<p><strong>ಹುಮನಾಬಾದ್:</strong> ಎಸ್.ಎಫ್.ಸಿ ಹಾಗೂ 13ನೆಯ ಹಣಕಾಸು ಯೋಜನೆ ಅಡಿಯಲ್ಲಿ ರೂ. 15ಲಕ್ಷ ಮೊತ್ತದಲ್ಲಿ ಖರೀದಿಸಲಾದ ವಿವಿಧ ಯಂತ್ರಗಳಿಗೆ ಶಾಸಕ ರಾಜಶೇಖರ ಪಾಟೀಲ ಸೋಮವಾರ ಪೂಜೆ ನೆರವೇರಿಸಿದರು.<br /> <br /> ವಿದ್ಯುತ್ ಬಳಕೆಗೆ ಸಂಬಂಧಪಟ್ಟ ರೂ. 7ಲಕ್ಷ ಮೊತ್ತದ ಮೊಬೈಲ್ ಲ್ಯಾಡರ್, ರೂ. 3ಲಕ್ಷ ಮೊತ್ತದ ಎರಡು ಆಟೊ ಟಿಪ್ಪರ್, ರೂ. 2ಲಕ್ಷ ಮೊತ್ತದ ವಾಟರ್ ಟ್ಯಾಂಕ್ ಸೇರಿ ಒಟ್ಟು ರೂ. 15ಲಕ್ಷ ಮೊತ್ತದ ವಿವಿಧ ಉಪಕರಣಕ್ಕೆ ಪೂಜೆ ನೆರವೇರಿಸಿ, ಮಾತನಾಡಿದರು.<br /> <br /> ಪುರಸಭೆಯಲ್ಲಿ ಕೊರತೆ ಇರುವುದು ಹಣದ್ದಲ್ಲ, ಅಭಿವೃದ್ಧಿಪರ ಚಿಂತನೆಯದು ಎಂದರು.<br /> <br /> ಪಕ್ಷ ರಾಜಕೀಯ ಚುನಾವಣೆಗೆ ಸೀಮಿತಗೊಳಿಸಬೇಕು ಈಗ ಪಕ್ಷ, ಜಾತ್ಯತೀತ ಮನೋಭಾವನೆಯಿಂದ ರೋಗರಹಿತ ನಗರವಾಗಿಸಲು ಸರ್ವ ಸದಸ್ಯರು ಓಣಿ ಸುತ್ತಾಡಿ, ಕೊರತೆ ನೀಗಿಸುವ ಮೂಲಕ ಜನತೆ ವಿಶ್ವಾಸ ಗಳಿಸಬೇಕು ಎಂದು ಸಲಹೆ ನೀಡಿದರು.<br /> <br /> ಮುಖ್ಯಾಧಿಕಾರಿ ಸತೀಶ ಗುಡ್ಡೆ ಉಪಕರಣಗಳ ವೆಚ್ಚ, ಬಳಕೆ ಮೊದಲಾದ ವಿಷಯಗಳ ಕುರಿತು ವಿವರಿಸಿದರು.<br /> <br /> ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಪಾಟೀಲ, ಮಹಾಂತಯ್ಯಾ ತೀರ್ಥ, ಮಾಜಿ ಸದಸ್ಯ ಲಕ್ಷ್ಮಣರಾವ ಬುಳ್ಳಾ, ಪುರಸಭೆ ಸದಸ್ಯರಾದ ವಿನಾಯಕ ಯಾದವ್, ಅಪ್ಸರಮಿಯ್ಯ, ಪ್ರಭುರೆಡ್ಡಿ, ತಿರುಮಲರೆಡ್ಡಿ, ಪಾರ್ವತಿ ಶೇರಿಕಾರ, ಮಹೇಶ ಎಂ.ಅಗಡಿ, ಮಕ್ದುಮ್, ಎಂ.ಡಿ.ಆಜಮ್, ಅನೀಲ ಪಲ್ಲರಿ ಮತ್ತಿತರರು ಇದ್ದರು.<br /> <br /> ನೈರ್ಮಲ್ಯ ವಿಭಾಗದ ಎಂಜಿನಿಯರ್ ವೀರಶೆಟ್ಟಿ, ಮೇಲ್ವಿಚಾರಕ ಲೋಹಿತ್, ಜಲ ವಿಭಾಗ ಮುಖ್ಯಸ್ಥ ಈಶ್ವರ ತೆಲಂಗ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್:</strong> ಎಸ್.