<p><strong>ಟ್ರಿಪೋಲಿ (ಪಿಟಿಐ):</strong> ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಪರ ಪಡೆಯು ಲಿಬಿಯಾದ ಪೂರ್ವ ಪ್ರಾಂತ್ಯದ ಅಜ್ದಬಿಯಾ ಪಟ್ಟಣದತ್ತ ಮುನ್ನುಗ್ಗುತ್ತಿದೆ. ಗಡಾಫಿ ವಿರೋಧಿ ಗುಂಪಿನ ಹಿಡಿತದಲ್ಲಿರುವ ಬೆಂಘಾಜಿ ಪಟ್ಟಣವನ್ನು ವಶಪಡಿಸಿಕೊಳ್ಳಲು ಅಜ್ದಬಿಯಾ ಹೆಬ್ಬಾಗಿಲಾಗಿದೆ.<br /> <br /> ತೈಲ ನಿಕ್ಷೇಪದ ಪಟ್ಟಣವಾದ ಬ್ರೆಗಾದಿಂದ ವಿರೋಧಿಗಳನ್ನು ಹಿಮ್ಮೆಟಿಸಿದ ಗಡಾಫಿ ಪಡೆಯು ಬ್ರೆಗಾ ಮತ್ತು ಬೆಂಘಾಜಿ ಮಧ್ಯೆ ಇರುವ ಅಜ್ದಬಿಯಾವನ್ನು ವಶ ಪಡಿಸಿಕೊಳ್ಳಲು ಮುನ್ನಡೆದಿದೆ.<br /> <br /> ಈ ಮಧ್ಯೆ ಪಶ್ಚಿಮ ಭಾಗದಲ್ಲಿರುವ ಮಿಸುರತ ಪಟ್ಟಣದಲ್ಲಿ ನಡೆದ ಘರ್ಷಣೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಈ ಪಟ್ಟಣವನ್ನು ಸರ್ಕಾರಿ ಪಡೆಗಳು ಸುತ್ತುವರೆದಿವೆ. <br /> ಗಡಾಫಿ ಪಡೆ ಮತ್ತು ವಿರೋಧಿ ಗುಂಪುಗಳ ನಡುವೆ ನಡೆಯುತ್ತಿರುವ ಕದನದಿಂದ ದೇಶದಲ್ಲಿ ಆಹಾರ ಪದಾರ್ಥಗಳು, ನೀರು, ಔಷಧಗಳ ಕೊರತೆ ಉಂಟಾಗಿದೆ. ಆಸ್ಪತ್ರೆಗಳು ಗಾಯಗೊಂಡವರಿಂದ ತುಂಬಿಹೋಗಿದೆ ಎಂದು ಅಲ್ ಜಜೀರ ವಾಹಿನಿ ವರದಿ ಮಾಡಿದೆ.<br /> <br /> ಏತನ್ಮಧ್ಯೆ ಲಿಬಿಯಾದಲ್ಲಿ ಶಾಂತಿ ಕಾಪಾಡುವಂತೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚಾಗುತ್ತಿದ್ದು, ಘರ್ಷಣೆಗಳು ಕ್ಷೀಣಿಸಿವೆ ಎಂದು ವಿರೋಧಿ ಗುಂಪಿನ ವಕ್ತಾರರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೊಬ್ ಜುಮಾ ಅವರು ಈ ವಾರಾಂತ್ಯದಲ್ಲಿ ಲಿಬಿಯಾಗೆ ತೆರಳಲಿದ್ದು, ಅವರು ಗಡಾಫಿಯನ್ನು ಟ್ರಿಪೋಲಿಯಲ್ಲೂ, ವಿರೋಧ ಪಡೆಯ ಮುಖಂಡರನ್ನು ಬೆಂಘಾಜಿಯಲ್ಲೂ ಭೇಟಿ ಮಾಡಲಿದ್ದಾರೆ.<br /> <br /> <strong>ಪ್ರತಿಭಟನಾಕಾರರ ವಿರುದ್ಧ ತಿರುಗಿಬಿದ್ದ ಸೇನೆ: ಇಬ್ಬರ ಹತ್ಯೆ<br /> </strong>ಕೈರೊ (ಪಿಟಿಐ): ಹೋಸ್ನಿ ಮುಬಾರಕ್ ಪದಚ್ಯುತಿ ವೇಳೆ ಪ್ರತಿಭಟನಾಕಾರರ ಪರ ನಿಂತಿದ್ದ ಈಜಿಪ್ಟ್ ಸೇನಾಪಡೆ ದಿಢೀರನೆ ಅವರ ವಿರುದ್ಧ ತಿರುಗಿಬಿದ್ದಿದ್ದು, ಶನಿವಾರ ತಹ್ರೀರ್ ಚೌಕವನ್ನು ಸುತ್ತುವರಿದು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸತ್ತಿದ್ದಾರೆ.