<p><strong>ನವದೆಹಲಿ (ಪಿಟಿಐ): </strong>ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಅಕ್ರಮ ಚಟುವಟಿಕೆ ನಿರ್ಬಂಧ ಕಾಯ್ದೆಗೆ (ಯುಎಪಿಎ) ತಿದ್ದುಪಡಿ ತರುವ ಸಾಧ್ಯತೆ ಇದೆ.<br /> <br /> `ಪ್ರಸ್ತುತ ಯುಎಪಿಎ ಕಾಯ್ದೆಯಲ್ಲಿ ಉದ್ದೇಶಪೂರ್ವಕ ಬದಲಾವಣೆ ಮಾಡಲಾಗುತ್ತಿದೆ. ಜಾಗತಿಕ ಹಣಕಾಸು ಕಾರ್ಯಪಡೆ ಶಿಫಾರಸಿನ ಆಧಾರದಲ್ಲಿ ಇದರಲ್ಲಿ ಕೆಲವೊಂದು ಅಂಶಗಳನ್ನು ಸೇರಿಸಲಾಗುತ್ತದೆ~ ಎಂದು ಗೃಹ ಸಚಿವಾಲಯದ ಆಂತರಿಕ ಭದ್ರತಾ ಕಾರ್ಯದರ್ಶಿ ಯು.ಕೆ.ಬನ್ಸಾಲ್ ಇಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಅಕ್ರಮ ಹಣಕಾಸು ನೆರವು ತಡೆಗೆ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ಬಲವರ್ಧನೆಯೂ ಇದರಲ್ಲಿ ಅಡಕವಾಗಿದೆ. ಅಲ್ಲದೆ ಸಿಬಿಡಿಟಿ ಮುಖ್ಯಸ್ಥರ ಮುಂದಾಳತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುತ್ತದೆ ಎಂದು ಹೇಳಿದ್ದಾರೆ.<br /> <br /> <strong>ನಿರಂತರ ದಾಳಿ ಪ್ರಯತ್ನ...</strong><br /> ಪಾಕಿಸ್ತಾನವು ಅಸಂಖ್ಯ ಮಾರ್ಗದಲ್ಲಿ ಭಾರತದ ಮೇಲೆ ದಾಳಿಗೆ ಪ್ರಯತ್ನಿಸುತ್ತಿದೆ. ದೇಶದ ಆರ್ಥಿಕ ವ್ಯವಸ್ಥೆಗಳು ಆಕ್ರಮಣಕ್ಕೆ ಈಡಾಗುವ ಭೀತಿಯಲ್ಲಿವೆ ಎಂದು ಬನ್ಸಾಲ್ ಹೇಳಿದ್ದಾರೆ.<br /> <br /> ಜಿಹಾದಿ ಮಾದರಿಯ ಭಯೋತ್ಪಾದನೆಗೆ ಮುಖ್ಯವಾಗಿ ಪಶ್ಚಿಮದ ನಮ್ಮ ನೆರೆ ರಾಷ್ಟ್ರವು ನೆರವು ನೀಡುತ್ತಿದೆ. ಎಲ್ಲ ರೀತಿಯಲ್ಲೂ ಭಾರತದ ಮೇಲೆ ಯುದ್ಧ ಸಾರುವುದೇ ಈ ದೇಶದ ನೀತಿಯಾಗಿದೆ ಎಂದು `ಭಾರತದ ಮೂಲಸೌಕರ್ಯ ಹಾಗೂ ಆರ್ಥಿಕತೆಗೆ ಭಯೋತ್ಪಾದನೆ ತಂದೊಡ್ಡಿರುವ ಸವಾಲುಗಳು~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಆತಂಕ ವ್ಯಕ್ತಪಡಿಸಿದರು.<br /> <br /> <strong>ತರಬೇತಿಗೆ ನಿವೃತ್ತ ಸೇನಾ ಸಿಬ್ಬಂದಿ </strong><br /> ನಕ್ಸಲೀಯರ ದಾಳಿ ನಿಯಂತ್ರಣಕ್ಕೆ ಸಿಆರ್ಪಿಎಫ್ ಹಾಗೂ ಬಿಎಸ್ಎಫ್ನಂಥ ಅರೆಸೇನಾ ಪಡೆಗಳಿಗೆ ತರಬೇತಿ ನೀಡಲು ನಿವೃತ್ತ ಸೇನಾ ಸಿಬ್ಬಂದಿಯನ್ನು ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಬನ್ಸಾಲ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಅಕ್ರಮ ಚಟುವಟಿಕೆ ನಿರ್ಬಂಧ ಕಾಯ್ದೆಗೆ (ಯುಎಪಿಎ) ತಿದ್ದುಪಡಿ ತರುವ ಸಾಧ್ಯತೆ ಇದೆ.