ಎಫ್.ಸಿ ಹಾಗೂ 13ನೆಯ ಹಣಕಾಸು ಯೋಜನೆ ಅಡಿಯಲ್ಲಿ ರೂ. 15ಲಕ್ಷ ಮೊತ್ತದಲ್ಲಿ ಖರೀದಿಸಲಾದ ವಿವಿಧ ಯಂತ್ರಗಳಿಗೆ ಶಾಸಕ ರಾಜಶೇಖರ ಪಾಟೀಲ ಸೋಮವಾರ ಪೂಜೆ ನೆರವೇರಿಸಿದರು.<br /> <br /> ವಿದ್ಯುತ್ ಬಳಕೆಗೆ ಸಂಬಂಧಪಟ್ಟ ರೂ. 7ಲಕ್ಷ ಮೊತ್ತದ ಮೊಬೈಲ್ ಲ್ಯಾಡರ್, ರೂ. 3ಲಕ್ಷ ಮೊತ್ತದ ಎರಡು ಆಟೊ ಟಿಪ್ಪರ್, ರೂ. 2ಲಕ್ಷ ಮೊತ್ತದ ವಾಟರ್ ಟ್ಯಾಂಕ್ ಸೇರಿ ಒಟ್ಟು ರೂ. 15ಲಕ್ಷ ಮೊತ್ತದ ವಿವಿಧ ಉಪಕರಣಕ್ಕೆ ಪೂಜೆ ನೆರವೇರಿಸಿ, ಮಾತನಾಡಿದರು.<br /> <br /> ಪುರಸಭೆಯಲ್ಲಿ ಕೊರತೆ ಇರುವುದು ಹಣದ್ದಲ್ಲ, ಅಭಿವೃದ್ಧಿಪರ ಚಿಂತನೆಯದು ಎಂದರು.<br /> <br /> ಪಕ್ಷ ರಾಜಕೀಯ ಚುನಾವಣೆಗೆ ಸೀಮಿತಗೊಳಿಸಬೇಕು ಈಗ ಪಕ್ಷ, ಜಾತ್ಯತೀತ ಮನೋಭಾವನೆಯಿಂದ ರೋಗರಹಿತ ನಗರವಾಗಿಸಲು ಸರ್ವ ಸದಸ್ಯರು ಓಣಿ ಸುತ್ತಾಡಿ, ಕೊರತೆ ನೀಗಿಸುವ ಮೂಲಕ ಜನತೆ ವಿಶ್ವಾಸ ಗಳಿಸಬೇಕು ಎಂದು ಸಲಹೆ ನೀಡಿದರು.<br /> <br /> ಮುಖ್ಯಾಧಿಕಾರಿ ಸತೀಶ ಗುಡ್ಡೆ ಉಪಕರಣಗಳ ವೆಚ್ಚ, ಬಳಕೆ ಮೊದಲಾದ ವಿಷಯಗಳ ಕುರಿತು ವಿವರಿಸಿದರು.<br /> <br /> ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಪಾಟೀಲ, ಮಹಾಂತಯ್ಯಾ ತೀರ್ಥ, ಮಾಜಿ ಸದಸ್ಯ ಲಕ್ಷ್ಮಣರಾವ ಬುಳ್ಳಾ, ಪುರಸಭೆ ಸದಸ್ಯರಾದ ವಿನಾಯಕ ಯಾದವ್, ಅಪ್ಸರಮಿಯ್ಯ, ಪ್ರಭುರೆಡ್ಡಿ, ತಿರುಮಲರೆಡ್ಡಿ, ಪಾರ್ವತಿ ಶೇರಿಕಾರ, ಮಹೇಶ ಎಂ.ಅಗಡಿ, ಮಕ್ದುಮ್, ಎಂ.ಡಿ.ಆಜಮ್, ಅನೀಲ ಪಲ್ಲರಿ ಮತ್ತಿತರರು ಇದ್ದರು.<br /> <br /> ನೈರ್ಮಲ್ಯ ವಿಭಾಗದ ಎಂಜಿನಿಯರ್ ವೀರಶೆಟ್ಟಿ, ಮೇಲ್ವಿಚಾರಕ ಲೋಹಿತ್, ಜಲ ವಿಭಾಗ ಮುಖ್ಯಸ್ಥ ಈಶ್ವರ ತೆಲಂಗ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>