<p>ಚಿಕ್ಕಜಾಜೂರು: ಸಮೀಪದ ಮೆದಕೆರೆ ಪುರದ ಗಣಿಯಲ್ಲಿ ಸೆಸಾಗೋವಾ ಮತ್ತು ಜಾನ್ಮೈನ್ಸ್ ಕಂಪೆನಿಗಳು ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಹಿಂದೆ ಸಂಗ್ರಹಿಸಿಟ್ಟಿದ್ದ ಅದಿರನ್ನು ಸಾಸಲು ರೈಲ್ವೆನಿಲ್ದಾಣಕ್ಕೆ ಸಾಗಿಸಲು ಆರಂಭಿಸಿವೆ. <br /> <br /> ಎರಡು ತಿಂಗಳ ಹಿಂದೆ ಕೋರ್ಟ್ ನಿರ್ದೇಶನದಂತೆ ಜಿಲ್ಲೆಯಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿತ್ತು. ಭಾನುವಾರ ರಜಾ ದಿನವಾಗಿದ್ದರೂ ಬಿಡುವಿಲ್ಲದೇ ಟ್ರಕ್ಗಳ ನಿರಂತರ ಓಡಾಟದಿಂದಾಗಿ ಸೆಸಾ ಗೋವಾ ಮತ್ತು ಜಾನ್ಮೈನ್ಸ್ ಕಂಪೆನಿಗಳು ತಲಾ ಸುಮಾರು 250 ಟ್ರಕ್ನಷ್ಟು ಅದಿರನ್ನು ಸಂಗ್ರಹಿಸಿವೆ.<br /> <br /> ಎರಡು ತಿಂಗಳಿಂದ ಅದಿರು ಸಾಗಾಣಿಕೆಯ ನಿಲುಗಡೆಯಿಂದಾಗಿ ರೈಲ್ವೆನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಸುಮಾರು ಎರಡು ಕಿ.ಮೀ. ವರೆಗಿನ ಪ್ರದೇಶದಲ್ಲಿನ ತೋಟ, ಹೊಲಗಳಲ್ಲಿನ ಪೈರು ಮತ್ತು ಗಿಡಮರಗಳು ಗಣಿ ಬಣ್ಣದಿಂದ ಹಚ್ಚಹಸಿರಿನ ಬಣ್ಣಕ್ಕೆ ತಿರುಗುತ್ತಿದ್ದವು.<br /> <br /> ಇಲ್ಲಿನ ಮೈನ್ಸ್ ಸೂಪರ್ವೈಸರ್ಗಳ ಪ್ರಕಾರ, ಸುಮಾರು 15-20 ದಿನಗಳವರೆಗೆ ಸಾಗಾಟ ಮಾಡುವಷ್ಟು ಅದಿರು ಸಂಗ್ರಹವಾಗಿದೆ. ಅದು ಮುಗಿದ ನಂತರ ಮತ್ತೆ ಸಾಗಾಟ ನಿಲುಗಡೆಯಾಗುವುದು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಜಾಜೂರು: ಸಮೀಪದ ಮೆದಕೆರೆ ಪುರದ ಗಣಿಯಲ್ಲಿ ಸೆಸಾಗೋವಾ ಮತ್ತು ಜಾನ್ಮೈನ್ಸ್ ಕಂಪೆನಿಗಳು ಸುಪ್ರೀಂಕೋರ್ಟ್ ನಿರ್ದೇಶನದಂತೆ ಈ ಹಿಂದೆ ಸಂಗ್ರಹಿಸಿಟ್ಟಿದ್ದ ಅದಿರನ್ನು ಸಾಸಲು ರೈಲ್ವೆನಿಲ್ದಾಣಕ್ಕೆ ಸಾಗಿಸಲು ಆರಂಭಿಸಿವೆ. <br /> <br /> ಎರಡು ತಿಂಗಳ ಹಿಂದೆ ಕೋರ್ಟ್ ನಿರ್ದೇಶನದಂತೆ ಜಿಲ್ಲೆಯಲ್ಲಿ ಗಣಿಗಾರಿಕೆ ನಿಲ್ಲಿಸಲಾಗಿತ್ತು. ಭಾನುವಾರ ರಜಾ ದಿನವಾಗಿದ್ದರೂ ಬಿಡುವಿಲ್ಲದೇ ಟ್ರಕ್ಗಳ ನಿರಂತರ ಓಡಾಟದಿಂದಾಗಿ ಸೆಸಾ ಗೋವಾ ಮತ್ತು ಜಾನ್ಮೈನ್ಸ್ ಕಂಪೆನಿಗಳು ತಲಾ ಸುಮಾರು 250 ಟ್ರಕ್ನಷ್ಟು ಅದಿರನ್ನು ಸಂಗ್ರಹಿಸಿವೆ.<br /> <br /> ಎರಡು ತಿಂಗಳಿಂದ ಅದಿರು ಸಾಗಾಣಿಕೆಯ ನಿಲುಗಡೆಯಿಂದಾಗಿ ರೈಲ್ವೆನಿಲ್ದಾಣ ಮತ್ತು ಅದರ ಸುತ್ತಮುತ್ತಲಿನ ಸುಮಾರು ಎರಡು ಕಿ.ಮೀ. ವರೆಗಿನ ಪ್ರದೇಶದಲ್ಲಿನ ತೋಟ, ಹೊಲಗಳಲ್ಲಿನ ಪೈರು ಮತ್ತು ಗಿಡಮರಗಳು ಗಣಿ ಬಣ್ಣದಿಂದ ಹಚ್ಚಹಸಿರಿನ ಬಣ್ಣಕ್ಕೆ ತಿರುಗುತ್ತಿದ್ದವು.<br /> <br /> ಇಲ್ಲಿನ ಮೈನ್ಸ್ ಸೂಪರ್ವೈಸರ್ಗಳ ಪ್ರಕಾರ, ಸುಮಾರು 15-20 ದಿನಗಳವರೆಗೆ ಸಾಗಾಟ ಮಾಡುವಷ್ಟು ಅದಿರು ಸಂಗ್ರಹವಾಗಿದೆ. ಅದು ಮುಗಿದ ನಂತರ ಮತ್ತೆ ಸಾಗಾಟ ನಿಲುಗಡೆಯಾಗುವುದು ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>