<p><strong>ಬೆಂಗಳೂರು:</strong> `ನಮ್ಮ ಮೆಟ್ರೊ~ದ ತಿರುವಿನ ಹಳಿ ಮಾರ್ಗ ಮೊನಚಾಗಿರುವುದರಿಂದ ರೈಲಿನ ಗರಿಷ್ಠ ವೇಗ ಮಿತಿಯನ್ನು ಶೇ 10ರಷ್ಟು ನಿಯಂತ್ರಿಸುವಂತೆ ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತ ಡಿ.ಕೆ. ಸಿಂಗ್ ಸಲಹೆ ಮಾಡಿದ್ದಾರೆ.<br /> <br /> ತಿರುವುಗಳಲ್ಲಿ ಹೇಗೆ ರೈಲುಗಳನ್ನು ನಿಯಂತ್ರಿಸಲಾಗುತ್ತದೆ ಎಂಬುದರ ಬಗ್ಗೆ ಬಿಎಂಆರ್ಸಿಎಲ್ ಬಳಿ ಮಾಹಿತಿಯೇ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ನೇರವಾದ ಮಾರ್ಗಗಳಲ್ಲಿ ಮೆಟ್ರೊ ರೈಲು ಗಂಟೆಗೆ ಗರಿಷ್ಠ 65.7 ಕಿ.ಮೀ ಹಾಗೂ ತಿರುವುಗಳಲ್ಲಿ 45 ಕಿ.ಮೀ. ವೇಗ ಮಿತಿಯಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಈ ಮುನ್ನ ಲಖನೌನ ಸಂಶೋಧನಾ ವಿನ್ಯಾಸ ಹಾಗೂ ಗುಣಮಟ್ಟ ಸಂಸ್ಥೆಯು ನೇರ ಮಾರ್ಗಗಳಲ್ಲಿ ಗಂಟೆಗೆ ಗರಿಷ್ಠ 75 ಕಿ.ಮೀ. ಹಾಗೂ ತಿರುವುಗಳಲ್ಲಿ 45 ಕಿ.ಮೀ. ವೇಗ ಮಿತಿಯಲ್ಲಿ ಸಂಚರಿಸಲು ಅನುಮತಿ ನೀಡಿತ್ತು.<br /> <br /> ಆದರೆ, ಈ ವೇಗ ಮಿತಿ ನಿಯಂತ್ರಣ ಆರು ತಿಂಗಳ ಅವಧಿಗೆ ಮಾತ್ರ ಸೀಮಿತವಾಗಿದೆ. ಆನಂತರ ಪುನರ್ ಪರಿಶೀಲನೆ ನಡೆಸಿ ವೇಗ ಮಿತಿ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ನಮ್ಮ ಮೆಟ್ರೊ~ದ ತಿರುವಿನ ಹಳಿ ಮಾರ್ಗ ಮೊನಚಾಗಿರುವುದರಿಂದ ರೈಲಿನ ಗರಿಷ್ಠ ವೇಗ ಮಿತಿಯನ್ನು ಶೇ 10ರಷ್ಟು ನಿಯಂತ್ರಿಸುವಂತೆ ಮೆಟ್ರೊ ರೈಲ್ವೆ ಸುರಕ್ಷತಾ ಆಯುಕ್ತ ಡಿ.ಕೆ. ಸಿಂಗ್ ಸಲಹೆ ಮಾಡಿದ್ದಾರೆ.<br /> <br /> ತಿರುವುಗಳಲ್ಲಿ ಹೇಗೆ ರೈಲುಗಳನ್ನು ನಿಯಂತ್ರಿಸಲಾಗುತ್ತದೆ ಎಂಬುದರ ಬಗ್ಗೆ ಬಿಎಂಆರ್ಸಿಎಲ್ ಬಳಿ ಮಾಹಿತಿಯೇ ಇಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ನೇರವಾದ ಮಾರ್ಗಗಳಲ್ಲಿ ಮೆಟ್ರೊ ರೈಲು ಗಂಟೆಗೆ ಗರಿಷ್ಠ 65.7 ಕಿ.ಮೀ ಹಾಗೂ ತಿರುವುಗಳಲ್ಲಿ 45 ಕಿ.ಮೀ. ವೇಗ ಮಿತಿಯಲ್ಲಿ ಸಂಚರಿಸುವಂತೆ ಸೂಚಿಸಲಾಗಿದೆ. ಈ ಮುನ್ನ ಲಖನೌನ ಸಂಶೋಧನಾ ವಿನ್ಯಾಸ ಹಾಗೂ ಗುಣಮಟ್ಟ ಸಂಸ್ಥೆಯು ನೇರ ಮಾರ್ಗಗಳಲ್ಲಿ ಗಂಟೆಗೆ ಗರಿಷ್ಠ 75 ಕಿ.ಮೀ. ಹಾಗೂ ತಿರುವುಗಳಲ್ಲಿ 45 ಕಿ.ಮೀ. ವೇಗ ಮಿತಿಯಲ್ಲಿ ಸಂಚರಿಸಲು ಅನುಮತಿ ನೀಡಿತ್ತು.<br /> <br /> ಆದರೆ, ಈ ವೇಗ ಮಿತಿ ನಿಯಂತ್ರಣ ಆರು ತಿಂಗಳ ಅವಧಿಗೆ ಮಾತ್ರ ಸೀಮಿತವಾಗಿದೆ. ಆನಂತರ ಪುನರ್ ಪರಿಶೀಲನೆ ನಡೆಸಿ ವೇಗ ಮಿತಿ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಂಗ್ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>