<p><strong>ಕೊಳ್ಳೇಗಾಲ: </strong>ಕಾನೂನು ಪಾಲನೆ ಹೊಣೆ ಹೊತ್ತಿರುವ ಪೊಲೀಸ್, ಯುವತಿ ಅಪಹರಣಕ್ಕೆ ಯತ್ನಿಸಿ ಬಂಧನಕ್ಕೆ ಒಳಗಾದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಪಟ್ಟಣ ಠಾಣೆಯ ಪೇದೆ ಹಮೀದ್ ಬಂಧಿತ ವ್ಯಕ್ತಿ. <br /> <br /> ಇಲ್ಲಿನ ಮಾಜಿ ಪುರಸಭಾ ಸದಸ್ಯ ರಾಜು ಎಂಬುವರ ಪುತ್ರಿ ತುಳಸಿ ಟ್ಯೂಷನ್ಗೆ ಹೋಗುತ್ತ್ದ್ದಿದ ವೇಳೆ ಈ ಅಪಹರಣ ನಡೆದಿದೆ. ಹಮೀದ್ ಸ್ಕಾರ್ಪಿಯೋ ಕಾರ್ನಲ್ಲಿ ಆಕೆಯನ್ನು ಅಪಹರಿಸಿಕೊಂಡು ಹೋಗುವುದನ್ನು ಕಂಡ ರಾಜು ಅವರ ಸೋದರ ಪಿ. ವೆಂಕಟೇಶ್ ತಕ್ಷಣ ರಾಜುಗೆ ವಿಚಾರ ತಿಳಿಸಿದರು. <br /> <br /> ಯುವತಿಯನ್ನು ಅಪಹರಿಸಿ ಕರೆದೊಯ್ಯುತ್ತಿದ್ದ ವಾಹನವನ್ನು ಈ ಇಬ್ಬರೂ ಬೆನ್ನಟ್ಟಿ ತಡೆದು ನಿಲ್ಲಿಸಿದರು. ಬಳಿಕ ಆರೋಪಿಯನ್ನು ಹಿಡಿದು ಪಟ್ಟಣ ಠಾಣೆಗೆ ಒಪ್ಪಿಸಿದರು. <br /> <br /> ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ್ ಹಾಗೂ ಡಿವೈಎಸ್ಪಿ ಮಹಾದೇವಯ್ಯ ಪಟ್ಟಣ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಯುವತಿ ತಂದೆ ರಾಜು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ: </strong>ಕಾನೂನು ಪಾಲನೆ ಹೊಣೆ ಹೊತ್ತಿರುವ ಪೊಲೀಸ್, ಯುವತಿ ಅಪಹರಣಕ್ಕೆ ಯತ್ನಿಸಿ ಬಂಧನಕ್ಕೆ ಒಳಗಾದ ಘಟನೆ ಪಟ್ಟಣದಲ್ಲಿ ಸೋಮವಾರ ನಡೆದಿದೆ. ಪಟ್ಟಣ ಠಾಣೆಯ ಪೇದೆ ಹಮೀದ್ ಬಂಧಿತ ವ್ಯಕ್ತಿ. <br /> <br /> ಇಲ್ಲಿನ ಮಾಜಿ ಪುರಸಭಾ ಸದಸ್ಯ ರಾಜು ಎಂಬುವರ ಪುತ್ರಿ ತುಳಸಿ ಟ್ಯೂಷನ್ಗೆ ಹೋಗುತ್ತ್ದ್ದಿದ ವೇಳೆ ಈ ಅಪಹರಣ ನಡೆದಿದೆ. ಹಮೀದ್ ಸ್ಕಾರ್ಪಿಯೋ ಕಾರ್ನಲ್ಲಿ ಆಕೆಯನ್ನು ಅಪಹರಿಸಿಕೊಂಡು ಹೋಗುವುದನ್ನು ಕಂಡ ರಾಜು ಅವರ ಸೋದರ ಪಿ. ವೆಂಕಟೇಶ್ ತಕ್ಷಣ ರಾಜುಗೆ ವಿಚಾರ ತಿಳಿಸಿದರು. <br /> <br /> ಯುವತಿಯನ್ನು ಅಪಹರಿಸಿ ಕರೆದೊಯ್ಯುತ್ತಿದ್ದ ವಾಹನವನ್ನು ಈ ಇಬ್ಬರೂ ಬೆನ್ನಟ್ಟಿ ತಡೆದು ನಿಲ್ಲಿಸಿದರು. ಬಳಿಕ ಆರೋಪಿಯನ್ನು ಹಿಡಿದು ಪಟ್ಟಣ ಠಾಣೆಗೆ ಒಪ್ಪಿಸಿದರು. <br /> <br /> ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಶೇಖರ್ ಹಾಗೂ ಡಿವೈಎಸ್ಪಿ ಮಹಾದೇವಯ್ಯ ಪಟ್ಟಣ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಯುವತಿ ತಂದೆ ರಾಜು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>