<br /> <br /> ಹೋಸ್ನಿ ಮುಬಾರಕ್ ಅವರನ್ನು ಕಾನೂನು ವಿಚಾರಣೆಗೆ ಒಳಪಡಿಸುವ ಜತೆಗೆ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಮೊಹಮ್ಮದ್ ಹುಸೇನ್ ತಂತಾವಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಐತಿಹಾಸಿಕ ಚೌಕದಲ್ಲಿ ಜಮಾಯಿಸಿದ್ದ ವೇಳೆ ಈ ದಾಳಿ ನಡೆಯಿತು.<br /> <br /> ಆದರೆ ಈ ದಾಳಿಯನ್ನು ತಾನು ನಡೆಸಿಲ್ಲ ಎಂದಿರುವ ಸೇನಾಪಡೆ, ಇದು ಹೋಸ್ನಿ ಮುಬಾರಕ್ ಅವರ ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ ಸಂಚು ಎಂದು ದೂಷಿಸಿದೆ.<br /> ಸೇನಾಪಡೆ ಸ್ಪಷ್ಟನೆ ನೀಡಿದ್ದರೂ ಆ ಬಗ್ಗೆ ಅನುಮಾನವಿದೆ. ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಳ್ಳದಂತೆ ಸೇನಾಪಡೆ ಹೊರಡಿಸಿರುವ ಆದೇಶ ಧಿಕ್ಕರಿಸಿ ಪ್ರತಿಭಟನಾಕಾರರ ಜತೆ ಕೈಜೋಡಿಸಿರುವ ತನ್ನ ಕೆಲವು ಅಧಿಕಾರಿಗಳನ್ನು ಸೆರೆಹಿಡಿಯುವ ಉದ್ದೇಶದಿಂದ ಸೇನಾಪಡೆಯೇ ಈ ದಾಳಿ ನಡೆಸಿರಬಹುದು ಎಂಬ ಮಾತುಗಳು ಕೇಳಿಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಟ್ರಿಪೋಲಿ (ಪಿಟಿಐ):</strong> ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಪರ ಪಡೆಯು ಲಿಬಿಯಾದ ಪೂರ್ವ ಪ್ರಾಂತ್ಯದ ಅಜ್ದಬಿಯಾ ಪಟ್ಟಣದತ್ತ ಮುನ್ನುಗ್ಗುತ್ತಿದೆ. ಗಡಾಫಿ ವಿರೋಧಿ ಗುಂಪಿನ ಹಿಡಿತದಲ್ಲಿರುವ ಬೆಂಘಾಜಿ ಪಟ್ಟಣವನ್ನು ವಶಪಡಿಸಿಕೊಳ್ಳಲು ಅಜ್ದಬಿಯಾ ಹೆಬ್ಬಾಗಿಲಾಗಿದೆ.<br /> <br /> ತೈಲ ನಿಕ್ಷೇಪದ ಪಟ್ಟಣವಾದ ಬ್ರೆಗಾದಿಂದ ವಿರೋಧಿಗಳನ್ನು ಹಿಮ್ಮೆಟಿಸಿದ ಗಡಾಫಿ ಪಡೆಯು ಬ್ರೆಗಾ ಮತ್ತು ಬೆಂಘಾಜಿ ಮಧ್ಯೆ ಇರುವ ಅಜ್ದಬಿಯಾವನ್ನು ವಶ ಪಡಿಸಿಕೊಳ್ಳಲು ಮುನ್ನಡೆದಿದೆ.<br /> <br /> ಈ ಮಧ್ಯೆ ಪಶ್ಚಿಮ ಭಾಗದಲ್ಲಿರುವ ಮಿಸುರತ ಪಟ್ಟಣದಲ್ಲಿ ನಡೆದ ಘರ್ಷಣೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಈ ಪಟ್ಟಣವನ್ನು ಸರ್ಕಾರಿ ಪಡೆಗಳು ಸುತ್ತುವರೆದಿವೆ. <br /> ಗಡಾಫಿ ಪಡೆ ಮತ್ತು ವಿರೋಧಿ ಗುಂಪುಗಳ ನಡುವೆ ನಡೆಯುತ್ತಿರುವ ಕದನದಿಂದ ದೇಶದಲ್ಲಿ ಆಹಾರ ಪದಾರ್ಥಗಳು, ನೀರು, ಔಷಧಗಳ ಕೊರತೆ ಉಂಟಾಗಿದೆ. ಆಸ್ಪತ್ರೆಗಳು ಗಾಯಗೊಂಡವರಿಂದ ತುಂಬಿಹೋಗಿದೆ ಎಂದು ಅಲ್ ಜಜೀರ ವಾಹಿನಿ ವರದಿ ಮಾಡಿದೆ.