<p><strong>ಪಣಜಿ (ಪಿಟಿಐ</strong>): ಗೋವಾದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ದೂರ ಉಳಿದ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತು ಇತರ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು `ವಿಶಾಲ ಹೃದಯಿ' ಎಂದು ಬಣ್ಣಿಸಿದ್ದಾರೆ.<br /> <br /> ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡ ನಂತರ ಭಾನುವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮಗೆ ಹೊಸ ಜವಾಬ್ದಾರಿ ವಹಿಸಿದ ರಾಜನಾಥ್ ಸಿಂಗ್ ಅವರನ್ನು ಮನಸಾರೆ ಕೊಂಡಾಡಿದರು. `ಅವರ ಹೃದಯ ವೈಶಾಲ್ಯವನ್ನು ಹೊರಗಿನವರು ಅರ್ಥ ಮಾಡಿಕೊಳ್ಳಲಾರರು' ಎಂದರು.<br /> <br /> `ರಾಜನಾಥ್ ಸಿಂಗ್ ಕೇವಲ ಹೊಸ ಹೊಣೆಯನ್ನು ಮಾತ್ರ ವಹಿಸಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ದೇಶದ ಜನತೆ ಎದುರು ನನಗೆ ಭಾರಿ ಗೌರವ ತೋರಿಸಿದ್ದಾರೆ. ಆದರಿಸಿ, ಗೌರವಿಸಿದ್ದಾರೆ. ಇದಕ್ಕಾಗಿ ನಾನು ಅವರಿಗೆ ತುಂಬಾ ಆಭಾರಿಯಾಗಿದ್ದೇನೆ' ಎಂದು ಕೃತಜ್ಞತೆ ಸಲ್ಲಿಸಿದರು.<br /> <br /> ಭಾಷಣ ಮಾಡಲು ಎದ್ದುನಿಂತ ಮೋದಿ ಅವರನ್ನು ಕುಳಿತುಕೊಳ್ಳುವಂತೆ ಸೂಚಿಸಿದ ರಾಜನಾಥ್ ಸಿಂಗ್ `ಜನಪ್ರಿಯ ನಾಯಕರು ಸಮಾರಂಭದ ಕೊನೆಯಲ್ಲಿ ಮಾತನಾಡಲಿ' ಎಂದು ಹೇಳಿದರು. ಈ ಪ್ರಸಂಗವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ, `ಭಾಷಣ ಮಾಡಲು ಎದ್ದು ನಿಂತ ನನ್ನನ್ನು ಕುಳಿತುಕೊಳ್ಳಲು ಹೇಳಿ ರಾಜನಾಥ್ ಸಿಂಗ್ ಮಾತನಾಡಿದರು. ಹೊರಗಿನವರಿಗೆ ಇದರ ಹಿಂದಿನ ಮರ್ಮ ಮತ್ತು ಮಹತ್ವ ಅರ್ಥವಾಗಲಾರದು. ಉನ್ನತ ಹುದ್ದೆಯನ್ನು ಹೊಂದಿದ ಮಾತ್ರಕ್ಕೆ ವ್ಯಕ್ತಿಯೊಬ್ಬ ಈ ರೀತಿ ಹೇಳಲಾರ.<br /> <br /> ಆ ವ್ಯಕ್ತಿಗೆ ಹೃದಯ ವೈಶಾಲ್ಯವೂ ಇರಬೇಕು. ಇದಕ್ಕೆ ಹೇಳುವುದು `ದರಿಯಾ ದಿಲ್' ಎಂದು. ಅದನ್ನು ರಾಜನಾಥ್ ಪ್ರದರ್ಶಿಸಿದ್ದಾರೆ' ಎಂದು ಹೊಗಳಿಕೆಯ ಹೂಮಳೆ ಗೆರೆದರು.<br /> <br /> <strong>ದೇಶದ ಪ್ರತಿಷ್ಠೆಗೆ ಧಕ್ಕೆ:</strong> ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮುಕ್ತ ಭಾರತವನ್ನು ಸ್ಥಾಪನೆ ಮಾಡಬೇಕಾದ ಅಗತ್ಯವಿದೆ. ಸಿಂಗ್ ಸರ್ಕಾರ ಭ್ರಷ್ಟಾಚಾರ ಹಗರಣಗಳ ಸುಳಿಗೆ ಸಿಲುಕಿ ದೇಶದ ಪ್ರತಿಷ್ಠೆ ಹಾಳು ಮಾಡಿದೆ ಎಂದು ಆರೋಪಿಸಿದರು.<br /> <br /> ಗುಜರಾತಿನಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ನಿಲ್ಲಿಸುವ ತಮ್ಮ ಇಂಗಿತ ವ್ಯಕ್ತಪಡಿಸಿದರು. ಈ ಪ್ರತಿಮೆಗೆ ಪ್ರತಿ ಹಳ್ಳಿಯಿಂದಲೂ ಕಬ್ಬಿಣ ಮತ್ತಿತರ ಲೋಹದ ತುಣಕುಗಳನ್ನು ತರುವ ಮೂಲಕ ಪ್ರತಿಯೊಬ್ಬರೂ ಈ ಕೆಲಸದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಣಜಿ (ಪಿಟಿಐ</strong>): ಗೋವಾದಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ದೂರ ಉಳಿದ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತು ಇತರ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು `ವಿಶಾಲ ಹೃದಯಿ' ಎಂದು ಬಣ್ಣಿಸಿದ್ದಾರೆ.