<p><strong>ಹುಬ್ಬಳ್ಳಿ:</strong> ಧಾರವಾಡದ ಉದ್ಯಮಿ ವಿನಯ್ ಕುರ್ತಕೋಟಿ ಇಲ್ಲಿನ ಇಂದ್ರಾಳಿ ಸ್ಕೂಲ್ ಆಫ್ ಲೈಫ್ ಸ್ಕಿಲ್ಸ್ನಲ್ಲಿ ಭಾನುವಾರ ಮುಕ್ತಾಯಗೊಂಡ ಧಾರವಾಡ ಜಿಲ್ಲಾ ಮುಕ್ತ ಚೆಸ್ ಚಾಂಪಿಯನ್ಷಿಪ್ನ ಚಾಂಪಿಯನ್ ಆಗಿ ಹೊರಹೊಮ್ಮಿದರು.<br /> <br /> ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಷನ್, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸಹಯೋಗದಲ್ಲಿ ಆಯೋಜಿಸಿದ್ದ ಟೂರ್ನಿಯ ಏಳು ಸುತ್ತಿನ ಸ್ಪರ್ಧೆಯಲ್ಲಿ ವಿನಯ್ ಒಟ್ಟಾರೆ ಆರು ಪಾಯಿಂಟ್ ಕಲೆ ಹಾಕುವುದರೊಂದಿಗೆ ಈ ಗೌರವಕ್ಕೆ ಪಾತ್ರರಾದರು.<br /> <br /> ಹುಬ್ಬಳ್ಳಿಯವರಾದ ಶಾಶ್ವತ್ ಮುದೇನಗುಡಿ ಹಾಗೂ ಆದಿತ್ಯ ಕಲ್ಯಾಣಿ ಕೂಡ ಆರು ಪಾಯಿಂಟ್ ಸಂಪಾದಿಸಿದರು.<br /> <br /> ಆದರೆ ವಿವಿಧ ಸುತ್ತುಗಳಲ್ಲಿ ತೋರಿದ ಪ್ರದರ್ಶನ ಹಾಗೂ ಪ್ರಬಲ ಎದುರಾಳಿ ವಿರುದ್ಧ ಸೆಣಸಿದ ಆಧಾರದ ಮೇಲೆ ವಿನಯ್ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.<br /> <br /> ಶಾಶ್ವತ್ ಹಾಗೂ ಆದಿತ್ಯ ನಂತರದ ಸ್ಥಾನ ಪಡೆದರು. ಧಾರವಾಡದ ಆರ್. ಕೆ. ಮಹಿಷಿ ನಾಲ್ಕು ಹಾಗೂ ಹುಬ್ಬಳ್ಳಿಯ ವಾಣಿ ಇಂದ್ರಾಳಿ ಐದನೇ ಸ್ಥಾನ ಪಡೆದರು.<br /> <br /> ಬಾಲಕ-ಬಾಲಕಿಯರು, ಹಿರಿಯರೂ ಸೇರಿದಂತೆ ಜಿಲ್ಲೆಯ 60ಕ್ಕೂ ಹೆಚ್ಚು ಚೆಸ್ ಪಟುಗಳು ಎರಡು ದಿನಗಳ ಈ ಮುಕ್ತ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.<br /> <br /> <strong>ಬಹುಮಾನ ವಿತರಣೆ</strong><br /> ಸಂಜೆ ನಡೆದ ಸಮಾರಂಭದಲ್ಲಿ ಚೆಸ್ ಸಂಸ್ಥೆ ಅಧ್ಯಕ್ಷ ವಿ.ವಿ. ಮಂಗಳವಾಡಕರ್ ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆ ಉಪಾಧ್ಯಕ್ಷ ಡಾ. ಅರವಿಂದ ಯೆರಿ, ಜಂಟಿ ಕಾರ್ಯದರ್ಶಿ ರಾಜು ಹೆಗಡಿ, ಶ್ರೀನಿವಾಸ ಇಂದ್ರಾಳಿ ಇತರರು ಈ ಸಂದರ್ಭ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಧಾರವಾಡದ ಉದ್ಯಮಿ ವಿನಯ್ ಕುರ್ತಕೋಟಿ ಇಲ್ಲಿನ ಇಂದ್ರಾಳಿ ಸ್ಕೂಲ್ ಆಫ್ ಲೈಫ್ ಸ್ಕಿಲ್ಸ್ನಲ್ಲಿ ಭಾನುವಾರ ಮುಕ್ತಾಯಗೊಂಡ ಧಾರವಾಡ ಜಿಲ್ಲಾ ಮುಕ್ತ ಚೆಸ್ ಚಾಂಪಿಯನ್ಷಿಪ್ನ ಚಾಂಪಿಯನ್ ಆಗಿ ಹೊರಹೊಮ್ಮಿದರು.