<p><strong>ನವದೆಹಲಿ (ಪಿಟಿಐ):</strong> ನ್ಯೂಯಾರ್ಕ್ನಲ್ಲಿನ ಭಾರತದ ಉಪ ಕಾನ್ಸಲ್ ಜನರಲ್ ದೇವಯಾನಿ ಖೋಬ್ರಾಗಡೆ ಅವರನ್ನು ನಡೆಸಿಕೊಂಡ ರೀತಿಗೆ ಭಾರತ ಸರ್ಕಾರವು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೇಶದಲ್ಲಿರುವ ಅಮೆರಿಕದ ರಾಯಭಾರಿ ಅಧಿಕಾರಿಗಳಿಗೆ ನೀಡಿರುವ ಗುರುತು ಪತ್ರಗಳನ್ನು ಹಿಂದಿರುಗಿಸುವಂತೆ ಮಂಗಳವಾರ ಅಮೆರಿಕವನ್ನು ಕೇಳಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. </p>.<p>ನ್ಯೂಯಾರ್ಕ್ನಲ್ಲಿನ ಭಾರತದ ಉಪ ಕಾನ್ಸಲ್ ಜನರಲ್ ದೇವಯಾನಿ ಅವರನ್ನು ನಡೆಸಿಕೊಂಡ ರೀತಿಗೆ ಪ್ರತಿಭಟನೆಯ ಸೂಚಕವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಮೆರಿಕದ ರಾಜತಾಂತ್ರಿಕರು ಅನುಭವಿಸುತ್ತಿರುವ ವಿನಾಯಿತಿ ಮತ್ತು ಪ್ರಯೋಜನಗಳ ಪುನರ್ ಪರಿಶೀಲನೆ ನಡೆಸುವ ಸಲುವಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.</p>.<p><strong>ಭೇಟಿ ರದ್ದು : </strong><br /> ಇದೇ ವೇಳೆ ದೇವಯಾನಿ ಅವರ ವಿರುದ್ಧದ ವರ್ತನೆಗೆ ಭಾರತದ ನಾಯಕರು ಮತ್ತು ಅಧಿಕಾರಿಗಳ ತೀವ್ರ ಅಸಮಾಧನಕ್ಕೂ ಕಾರಣವಾಗಿದೆ. ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಮೆರಿಕದ ಕಾಂಗ್ರೆಸ್ನ ನಿಯೋಗದ ಜತೆಗಿನ ಭೇಟಿಯನ್ನು ಮಂಗಳವಾರ ರದ್ದು ಮಾಡಿದ್ದಾರೆ. </p>.<p>ಈ ಮೊದಲು ಲೋಕ ಸಭೆ ಸ್ಪೀಕರ್ ಮೀರಾ ಕುಮಾರ್ ಅವರೂ ಸಹ ಇದೇ ಕಾರಣಕ್ಕಾಗಿ ಅಮೆರಿಕ ಕಾಂಗ್ರೆಸ್ ನಿಯೋಗ ಜತೆಗಿನ ಭೇಟಿಯನ್ನು ಸೋಮವಾರ ರದ್ದು ಪಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ನ್ಯೂಯಾರ್ಕ್ನಲ್ಲಿನ ಭಾರತದ ಉಪ ಕಾನ್ಸಲ್ ಜನರಲ್ ದೇವಯಾನಿ ಖೋಬ್ರಾಗಡೆ ಅವರನ್ನು ನಡೆಸಿಕೊಂಡ ರೀತಿಗೆ ಭಾರತ ಸರ್ಕಾರವು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ದೇಶದಲ್ಲಿರುವ ಅಮೆರಿಕದ ರಾಯಭಾರಿ ಅಧಿಕಾರಿಗಳಿಗೆ ನೀಡಿರುವ ಗುರುತು ಪತ್ರಗಳನ್ನು ಹಿಂದಿರುಗಿಸುವಂತೆ ಮಂಗಳವಾರ ಅಮೆರಿಕವನ್ನು ಕೇಳಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. </p>.<p>ನ್ಯೂಯಾರ್ಕ್ನಲ್ಲಿನ ಭಾರತದ ಉಪ ಕಾನ್ಸಲ್ ಜನರಲ್ ದೇವಯಾನಿ ಅವರನ್ನು ನಡೆಸಿಕೊಂಡ ರೀತಿಗೆ ಪ್ರತಿಭಟನೆಯ ಸೂಚಕವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಮೆರಿಕದ ರಾಜತಾಂತ್ರಿಕರು ಅನುಭವಿಸುತ್ತಿರುವ ವಿನಾಯಿತಿ ಮತ್ತು ಪ್ರಯೋಜನಗಳ ಪುನರ್ ಪರಿಶೀಲನೆ ನಡೆಸುವ ಸಲುವಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.</p>.<p><strong>ಭೇಟಿ ರದ್ದು : </strong><br /> ಇದೇ ವೇಳೆ ದೇವಯಾನಿ ಅವರ ವಿರುದ್ಧದ ವರ್ತನೆಗೆ ಭಾರತದ ನಾಯಕರು ಮತ್ತು ಅಧಿಕಾರಿಗಳ ತೀವ್ರ ಅಸಮಾಧನಕ್ಕೂ ಕಾರಣವಾಗಿದೆ. ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಮೆರಿಕದ ಕಾಂಗ್ರೆಸ್ನ ನಿಯೋಗದ ಜತೆಗಿನ ಭೇಟಿಯನ್ನು ಮಂಗಳವಾರ ರದ್ದು ಮಾಡಿದ್ದಾರೆ. </p>.<p>ಈ ಮೊದಲು ಲೋಕ ಸಭೆ ಸ್ಪೀಕರ್ ಮೀರಾ ಕುಮಾರ್ ಅವರೂ ಸಹ ಇದೇ ಕಾರಣಕ್ಕಾಗಿ ಅಮೆರಿಕ ಕಾಂಗ್ರೆಸ್ ನಿಯೋಗ ಜತೆಗಿನ ಭೇಟಿಯನ್ನು ಸೋಮವಾರ ರದ್ದು ಪಡಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>