<p>ಸಿದ್ದಾಪುರ: ರಸ್ತೆಗಳ ದುರಸ್ತಿ ಅಥವಾ ಅಗಲೀಕರಣ ನಡೆದಾಗ ನೂರಾರು ದೂರವಾಣಿಗಳು ಸ್ತಬ್ಧವಾಗುವ ಸಮಸ್ಯೆ ಆಗಾಗ ಪಟ್ಟಣದಲ್ಲಿ ನಡೆಯುತ್ತಲೇ ಇರುತ್ತದೆ. <br /> <br /> ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಅಕ್ಕ-ಪಕ್ಕ ದುರಸ್ತಿ ಮತ್ತು ಅಗಲೀಕರಣ ಪ್ರಕ್ರಿಯೆ ಈಗ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು ಸುಮಾರು ಮುನ್ನೂರಕ್ಕೂ ಅಧಿಕ ದೂರವಾಣಿಗಳಿಗೆ ಮತ್ತೆ ತೊಂದರೆ ಉಂಟಾಗಿದೆ. <br /> <br /> ಕೆಲವು ದೂರವಾಣಿಗಳನ್ನು ಸರಿಪಡಿಸುತ್ತಿದ್ದಂತೆ ಮತ್ತೊಂದಿಷ್ಟು ಹಾಳಾಗುತ್ತಿವೆ. ಇದರಿಂದ ಇಂಟರ್ನೆಟ್ ಸಂಪರ್ಕ ಹೊಂದಿರುವ ಸಾರ್ವಜನಿಕರ ಸಂಪರ್ಕ ಸೇತುವೆಯೇ ಮುರಿದು ಬಿದ್ದಂತಾಗಿದೆ.<br /> <br /> ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಎಂಜನಿಯರ್ ಎ.ಬಿ.ಎನ್.ರೆಡ್ಡಿ ಅವರನ್ನು ಸಂಪರ್ಕಿಸಿದಾಗ, `ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವುದಕ್ಕಾಗಿ ರಸ್ತೆಯ ಎರಡೂ ಕಡೆಗಳಲ್ಲಿ ಮಣ್ಣು ತೆಗೆದು ಮತ್ತೆ ಗೊಚ್ಚು (ಗಟ್ಟಿ) ಮಣ್ಣು ಹಾಕಲಾಗುತ್ತಿದೆ. <br /> <br /> ಕಾಮಗಾರಿ ನಡೆದ ಜಾಗದಲ್ಲಿ ಡಾಂಬರು ಹಾಕುವ ಯೋಜನೆ ಇದರಲ್ಲಿ ಇಲ್ಲ. ಆದರೂ ಎರಡು ಕಡೆಗಳಲ್ಲಿ ( ಜಿ.ಪಂ. ಕಚೇರಿ ಕ್ರಾಸ್ ಮತ್ತು ಕೆಳಗಿನ ಪೆಟ್ರೋಲ್ ಬಂಕ್ ಸಮೀಪ) ಡಾಂಬರು ಹಾಕಲಾಗುತ್ತದೆ. ದೂರವಾಣಿ ಸಿಬ್ಬಂದಿ ಕೇಬಲ್ಗಳನ್ನು ದುರಸ್ತಿ ಮಾಡಲಿದ್ದಾರೆ. ನಾವು ಕೂಡ ಅವರ ಸಂಪರ್ಕದಲ್ಲಿದ್ದೇವೆ~ ಎನ್ನುತ್ತಾರೆ.<br /> <br /> `ರಸ್ತೆಗಳನ್ನು ಆಗಾಗ ದುರಸ್ತಿ ಮಾಡುತ್ತಿರುವುದರಿಂದ ಕೇಬಲ್ಗಳು ಮೇಲೆ ಬಂದಿವೆ. ಜೆಸಿಬಿಯಲ್ಲಿ ಈ ಕೆಲಸ ನಡೆಯುತ್ತಿರುವುದರಿಂದ ಕೇಬಲ್ಗಳನ್ನು ಕತ್ತರಿಸದಂತೆ ಕಾಯುವುದು ಕಷ್ಟ. ಆದರೂ ನಮ್ಮ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ಹೆಚ್ಚಿನ ಕೇಬಲ್ಗಳನ್ನು ಕತ್ತರಿಸದಂತೆ ನೋಡುತ್ತಿದ್ದಾರೆ. ಹಾಳಾಗಿರುವ ದೂರವಾಣಿಗಳನ್ನು ಆದಷ್ಟು ಶೀಘ್ರ ಸರಿಪಡಿಸುತ್ತೇವೆ~ ಎಂದು ಬಿಎಸ್ಎನ್ಎಲ್ ಅಧಿಕಾರಿಗಳು ಹೇಳಿದರು.