<br /> <br /> ಏತನ್ಮಧ್ಯೆ ಲಿಬಿಯಾದಲ್ಲಿ ಶಾಂತಿ ಕಾಪಾಡುವಂತೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚಾಗುತ್ತಿದ್ದು, ಘರ್ಷಣೆಗಳು ಕ್ಷೀಣಿಸಿವೆ ಎಂದು ವಿರೋಧಿ ಗುಂಪಿನ ವಕ್ತಾರರು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೊಬ್ ಜುಮಾ ಅವರು ಈ ವಾರಾಂತ್ಯದಲ್ಲಿ ಲಿಬಿಯಾಗೆ ತೆರಳಲಿದ್ದು, ಅವರು ಗಡಾಫಿಯನ್ನು ಟ್ರಿಪೋಲಿಯಲ್ಲೂ, ವಿರೋಧ ಪಡೆಯ ಮುಖಂಡರನ್ನು ಬೆಂಘಾಜಿಯಲ್ಲೂ ಭೇಟಿ ಮಾಡಲಿದ್ದಾರೆ.<br /> <br /> <strong>ಪ್ರತಿಭಟನಾಕಾರರ ವಿರುದ್ಧ ತಿರುಗಿಬಿದ್ದ ಸೇನೆ: ಇಬ್ಬರ ಹತ್ಯೆ<br /> </strong>ಕೈರೊ (ಪಿಟಿಐ): ಹೋಸ್ನಿ ಮುಬಾರಕ್ ಪದಚ್ಯುತಿ ವೇಳೆ ಪ್ರತಿಭಟನಾಕಾರರ ಪರ ನಿಂತಿದ್ದ ಈಜಿಪ್ಟ್ ಸೇನಾಪಡೆ ದಿಢೀರನೆ ಅವರ ವಿರುದ್ಧ ತಿರುಗಿಬಿದ್ದಿದ್ದು, ಶನಿವಾರ ತಹ್ರೀರ್ ಚೌಕವನ್ನು ಸುತ್ತುವರಿದು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸತ್ತಿದ್ದಾರೆ.<br /> <br /> ಹೋಸ್ನಿ ಮುಬಾರಕ್ ಅವರನ್ನು ಕಾನೂನು ವಿಚಾರಣೆಗೆ ಒಳಪಡಿಸುವ ಜತೆಗೆ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಮೊಹಮ್ಮದ್ ಹುಸೇನ್ ತಂತಾವಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಐತಿಹಾಸಿಕ ಚೌಕದಲ್ಲಿ ಜಮಾಯಿಸಿದ್ದ ವೇಳೆ ಈ ದಾಳಿ ನಡೆಯಿತು.<br /> <br /> ಆದರೆ ಈ ದಾಳಿಯನ್ನು ತಾನು ನಡೆಸಿಲ್ಲ ಎಂದಿರುವ ಸೇನಾಪಡೆ, ಇದು ಹೋಸ್ನಿ ಮುಬಾರಕ್ ಅವರ ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ ಸಂಚು ಎಂದು ದೂಷಿಸಿದೆ.<br /> ಸೇನಾಪಡೆ ಸ್ಪಷ್ಟನೆ ನೀಡಿದ್ದರೂ ಆ ಬಗ್ಗೆ ಅನುಮಾನವಿದೆ. ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಳ್ಳದಂತೆ ಸೇನಾಪಡೆ ಹೊರಡಿಸಿರುವ ಆದೇಶ ಧಿಕ್ಕರಿಸಿ ಪ್ರತಿಭಟನಾಕಾರರ ಜತೆ ಕೈಜೋಡಿಸಿರುವ ತನ್ನ ಕೆಲವು ಅಧಿಕಾರಿಗಳನ್ನು ಸೆರೆಹಿಡಿಯುವ ಉದ್ದೇಶದಿಂದ ಸೇನಾಪಡೆಯೇ ಈ ದಾಳಿ ನಡೆಸಿರಬಹುದು ಎಂಬ ಮಾತುಗಳು ಕೇಳಿಬಂದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>