<br /> <br /> `ಪ್ರಸ್ತುತ ಯುಎಪಿಎ ಕಾಯ್ದೆಯಲ್ಲಿ ಉದ್ದೇಶಪೂರ್ವಕ ಬದಲಾವಣೆ ಮಾಡಲಾಗುತ್ತಿದೆ. ಜಾಗತಿಕ ಹಣಕಾಸು ಕಾರ್ಯಪಡೆ ಶಿಫಾರಸಿನ ಆಧಾರದಲ್ಲಿ ಇದರಲ್ಲಿ ಕೆಲವೊಂದು ಅಂಶಗಳನ್ನು ಸೇರಿಸಲಾಗುತ್ತದೆ~ ಎಂದು ಗೃಹ ಸಚಿವಾಲಯದ ಆಂತರಿಕ ಭದ್ರತಾ ಕಾರ್ಯದರ್ಶಿ ಯು.ಕೆ.ಬನ್ಸಾಲ್ ಇಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.<br /> <br /> ಅಕ್ರಮ ಹಣಕಾಸು ನೆರವು ತಡೆಗೆ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದ ಬಲವರ್ಧನೆಯೂ ಇದರಲ್ಲಿ ಅಡಕವಾಗಿದೆ. ಅಲ್ಲದೆ ಸಿಬಿಡಿಟಿ ಮುಖ್ಯಸ್ಥರ ಮುಂದಾಳತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುತ್ತದೆ ಎಂದು ಹೇಳಿದ್ದಾರೆ.<br /> <br /> <strong>ನಿರಂತರ ದಾಳಿ ಪ್ರಯತ್ನ...</strong><br /> ಪಾಕಿಸ್ತಾನವು ಅಸಂಖ್ಯ ಮಾರ್ಗದಲ್ಲಿ ಭಾರತದ ಮೇಲೆ ದಾಳಿಗೆ ಪ್ರಯತ್ನಿಸುತ್ತಿದೆ. ದೇಶದ ಆರ್ಥಿಕ ವ್ಯವಸ್ಥೆಗಳು ಆಕ್ರಮಣಕ್ಕೆ ಈಡಾಗುವ ಭೀತಿಯಲ್ಲಿವೆ ಎಂದು ಬನ್ಸಾಲ್ ಹೇಳಿದ್ದಾರೆ.<br /> <br /> ಜಿಹಾದಿ ಮಾದರಿಯ ಭಯೋತ್ಪಾದನೆಗೆ ಮುಖ್ಯವಾಗಿ ಪಶ್ಚಿಮದ ನಮ್ಮ ನೆರೆ ರಾಷ್ಟ್ರವು ನೆರವು ನೀಡುತ್ತಿದೆ. ಎಲ್ಲ ರೀತಿಯಲ್ಲೂ ಭಾರತದ ಮೇಲೆ ಯುದ್ಧ ಸಾರುವುದೇ ಈ ದೇಶದ ನೀತಿಯಾಗಿದೆ ಎಂದು `ಭಾರತದ ಮೂಲಸೌಕರ್ಯ ಹಾಗೂ ಆರ್ಥಿಕತೆಗೆ ಭಯೋತ್ಪಾದನೆ ತಂದೊಡ್ಡಿರುವ ಸವಾಲುಗಳು~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಆತಂಕ ವ್ಯಕ್ತಪಡಿಸಿದರು.<br /> <br /> <strong>ತರಬೇತಿಗೆ ನಿವೃತ್ತ ಸೇನಾ ಸಿಬ್ಬಂದಿ </strong><br /> ನಕ್ಸಲೀಯರ ದಾಳಿ ನಿಯಂತ್ರಣಕ್ಕೆ ಸಿಆರ್ಪಿಎಫ್ ಹಾಗೂ ಬಿಎಸ್ಎಫ್ನಂಥ ಅರೆಸೇನಾ ಪಡೆಗಳಿಗೆ ತರಬೇತಿ ನೀಡಲು ನಿವೃತ್ತ ಸೇನಾ ಸಿಬ್ಬಂದಿಯನ್ನು ಬಳಸಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎಂದು ಬನ್ಸಾಲ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>