡಿಲಿನಂತೆ ಎರಗಿತ್ತು. `ಎಸ್ಎಲ್ಇ~ ಕಾಯಿಲೆಯಲ್ಲಿ ರಕ್ತನಾಳಗಳಲ್ಲಿ ನಡೆಯುವ ಬದಲಾವಣೆಗಳು ರಕ್ತವನ್ನು ಹೆಪ್ಪುಗಟ್ಟಿಸಿ, ಹೃದಯಾಘಾತವನ್ನು ತಂದೊಡ್ಡುತ್ತವೆ.<br /> <br /> ರೋಗಿಯ ಕುಟುಂಬದ ಬಡತನದ ಹಿನ್ನೆಲೆಯಲ್ಲಿ ಆದಷ್ಟೂ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಕೊಡಿಸುವ ಏರ್ಪಾಟನ್ನು ನಮ್ಮ ವಿಭಾಗದ ಹಿರಿಯ ತಜ್ಞ ವೈದ್ಯರು ಮಾಡಿದರು. <br /> <br /> ರೋಗಿಯನ್ನು ಸಿ.ಸಿ.ಯು.ಗೆ ಸೇರಿಸಿಕೊಂಡು, ಈ ರೋಗವನ್ನು ದೃಢೀಕರಿಸುವ ಕೆಲವು ಪ್ರಾರಂಭೀಕ ಪರೀಕ್ಷೆಗಳಾದ ಎಕೋಕಾರ್ಡಿಯೋಗ್ರಾಮ್, ಕಾರ್ಡಿಯಾಕ್ ಎನ್ಜೈಮ್ಸನ್ನು ಮಾಡಿ, ನಂತರ ಎಂಜಿಯೋಗ್ರಾಮ್ ಮಾಡಿದೆವು. ಆ್ಯಂಜಿಯೋಗ್ರಾಮ್ನಲ್ಲಿ ಹೃದಯದ ಅತೀ ಮುಖ್ಯ ರಕ್ತನಾಳವಾದ `ಎಲ್ಎಡಿ~ಯಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಆದರೆ ರಕ್ತನಾಳವೇನೂ ಪೂರ್ತಿಯಾಗಿ ಮುಚ್ಚಿರಲಿಲ್ಲ. ಹೆಪ್ಪುಗಟ್ಟಿದ ರಕ್ತವು ಮಾಮೂಲಿನ ಸ್ಥಿತಿಗೆ ಬಂದು ಸರಾಗವಾಗಿ ರಕ್ತ ಹರಿಯುವಂತೆ ಮಾಡಲು ದುಬಾರಿಯಾದ ಇಂಜಕ್ಷನ್ Integrillin ಎಂಬ ಔಷಧಿಯನ್ನು ನಮ್ಮ ವಿಭಾಗದ ಸಂಗ್ರಹದಿಂದ ಕೊಟ್ಟೆವು. <br /> <br /> ಮೂರ್ನಾಲ್ಕು ದಿವಸಗಳ ಚೇತರಿಕೆಯ ನಂತರ ಮತ್ತೆ ರಕ್ತ ಸಂಚಾರ ಹೇಗಿದೆಯೆಂದು ನೋಡಲು ಎಂಜಿಯೋಗ್ರಾಮ್ ಮಾಡಿದಾಗ, ಹೃದಯದ ರಕ್ತನಾಳದಲ್ಲಿ ರಕ್ತ ಮಾಮೂಲಿನಂತೆ ಹರಿಯುತ್ತಿತ್ತು. <br /> <br /> ನಾವು ಚಿಕಿತ್ಸೆ ನೀಡಿದ ಬಾಲಕಿಗೆ ತನಗಾಗಿರುವ ಹೃದಯಾಘಾತದ ತೀವ್ರತೆ ತಿಳಿದುಕೊಳ್ಳುವಷ್ಟು ಪ್ರಬುದ್ಧತೆ ಬಂದಿರಲಿಲ್ಲ. ತನ್ನ ತರಗತಿಯ `ಅಂತಿಮ ಪರೀಕ್ಷೆ~ ವೇಳೆಗೆ ನಾನು ಗುಣವಾಗುತ್ತೇನೋ ಇಲ್ಲವೋ ಎನ್ನುವ ಆತಂಕ ಅವಳದು. <br /> <br /> ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಆ ಬಾಲಕಿ ಅನೇಕ ಕುತೂಹಲದ ಪ್ರಶ್ನೆಗಳನ್ನು ಕೇಳುತ್ತಾ, `ತನಗೇನೂ ಆಗಿಲ್ಲವಲ್ಲವೇ~ ಎಂದು ಕೇಳುತ್ತಿದ್ದಳು. ಆಕೆ ಯಾವತ್ತೂ ಭರವಸೆ ಮತ್ತು ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಆಕೆಯ ಮುಖದಿಂದ ಮುಗುಳ್ನಗೆ ಮಾಸಿರಲಿಲ್ಲ. <br /> <br /> ನಮ್ಮಂದಿಗೆ ಹುಡುಗಾಟಿಕೆ ಮಾಡಿಕೊಂಡಿದ್ದ ಹುಡುಗಿ ಪೂರ್ತಿ ಚೇತರಿಸಿಕೊಂಡು ಮನೆಗೆ ಹೊರಟಾಗ, ಅವಳ ಕಣ್ಣಿನಲ್ಲಿ ಜೀವನೋತ್ಸಾಹ ಕಾಣಿಸುತ್ತಿತ್ತು.<br /> <br /> ಆ ಬಾಲಕಿಯನ್ನು ನೋಡಿದಾಗ, ವಿಧಿ ಒಡ್ಡುವ ಸಮಸ್ಯೆಗಳಿಗೆ ಜೀವನದ ಬಗೆಗೆ ಒಲವು, ಆತ್ಮವಿಶ್ವಾಸ ಮತ್ತು ನಗುವೇ ನಮ್ಮ ಉತ್ತರವಾಗಿರಬೇಕು ಅನ್ನಿಸಿತು.</p>.<p><strong>ಲೇಖಕರು ಬೆಂಗಳೂರಿನ ಎಂ.ಎಸ್. ರಾಮಯ್ಯ ನಾರಾಯಣ ಹಾರ್ಟ್ ಸೆಂಟರ್ನಲ್ಲಿ ವೈದ್ಯರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>