<p>ಕಳೆದ ಒಂದು ದಶಕದ ಅವಧಿಯಲ್ಲಿ ಬೆಂಗಳೂರಿನ ಅಪರಾಧಗಳ ಸ್ವರೂಪ ಬದಲಾಗಿದೆ. ಒಂದು ಕೊಲೆ ನಡೆದರೆ ಇಡೀ ಬೆಂಗಳೂರು ಬೆಚ್ಚಿಬೀಳುವ ಕಾಲವೊಂದಿತ್ತು. <br /> <br /> ಬೆಂಗಳೂರಿನಲ್ಲೆಗ ತಿಂಗಳಿಗೆ ಸರಾಸರಿ 25 ಕೊಲೆಗಳು ನಡೆಯುತ್ತವೆ. ನಗರ ಸುರಕ್ಷಿತವಾಗಿರುವಂತೆ ಕಂಡರೂ ಜನ ಮನೆಗೆ ಹಿಂದಿರುವ ಮಾರ್ಗದಲ್ಲಿ ಹಗಲು ಹೊತ್ತಲ್ಲೇ `ಸುಲಿಗೆ~ಗೆ ಒಳಗಾದರೆ ಆಶ್ಚರ್ಯವಿಲ್ಲ!<br /> <br /> ತೊಂಬತ್ತರ ದಶಕದಲ್ಲಿ ರೌಡಿಗಳು ಬಳಸುತ್ತಿದ್ದ ಮಾರಕಾಸ್ತ್ರ ಮಚ್ಚು. ಆಗ ರೌಡಿಸಂ ಈ ಪರಿ ಬೆಳೆದಿರಲಿಲ್ಲ. ನಗರವೂ ಇಷ್ಟು ಬೆಳೆದಿರಲಿಲ್ಲ. ಇಸ್ಪೀಟ್ ಕ್ಲಬ್ಗಳು, ಆಯಿಲ್ ದಂಧೆ, ವೇಶ್ಯಾವಾಟಿಕೆ ಮತ್ತಿತರ ಅಕ್ರಮ ಚಟುವಟಿಕೆಗಳ ಮೇಲೆ ಹಿಡಿತ ಸಾಧಿಸಲು ಹೊಡೆದಾಡಿಕೊಳ್ಳುತ್ತಿದ್ದರು. <br /> <br /> ಹಿಂದೆ ನಗರದಲ್ಲಿ ವಿದೇಶಿ ಪ್ರಜೆಗಳ ಸಂಖ್ಯೆ ಕಡಿಮೆ ಇತ್ತು. ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬರುವವರ ಸಂಖ್ಯೆಯೂ ಕಡಿಮೆ ಇತ್ತು. ಹೊಸ ಸಹಸ್ರಮಾನ ಆರಂಭವಾದ ನಂತರ ಬೆಂಗಳೂರಿನಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು. <br /> <br /> ಸರ್ಕಾರ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಬೆಂಗಳೂರಿನ ಬೆಳವಣಿಗೆಯ ಗತಿ ಬದಲಾಯಿತು. ಅದರ ಬೆನ್ನಲ್ಲೇ ಅಪರಾಧಗಳು ಹೆಚ್ಚಿದವು.<br /> <br /> ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ಸಿಕ್ಕನಂತರ ಭೂಮಿಗೆ ಬೇಡಿಕೆ ಹೆಚ್ಚಿತು. ರೈತರಿಂದ ಭೂಮಿ ಖರೀದಿಸಿ ಮಾರಾಟ ಮಾಡುವವರು ಹೆಚ್ಚಾದರು. <br /> <br /> ಭೂಮಿ ಖರೀದಿಸಿ (ರಿಯಲ್ ಎಸ್ಟೇಟ್)ಮಾರುವವರ ಮಾಫಿಯಾ ತಲೆ ಎತ್ತಿತು. ಸಣ್ಣ ಮೊತ್ತದ ಹಣಕ್ಕೆ ಹೊಡೆದಾಡುತ್ತಿದ್ದವರು ಲಕ್ಷಾಂತರ ರೂಪಾಯಿ ಹಣ ಹರಿದು ಬರುವ ರಿಯಲ್ ಎಸ್ಟೇಟ್ ದಂಧೆಗೆ ಇಳಿದರು. <br /> <br /> ಬೆಂಗಳೂರು ಹೊರವಲಯದ ಕೃಷಿ ಭೂಮಿ ಪರಿವರ್ತನೆಯಾಯಿತು. ಈ ಪ್ರಕ್ರಿಯೆಯಲ್ಲಿ ಹತ್ತಾರು ಬೆದರಿಕೆ, ಅಪಹರಣ, ಹಲ್ಲೆ, ಕೊಲೆಗಳು ನಡೆದವು. ಅನೇಕ ಬಗೆಯ ಮೋಸ, ವಂಚನೆಯ ಅಪರಾಧಗಳು ತಲೆ ಎತ್ತಿದವು.<br /> <br /> ಐಟಿ- ಬಿಟಿ ಕಂಪೆನಿಗಳು ದಿನ 24 ತಾಸುಗಳೂ ಕಾರ್ಯ ನಿರ್ವಹಿಸಲು ಆರಂಭಿಸಿದ ಮೇಲೆ ಬೆಂಗಳೂರು ಚುರುಕಾಯಿತು. `ನಿದ್ರಿಸದ ನಗರ~ ಎಂಬ ಹೆಸರು ಪಡೆದ ಮುಂಬೈಗೆ ಬೆಂಗಳೂರು ಸವಾಲು ಹಾಕ ತೊಡಗಿತು. <br /> <br /> ಇಡೀ ಬೆಂಗಳೂರು ಒಂದೆರಡು ತಾಸು ನಿದ್ರೆಗೆ ಜಾರುತ್ತದೋ, ಇಲ್ಲವೋ ಹೇಳುವುದು ಕಷ್ಟ. ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗುವ ಜನರನ್ನು ದೋಚುವ ಪ್ರವೃತ್ತಿ ಶುರುವಾಯಿತು. ಮಧ್ಯರಾತ್ರಿ, ಬೆಳಗಿನ ಜಾವ ಸಂಚರಿಸುವ ಜನರನ್ನು ಅಡ್ಡಗಟ್ಟಿ ಸುಲಿಗೆ ಮಾಡುವಂತಹ ತಂಡಗಳು ಹುಟ್ಟಿಕೊಂಡವು.<br /> <br /> ನಗರದ ಜನಸಂಖ್ಯೆ ಹೆಚ್ಚಾದಂತೆ ಮನೆ ನಿವೇಶನಗಳಿಗೆ ಬೇಡಿಕೆ ಹೆಚ್ಚಿತು. ನಿವೇಶನ ಕೊಡಿಸುವ ಮಧ್ಯವರ್ತಿಗಳು ಹುಟ್ಟಿಕೊಂಡರು. ಅನೇಕರು ಅಮಾಯಕರನ್ನು ವಂಚಿಸಿದರು. ಒಂದು ಮೂಲದ ಪ್ರಕಾರ ಕಳವು, ದರೋಡೆ, ಸುಲಿಗೆ ಮುಂತಾದ ಪ್ರಕರಣಗಳಲ್ಲಿ ಬೆಂಗಳೂರಿನ ಜನರು ವರ್ಷಕ್ಕೆ ನೂರು ಕೋಟಿ ರೂ ಹಣ ಕಳೆದುಕೊಳ್ಳುತ್ತಾರೆ. <br /> <br /> ಬೆಂಗಳೂರಿನ ಅಪರಾಧ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಬೆಂಗಳೂರು ಬದಲಾದಂತೆ ಅಪರಾಧಗಳ ಸ್ವರೂಪವೂ ಬದಲಾವಣೆ ಕಂಡಿದೆ. ಅಪರಾಧ ಜಗತ್ತು ಬದಲಾಗಬೇಕಾದರೆ ಬೆಂಗಳೂರು ಸಹ ಬದಲಾಗಬೇಕು.