<p>ತಾಲೀಮು ನಡೆಸದೆ ನೃತ್ಯ ಪ್ರದರ್ಶನ ನೀಡಿದರೆ ಹೇಗಿರುತ್ತದೆ ಎನ್ನುವುದಕ್ಕೆ ಕಳೆದ ಶುಕ್ರವಾರ ಎ.ಡಿ.ಎ ರಂಗಮಂದಿರದಲ್ಲಿ ನಡೆದ ನೃತ್ಯಸಂಜೆ ಒಂದು ಉತ್ತಮ ಉದಾಹರಣೆ. <br /> <br /> ವೇದಿಕೆಯಲ್ಲಿ ನಿಂತ ವಿದ್ಯಾರ್ಥಿಗಳು ಅತ್ತಿತ್ತ, ಸುತ್ತಮುತ್ತ ನೋಡುತ್ತ `ಹೇಗೆಹೇಗೋ~ ನರ್ತಿಸಿದರೆ, ಗಾಯಕ ಮತ್ತು ನಟ್ಟುವಾಂಗದವರು ವೇದಿಕೆಯಲ್ಲೇ ರಿಹರ್ಸಲ್ ನಡೆಸಿದರು. ಒಟ್ಟಿನಲ್ಲಿ ನೃತ್ಯ ಸಂಜೆ ಗೊಂದಲಮಯ ಸಂಜೆಯಾಗಿ ಕಳೆಯಿತು.<br /> <br /> ಮೊದಲ ಬಾರಿಗೆ ವೇದಿಕೆ ಏರುವ ವಿದ್ಯಾರ್ಥಿಗಳಿಗೆ ಎಷ್ಟೇ ತಾಲೀಮು ನೀಡಿ, `ಈ ಸೈಡ್ವಿಂಗ್ನಿಂದ ಬಂದು, ಇಂತಹ ನಿರ್ದಿಷ್ಟ ಸ್ಥಳದಲ್ಲಿ ನಿಂತು, ಇದೇ ರೀತಿ ನರ್ತಿಸಿ, ಆ ಸೈಡ್ವಿಂಗ್ನಿಂದ ನಿರ್ಗಮಿಸಿ~ ಎಂದು ಹತ್ತಾರು ಬಾರಿ ಹೇಳಿದರೂ ತಪ್ಪು ಮಾಡುವುದು ಸಹಜ. ಅದು ಕ್ಷಮ್ಯ. <br /> <br /> ಹಾಗೆಂದು ಪ್ರತಿಯೊಂದು ನೃತ್ಯದಲ್ಲೂ ತಪ್ಪುಗಳಾಗಬಾರದಲ್ಲವೆ? ಅಂತಹ ಹೆಚ್ಚಿನ ರಿಹರ್ಸಲ್ ದೊರೆತ ಯಾವ ಲಕ್ಷಣವೂ ಅಲ್ಲಿ ಕಂಡು ಬರಲಿಲ್ಲ. ಗುರುವೂ ಅಂದು ನರ್ತಿಸಿದ್ದು ಒಂದು ಕಾರಣ ಇರಬಹುದು. <br /> <br /> ಮೊದಲಿನ ಕೌತ್ವಂನಿಂದಲೇ ವಿಘ್ನಗಳು ಆರಂಭವಾದವು. ಗಾಯಕ, ನಟ ಕಾರ್ತಿಕ್ ಹೆಬ್ಬಾರ್ `ಹೆಜ್ಜೆ ತಪ್ಪಿ~ ತಡವರಿಸಿದರು. ಆರಂಭದಲ್ಲಿ ವೇದಿಕೆಗೆ ಬಂದ ಇಬ್ಬರು ಪುಟಾಣಿಗಳು `ಓ ಈ ಲೈನಿಗಲ್ಲ... ಮುಂದಿನದ್ದಕ್ಕೆ ನಮ್ಮ ಎಂಟ್ರಿ~ ಎಂದು ಪುಸಕ್ಕನೆ ಒಳಗೋಡಿದರು. ಇಂತಹ ಎಡವಟ್ಟುಗಳು ಹಲವು ಬಾರಿ ಪುನರಾವರ್ತನೆಗೊಂಡವು. <br /> <br /> ಪುಷ್ಪಾಂಜಲಿ, ಗಣೇಶ ಕೌತ್ವಂ, ತಿಶ್ರ ಅಲರಿಪು, ಯಾರೇ ರಂಗನ ಕರೆಯ ಬಂದವರು, ಸುಬ್ರಹ್ಮಣ್ಯ ಕೌತ್ವಂ, ಕೃಷ್ಣಾ ಬಾರೋ ರಂಗ ಬಾರೋ, ನಟೇಶ ಕೌತ್ವಂ ನೃತ್ಯಗಳನ್ನು ದಿಯಾ ನೃತ್ಯಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು.<br /> <br /> `ಪಾಪ... ಪುಟ್ಟ ಮಕ್ಕಳನ್ನೂ ಒಳಗೊಂಡ ವಿದ್ಯಾರ್ಥಿಗಳು. ಮೊದಲ ಬಾರಿ ವೇದಿಕೆ ಏರಿದ್ದರೆ...~ ಎಂದು ಸಹನೆಯಿಂದ ಕುಳಿತಿದ್ದ ಪ್ರೇಕ್ಷಕರಿಗೆ ಸವಾಲೆಸೆಯುವಂತಿದ್ದವರು ಅಂದಿನ ಕಾರ್ಯಕ್ರಮ ನಿರೂಪಕರು. <br /> <br /> ಅವರ ನಿರೂಪಣೆಯ ಸ್ಯಾಂಪಲ್ ನೋಡಿ: `ಈ ಮಕ್ಕಳೆಲ್ಲ ಅದೆಷ್ಟು ಅದ್ಭುತವಾಗಿ ನರ್ತಿಸಿದರೆಂದರೆ ಇದನ್ನು ನೋಡಿದರೆ ಅವರ ಗುರುಗಳು, ಅವರ ಗುರುಗಳ ಗುರುಗಳು ಮತ್ತು ಅವರ ಗುರುಗಳ ಗುರುಗಳ ಗುರುಗಳು ಹೇಗೆ ನರ್ತಿಸಬಹುದು ಎಂದು ತಿಳಿಯುತ್ತದೆ....~ ಎಂದು ಅವರ ಗುರುಗಳು, ಅವರ ಗುರುಗಳ ಗುರುಗಳ ಸಾಧನೆಯನ್ನು ಪ್ರತಿಯೊಂದು ನೃತ್ಯದ ನಡುವೆ ಬಣ್ಣಿಸಿದರು. ಹಾಗೆ ನೋಡಿದರೆ ಆ ಮಕ್ಕಳ ಗುರು ಪರಂಪರೆಯವರೆಲ್ಲ ಉತ್ತಮ ಸಾಧನೆ ಮಾಡಿದ, ಒಳ್ಳೆಯ ಹೆಸರು ಮಾಡಿದ ಗೌರವಾನ್ವಿತ ಗುರುಗಳೇ. <br /> <br /> ಇದ್ದುದರಲ್ಲಿ ಸಮಾಧಾನ ತಂದಿದ್ದು ಆ ಮಕ್ಕಳ ಗುರು ರೋಹಿಣಿ ಧನಂಜಯ ಅವರ ನೃತ್ಯ. ಭರತನಾಟ್ಯ ಮತ್ತು ಸಮಕಾಲೀನ ನೃತ್ಯದಲ್ಲಿ ತರಬೇತಿ ಪಡೆದಿರುವ ರೋಹಿಣಿ ಅವರು ಪ್ರಸ್ತುತ ತಮ್ಮ ಸಹೋದರಿ ಶುಭಾಧನಂಜಯ ಅವರ ಬಳಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. <br /> <br /> ಗಂಭೀರ ನಾಟ ರಾಗ, ಮಿಶ್ರ ತ್ರಿಪುಟ ತಾಳದ ಮಲ್ಲಾರಿ ಮತ್ತು ಮಣ್ಣಿನ ಮಡಕೆಯ ಮಾಡುವ ವಿಶಿಷ್ಟ ಪೇರಿಣಿ ನೃತ್ಯ ಪ್ರದರ್ಶಿಸಿದ ರೋಹಿಣಿ ನೃತ್ತದಲ್ಲಿ ಬೆಳಗಿದರು. ಕಾರ್ಯಕ್ರಮದ ಮುಖ್ಯ ಭಾಗವಾಗಿ ಕೃಷ್ಣನ ಕುರಿತಾದ ವರ್ಣನೆ ಇರುವ ಅಠಾಣ ರಾಗ, ಆದಿ ತಾಳದ `ನೀ ನೆರೆ ನಮ್ಮಿ ನಾನುರ~ ವರ್ಣ ಪ್ರದರ್ಶಿಸಿದರು.