<p><strong>ಯಳಂದೂರು: `</strong>ಅಲ್ಲಲ್ಲಿ ಚದುರಿ ಬಿದ್ದ ಸುಂದರ ಕಲಾಕೃತಿಗಳು. ನಾಗರ ಕಲ್ಲಿನ ಪುಟ್ಟ ಗೋಪುರ, ವೀರಭದ್ರನನ್ನು ಹೋಲುವ ಕಲ್ಲಿನ ಕಂಬ, ನದಿಯ ತಳಭಾಗದಲ್ಲಿ ಹುದುಗಿರುವ ಅವಶೇಷ, ಹತ್ತಾರು ಮೆಟ್ಟಿಲುಗಳು ನದಿಯಲ್ಲಿ ಕೂಡಿಕೊಂಡಿರುವ ಕುರುಹುಗಳು. ರಕ್ಷಣೆಗಾಗಿ ಹಾತೊರೆಯುತ್ತಿರುವ ಸುಂದರ ಕಲಾಕೃತಿಗಳು....<br /> <br /> ಇವು ಪಟ್ಟಣದಲ್ಲಿ ಹರಿಯುವ ಸುವರ್ಣಾವತಿ ನದಿ ದಡದಲ್ಲಿ ಕಂಡುಬರುವ ಐತಿಹಾಸಿಕ ಜಪದ ಕಟ್ಟೆಯ ದುಸ್ಥಿತಿ. ಬಾಲೆಂದು ಮುನಿಗಳಿಂದ `ಎಳೆಯ ಇಂದು ಊರು~ ಎಂದು ಕರೆಯಿಸಿಕೊಂಡ ಯಳಂದೂರು ಐತಿಹಾಸಿಕ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಮಹತ್ವದ ಸ್ಥಾನ ಪಡೆದಿದೆ.<br /> <br /> ಇದಕ್ಕೆ ನಿದರ್ಶನವೆಂಬಂತೆ ಅನೇಕ ಚಾರಿತ್ರಿಕ ಕುರುಹ ಇಲ್ಲಿ ಕಾಣಬಹುದಾಗಿದೆ. ಆ ಸಾಲಿಗೆ ಸೇರುವ ಮತ್ತೊಂದು ಐತಿಹಾಸಿಕ ಸ್ಥಳವೇ ಸುವರ್ಣಾವತಿ ನದಿಯ ದಡದ ದಕ್ಷಿಣದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಅದರ ಪಕ್ಕದಲ್ಲೇ ಇತ್ತೆಂದು ಹೇಳಲಾಗುವ `ಜಪದ ಕಟ್ಟೆ~.<br /> <br /> ಯಳಂದೂರು ಜೈನ ಮುನಿಗಳ ನೆಚ್ಚಿನ ತಾಣವಾಗಿತ್ತು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಈಗಿರುವ ವರಹಾಸ್ವಾಮಿ ದೇಗುಲವೂ ಇವರ ಆವಾಸ ಸ್ಥಾನವಾಗಿತ್ತು. ಜೈನ ಮುನಿಗಳು, ಬ್ರಾಹ್ಮಣ ವಟುಗಳು ಹೊಳೆಯಲ್ಲಿ ಮಿಂದು ತದ ನಂತರ ಇಲ್ಲಿನ ಕಟ್ಟೆಯಲ್ಲಿ ಜಪ-ತಪ ಮಾಡುತ್ತಿದ್ದರು. ಹಾಗಾಗಿಯೇ ಇದಕ್ಕೆ ಈ ಹೆಸರು ಬಂತು ಎಂದು ಹೇಳಲಾಗುತ್ತದೆ.<br /> <br /> ಇದಕ್ಕೆ ನಿದರ್ಶನವೆಂಬಂತೆ ಹೊಳೆಯಲ್ಲಿ ಹೂತು ಹೋಗಿತ್ತೆಂದು ನಂಬಲಾಗಿದ್ದ ಶಿಲ್ಪ ಕಲಾ ವೈಭವವುಳ್ಳ ದೇವಸ್ಥಾನ ಅಥವಾ ಮಂಟಪದ ಕುರುಹು ಕಾಣಬಹುದು. <br /> <br /> `ನದಿಯ ಮಧ್ಯಭಾಗದಲ್ಲಿ ದೇಗುಲದ ಅವಶೇಷಗಳು ಕಾಣಸಿಗುತ್ತದೆ. ಅದರಲ್ಲಿ ವಿಶಿಷ್ಟ ಶಿಲ್ಪ ವೈಭವವನ್ನು ಹೊಂದಿರುವ ಕಲ್ಲಿನ ಕಂಬವೊಂದನ್ನು ನಾಗರಿಕರು ಪಕ್ಕದ ದೇವಸ್ಥಾನದ ಹಿಂದೆ ಇಟ್ಟಿದ್ದಾರೆ. ಅಲ್ಲದೇ ಇನ್ನೂ ಕೂಡ ಇಂತಹ ಅನೇಕ ವೈಶಿಷ್ಟ್ಯಪೂರ್ಣ ಕೆತ್ತನೆಗಳುಳ್ಳ ಹಲವಾರು ಕುರುಹುಗಳು ಹೊಳೆಯಲ್ಲೇ ಹುದುಗಿಹೋಗಿವೆ~ ಎಂಬುದು ಗೋವಿಂದರಾಜು ಅವರ ಅನಿಸಿಕೆ.