<p><strong>ಜೈಪುರ್ (ಪಿಟಿಐ):</strong> ಅಂತೂ ಅನಿಶ್ಚಿತತೆಗೆ ತೆರೆ ಬಿದ್ದಿದೆ. ನಿಗದಿಯಾದಂತೆ ಸಲ್ಮಾನ್ ರಶ್ದಿ ಅವರೊಂದಿಗೆ ಮಂಗಳವಾರ ಮಧ್ಯಾಹ್ನ ವಿಡಿಯೊ ಸಂವಾದ ನಡೆಯಲಿದೆ.</p>.<p>ರಾಜಸ್ಥಾನ ಸರ್ಕಾರವು, ಇಲ್ಲಿನ ಜೈಪುರ ಸಾಹಿತ್ಯ ಉತ್ಸವದಿಂದ ದೂರ ಉಳಿದಿದ್ದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರೊಂದಿಗೆ ಮಂಗಳವಾರ ಮಧ್ಯಾಹ್ನ ವಿಡಿಯೊ ಮೂಲಕ ಸಂವಾದ ನಡೆಸಲು ತನ್ನ ಆಕ್ಷೇಪವೆನೂ ಇಲ್ಲವೆಂದಿದೆ ಎಂದು ಉತ್ಸವದ ಸಂಘಟಕರು ತಿಳಿಸಿದ್ದಾರೆ.</p>.<p>ವಿಡಿಯೊ ಸಂವಾದ ನಡೆಸಲು ಪೂರ್ವಾನುಮತಿಯ ಅಗತ್ಯವಿಲ್ಲವೆಂಬ ಮಾಹಿತಿ ಲಭಿಸಿದ್ದು. ಉತ್ಸವದ ಕೊನೆಯ ದಿನವಾದ ಇಂದು ಮಧ್ಯಾಹ್ನ (ಮಂಗಳವಾರ) ನಿಗದಿಯಾದಂತೆ ರಶ್ದಿ ಅವರೊಂದಿಗೆ ವಿಡಿಯೊ ಸಂವಾದ ನಡೆಯುವುದೆಂದು ಉತ್ಸವದ ಸಂಘಟಕ ಸಂಜಯ್ ರಾಯ್ ಅವರು ಮಂಗಳವಾರ ಬೆಳಿಗ್ಗೆ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<p>ಕಾರ್ಯಕ್ರಮ ಪಟ್ಟಿಯಂತೆಯೇ ಭಾರತೀಯ ಸಂಜಾತ ಸಲ್ಮಾನ್ ರಶ್ದಿ ಅವರ ~ ಮಿಡ್ ನೈಟ್ಸ್ ಚಿಲ್ಡ್ರನ್~ ಕೃತಿಯ ಕುರಿತು ಮಧ್ಯಾಹ್ನ 3.45ಕ್ಕೆ ಸಂವಾದ ನಡೆಯಲಿದೆ. ಲೇಖಕ ರಶ್ದಿ ಅವರು ತಮ್ಮ ಬಾಲ್ಯ, ಹಿಂದೆ ಅನುಭವಿಸಿದ ತೊಂದರೆಗಳು ಮತ್ತು ಕೃತಿಯನ್ನು ಸಿನಿಮಾಕ್ಕೆ ಅಳವಡಿಸುವ ಬಗ್ಗೆ ಸಭಿಕರೊಂದಿಗೆ ಒಂದು ಗಂಟೆ ಕಾಲ ವಿಡಿಯೊ ಸಂವಾದ ನಡೆಸಲಿದ್ದಾರೆ.</p>.<p>ಜೀವ ಭಯದ ಹಿನ್ನೆಲೆಯಲ್ಲಿ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಜೈಪುರ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕಿ ತಮ್ಮ ಭಾರತದ ಪ್ರವಾಸವನ್ನು ಕೈ ಬಿಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ್ (ಪಿಟಿಐ):</strong> ಅಂತೂ ಅನಿಶ್ಚಿತತೆಗೆ ತೆರೆ ಬಿದ್ದಿದೆ. ನಿಗದಿಯಾದಂತೆ ಸಲ್ಮಾನ್ ರಶ್ದಿ ಅವರೊಂದಿಗೆ ಮಂಗಳವಾರ ಮಧ್ಯಾಹ್ನ ವಿಡಿಯೊ ಸಂವಾದ ನಡೆಯಲಿದೆ.</p>.<p>ರಾಜಸ್ಥಾನ ಸರ್ಕಾರವು, ಇಲ್ಲಿನ ಜೈಪುರ ಸಾಹಿತ್ಯ ಉತ್ಸವದಿಂದ ದೂರ ಉಳಿದಿದ್ದ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರೊಂದಿಗೆ ಮಂಗಳವಾರ ಮಧ್ಯಾಹ್ನ ವಿಡಿಯೊ ಮೂಲಕ ಸಂವಾದ ನಡೆಸಲು ತನ್ನ ಆಕ್ಷೇಪವೆನೂ ಇಲ್ಲವೆಂದಿದೆ ಎಂದು ಉತ್ಸವದ ಸಂಘಟಕರು ತಿಳಿಸಿದ್ದಾರೆ.</p>.<p>ವಿಡಿಯೊ ಸಂವಾದ ನಡೆಸಲು ಪೂರ್ವಾನುಮತಿಯ ಅಗತ್ಯವಿಲ್ಲವೆಂಬ ಮಾಹಿತಿ ಲಭಿಸಿದ್ದು. ಉತ್ಸವದ ಕೊನೆಯ ದಿನವಾದ ಇಂದು ಮಧ್ಯಾಹ್ನ (ಮಂಗಳವಾರ) ನಿಗದಿಯಾದಂತೆ ರಶ್ದಿ ಅವರೊಂದಿಗೆ ವಿಡಿಯೊ ಸಂವಾದ ನಡೆಯುವುದೆಂದು ಉತ್ಸವದ ಸಂಘಟಕ ಸಂಜಯ್ ರಾಯ್ ಅವರು ಮಂಗಳವಾರ ಬೆಳಿಗ್ಗೆ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.</p>.<p>ಕಾರ್ಯಕ್ರಮ ಪಟ್ಟಿಯಂತೆಯೇ ಭಾರತೀಯ ಸಂಜಾತ ಸಲ್ಮಾನ್ ರಶ್ದಿ ಅವರ ~ ಮಿಡ್ ನೈಟ್ಸ್ ಚಿಲ್ಡ್ರನ್~ ಕೃತಿಯ ಕುರಿತು ಮಧ್ಯಾಹ್ನ 3.45ಕ್ಕೆ ಸಂವಾದ ನಡೆಯಲಿದೆ. ಲೇಖಕ ರಶ್ದಿ ಅವರು ತಮ್ಮ ಬಾಲ್ಯ, ಹಿಂದೆ ಅನುಭವಿಸಿದ ತೊಂದರೆಗಳು ಮತ್ತು ಕೃತಿಯನ್ನು ಸಿನಿಮಾಕ್ಕೆ ಅಳವಡಿಸುವ ಬಗ್ಗೆ ಸಭಿಕರೊಂದಿಗೆ ಒಂದು ಗಂಟೆ ಕಾಲ ವಿಡಿಯೊ ಸಂವಾದ ನಡೆಸಲಿದ್ದಾರೆ.</p>.<p>ಜೀವ ಭಯದ ಹಿನ್ನೆಲೆಯಲ್ಲಿ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಜೈಪುರ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕಿ ತಮ್ಮ ಭಾರತದ ಪ್ರವಾಸವನ್ನು ಕೈ ಬಿಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>