<p>ನವದೆಹಲಿ(ಪಿಟಿಐ): ದೀರ್ಘಾವಧಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ ರಚಿಸಲಾಗಿರುವ ದೇಶದ ಮೊಟ್ಟ ಮೊದಲ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಐಡಿಎಫ್)ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ. <br /> <br /> ಸುಮಾರುರೂ10 ಸಾವಿರ ಕೋಟಿ ಬಂಡವಾಳ ಹೂಡಿಕೆಯೊಂದಿಗೆ `ಐಡಿಎಫ್~ ಸ್ಥಾಪಿಸಲು ನಾಲ್ಕು ಪ್ರಮುಖ ಹಣಕಾಸು ಸಂಸ್ಥೆಗಳಾದ ಬ್ಯಾಂಕ್ ಆಫ್ ಬರೋಡ (ಬಿಒಬಿ), ಐಸಿಐಸಿಐ ಬ್ಯಾಂಕ್, ಎಲ್ಐಸಿ ಮತ್ತು ಸಿಟಿ ಫೈನಾನ್ಶಿಯಲ್ ಒಪ್ಪಿಗೆ ಸೂಚಿಸಿದ್ದು, ಇಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ. <br /> <br /> ರೂ300 ಕೋಟಿ ಮೊತ್ತದ ಷೇರು ಬಂಡವಾಳ ಹೊಂದಿರುವ ದೇಶದ ಮೊದಲ `ಐಡಿಎಫ್~ ಇದಾಗಿದ್ದು, ಮುಂದಿನ ಹಣಕಾಸು ವರ್ಷದ ಆರಂಭದಿಂದ ಕಾರ್ಯಾರಂಭ ಮಾಡಲಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಅಧ್ಯಕ್ಷ ಎಂ.ಡಿ ಮಲ್ಯ ತಿಳಿಸಿದ್ದಾರೆ. <br /> <br /> `ಐಡಿಎಫ್~ನಲ್ಲಿಐಸಿಐಸಿಐ ಬ್ಯಾಂಕ್ ಶೇ 31, ಬ್ಯಾಂಕ್ ಆಫ್ ಬರೋಡ ಶೇ 30, ಸಿಟಿ ಫೈನಾನ್ಶಿಯಲ್ ಶೇ 29 ಮತ್ತು ಎಲ್ಐಸಿ ಶೇ 10ರಷ್ಟು ಪಾಲು ಹೊಂದಿವೆ. <br /> <br /> 12ನೇ ಪಂಚವಾರ್ಷಿಕ ಯೋಜನೆ ಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲು ಸರ್ಕಾರ `ಮೂಲಸೌಕರ್ಯ ಅಭಿವೃದ್ಧಿ ನಿಧಿ~ ಸ್ಥಾಪಿಸುವ ಪ್ರಸ್ತಾವ ಇಟ್ಟಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ(ಪಿಟಿಐ): ದೀರ್ಘಾವಧಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ ರಚಿಸಲಾಗಿರುವ ದೇಶದ ಮೊಟ್ಟ ಮೊದಲ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಐಡಿಎಫ್)ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ. <br /> <br /> ಸುಮಾರುರೂ10 ಸಾವಿರ ಕೋಟಿ ಬಂಡವಾಳ ಹೂಡಿಕೆಯೊಂದಿಗೆ `ಐಡಿಎಫ್~ ಸ್ಥಾಪಿಸಲು ನಾಲ್ಕು ಪ್ರಮುಖ ಹಣಕಾಸು ಸಂಸ್ಥೆಗಳಾದ ಬ್ಯಾಂಕ್ ಆಫ್ ಬರೋಡ (ಬಿಒಬಿ), ಐಸಿಐಸಿಐ ಬ್ಯಾಂಕ್, ಎಲ್ಐಸಿ ಮತ್ತು ಸಿಟಿ ಫೈನಾನ್ಶಿಯಲ್ ಒಪ್ಪಿಗೆ ಸೂಚಿಸಿದ್ದು, ಇಲ್ಲಿ ಒಪ್ಪಂದಕ್ಕೆ ಸಹಿ ಹಾಕಿವೆ. <br /> <br /> ರೂ300 ಕೋಟಿ ಮೊತ್ತದ ಷೇರು ಬಂಡವಾಳ ಹೊಂದಿರುವ ದೇಶದ ಮೊದಲ `ಐಡಿಎಫ್~ ಇದಾಗಿದ್ದು, ಮುಂದಿನ ಹಣಕಾಸು ವರ್ಷದ ಆರಂಭದಿಂದ ಕಾರ್ಯಾರಂಭ ಮಾಡಲಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಅಧ್ಯಕ್ಷ ಎಂ.ಡಿ ಮಲ್ಯ ತಿಳಿಸಿದ್ದಾರೆ. <br /> <br /> `ಐಡಿಎಫ್~ನಲ್ಲಿಐಸಿಐಸಿಐ ಬ್ಯಾಂಕ್ ಶೇ 31, ಬ್ಯಾಂಕ್ ಆಫ್ ಬರೋಡ ಶೇ 30, ಸಿಟಿ ಫೈನಾನ್ಶಿಯಲ್ ಶೇ 29 ಮತ್ತು ಎಲ್ಐಸಿ ಶೇ 10ರಷ್ಟು ಪಾಲು ಹೊಂದಿವೆ. <br /> <br /> 12ನೇ ಪಂಚವಾರ್ಷಿಕ ಯೋಜನೆ ಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲು ಸರ್ಕಾರ `ಮೂಲಸೌಕರ್ಯ ಅಭಿವೃದ್ಧಿ ನಿಧಿ~ ಸ್ಥಾಪಿಸುವ ಪ್ರಸ್ತಾವ ಇಟ್ಟಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>