<br /> <br /> ವರ್ಣದಲ್ಲಿ ಸಂಚಾರಿ ಭಾವಕ್ಕೆ ವಿಪುಲ ಅವಕಾಶಗಳಿದ್ದರೂ- ಕಂಸ ವಧೆ, ಪೂತನಿ ಸಂಹಾರ, ರಾಸಲೀಲೆ, ಅರ್ಜುನನಿಗೆ ಗೀತೆಯ ಉಪದೇಶ, ಮಣ್ಣು-ಬೆಣ್ಣೆ ತಿಂದ ಪ್ರಸಂಗ ಇತ್ಯಾದಿ- ಒಂದೇ ಒಂದು ಅಂಶವನ್ನೂ ವಿಸ್ತರಿಸದೇ ಇದ್ದದ್ದು ಆಶ್ಚರ್ಯ ಎನಿಸಿತು. ಸಂಚಾರಿ ಭಾವಗಳಿಗೆ ಅವಕಾಶ ನೀಡಿದ್ದರೆ ವರ್ಣ ಇನ್ನೂ ಕೊಂಚ ಆಪ್ಯಾಯಮಾನವೆನಿಸುತ್ತಿತ್ತು.<br /> <br /> ನೃತ್ಯಸಂಜೆಗೆ ರೋಹಿಣಿ ಅವರ ಗುರು, ಸಹೋದರಿ ಶುಭಾ ಧನಂಜಯ್ (ನಟುವಾಂಗ), ಲಿಂಗರಾಜು (ಮೃದಂಗ), ಎಚ್.ಎಸ್.ವೇಣುಗೋಪಾಲ್ (ಕೊಳಲು), ಅನಂತ ಸತ್ಯಮೂರ್ತಿ (ಪಿಟೀಲು) ಸಹಕಾರ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಾಲೀಮು ನಡೆಸದೆ ನೃತ್ಯ ಪ್ರದರ್ಶನ ನೀಡಿದರೆ ಹೇಗಿರುತ್ತದೆ ಎನ್ನುವುದಕ್ಕೆ ಕಳೆದ ಶುಕ್ರವಾರ ಎ.ಡಿ.ಎ ರಂಗಮಂದಿರದಲ್ಲಿ ನಡೆದ ನೃತ್ಯಸಂಜೆ ಒಂದು ಉತ್ತಮ ಉದಾಹರಣೆ. <br /> <br /> ವೇದಿಕೆಯಲ್ಲಿ ನಿಂತ ವಿದ್ಯಾರ್ಥಿಗಳು ಅತ್ತಿತ್ತ, ಸುತ್ತಮುತ್ತ ನೋಡುತ್ತ `ಹೇಗೆಹೇಗೋ~ ನರ್ತಿಸಿದರೆ, ಗಾಯಕ ಮತ್ತು ನಟ್ಟುವಾಂಗದವರು ವೇದಿಕೆಯಲ್ಲೇ ರಿಹರ್ಸಲ್ ನಡೆಸಿದರು. ಒಟ್ಟಿನಲ್ಲಿ ನೃತ್ಯ ಸಂಜೆ ಗೊಂದಲಮಯ ಸಂಜೆಯಾಗಿ ಕಳೆಯಿತು.<br /> <br /> ಮೊದಲ ಬಾರಿಗೆ ವೇದಿಕೆ ಏರುವ ವಿದ್ಯಾರ್ಥಿಗಳಿಗೆ ಎಷ್ಟೇ ತಾಲೀಮು ನೀಡಿ, `ಈ ಸೈಡ್ವಿಂಗ್ನಿಂದ ಬಂದು, ಇಂತಹ ನಿರ್ದಿಷ್ಟ ಸ್ಥಳದಲ್ಲಿ ನಿಂತು, ಇದೇ ರೀತಿ ನರ್ತಿಸಿ, ಆ ಸೈಡ್ವಿಂಗ್ನಿಂದ ನಿರ್ಗಮಿಸಿ~ ಎಂದು ಹತ್ತಾರು ಬಾರಿ ಹೇಳಿದರೂ ತಪ್ಪು ಮಾಡುವುದು ಸಹಜ. ಅದು ಕ್ಷಮ್ಯ. <br /> <br /> ಹಾಗೆಂದು ಪ್ರತಿಯೊಂದು ನೃತ್ಯದಲ್ಲೂ ತಪ್ಪುಗಳಾಗಬಾರದಲ್ಲವೆ? ಅಂತಹ ಹೆಚ್ಚಿನ ರಿಹರ್ಸಲ್ ದೊರೆತ ಯಾವ ಲಕ್ಷಣವೂ ಅಲ್ಲಿ ಕಂಡು ಬರಲಿಲ್ಲ. ಗುರುವೂ ಅಂದು ನರ್ತಿಸಿದ್ದು ಒಂದು ಕಾರಣ ಇರಬಹುದು. <br /> <br /> ಮೊದಲಿನ ಕೌತ್ವಂನಿಂದಲೇ ವಿಘ್ನಗಳು ಆರಂಭವಾದವು. ಗಾಯಕ, ನಟ ಕಾರ್ತಿಕ್ ಹೆಬ್ಬಾರ್ `ಹೆಜ್ಜೆ ತಪ್ಪಿ~ ತಡವರಿಸಿದರು. ಆರಂಭದಲ್ಲಿ ವೇದಿಕೆಗೆ ಬಂದ ಇಬ್ಬರು ಪುಟಾಣಿಗಳು `ಓ ಈ ಲೈನಿಗಲ್ಲ... ಮುಂದಿನದ್ದಕ್ಕೆ ನಮ್ಮ ಎಂಟ್ರಿ~ ಎಂದು ಪುಸಕ್ಕನೆ ಒಳಗೋಡಿದರು. ಇಂತಹ ಎಡವಟ್ಟುಗಳು ಹಲವು ಬಾರಿ ಪುನರಾವರ್ತನೆಗೊಂಡವು. <br /> <br /> ಪುಷ್ಪಾಂಜಲಿ, ಗಣೇಶ ಕೌತ್ವಂ, ತಿಶ್ರ ಅಲರಿಪು, ಯಾರೇ ರಂಗನ ಕರೆಯ ಬಂದವರು, ಸುಬ್ರಹ್ಮಣ್ಯ ಕೌತ್ವಂ, ಕೃಷ್ಣಾ ಬಾರೋ ರಂಗ ಬಾರೋ, ನಟೇಶ ಕೌತ್ವಂ ನೃತ್ಯಗಳನ್ನು ದಿಯಾ ನೃತ್ಯಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು.<br /> <br /> `ಪಾಪ... ಪುಟ್ಟ ಮಕ್ಕಳನ್ನೂ ಒಳಗೊಂಡ ವಿದ್ಯಾರ್ಥಿಗಳು. ಮೊದಲ ಬಾರಿ ವೇದಿಕೆ ಏರಿದ್ದರೆ...~ ಎಂದು ಸಹನೆಯಿಂದ ಕುಳಿತಿದ್ದ ಪ್ರೇಕ್ಷಕರಿಗೆ ಸವಾಲೆಸೆಯುವಂತಿದ್ದವರು ಅಂದಿನ ಕಾರ್ಯಕ್ರಮ ನಿರೂಪಕರು. <br /> <br /> ಅವರ ನಿರೂಪಣೆಯ ಸ್ಯಾಂಪಲ್ ನೋಡಿ: `ಈ ಮಕ್ಕಳೆಲ್ಲ ಅದೆಷ್ಟು ಅದ್ಭುತವಾಗಿ ನರ್ತಿಸಿದರೆಂದರೆ ಇದನ್ನು ನೋಡಿದರೆ ಅವರ ಗುರುಗಳು, ಅವರ ಗುರುಗಳ ಗುರುಗಳು ಮತ್ತು ಅವರ ಗುರುಗಳ ಗುರುಗಳ ಗುರುಗಳು ಹೇಗೆ ನರ್ತಿಸಬಹುದು ಎಂದು ತಿಳಿಯುತ್ತದೆ....