<p><strong>ಅರಾ (ಬಿಹಾರ) (ಪಿಟಿಐ): </strong>ಮೇಲ್ವರ್ಗದ ಭೂಮಾಲೀಕರ ಕಾನೂನು ಬಾಹಿರ ಖಾಸಗಿ ಪಡೆಯಾದ `ರಣವೀರ ಸೇನೆ~ಯ ಮುಖ್ಯಸ್ಥ ಬ್ರಹ್ಮೇಶ್ವರ ಸಿಂಗ್ ಅಲಿಯಾಸ್ `ಮುಖಿಯಾ ಜಿ~ ಅವರನ್ನು ಅಪರಿಚಿತ ದಾಳಿಕೋರರು ಗುಂಡಿಟ್ಟು ಕೊಂದ ಘಟನೆ ಭೋಜಪುರ ಜಿಲ್ಲೆಯ ಅರಾದಲ್ಲಿ ಶುಕ್ರವಾರ ನಡೆದಿದೆ.<br /> <br /> ಇದರಿಂದ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದ್ದು, ಐದು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರರನ್ನು ಸೇನೆಯ ಕಾರ್ಯಕರ್ತರು ಅಟ್ಟಿಸಿಕೊಂಡು ಹೋದರಲ್ಲದೆ, ಅವರೊಂದಿಗೆ ಘರ್ಷಣೆಗೆ ಇಳಿದರು.<br /> <br /> ಇದರಿಂದ ನಗರದಲ್ಲಿ ಮೊದಲು ಕರ್ಫ್ಯೂ ವಿಧಿಸಲಾಯಿತು. ಆದರೆ ಬಳಿಕ ಉನ್ನತ ಮಟ್ಟದಲ್ಲಿ ಪರಿಸ್ಥಿತಿ ಅವಲೋಕಿಸಿದ ನಂತರ ಈ ಆದೇಶವನ್ನು ಹಿಂತೆಗೆದುಕೊಳ್ಳಲಾಯಿತು. ಸಿಂಗ್ ನಿಧಾನವಾಗಿ ನಡೆದುಕೊಂಡು ಬರುತ್ತಿದ್ದಾಗ ಬಂದೂಕುಧಾರಿಗಳು ಗುಂಡಿನ ಸುರಿಮಳೆಗರೆದು, ಸ್ಥಳದಲ್ಲೇ ಅವರನ್ನು ಕೊಂದು ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಲಕ್ಷ್ಮಣಪುರದಲ್ಲಿ 1996ರ ಡಿಸೆಂಬರ್ನಲ್ಲಿ ನಡೆದ 61 ದಲಿತರ ಸಾಮೂಹಿಕ ಹತ್ಯಾಕಾಂಡ ಸೇರಿದಂತೆ, ಕೆಳ ಜಾತಿಯ ಭೂರಹಿತ ಬಡವರ ಮೇಲೆ ಎಸಗಿದ ಅನೇಕ ದೌರ್ಜನ್ಯ ಪ್ರಕರಣಗಳಲ್ಲಿ 70 ವರ್ಷದ ಸಿಂಗ್ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದರು. ಇದೇ ವರ್ಷದ ಏಪ್ರಿಲ್ನಲ್ಲಿ ಆರೋಪಮುಕ್ತರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಾ (ಬಿಹಾರ) (ಪಿಟಿಐ): </strong>ಮೇಲ್ವರ್ಗದ ಭೂಮಾಲೀಕರ ಕಾನೂನು ಬಾಹಿರ ಖಾಸಗಿ ಪಡೆಯಾದ `ರಣವೀರ ಸೇನೆ~ಯ ಮುಖ್ಯಸ್ಥ ಬ್ರಹ್ಮೇಶ್ವರ ಸಿಂಗ್ ಅಲಿಯಾಸ್ `ಮುಖಿಯಾ ಜಿ~ ಅವರನ್ನು ಅಪರಿಚಿತ ದಾಳಿಕೋರರು ಗುಂಡಿಟ್ಟು ಕೊಂದ ಘಟನೆ ಭೋಜಪುರ ಜಿಲ್ಲೆಯ ಅರಾದಲ್ಲಿ ಶುಕ್ರವಾರ ನಡೆದಿದೆ.<br /> <br /> ಇದರಿಂದ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದ್ದು, ಐದು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರರನ್ನು ಸೇನೆಯ ಕಾರ್ಯಕರ್ತರು ಅಟ್ಟಿಸಿಕೊಂಡು ಹೋದರಲ್ಲದೆ, ಅವರೊಂದಿಗೆ ಘರ್ಷಣೆಗೆ ಇಳಿದರು.<br /> <br /> ಇದರಿಂದ ನಗರದಲ್ಲಿ ಮೊದಲು ಕರ್ಫ್ಯೂ ವಿಧಿಸಲಾಯಿತು. ಆದರೆ ಬಳಿಕ ಉನ್ನತ ಮಟ್ಟದಲ್ಲಿ ಪರಿಸ್ಥಿತಿ ಅವಲೋಕಿಸಿದ ನಂತರ ಈ ಆದೇಶವನ್ನು ಹಿಂತೆಗೆದುಕೊಳ್ಳಲಾಯಿತು. ಸಿಂಗ್ ನಿಧಾನವಾಗಿ ನಡೆದುಕೊಂಡು ಬರುತ್ತಿದ್ದಾಗ ಬಂದೂಕುಧಾರಿಗಳು ಗುಂಡಿನ ಸುರಿಮಳೆಗರೆದು, ಸ್ಥಳದಲ್ಲೇ ಅವರನ್ನು ಕೊಂದು ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಲಕ್ಷ್ಮಣಪುರದಲ್ಲಿ 1996ರ ಡಿಸೆಂಬರ್ನಲ್ಲಿ ನಡೆದ 61 ದಲಿತರ ಸಾಮೂಹಿಕ ಹತ್ಯಾಕಾಂಡ ಸೇರಿದಂತೆ, ಕೆಳ ಜಾತಿಯ ಭೂರಹಿತ ಬಡವರ ಮೇಲೆ ಎಸಗಿದ ಅನೇಕ ದೌರ್ಜನ್ಯ ಪ್ರಕರಣಗಳಲ್ಲಿ 70 ವರ್ಷದ ಸಿಂಗ್ ಜೀವಾವಧಿ ಶಿಕ್ಷೆ ಎದುರಿಸುತ್ತಿದ್ದರು. ಇದೇ ವರ್ಷದ ಏಪ್ರಿಲ್ನಲ್ಲಿ ಆರೋಪಮುಕ್ತರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>