<br /> <br /> ಅಮೂಲ್ಯ ಕಲಾಕೃತಿಗಳು ಸಿಕ್ಕಿರುವ ಈ ಸ್ಥಳವನ್ನು ಈ ಹಿಂದಿನ ಹಲವು ತಹಶೀಲ್ದಾರರು ಪರಿಶೀಲನೆ ನಡೆಸಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಇದನ್ನು ಇಂದಿಗೂ ಹಾಗೇ ಬಿಟ್ಟಿದ್ದು ಇದರ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ಕೆ ಮತ್ತೆ ಕತ್ತಲೆ ಹಿಡಿದಿದೆ.<br /> <br /> `ಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಶೋಧ ಕಾರ್ಯವನ್ನು ನಡೆಸಿದಲ್ಲಿ ಜಿಲ್ಲೆಯ ಇತಿಹಾಸಕ್ಕೆ ಮತ್ತಷ್ಟು ಮೆರಗು ಸಿಗಬಹುದು~ ಎಂಬುದು ಇಲ್ಲಿನ ನಾಗರಿಕರಾದ ಶ್ರೀನಿವಾಸ್, ಮಹಾದೇವ್, ಮಾದೇಶ್, ಸೇರಿದಂತೆ ಹಲವರ ಅನಿಸಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು: `</strong>ಅಲ್ಲಲ್ಲಿ ಚದುರಿ ಬಿದ್ದ ಸುಂದರ ಕಲಾಕೃತಿಗಳು. ನಾಗರ ಕಲ್ಲಿನ ಪುಟ್ಟ ಗೋಪುರ, ವೀರಭದ್ರನನ್ನು ಹೋಲುವ ಕಲ್ಲಿನ ಕಂಬ, ನದಿಯ ತಳಭಾಗದಲ್ಲಿ ಹುದುಗಿರುವ ಅವಶೇಷ, ಹತ್ತಾರು ಮೆಟ್ಟಿಲುಗಳು ನದಿಯಲ್ಲಿ ಕೂಡಿಕೊಂಡಿರುವ ಕುರುಹುಗಳು. ರಕ್ಷಣೆಗಾಗಿ ಹಾತೊರೆಯುತ್ತಿರುವ ಸುಂದರ ಕಲಾಕೃತಿಗಳು....<br /> <br /> ಇವು ಪಟ್ಟಣದಲ್ಲಿ ಹರಿಯುವ ಸುವರ್ಣಾವತಿ ನದಿ ದಡದಲ್ಲಿ ಕಂಡುಬರುವ ಐತಿಹಾಸಿಕ ಜಪದ ಕಟ್ಟೆಯ ದುಸ್ಥಿತಿ. ಬಾಲೆಂದು ಮುನಿಗಳಿಂದ `ಎಳೆಯ ಇಂದು ಊರು~ ಎಂದು ಕರೆಯಿಸಿಕೊಂಡ ಯಳಂದೂರು ಐತಿಹಾಸಿಕ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಮಹತ್ವದ ಸ್ಥಾನ ಪಡೆದಿದೆ.<br /> <br /> ಇದಕ್ಕೆ ನಿದರ್ಶನವೆಂಬಂತೆ ಅನೇಕ ಚಾರಿತ್ರಿಕ ಕುರುಹ ಇಲ್ಲಿ ಕಾಣಬಹುದಾಗಿದೆ. ಆ ಸಾಲಿಗೆ ಸೇರುವ ಮತ್ತೊಂದು ಐತಿಹಾಸಿಕ ಸ್ಥಳವೇ ಸುವರ್ಣಾವತಿ ನದಿಯ ದಡದ ದಕ್ಷಿಣದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ಅದರ ಪಕ್ಕದಲ್ಲೇ ಇತ್ತೆಂದು ಹೇಳಲಾಗುವ `ಜಪದ ಕಟ್ಟೆ~.