<br /> <br /> ಚುನಾವಣಾ ಪ್ರಚಾರ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡ ನಂತರ ಭಾನುವಾರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮಗೆ ಹೊಸ ಜವಾಬ್ದಾರಿ ವಹಿಸಿದ ರಾಜನಾಥ್ ಸಿಂಗ್ ಅವರನ್ನು ಮನಸಾರೆ ಕೊಂಡಾಡಿದರು. `ಅವರ ಹೃದಯ ವೈಶಾಲ್ಯವನ್ನು ಹೊರಗಿನವರು ಅರ್ಥ ಮಾಡಿಕೊಳ್ಳಲಾರರು' ಎಂದರು.<br /> <br /> `ರಾಜನಾಥ್ ಸಿಂಗ್ ಕೇವಲ ಹೊಸ ಹೊಣೆಯನ್ನು ಮಾತ್ರ ವಹಿಸಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ದೇಶದ ಜನತೆ ಎದುರು ನನಗೆ ಭಾರಿ ಗೌರವ ತೋರಿಸಿದ್ದಾರೆ. ಆದರಿಸಿ, ಗೌರವಿಸಿದ್ದಾರೆ. ಇದಕ್ಕಾಗಿ ನಾನು ಅವರಿಗೆ ತುಂಬಾ ಆಭಾರಿಯಾಗಿದ್ದೇನೆ' ಎಂದು ಕೃತಜ್ಞತೆ ಸಲ್ಲಿಸಿದರು.<br /> <br /> ಭಾಷಣ ಮಾಡಲು ಎದ್ದುನಿಂತ ಮೋದಿ ಅವರನ್ನು ಕುಳಿತುಕೊಳ್ಳುವಂತೆ ಸೂಚಿಸಿದ ರಾಜನಾಥ್ ಸಿಂಗ್ `ಜನಪ್ರಿಯ ನಾಯಕರು ಸಮಾರಂಭದ ಕೊನೆಯಲ್ಲಿ ಮಾತನಾಡಲಿ' ಎಂದು ಹೇಳಿದರು. ಈ ಪ್ರಸಂಗವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮೋದಿ, `ಭಾಷಣ ಮಾಡಲು ಎದ್ದು ನಿಂತ ನನ್ನನ್ನು ಕುಳಿತುಕೊಳ್ಳಲು ಹೇಳಿ ರಾಜನಾಥ್ ಸಿಂಗ್ ಮಾತನಾಡಿದರು. ಹೊರಗಿನವರಿಗೆ ಇದರ ಹಿಂದಿನ ಮರ್ಮ ಮತ್ತು ಮಹತ್ವ ಅರ್ಥವಾಗಲಾರದು. ಉನ್ನತ ಹುದ್ದೆಯನ್ನು ಹೊಂದಿದ ಮಾತ್ರಕ್ಕೆ ವ್ಯಕ್ತಿಯೊಬ್ಬ ಈ ರೀತಿ ಹೇಳಲಾರ.<br /> <br /> ಆ ವ್ಯಕ್ತಿಗೆ ಹೃದಯ ವೈಶಾಲ್ಯವೂ ಇರಬೇಕು. ಇದಕ್ಕೆ ಹೇಳುವುದು `ದರಿಯಾ ದಿಲ್' ಎಂದು. ಅದನ್ನು ರಾಜನಾಥ್ ಪ್ರದರ್ಶಿಸಿದ್ದಾರೆ' ಎಂದು ಹೊಗಳಿಕೆಯ ಹೂಮಳೆ ಗೆರೆದರು.<br /> <br /> <strong>ದೇಶದ ಪ್ರತಿಷ್ಠೆಗೆ ಧಕ್ಕೆ:</strong> ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಮುಕ್ತ ಭಾರತವನ್ನು ಸ್ಥಾಪನೆ ಮಾಡಬೇಕಾದ ಅಗತ್ಯವಿದೆ. ಸಿಂಗ್ ಸರ್ಕಾರ ಭ್ರಷ್ಟಾಚಾರ ಹಗರಣಗಳ ಸುಳಿಗೆ ಸಿಲುಕಿ ದೇಶದ ಪ್ರತಿಷ್ಠೆ ಹಾಳು ಮಾಡಿದೆ ಎಂದು ಆರೋಪಿಸಿದರು.<br /> <br /> ಗುಜರಾತಿನಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲರ ಪ್ರತಿಮೆ ನಿಲ್ಲಿಸುವ ತಮ್ಮ ಇಂಗಿತ ವ್ಯಕ್ತಪಡಿಸಿದರು. ಈ ಪ್ರತಿಮೆಗೆ ಪ್ರತಿ ಹಳ್ಳಿಯಿಂದಲೂ ಕಬ್ಬಿಣ ಮತ್ತಿತರ ಲೋಹದ ತುಣಕುಗಳನ್ನು ತರುವ ಮೂಲಕ ಪ್ರತಿಯೊಬ್ಬರೂ ಈ ಕೆಲಸದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>