<p><strong>ದಾವಣಗೆರೆ: </strong>ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ ಅವಧಿ ಇನ್ನೊಂದು ವರ್ಷ ಇದ್ದು, ಕೊನೆಯ ಅವಧಿಯ ಮೇಯರ್ ಸ್ಥಾನ ಸುಧಾ ಜಯರುದ್ರೇಶ್ ಅಥವಾ ಜ್ಯೋತಿ ಸಿದ್ದೇಶ್ಗೆ ಹಾಗೂ ಉಪ ಮೇಯರ್ ಸ್ಥಾನ ಮಹೇಶ್ ರಾಯಚೂರ್ ಅವರಿಗೆ ಒಲಿಯುವ ಸಾಧ್ಯತೆ ದಟ್ಟವಾಗಿದೆ.<br /> <br /> ನಗರಸಭೆಯಿಂದ ಮಹಾನಗರ ಪಾಲಿಕೆಯಾದ ನಂತರ 2008ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ 22 ಸ್ಥಾನ ಪಡೆದ ಬಿಜೆಪಿ ನೂತನ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇಬ್ಬರು ಪಕ್ಷೇತರರು ಬಿಜೆಪಿ ಸೇರಿದ ಕಾರಣ ಆ ಸಂಖ್ಯೆ 24ಕ್ಕೆ ಏರಿದೆ. ಉಳಿದಂತೆ ಕಾಂಗ್ರೆಸ್ 12 ಹಾಗೂ ಜೆಡಿಎಸ್ 5 ಸದಸ್ಯರನ್ನು ಹೊಂದಿದೆ.<br /> ಸರ್ಕಾರದ ನಿಯಮದಂತೆ ಪ್ರತಿ ವರ್ಷ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡಲಾಗುತ್ತಿದ್ದು, ಈಗಾಗಲೇ 4 ಅವಧಿ ಮುಕ್ತಾಯಗೊಂಡಿದೆ.<br /> <br /> 5ನೇ ಅವಧಿಗೆ ಸಾಮಾನ್ಯ ಮಹಿಳೆ ಮೀಸಲು ನಿಗದಿಯಾಗಿದೆ. ಸಾಮಾನ್ಯ ಮಹಿಳೆಯ ಕೋಟಾದಲ್ಲಿ ಮೇಯರ್ ಸ್ಥಾನ ಅಲಂಕರಿಸಲು ಪೈಪೋಟಿ ನಡೆಯುತ್ತಿದ್ದು, 28ನೇ ವಾರ್ಡ್ ಸದಸ್ಯೆ ಸುಧಾ ಜಯ ರುದ್ರೇಶ್, 32 ವಾರ್ಡ್ ಸದಸ್ಯೆ ಜ್ಯೋತಿ ಸಿದ್ದೇಶ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಹಿಂದೆ ಕಡಿಮೆ ಅವಧಿಯ ಕಾರಣ ನೀಡಿ ಉಪ ಮೇಯರ್ ಸ್ಥಾನ ತಿರಸ್ಕರಿಸಿದ್ದ ನಾಗರತ್ನಾ ವೆಂಕಟೇಶ್ ಕಾಟೆ ಅವರೂ ಕೂಡ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಬಿಜೆಪಿ ಜಿಲ್ಲಾ ವರಿಷ್ಠದ ಚಿತ್ತ ಸುಧಾ ಹಾಗೂ ಜ್ಯೋತಿ ಅವರ ಮೇಲಿದ್ದು, ಈ ಇಬ್ಬರಿಗೂ ಆರು ತಿಂಗಳು ಹಂಚಿಕೊಡುವ ಸಾಧ್ಯತೆ ಹೆಚ್ಚಾಗಿದೆ.<br /> <br /> ಉಪ ಮೇಯರ್ ಸ್ಥಾನ ಬಿಸಿಎಂ `ಎ~ಗೆ ಮೀಸಲಾಗಿದ್ದು, ಸದಸ್ಯರಾದ ಪಿ.ಎಸ್. ಜಯಣ್ಣ, ಮಹೇಶ್ ರಾಯಚೂರು ಹಾಗೂ ಎಚ್.ಎನ್. ಗುರುನಾಥ್ ಆ ಗುಂಪಿಗೆ ಸೇರಿದ್ದಾರೆ. ಗುರುನಾಥ್ ಈಗಾಗಲೇ ಮೇಯರ್ ಸ್ಥಾನ ಅಲಂಕರಿಸಿದ್ದು, ಪಿ.