<p><strong>ತಿಪಟೂರು</strong>: ಅತಿಯಾದ ಇಂಟರ್ನೆಟ್ ಬಳಕೆ ಮತ್ತು ಮೊಬೈಲ್ ಚಟದಿಂದ ಯುವ ಜನತೆ ಸಹಜ ವರ್ತನೆ ಹಾಗೂ ಸಂವೇದನೆ ಕಳೆದುಕೊಳ್ಳುತ್ತಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಂ.ಸುಜಯಾ ಕಳವಳ ವ್ಯಕ್ತಪಡಿಸಿದರು.<br /> <br /> ಪಲ್ಲಾಗಟ್ಟಿ ಅಡವಪ್ಪ ಪದವಿ ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗವು ಆಯೋಜಿಸಿರುವ ‘ಯುವ ಜನತೆಯಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಚಟದ ಮನೋ ವೈಜ್ಞಾನಿಕ ಪರಿಣಾಮ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಇಂಟರ್ನೆಟ್ ಮತ್ತು ಮೊಬೈಲ್ನಲ್ಲಿ ಹೆಚ್ಚಾಗಿ ಮುಳುಗುವ ಜನರು ಮಾನವ ಸಹಜ ಸಾಮಾಜಿಕ ಸಂಬಂಧವನ್ನು ದೂರ ಮಾಡಿಕೊಳ್ಳುವ ಅಪಾಯವಿರುತ್ತದೆ ಎಂದರು.<br /> <br /> ಮನಃಶಾಸ್ತ್ರಜ್ಞೆ ಡಾ.ಪ್ರೀತಿ ಪೈ ಅವೈಜ್ಞಾನಿಕ ಮೊಬೈಲ್ ಬಳಕೆ ಅನಾಹುತದ ಬಗ್ಗೆ ಮಾತನಾಡಿದರು.<br /> <br /> ಬಿಡಿಎ ಸಹಾಯಕ ಆಯುಕ್ತ ಎಂ.ಎಸ್.ಎನ್. ಬಾಬು, ಕಲ್ಪತರು ವಿದ್ಯಾಸಂಸ್ಥೆ ಪದಾಧಿಕಾರಿಗಳಾದ ಶಿವಸ್ವಾಮಿ, ಜಗದೀಶ ಮೂರ್ತಿ, ರುದ್ರಮುನಿಸ್ವಾಮಿ, ಕೆಐಟಿ ಪ್ರಾಂಶುಪಾಲ ಡಾ. ಶಶಿಧರ್, ಅಡವಪ್ಪ ಕಾಲೇಜು ಪ್ರಾಂಶುಪಾಲ ಪ್ರೊ.ಸೈಯದ್ ಮುಸ್ತಾಕ್ ಅಹಮದ್, ಮನಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ವಿ.ಎನ್.ಬಸವರಾಜಪ್ಪ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿಪಟೂರು</strong>: ಅತಿಯಾದ ಇಂಟರ್ನೆಟ್ ಬಳಕೆ ಮತ್ತು ಮೊಬೈಲ್ ಚಟದಿಂದ ಯುವ ಜನತೆ ಸಹಜ ವರ್ತನೆ ಹಾಗೂ ಸಂವೇದನೆ ಕಳೆದುಕೊಳ್ಳುತ್ತಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲರಾದ ಪ್ರೊ.ಎಂ.ಸುಜಯಾ ಕಳವಳ ವ್ಯಕ್ತಪಡಿಸಿದರು.<br /> <br /> ಪಲ್ಲಾಗಟ್ಟಿ ಅಡವಪ್ಪ ಪದವಿ ಕಾಲೇಜಿನಲ್ಲಿ ಮನಃಶಾಸ್ತ್ರ ವಿಭಾಗವು ಆಯೋಜಿಸಿರುವ ‘ಯುವ ಜನತೆಯಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಚಟದ ಮನೋ ವೈಜ್ಞಾನಿಕ ಪರಿಣಾಮ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> ಇಂಟರ್ನೆಟ್ ಮತ್ತು ಮೊಬೈಲ್ನಲ್ಲಿ ಹೆಚ್ಚಾಗಿ ಮುಳುಗುವ ಜನರು ಮಾನವ ಸಹಜ ಸಾಮಾಜಿಕ ಸಂಬಂಧವನ್ನು ದೂರ ಮಾಡಿಕೊಳ್ಳುವ ಅಪಾಯವಿರುತ್ತದೆ ಎಂದರು.<br /> <br /> ಮನಃಶಾಸ್ತ್ರಜ್ಞೆ ಡಾ.ಪ್ರೀತಿ ಪೈ ಅವೈಜ್ಞಾನಿಕ ಮೊಬೈಲ್ ಬಳಕೆ ಅನಾಹುತದ ಬಗ್ಗೆ ಮಾತನಾಡಿದರು.<br /> <br /> ಬಿಡಿಎ ಸಹಾಯಕ ಆಯುಕ್ತ ಎಂ.ಎಸ್.ಎನ್. ಬಾಬು, ಕಲ್ಪತರು ವಿದ್ಯಾಸಂಸ್ಥೆ ಪದಾಧಿಕಾರಿಗಳಾದ ಶಿವಸ್ವಾಮಿ, ಜಗದೀಶ ಮೂರ್ತಿ, ರುದ್ರಮುನಿಸ್ವಾಮಿ, ಕೆಐಟಿ ಪ್ರಾಂಶುಪಾಲ ಡಾ. ಶಶಿಧರ್, ಅಡವಪ್ಪ ಕಾಲೇಜು ಪ್ರಾಂಶುಪಾಲ ಪ್ರೊ.ಸೈಯದ್ ಮುಸ್ತಾಕ್ ಅಹಮದ್, ಮನಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ವಿ.ಎನ್.ಬಸವರಾಜಪ್ಪ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>