<br /> <br /> <strong>ಸಿರಿವಂತರ ಸ್ವರ್ಗ <br /> <br /> <br /> </strong>ಬೆಂಗಳೂರು ದಶಕದ `ಮಾಹಿತಿ ತಂತ್ರಜ್ಞಾನ ನಗರ~ವಾಗಿ ವಿಶ್ವದ ಗಮನ ಸೆಳೆದ ನಂತರ ಜನರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಇಡೀ ಬೆಂಗಳೂರು ಬದಲಾಗಿದೆ ಎಂದಲ್ಲ. <br /> <br /> ಇಲ್ಲಿ ಸ್ಥಳೀಯ(ಕನ್ನಡಿಗರು)ರಿಗಿಂತ ಹೊರಗಿನಿಂದ ಬಂದವರೇ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸಿರಿವಂತರು, ಮೋಜಿನ ಪ್ರವೃತ್ತಿಯ ಜನರಿಗೆ ಈ ನಗರ<strong> </strong>ವಿಲಾಸಿ<strong> </strong>ನಗರದಂತೆ ಕಾಣಬಹುದು. ಬೆಂಗಳೂರು ಹಗಲಿಗಿಂತ ರಾತ್ರಿ ಅದ್ಭುತವಾಗಿ ಕಾಣುತ್ತದೆ. ಹಗಲಲ್ಲೂ ಬೆಂಗಳೂರು ವರ್ಣಮಯ.<br /> <br /> ಸಿರಿವಂತರಿಗೆ ಹಣ ಖರ್ಚು ಮಾಡಲು ಇಲ್ಲಿ ನೂರಾರು ದಾರಿಗಳಿವೆ. ಬಾರ್, ಪಬ್, ಕ್ಲಬ್, ನಾಯಿಕೊಡೆಗಳಂತೆ ತಲೆ ಎತ್ತಿವೆ. ನಗರದಲ್ಲಿ ಸುಮಾರು 2,528 ಬಾರ್ಗಳಿವೆ. ಇವುಗಳಲ್ಲಿ 48 ಬಾರ್ಗಳಲ್ಲಿ ಬಾರ್ ಗರ್ಲ್ಸ್ ಇದ್ದಾರೆ. ಹೈಟೆಕ್ ವೇಶ್ಯಾವಾಟಿಕೆಯೂ ಬೆಂಗಳೂರಿನ ಭಾಗವಾಗಿದೆ. <br /> <br /> ಯೂರೋಪಿಯನ್ ದೇಶಗಳಲ್ಲಿರುವಂತೆ ಗಂಡು,ಹೆಣ್ಣು ವಿವಾಹವಾಗದೆ ಜತೆಯಲ್ಲಿ ಬದುಕುವವರ ಸಂಖ್ಯೆಯೂ ಇಲ್ಲಿ ಹೆಚ್ಚುತ್ತಿದೆ. ಆದರೆ ಅವರ ಸಂಖ್ಯೆ ವಿರಳ. ಸಾಮಾಜಿಕವಾಗಿ ಸಾಕಷ್ಟು ಬದಲಾವಣೆಗಳಿಗೆ ಒಡ್ಡಿಕೊಂಡಿರುವ ಬೆಂಗಳೂರಿನ ಜನರು ಸದಾ ಒತ್ತಡ ಮತ್ತು ಅನಿಶ್ಚಿತತೆಗಳ ನಡುವೆ ಬದುಕುತ್ತಿದ್ದಾರೆ. <strong><br /> <br /> </strong>ಜೀವನ ಶೈಲಿ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಲ್ಲಿನ ಸಾಮಾಜಿಕ ಬದುಕು ನಿತ್ಯ ಕವಲೊಡೆಯುತ್ತ ಸಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಳೆದ ಒಂದು ದಶಕದ ಅವಧಿಯಲ್ಲಿ ಬೆಂಗಳೂರಿನ ಅಪರಾಧಗಳ ಸ್ವರೂಪ ಬದಲಾಗಿದೆ. ಒಂದು ಕೊಲೆ ನಡೆದರೆ ಇಡೀ ಬೆಂಗಳೂರು ಬೆಚ್ಚಿಬೀಳುವ ಕಾಲವೊಂದಿತ್ತು. <br /> <br /> ಬೆಂಗಳೂರಿನಲ್ಲೆಗ ತಿಂಗಳಿಗೆ ಸರಾಸರಿ 25 ಕೊಲೆಗಳು ನಡೆಯುತ್ತವೆ. ನಗರ ಸುರಕ್ಷಿತವಾಗಿರುವಂತೆ ಕಂಡರೂ ಜನ ಮನೆಗೆ ಹಿಂದಿರುವ ಮಾರ್ಗದಲ್ಲಿ ಹಗಲು ಹೊತ್ತಲ್ಲೇ `ಸುಲಿಗೆ~ಗೆ ಒಳಗಾದರೆ ಆಶ್ಚರ್ಯವಿಲ್ಲ!<br /> <br /> ತೊಂಬತ್ತರ ದಶಕದಲ್ಲಿ ರೌಡಿಗಳು ಬಳಸುತ್ತಿದ್ದ ಮಾರಕಾಸ್ತ್ರ ಮಚ್ಚು. ಆಗ ರೌಡಿಸಂ ಈ ಪರಿ ಬೆಳೆದಿರಲಿಲ್ಲ. ನಗರವೂ ಇಷ್ಟು ಬೆಳೆದಿರಲಿಲ್ಲ. ಇಸ್ಪೀಟ್ ಕ್ಲಬ್ಗಳು, ಆಯಿಲ್ ದಂಧೆ, ವೇಶ್ಯಾವಾಟಿಕೆ ಮತ್ತಿತರ ಅಕ್ರಮ ಚಟುವಟಿಕೆಗಳ ಮೇಲೆ ಹಿಡಿತ ಸಾಧಿಸಲು ಹೊಡೆದಾಡಿಕೊಳ್ಳುತ್ತಿದ್ದರು. <br /> <br /> ಹಿಂದೆ ನಗರದಲ್ಲಿ ವಿದೇಶಿ ಪ್ರಜೆಗಳ ಸಂಖ್ಯೆ ಕಡಿಮೆ ಇತ್ತು. ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬರುವವರ ಸಂಖ್ಯೆಯೂ ಕಡಿಮೆ ಇತ್ತು. ಹೊಸ ಸಹಸ್ರಮಾನ ಆರಂಭವಾದ ನಂತರ ಬೆಂಗಳೂರಿನಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು. <br /> <br /> ಸರ್ಕಾರ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ ಪರಿಣಾಮ ಬೆಂಗಳೂರಿನ ಬೆಳವಣಿಗೆಯ ಗತಿ ಬದಲಾಯಿತು. ಅದರ ಬೆನ್ನಲ್ಲೇ ಅಪರಾಧಗಳು ಹೆಚ್ಚಿದವು.<br /> <br /> ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ಸಿಕ್ಕನಂತರ ಭೂಮಿಗೆ ಬೇಡಿಕೆ ಹೆಚ್ಚಿತು. ರೈತರಿಂದ ಭೂಮಿ ಖರೀದಿಸಿ ಮಾರಾಟ ಮಾಡುವವರು ಹೆಚ್ಚಾದರು. <br /> <br /> ಭೂಮಿ ಖರೀದಿಸಿ (ರಿಯಲ್ ಎಸ್ಟೇಟ್)ಮಾರುವವರ ಮಾಫಿಯಾ ತಲೆ ಎತ್ತಿತು. ಸಣ್ಣ ಮೊತ್ತದ ಹಣಕ್ಕೆ ಹೊಡೆದಾಡುತ್ತಿದ್ದವರು ಲಕ್ಷಾಂತರ ರೂಪಾಯಿ ಹಣ ಹರಿದು ಬರುವ ರಿಯಲ್ ಎಸ್ಟೇಟ್ ದಂಧೆಗೆ ಇಳಿದರು. <br /> <br /> ಬೆಂಗಳೂರು ಹೊರವಲಯದ ಕೃಷಿ ಭೂಮಿ ಪರಿವರ್ತನೆಯಾಯಿತು. ಈ ಪ್ರಕ್ರಿಯೆಯಲ್ಲಿ ಹತ್ತಾರು ಬೆದರಿಕೆ, ಅಪಹರಣ, ಹಲ್ಲೆ, ಕೊಲೆಗಳು ನಡೆದವು. ಅನೇಕ ಬಗೆಯ ಮೋಸ, ವಂಚನೆಯ ಅಪರಾಧಗಳು ತಲೆ ಎತ್ತಿದವು.<br /> <br /> ಐಟಿ- ಬಿಟಿ ಕಂಪೆನಿಗಳು ದಿನ 24 ತಾಸುಗಳೂ ಕಾರ್ಯ ನಿರ್ವಹಿಸಲು ಆರಂಭಿಸಿದ ಮೇಲೆ ಬೆಂಗಳೂರು ಚುರುಕಾಯಿತು. `ನಿದ್ರಿಸದ ನಗರ~ ಎಂಬ ಹೆಸರು ಪಡೆದ ಮುಂಬೈಗೆ ಬೆಂಗಳೂರು ಸವಾಲು ಹಾಕ ತೊಡಗಿತು. <br /> <br /> ಇಡೀ ಬೆಂಗಳೂರು ಒಂದೆರಡು ತಾಸು ನಿದ್ರೆಗೆ ಜಾರುತ್ತದೋ, ಇಲ್ಲವೋ ಹೇಳುವುದು ಕಷ್ಟ. ರಾತ್ರಿ ಪಾಳಿ ಮುಗಿಸಿ ಮನೆಗೆ ಹೋಗುವ ಜನರನ್ನು ದೋಚುವ ಪ್ರವೃತ್ತಿ ಶುರುವಾಯಿತು. ಮಧ್ಯರಾತ್ರಿ, ಬೆಳಗಿನ ಜಾವ ಸಂಚರಿಸುವ ಜನರನ್ನು ಅಡ್ಡಗಟ್ಟಿ ಸುಲಿಗೆ ಮಾಡುವಂತಹ ತಂಡಗಳು ಹುಟ್ಟಿಕೊಂಡವು.<br /> <br /> ನಗರದ ಜನಸಂಖ್ಯೆ ಹೆಚ್ಚಾದಂತೆ ಮನೆ ನಿವೇಶನಗಳಿಗೆ ಬೇಡಿಕೆ ಹೆಚ್ಚಿತು. ನಿವೇಶನ ಕೊಡಿಸುವ ಮಧ್ಯವರ್ತಿಗಳು ಹುಟ್ಟಿಕೊಂಡರು. ಅನೇಕರು ಅಮಾಯಕರನ್ನು ವಂಚಿಸಿದರು. ಒಂದು ಮೂಲದ ಪ್ರಕಾರ ಕಳವು, ದರೋಡೆ, ಸುಲಿಗೆ ಮುಂತಾದ ಪ್ರಕರಣಗಳಲ್ಲಿ ಬೆಂಗಳೂರಿನ ಜನರು ವರ್ಷಕ್ಕೆ ನೂರು ಕೋಟಿ ರೂ ಹಣ ಕಳೆದುಕೊಳ್ಳುತ್ತಾರೆ. <br /> <br /> ಬೆಂಗಳೂರಿನ ಅಪರಾಧ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ ಬೆಂಗಳೂರು ಬದಲಾದಂತೆ ಅಪರಾಧಗಳ ಸ್ವರೂಪವೂ ಬದಲಾವಣೆ ಕಂಡಿದೆ. ಅಪರಾಧ ಜಗತ್ತು ಬದಲಾಗಬೇಕಾದರೆ ಬೆಂಗಳೂರು ಸಹ ಬದಲಾಗಬೇಕು.