~ ಎಂದು ಅವರ ಗುರುಗಳು, ಅವರ ಗುರುಗಳ ಗುರುಗಳ ಸಾಧನೆಯನ್ನು ಪ್ರತಿಯೊಂದು ನೃತ್ಯದ ನಡುವೆ ಬಣ್ಣಿಸಿದರು. ಹಾಗೆ ನೋಡಿದರೆ ಆ ಮಕ್ಕಳ ಗುರು ಪರಂಪರೆಯವರೆಲ್ಲ ಉತ್ತಮ ಸಾಧನೆ ಮಾಡಿದ, ಒಳ್ಳೆಯ ಹೆಸರು ಮಾಡಿದ ಗೌರವಾನ್ವಿತ ಗುರುಗಳೇ. <br /> <br /> ಇದ್ದುದರಲ್ಲಿ ಸಮಾಧಾನ ತಂದಿದ್ದು ಆ ಮಕ್ಕಳ ಗುರು ರೋಹಿಣಿ ಧನಂಜಯ ಅವರ ನೃತ್ಯ. ಭರತನಾಟ್ಯ ಮತ್ತು ಸಮಕಾಲೀನ ನೃತ್ಯದಲ್ಲಿ ತರಬೇತಿ ಪಡೆದಿರುವ ರೋಹಿಣಿ ಅವರು ಪ್ರಸ್ತುತ ತಮ್ಮ ಸಹೋದರಿ ಶುಭಾಧನಂಜಯ ಅವರ ಬಳಿ ನೃತ್ಯ ತರಬೇತಿ ಪಡೆಯುತ್ತಿದ್ದಾರೆ. <br /> <br /> ಗಂಭೀರ ನಾಟ ರಾಗ, ಮಿಶ್ರ ತ್ರಿಪುಟ ತಾಳದ ಮಲ್ಲಾರಿ ಮತ್ತು ಮಣ್ಣಿನ ಮಡಕೆಯ ಮಾಡುವ ವಿಶಿಷ್ಟ ಪೇರಿಣಿ ನೃತ್ಯ ಪ್ರದರ್ಶಿಸಿದ ರೋಹಿಣಿ ನೃತ್ತದಲ್ಲಿ ಬೆಳಗಿದರು. ಕಾರ್ಯಕ್ರಮದ ಮುಖ್ಯ ಭಾಗವಾಗಿ ಕೃಷ್ಣನ ಕುರಿತಾದ ವರ್ಣನೆ ಇರುವ ಅಠಾಣ ರಾಗ, ಆದಿ ತಾಳದ `ನೀ ನೆರೆ ನಮ್ಮಿ ನಾನುರ~ ವರ್ಣ ಪ್ರದರ್ಶಿಸಿದರು.<br /> <br /> ವರ್ಣದಲ್ಲಿ ಸಂಚಾರಿ ಭಾವಕ್ಕೆ ವಿಪುಲ ಅವಕಾಶಗಳಿದ್ದರೂ- ಕಂಸ ವಧೆ, ಪೂತನಿ ಸಂಹಾರ, ರಾಸಲೀಲೆ, ಅರ್ಜುನನಿಗೆ ಗೀತೆಯ ಉಪದೇಶ, ಮಣ್ಣು-ಬೆಣ್ಣೆ ತಿಂದ ಪ್ರಸಂಗ ಇತ್ಯಾದಿ- ಒಂದೇ ಒಂದು ಅಂಶವನ್ನೂ ವಿಸ್ತರಿಸದೇ ಇದ್ದದ್ದು ಆಶ್ಚರ್ಯ ಎನಿಸಿತು. ಸಂಚಾರಿ ಭಾವಗಳಿಗೆ ಅವಕಾಶ ನೀಡಿದ್ದರೆ ವರ್ಣ ಇನ್ನೂ ಕೊಂಚ ಆಪ್ಯಾಯಮಾನವೆನಿಸುತ್ತಿತ್ತು.<br /> <br /> ನೃತ್ಯಸಂಜೆಗೆ ರೋಹಿಣಿ ಅವರ ಗುರು, ಸಹೋದರಿ ಶುಭಾ ಧನಂಜಯ್ (ನಟುವಾಂಗ), ಲಿಂಗರಾಜು (ಮೃದಂಗ), ಎಚ್.ಎಸ್.ವೇಣುಗೋಪಾಲ್ (ಕೊಳಲು), ಅನಂತ ಸತ್ಯಮೂರ್ತಿ (ಪಿಟೀಲು) ಸಹಕಾರ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>