<p>ರಂಗಶಂಕರ ಮತ್ತು ವಾಸ್ಪ್: ಮಂಗಳವಾರ, ಬುಧವಾರ ವಾಸ್ಪ್ ತಂಡದ ಮೂರನೇ ಕೊಡುಗೆ `ಸಂಜೆ ಹಾಡು~ (ರಚನೆ ಹಾಗೂ ನಿರ್ದೇಶನ: ರಾಜೇಂದ್ರ ಕಾರಂತ್. ಬೆಳಕು: ಮೊಹಮದ್ ಮುಸ್ತಫಾ. ಪ್ರಸಾದನ: ವಿಜಯ್ ಬೆಣಚ. ಸಂಗೀತ: ವಿಜಯ್ ಡಿ. ಜೆ. ಕಲಾವಿದರು: ರಾಜೇಂದ್ರ, ಸುನಿಲ್ ಕುಮಾರ್, ಕುಲದೀಪಕ್, ಸೌರವ್ ಲೋಕೇಶ್, ವಿನಯ್ ಶಾಸ್ತ್ರಿ, ಪ್ರಸಾದ್ ಜೈನ್). <br /> <br /> ಇದು ರಾಜೇಂದ್ರ ಕಾರಂತ್ 1989ರಲ್ಲಿ ಬರೆದ ಮೊದಲ ನಾಟಕ. 22 ವರ್ಷಗಳು ಕಳೆದರೂ ನಾಟಕದ ಕಥಾ ವಸ್ತು ಇಂದಿಗೂ ಪ್ರಸ್ತುತವಾಗಿದೆ. <br /> <br /> ಪ್ರತಿಯೊಂದೂ ವ್ಯಾಪಾರೀಕರಣ ಆಗುತ್ತಿರುವ ಇಂದಿನ ಜಗತ್ತಿನಲ್ಲಿ ಮಾನವೀಯ ಸಂಬಂಧಗಳೂ ವ್ಯಾಪಾರವಾಗುತ್ತಿವೆ. ಇಂದಿನ ಸಣ್ಣ ಕುಟುಂಬಗಳ ಪ್ರತ್ಯೇಕ ಇರುವಿಕೆಯ ಹಂಬಲದಲ್ಲಿ ಆಧುನಿಕ ತಂದೆ-ತಾಯಂದಿರು ಒಂದೊಂದೇ ಮಗುವನ್ನು ಅಪೇಕ್ಷಿಸುತ್ತಿರುವುದು ಆರ್ಥಿಕವಾಗಿ ಅನುಕೂಲಕರ. ಆದರೆ ವೃದ್ಧಾಪ್ಯದಲ್ಲಿ ಆ ಒಬ್ಬನೇ ಮಗ ಅಥವಾ ಮಗಳಿಂದ ದೂರ ಇರಬೇಕಾದ ಸ್ಥಿತಿ, ಒಂಟಿತನದ ಹಂಬಲದಿಂದ ಹಾಡುವ ಹಾಡೇ ಸಂಜೆಹಾಡು . <br /> <br /> ತನ್ನ ಮಗನಲ್ಲಿ ಕಾಣಲು ಆಗದ್ದನ್ನು ಬೇರೆಲ್ಲೋ ಹುಡುಕುವ ಸದಾಶಿವವರಾವ್ ಕೇಳುವ ಪ್ರಶ್ನೆ `ಬರೀ ರಕ್ತ ಸಂಬಂಧ ಮಾತ್ರ ಸಂಬಂಧವೇ? ಮಾನಸಿಕ ಸಂಬಂಧಗಳಿಗೆ ಬೆಲೆಯೇ ಇಲ್ಲವೇ?~. ಅದಕ್ಕೆ ಉತ್ತರ ಹುಡುಕುವ ಪ್ರಯತ್ನವೇ ಈ ನಾಟಕ. ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಸಂಜೆ 7.30. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಂಗಶಂಕರ ಮತ್ತು ವಾಸ್ಪ್: ಮಂಗಳವಾರ, ಬುಧವಾರ ವಾಸ್ಪ್ ತಂಡದ ಮೂರನೇ ಕೊಡುಗೆ `ಸಂಜೆ ಹಾಡು~ (ರಚನೆ ಹಾಗೂ ನಿರ್ದೇಶನ: ರಾಜೇಂದ್ರ ಕಾರಂತ್. ಬೆಳಕು: ಮೊಹಮದ್ ಮುಸ್ತಫಾ. ಪ್ರಸಾದನ: ವಿಜಯ್ ಬೆಣಚ. ಸಂಗೀತ: ವಿಜಯ್ ಡಿ. ಜೆ. ಕಲಾವಿದರು: ರಾಜೇಂದ್ರ, ಸುನಿಲ್ ಕುಮಾರ್, ಕುಲದೀಪಕ್, ಸೌರವ್ ಲೋಕೇಶ್, ವಿನಯ್ ಶಾಸ್ತ್ರಿ, ಪ್ರಸಾದ್ ಜೈನ್). <br /> <br /> ಇದು ರಾಜೇಂದ್ರ ಕಾರಂತ್ 1989ರಲ್ಲಿ ಬರೆದ ಮೊದಲ ನಾಟಕ. 22 ವರ್ಷಗಳು ಕಳೆದರೂ ನಾಟಕದ ಕಥಾ ವಸ್ತು ಇಂದಿಗೂ ಪ್ರಸ್ತುತವಾಗಿದೆ. <br /> <br /> ಪ್ರತಿಯೊಂದೂ ವ್ಯಾಪಾರೀಕರಣ ಆಗುತ್ತಿರುವ ಇಂದಿನ ಜಗತ್ತಿನಲ್ಲಿ ಮಾನವೀಯ ಸಂಬಂಧಗಳೂ ವ್ಯಾಪಾರವಾಗುತ್ತಿವೆ. ಇಂದಿನ ಸಣ್ಣ ಕುಟುಂಬಗಳ ಪ್ರತ್ಯೇಕ ಇರುವಿಕೆಯ ಹಂಬಲದಲ್ಲಿ ಆಧುನಿಕ ತಂದೆ-ತಾಯಂದಿರು ಒಂದೊಂದೇ ಮಗುವನ್ನು ಅಪೇಕ್ಷಿಸುತ್ತಿರುವುದು ಆರ್ಥಿಕವಾಗಿ ಅನುಕೂಲಕರ. ಆದರೆ ವೃದ್ಧಾಪ್ಯದಲ್ಲಿ ಆ ಒಬ್ಬನೇ ಮಗ ಅಥವಾ ಮಗಳಿಂದ ದೂರ ಇರಬೇಕಾದ ಸ್ಥಿತಿ, ಒಂಟಿತನದ ಹಂಬಲದಿಂದ ಹಾಡುವ ಹಾಡೇ ಸಂಜೆಹಾಡು . <br /> <br /> ತನ್ನ ಮಗನಲ್ಲಿ ಕಾಣಲು ಆಗದ್ದನ್ನು ಬೇರೆಲ್ಲೋ ಹುಡುಕುವ ಸದಾಶಿವವರಾವ್ ಕೇಳುವ ಪ್ರಶ್ನೆ `ಬರೀ ರಕ್ತ ಸಂಬಂಧ ಮಾತ್ರ ಸಂಬಂಧವೇ? ಮಾನಸಿಕ ಸಂಬಂಧಗಳಿಗೆ ಬೆಲೆಯೇ ಇಲ್ಲವೇ?~. ಅದಕ್ಕೆ ಉತ್ತರ ಹುಡುಕುವ ಪ್ರಯತ್ನವೇ ಈ ನಾಟಕ. ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಸಂಜೆ 7.30. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>