<br /> <br /> <strong>ಸಿರಿವಂತರ ಸ್ವರ್ಗ <br /> <br /> <br /> </strong>ಬೆಂಗಳೂರು ದಶಕದ `ಮಾಹಿತಿ ತಂತ್ರಜ್ಞಾನ ನಗರ~ವಾಗಿ ವಿಶ್ವದ ಗಮನ ಸೆಳೆದ ನಂತರ ಜನರ ಜೀವನ ಶೈಲಿ ಸಂಪೂರ್ಣ ಬದಲಾಗಿದೆ. ಇಡೀ ಬೆಂಗಳೂರು ಬದಲಾಗಿದೆ ಎಂದಲ್ಲ. <br /> <br /> ಇಲ್ಲಿ ಸ್ಥಳೀಯ(ಕನ್ನಡಿಗರು)ರಿಗಿಂತ ಹೊರಗಿನಿಂದ ಬಂದವರೇ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಸಿರಿವಂತರು, ಮೋಜಿನ ಪ್ರವೃತ್ತಿಯ ಜನರಿಗೆ ಈ ನಗರ<strong> </strong>ವಿಲಾಸಿ<strong> </strong>ನಗರದಂತೆ ಕಾಣಬಹುದು. ಬೆಂಗಳೂರು ಹಗಲಿಗಿಂತ ರಾತ್ರಿ ಅದ್ಭುತವಾಗಿ ಕಾಣುತ್ತದೆ. ಹಗಲಲ್ಲೂ ಬೆಂಗಳೂರು ವರ್ಣಮಯ.<br /> <br /> ಸಿರಿವಂತರಿಗೆ ಹಣ ಖರ್ಚು ಮಾಡಲು ಇಲ್ಲಿ ನೂರಾರು ದಾರಿಗಳಿವೆ. ಬಾರ್, ಪಬ್, ಕ್ಲಬ್, ನಾಯಿಕೊಡೆಗಳಂತೆ ತಲೆ ಎತ್ತಿವೆ. ನಗರದಲ್ಲಿ ಸುಮಾರು 2,528 ಬಾರ್ಗಳಿವೆ. ಇವುಗಳಲ್ಲಿ 48 ಬಾರ್ಗಳಲ್ಲಿ ಬಾರ್ ಗರ್ಲ್ಸ್ ಇದ್ದಾರೆ. ಹೈಟೆಕ್ ವೇಶ್ಯಾವಾಟಿಕೆಯೂ ಬೆಂಗಳೂರಿನ ಭಾಗವಾಗಿದೆ. <br /> <br /> ಯೂರೋಪಿಯನ್ ದೇಶಗಳಲ್ಲಿರುವಂತೆ ಗಂಡು,ಹೆಣ್ಣು ವಿವಾಹವಾಗದೆ ಜತೆಯಲ್ಲಿ ಬದುಕುವವರ ಸಂಖ್ಯೆಯೂ ಇಲ್ಲಿ ಹೆಚ್ಚುತ್ತಿದೆ. ಆದರೆ ಅವರ ಸಂಖ್ಯೆ ವಿರಳ. ಸಾಮಾಜಿಕವಾಗಿ ಸಾಕಷ್ಟು ಬದಲಾವಣೆಗಳಿಗೆ ಒಡ್ಡಿಕೊಂಡಿರುವ ಬೆಂಗಳೂರಿನ ಜನರು ಸದಾ ಒತ್ತಡ ಮತ್ತು ಅನಿಶ್ಚಿತತೆಗಳ ನಡುವೆ ಬದುಕುತ್ತಿದ್ದಾರೆ. <strong><br /> <br /> </strong>ಜೀವನ ಶೈಲಿ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಲ್ಲಿನ ಸಾಮಾಜಿಕ ಬದುಕು ನಿತ್ಯ ಕವಲೊಡೆಯುತ್ತ ಸಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>