<p><strong>ಕೋಲ್ಕತ್ತ(ಪಿಟಿಐ): </strong>ಮುಕ್ತೇಶ್ ಸುರಕ್ಷಿತವಾಗಿ ಮರಳಿ ಬರುತ್ತಾರೆ ಎಂದು ಪತನಗೊಂಡ ಮಲೇಷ್ಯಾ ವಿಮಾನದಲ್ಲಿದ್ದ ಭಾರತೀಯ ಮೂಲದ ಕೆನಡಾ ಪ್ರಜೆ ಮುಕ್ತೇಶ್ ಮುಖರ್ಜಿ ಅವರ ಚಿಕ್ಕಪ್ಪ ಮಿಲನ್ ಮುಖರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.<br /> <br /> ಅಣ್ಣನ ಮಗ ಜೀವಂತವಾಗಿದ್ದಾರೆ ಎಂಬ ಭರವಸೆ ಅವರದು. ‘ನಮ್ಮ ಕುಟುಂಬದ ಮೇಲೆ ದೇವರು ಅಷ್ಟೊಂದು ಕ್ರೂರವಾಗಿರಲಾರ’ ಎಂದು ಕೋಲ್ಕತ್ತ ಹೈಕೋರ್ಟ್ನಲ್ಲಿ ವಕೀಲ ರಾಗಿರುವ ಮಿಲನ್ ಹೇಳಿದ್ದಾರೆ.<br /> <br /> ಮುಕ್ತೇಶ್, ಇಂದಿರಾಗಾಂಧಿ ಅವರ ಸಚಿವ ಸಂಪುಟದಲ್ಲಿ ಉಕ್ಕು ಮತ್ತು ಗಣಿ ಖಾತೆ ಸಚಿವರಾಗಿದ್ದ ಮೋಹನ್ ಕುಮಾರಮಂಗಲಂ ಅವರ ಮೊಮ್ಮಗ. ಕುಮಾರಮಂಗಲಂ, 1973ರ ಮೇನಲ್ಲಿ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.<br /> <br /> ಮುಕ್ತೇಶ್ ಅವರು ಕುಮಾರಮಂಗಲಂ ಅವರ ಹಿರಿಯ ಪುತ್ರಿ ಉಮಾ ಅವರ ಪುತ್ರ. ಅವರ ತಂದೆ ಮೂಲಿ ಮುಖರ್ಜಿ ಅವರು ಆರ್ಸೆಲ್ಲರ್ ಮಿತ್ತಲ್ ಕಂಪೆನಿಯ ಆಡಳಿತ ಮಂಡಳಿ ಸದಸ್ಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ(ಪಿಟಿಐ): </strong>ಮುಕ್ತೇಶ್ ಸುರಕ್ಷಿತವಾಗಿ ಮರಳಿ ಬರುತ್ತಾರೆ ಎಂದು ಪತನಗೊಂಡ ಮಲೇಷ್ಯಾ ವಿಮಾನದಲ್ಲಿದ್ದ ಭಾರತೀಯ ಮೂಲದ ಕೆನಡಾ ಪ್ರಜೆ ಮುಕ್ತೇಶ್ ಮುಖರ್ಜಿ ಅವರ ಚಿಕ್ಕಪ್ಪ ಮಿಲನ್ ಮುಖರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.<br /> <br /> ಅಣ್ಣನ ಮಗ ಜೀವಂತವಾಗಿದ್ದಾರೆ ಎಂಬ ಭರವಸೆ ಅವರದು. ‘ನಮ್ಮ ಕುಟುಂಬದ ಮೇಲೆ ದೇವರು ಅಷ್ಟೊಂದು ಕ್ರೂರವಾಗಿರಲಾರ’ ಎಂದು ಕೋಲ್ಕತ್ತ ಹೈಕೋರ್ಟ್ನಲ್ಲಿ ವಕೀಲ ರಾಗಿರುವ ಮಿಲನ್ ಹೇಳಿದ್ದಾರೆ.<br /> <br /> ಮುಕ್ತೇಶ್, ಇಂದಿರಾಗಾಂಧಿ ಅವರ ಸಚಿವ ಸಂಪುಟದಲ್ಲಿ ಉಕ್ಕು ಮತ್ತು ಗಣಿ ಖಾತೆ ಸಚಿವರಾಗಿದ್ದ ಮೋಹನ್ ಕುಮಾರಮಂಗಲಂ ಅವರ ಮೊಮ್ಮಗ. ಕುಮಾರಮಂಗಲಂ, 1973ರ ಮೇನಲ್ಲಿ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರು.<br /> <br /> ಮುಕ್ತೇಶ್ ಅವರು ಕುಮಾರಮಂಗಲಂ ಅವರ ಹಿರಿಯ ಪುತ್ರಿ ಉಮಾ ಅವರ ಪುತ್ರ. ಅವರ ತಂದೆ ಮೂಲಿ ಮುಖರ್ಜಿ ಅವರು ಆರ್ಸೆಲ್ಲರ್ ಮಿತ್ತಲ್ ಕಂಪೆನಿಯ ಆಡಳಿತ ಮಂಡಳಿ ಸದಸ್ಯರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>