<br /> <br /> ಯಳಂದೂರು ಜೈನ ಮುನಿಗಳ ನೆಚ್ಚಿನ ತಾಣವಾಗಿತ್ತು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಈಗಿರುವ ವರಹಾಸ್ವಾಮಿ ದೇಗುಲವೂ ಇವರ ಆವಾಸ ಸ್ಥಾನವಾಗಿತ್ತು. ಜೈನ ಮುನಿಗಳು, ಬ್ರಾಹ್ಮಣ ವಟುಗಳು ಹೊಳೆಯಲ್ಲಿ ಮಿಂದು ತದ ನಂತರ ಇಲ್ಲಿನ ಕಟ್ಟೆಯಲ್ಲಿ ಜಪ-ತಪ ಮಾಡುತ್ತಿದ್ದರು. ಹಾಗಾಗಿಯೇ ಇದಕ್ಕೆ ಈ ಹೆಸರು ಬಂತು ಎಂದು ಹೇಳಲಾಗುತ್ತದೆ.<br /> <br /> ಇದಕ್ಕೆ ನಿದರ್ಶನವೆಂಬಂತೆ ಹೊಳೆಯಲ್ಲಿ ಹೂತು ಹೋಗಿತ್ತೆಂದು ನಂಬಲಾಗಿದ್ದ ಶಿಲ್ಪ ಕಲಾ ವೈಭವವುಳ್ಳ ದೇವಸ್ಥಾನ ಅಥವಾ ಮಂಟಪದ ಕುರುಹು ಕಾಣಬಹುದು. <br /> <br /> `ನದಿಯ ಮಧ್ಯಭಾಗದಲ್ಲಿ ದೇಗುಲದ ಅವಶೇಷಗಳು ಕಾಣಸಿಗುತ್ತದೆ. ಅದರಲ್ಲಿ ವಿಶಿಷ್ಟ ಶಿಲ್ಪ ವೈಭವವನ್ನು ಹೊಂದಿರುವ ಕಲ್ಲಿನ ಕಂಬವೊಂದನ್ನು ನಾಗರಿಕರು ಪಕ್ಕದ ದೇವಸ್ಥಾನದ ಹಿಂದೆ ಇಟ್ಟಿದ್ದಾರೆ. ಅಲ್ಲದೇ ಇನ್ನೂ ಕೂಡ ಇಂತಹ ಅನೇಕ ವೈಶಿಷ್ಟ್ಯಪೂರ್ಣ ಕೆತ್ತನೆಗಳುಳ್ಳ ಹಲವಾರು ಕುರುಹುಗಳು ಹೊಳೆಯಲ್ಲೇ ಹುದುಗಿಹೋಗಿವೆ~ ಎಂಬುದು ಗೋವಿಂದರಾಜು ಅವರ ಅನಿಸಿಕೆ.<br /> <br /> ಅಮೂಲ್ಯ ಕಲಾಕೃತಿಗಳು ಸಿಕ್ಕಿರುವ ಈ ಸ್ಥಳವನ್ನು ಈ ಹಿಂದಿನ ಹಲವು ತಹಶೀಲ್ದಾರರು ಪರಿಶೀಲನೆ ನಡೆಸಿದ್ದಾರೆ. ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಇದನ್ನು ಇಂದಿಗೂ ಹಾಗೇ ಬಿಟ್ಟಿದ್ದು ಇದರ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ಕೆ ಮತ್ತೆ ಕತ್ತಲೆ ಹಿಡಿದಿದೆ.<br /> <br /> `ಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಶೋಧ ಕಾರ್ಯವನ್ನು ನಡೆಸಿದಲ್ಲಿ ಜಿಲ್ಲೆಯ ಇತಿಹಾಸಕ್ಕೆ ಮತ್ತಷ್ಟು ಮೆರಗು ಸಿಗಬಹುದು~ ಎಂಬುದು ಇಲ್ಲಿನ ನಾಗರಿಕರಾದ ಶ್ರೀನಿವಾಸ್, ಮಹಾದೇವ್, ಮಾದೇಶ್, ಸೇರಿದಂತೆ ಹಲವರ ಅನಿಸಿಕೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>