ಎಸ್. ಜಯಣ್ಣ ಉಪ ಮೇಯರ್ ಸ್ಥಾನ ಅನುಭವಿಸಿದ್ದಾರೆ. ಹಾಗಾಗಿ, ಮಹೇಶ್ ರಾಯಚೂರು ಅವರಿಗೆ ಉಪ ಮೇಯರ್ ಸ್ಥಾನಕ್ಕೆ ಲಗ್ಗೆ ಹಾಕಲು ಹಾದಿ ಸುಗಮವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರ ಅವಧಿ ಇನ್ನೊಂದು ವರ್ಷ ಇದ್ದು, ಕೊನೆಯ ಅವಧಿಯ ಮೇಯರ್ ಸ್ಥಾನ ಸುಧಾ ಜಯರುದ್ರೇಶ್ ಅಥವಾ ಜ್ಯೋತಿ ಸಿದ್ದೇಶ್ಗೆ ಹಾಗೂ ಉಪ ಮೇಯರ್ ಸ್ಥಾನ ಮಹೇಶ್ ರಾಯಚೂರ್ ಅವರಿಗೆ ಒಲಿಯುವ ಸಾಧ್ಯತೆ ದಟ್ಟವಾಗಿದೆ.<br /> <br /> ನಗರಸಭೆಯಿಂದ ಮಹಾನಗರ ಪಾಲಿಕೆಯಾದ ನಂತರ 2008ರಲ್ಲಿ ನಡೆದ ಪ್ರಥಮ ಚುನಾವಣೆಯಲ್ಲಿ 22 ಸ್ಥಾನ ಪಡೆದ ಬಿಜೆಪಿ ನೂತನ ಪಾಲಿಕೆಯ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇಬ್ಬರು ಪಕ್ಷೇತರರು ಬಿಜೆಪಿ ಸೇರಿದ ಕಾರಣ ಆ ಸಂಖ್ಯೆ 24ಕ್ಕೆ ಏರಿದೆ. ಉಳಿದಂತೆ ಕಾಂಗ್ರೆಸ್ 12 ಹಾಗೂ ಜೆಡಿಎಸ್ 5 ಸದಸ್ಯರನ್ನು ಹೊಂದಿದೆ.<br /> ಸರ್ಕಾರದ ನಿಯಮದಂತೆ ಪ್ರತಿ ವರ್ಷ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿ ನಿಗದಿ ಮಾಡಲಾಗುತ್ತಿದ್ದು, ಈಗಾಗಲೇ 4 ಅವಧಿ ಮುಕ್ತಾಯಗೊಂಡಿದೆ.<br /> <br /> 5ನೇ ಅವಧಿಗೆ ಸಾಮಾನ್ಯ ಮಹಿಳೆ ಮೀಸಲು ನಿಗದಿಯಾಗಿದೆ. ಸಾಮಾನ್ಯ ಮಹಿಳೆಯ ಕೋಟಾದಲ್ಲಿ ಮೇಯರ್ ಸ್ಥಾನ ಅಲಂಕರಿಸಲು ಪೈಪೋಟಿ ನಡೆಯುತ್ತಿದ್ದು, 28ನೇ ವಾರ್ಡ್ ಸದಸ್ಯೆ ಸುಧಾ ಜಯ ರುದ್ರೇಶ್, 32 ವಾರ್ಡ್ ಸದಸ್ಯೆ ಜ್ಯೋತಿ ಸಿದ್ದೇಶ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಹಿಂದೆ ಕಡಿಮೆ ಅವಧಿಯ ಕಾರಣ ನೀಡಿ ಉಪ ಮೇಯರ್ ಸ್ಥಾನ ತಿರಸ್ಕರಿಸಿದ್ದ ನಾಗರತ್ನಾ ವೆಂಕಟೇಶ್ ಕಾಟೆ ಅವರೂ ಕೂಡ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಬಿಜೆಪಿ ಜಿಲ್ಲಾ ವರಿಷ್ಠದ ಚಿತ್ತ ಸುಧಾ ಹಾಗೂ ಜ್ಯೋತಿ ಅವರ ಮೇಲಿದ್ದು, ಈ ಇಬ್ಬರಿಗೂ ಆರು ತಿಂಗಳು ಹಂಚಿಕೊಡುವ ಸಾಧ್ಯತೆ ಹೆಚ್ಚಾಗಿದೆ.<br /> <br /> ಉಪ ಮೇಯರ್ ಸ್ಥಾನ ಬಿಸಿಎಂ `ಎ~ಗೆ ಮೀಸಲಾಗಿದ್ದು, ಸದಸ್ಯರಾದ ಪಿ.ಎಸ್. ಜಯಣ್ಣ, ಮಹೇಶ್ ರಾಯಚೂರು ಹಾಗೂ ಎಚ್.ಎನ್. ಗುರುನಾಥ್ ಆ ಗುಂಪಿಗೆ ಸೇರಿದ್ದಾರೆ. ಗುರುನಾಥ್ ಈಗಾಗಲೇ ಮೇಯರ್ ಸ್ಥಾನ ಅಲಂಕರಿಸಿದ್ದು, ಪಿ.ಎಸ್. ಜಯಣ್ಣ ಉಪ ಮೇಯರ್ ಸ್ಥಾನ ಅನುಭವಿಸಿದ್ದಾರೆ. ಹಾಗಾಗಿ, ಮಹೇಶ್ ರಾಯಚೂರು ಅವರಿಗೆ ಉಪ ಮೇಯರ್ ಸ್ಥಾನಕ್ಕೆ ಲಗ್ಗೆ ಹಾಕಲು ಹಾದಿ ಸುಗಮವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>