<p><strong>ಬೆಂಗಳೂರು:</strong> ಅಪೌಷ್ಟಿಕತೆಯಿಂದ ಬಳಲಿ ಮೃತಪಟ್ಟ ಮೇಘಲಾ ಕುಟುಂಬಕ್ಕೆ ನೀಡಿದ್ದ ಎಪಿಎಲ್ ಕಾರ್ಡ್ನ್ನು ಹಿಂಪಡೆದುಕೊಂಡು ಸರ್ಕಾರ ಕೊನೆಗೂ ಅಂತ್ಯೋದಯ ಕಾರ್ಡ್ ಒದಗಿಸಿದೆ.<br /> <br /> ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ತಾಯಿ ಮುರುಗಮ್ಮ, `ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆ ನಡೆಸಿ ಅಂತ್ಯೋದಯ ಕಾರ್ಡ್ನ್ನು ನೀಡಿದ್ದಾರೆ' ಎಂದು ತಿಳಿಸಿದರು.<br /> <br /> `ಮೃತಪಟ್ಟ ಮಗಳು ಹಿಂತಿರುಗಿ ಬರುವುದಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇನ್ನಾದರೂ ಸಮರ್ಪಕ ಶುಶ್ರೂಷೆ ದೊರೆಯಬೇಕು. ನನ್ನ ಮಗಳಿಗೆ ಬಂದ ಸ್ಥಿತಿ ಯಾವ ಮಕ್ಕಳಿಗೂ ಬರಬಾರದು. ಇದೇ ನನ್ನ ಕಳಕಳಿ' ಎಂದು ನಿಟ್ಟುಸಿರು ಬಿಟ್ಟರು.<br /> <br /> `ಇಷ್ಟು ದಿನ ಮೇಘಲಾಳ ಆರೈಕೆಯಲ್ಲಿ ತೊಡಗಿದ್ದ ಸಹೋದರಿ ರೂತ್ಳನ್ನು ಇನ್ನು ಮುಂದೆಯಾದರೂ ಶಾಲೆಗೆ ಕಳುಹಿಸುವ ಆಸೆಯಿದೆ. ಸರ್ಕಾರ ವಿಧವಾ ಪಿಂಚಣಿಯನ್ನು ಒದಗಿಸುವ ಸೌಜನ್ಯ ತೋರಿಸಿದರೆ ಈ ಬಡಜೀವಗಳು ಬದುಕಿಕೊಳ್ಳುತ್ತವೆ' ಎಂದು ಮನವಿ ಮಾಡಿದರು.<br /> <br /> ರಾಜಧಾನಿಯ ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕತೆಯಿಂದ ಬಳುತ್ತಿರುವ ಮಕ್ಕಳಿಗೆ ಸಿಗದ ಶುಶ್ರೂಷೆ, ಅಪೌಷ್ಟಿಕತೆಯಿಂದ ಬಳಲಿ ಮೃತಪಟ್ಟ ಮೇಘಲಾ ಹಾಗೂ ಕಡುಬಡತನವಿದ್ದರೂ ಆಕೆಯ ಕುಟುಂಬಕ್ಕೆ ಎಪಿಎಲ್ ಒದಗಿಸಿರುವ ಬಗ್ಗೆ `ಪ್ರಜಾವಾಣಿ' ಶನಿವಾರ ವಿಶೇಷ ವರದಿ ಪ್ರಕಟಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಪೌಷ್ಟಿಕತೆಯಿಂದ ಬಳಲಿ ಮೃತಪಟ್ಟ ಮೇಘಲಾ ಕುಟುಂಬಕ್ಕೆ ನೀಡಿದ್ದ ಎಪಿಎಲ್ ಕಾರ್ಡ್ನ್ನು ಹಿಂಪಡೆದುಕೊಂಡು ಸರ್ಕಾರ ಕೊನೆಗೂ ಅಂತ್ಯೋದಯ ಕಾರ್ಡ್ ಒದಗಿಸಿದೆ.<br /> <br /> ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ತಾಯಿ ಮುರುಗಮ್ಮ, `ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮನೆಗೆ ಬಂದು ಪರಿಶೀಲನೆ ನಡೆಸಿ ಅಂತ್ಯೋದಯ ಕಾರ್ಡ್ನ್ನು ನೀಡಿದ್ದಾರೆ' ಎಂದು ತಿಳಿಸಿದರು.<br /> <br /> `ಮೃತಪಟ್ಟ ಮಗಳು ಹಿಂತಿರುಗಿ ಬರುವುದಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಇನ್ನಾದರೂ ಸಮರ್ಪಕ ಶುಶ್ರೂಷೆ ದೊರೆಯಬೇಕು. ನನ್ನ ಮಗಳಿಗೆ ಬಂದ ಸ್ಥಿತಿ ಯಾವ ಮಕ್ಕಳಿಗೂ ಬರಬಾರದು. ಇದೇ ನನ್ನ ಕಳಕಳಿ' ಎಂದು ನಿಟ್ಟುಸಿರು ಬಿಟ್ಟರು.<br /> <br /> `ಇಷ್ಟು ದಿನ ಮೇಘಲಾಳ ಆರೈಕೆಯಲ್ಲಿ ತೊಡಗಿದ್ದ ಸಹೋದರಿ ರೂತ್ಳನ್ನು ಇನ್ನು ಮುಂದೆಯಾದರೂ ಶಾಲೆಗೆ ಕಳುಹಿಸುವ ಆಸೆಯಿದೆ. ಸರ್ಕಾರ ವಿಧವಾ ಪಿಂಚಣಿಯನ್ನು ಒದಗಿಸುವ ಸೌಜನ್ಯ ತೋರಿಸಿದರೆ ಈ ಬಡಜೀವಗಳು ಬದುಕಿಕೊಳ್ಳುತ್ತವೆ' ಎಂದು ಮನವಿ ಮಾಡಿದರು.<br /> <br /> ರಾಜಧಾನಿಯ ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕತೆಯಿಂದ ಬಳುತ್ತಿರುವ ಮಕ್ಕಳಿಗೆ ಸಿಗದ ಶುಶ್ರೂಷೆ, ಅಪೌಷ್ಟಿಕತೆಯಿಂದ ಬಳಲಿ ಮೃತಪಟ್ಟ ಮೇಘಲಾ ಹಾಗೂ ಕಡುಬಡತನವಿದ್ದರೂ ಆಕೆಯ ಕುಟುಂಬಕ್ಕೆ ಎಪಿಎಲ್ ಒದಗಿಸಿರುವ ಬಗ್ಗೆ `ಪ್ರಜಾವಾಣಿ' ಶನಿವಾರ ವಿಶೇಷ ವರದಿ ಪ್ರಕಟಿಸಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>