<br /> <br /> ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಷನ್, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸಹಯೋಗದಲ್ಲಿ ಆಯೋಜಿಸಿದ್ದ ಟೂರ್ನಿಯ ಏಳು ಸುತ್ತಿನ ಸ್ಪರ್ಧೆಯಲ್ಲಿ ವಿನಯ್ ಒಟ್ಟಾರೆ ಆರು ಪಾಯಿಂಟ್ ಕಲೆ ಹಾಕುವುದರೊಂದಿಗೆ ಈ ಗೌರವಕ್ಕೆ ಪಾತ್ರರಾದರು.<br /> <br /> ಹುಬ್ಬಳ್ಳಿಯವರಾದ ಶಾಶ್ವತ್ ಮುದೇನಗುಡಿ ಹಾಗೂ ಆದಿತ್ಯ ಕಲ್ಯಾಣಿ ಕೂಡ ಆರು ಪಾಯಿಂಟ್ ಸಂಪಾದಿಸಿದರು.<br /> <br /> ಆದರೆ ವಿವಿಧ ಸುತ್ತುಗಳಲ್ಲಿ ತೋರಿದ ಪ್ರದರ್ಶನ ಹಾಗೂ ಪ್ರಬಲ ಎದುರಾಳಿ ವಿರುದ್ಧ ಸೆಣಸಿದ ಆಧಾರದ ಮೇಲೆ ವಿನಯ್ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.<br /> <br /> ಶಾಶ್ವತ್ ಹಾಗೂ ಆದಿತ್ಯ ನಂತರದ ಸ್ಥಾನ ಪಡೆದರು. ಧಾರವಾಡದ ಆರ್. ಕೆ. ಮಹಿಷಿ ನಾಲ್ಕು ಹಾಗೂ ಹುಬ್ಬಳ್ಳಿಯ ವಾಣಿ ಇಂದ್ರಾಳಿ ಐದನೇ ಸ್ಥಾನ ಪಡೆದರು.<br /> <br /> ಬಾಲಕ-ಬಾಲಕಿಯರು, ಹಿರಿಯರೂ ಸೇರಿದಂತೆ ಜಿಲ್ಲೆಯ 60ಕ್ಕೂ ಹೆಚ್ಚು ಚೆಸ್ ಪಟುಗಳು ಎರಡು ದಿನಗಳ ಈ ಮುಕ್ತ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.<br /> <br /> <strong>ಬಹುಮಾನ ವಿತರಣೆ</strong><br /> ಸಂಜೆ ನಡೆದ ಸಮಾರಂಭದಲ್ಲಿ ಚೆಸ್ ಸಂಸ್ಥೆ ಅಧ್ಯಕ್ಷ ವಿ.ವಿ. ಮಂಗಳವಾಡಕರ್ ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆ ಉಪಾಧ್ಯಕ್ಷ ಡಾ. ಅರವಿಂದ ಯೆರಿ, ಜಂಟಿ ಕಾರ್ಯದರ್ಶಿ ರಾಜು ಹೆಗಡಿ, ಶ್ರೀನಿವಾಸ ಇಂದ್ರಾಳಿ ಇತರರು ಈ ಸಂದರ್ಭ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>