<br /> <br /> ಎರಡೂ ಇಲಾಖೆಗಳ ಕಾರ್ಯವೈಖರಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿದ್ದಾಪುರ: ರಸ್ತೆಗಳ ದುರಸ್ತಿ ಅಥವಾ ಅಗಲೀಕರಣ ನಡೆದಾಗ ನೂರಾರು ದೂರವಾಣಿಗಳು ಸ್ತಬ್ಧವಾಗುವ ಸಮಸ್ಯೆ ಆಗಾಗ ಪಟ್ಟಣದಲ್ಲಿ ನಡೆಯುತ್ತಲೇ ಇರುತ್ತದೆ. <br /> <br /> ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ಅಕ್ಕ-ಪಕ್ಕ ದುರಸ್ತಿ ಮತ್ತು ಅಗಲೀಕರಣ ಪ್ರಕ್ರಿಯೆ ಈಗ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು ಸುಮಾರು ಮುನ್ನೂರಕ್ಕೂ ಅಧಿಕ ದೂರವಾಣಿಗಳಿಗೆ ಮತ್ತೆ ತೊಂದರೆ ಉಂಟಾಗಿದೆ. <br /> <br /> ಕೆಲವು ದೂರವಾಣಿಗಳನ್ನು ಸರಿಪಡಿಸುತ್ತಿದ್ದಂತೆ ಮತ್ತೊಂದಿಷ್ಟು ಹಾಳಾಗುತ್ತಿವೆ. ಇದರಿಂದ ಇಂಟರ್ನೆಟ್ ಸಂಪರ್ಕ ಹೊಂದಿರುವ ಸಾರ್ವಜನಿಕರ ಸಂಪರ್ಕ ಸೇತುವೆಯೇ ಮುರಿದು ಬಿದ್ದಂತಾಗಿದೆ.<br /> <br /> ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಎಂಜನಿಯರ್ ಎ.ಬಿ.ಎನ್.ರೆಡ್ಡಿ ಅವರನ್ನು ಸಂಪರ್ಕಿಸಿದಾಗ, `ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವುದಕ್ಕಾಗಿ ರಸ್ತೆಯ ಎರಡೂ ಕಡೆಗಳಲ್ಲಿ ಮಣ್ಣು ತೆಗೆದು ಮತ್ತೆ ಗೊಚ್ಚು (ಗಟ್ಟಿ) ಮಣ್ಣು ಹಾಕಲಾಗುತ್ತಿದೆ. <br /> <br /> ಕಾಮಗಾರಿ ನಡೆದ ಜಾಗದಲ್ಲಿ ಡಾಂಬರು ಹಾಕುವ ಯೋಜನೆ ಇದರಲ್ಲಿ ಇಲ್ಲ. ಆದರೂ ಎರಡು ಕಡೆಗಳಲ್ಲಿ ( ಜಿ.ಪಂ. ಕಚೇರಿ ಕ್ರಾಸ್ ಮತ್ತು ಕೆಳಗಿನ ಪೆಟ್ರೋಲ್ ಬಂಕ್ ಸಮೀಪ) ಡಾಂಬರು ಹಾಕಲಾಗುತ್ತದೆ. ದೂರವಾಣಿ ಸಿಬ್ಬಂದಿ ಕೇಬಲ್ಗಳನ್ನು ದುರಸ್ತಿ ಮಾಡಲಿದ್ದಾರೆ. ನಾವು ಕೂಡ ಅವರ ಸಂಪರ್ಕದಲ್ಲಿದ್ದೇವೆ~ ಎನ್ನುತ್ತಾರೆ.<br /> <br /> `ರಸ್ತೆಗಳನ್ನು ಆಗಾಗ ದುರಸ್ತಿ ಮಾಡುತ್ತಿರುವುದರಿಂದ ಕೇಬಲ್ಗಳು ಮೇಲೆ ಬಂದಿವೆ. ಜೆಸಿಬಿಯಲ್ಲಿ ಈ ಕೆಲಸ ನಡೆಯುತ್ತಿರುವುದರಿಂದ ಕೇಬಲ್ಗಳನ್ನು ಕತ್ತರಿಸದಂತೆ ಕಾಯುವುದು ಕಷ್ಟ. ಆದರೂ ನಮ್ಮ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದಾರೆ. ಹೆಚ್ಚಿನ ಕೇಬಲ್ಗಳನ್ನು ಕತ್ತರಿಸದಂತೆ ನೋಡುತ್ತಿದ್ದಾರೆ. ಹಾಳಾಗಿರುವ ದೂರವಾಣಿಗಳನ್ನು ಆದಷ್ಟು ಶೀಘ್ರ ಸರಿಪಡಿಸುತ್ತೇವೆ~ ಎಂದು ಬಿಎಸ್ಎನ್ಎಲ್ ಅಧಿಕಾರಿಗಳು ಹೇಳಿದರು.<br /> <br /> ಎರಡೂ ಇಲಾಖೆಗಳ ಕಾರ್ಯವೈಖರಿಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>