<p>ಬೆಂಗಳೂರು: ಹಿರಿಯ ಸಾಹಿತಿ, ವಿಮರ್ಶಕ ಡಾ. ಸುಮತೀಂದ್ರ ನಾಡಿಗ ಅವರು ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ 2010ನೇ ಸಾಲಿನ ‘ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.<br /> <br /> ಇಲ್ಲಿನ ‘ಕನ್ನಡ ಭವನ’ದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರು, ‘ಕನ್ನಡ ಮತ್ತು ಬಂಗಾಳಿ ಸಾಹಿತ್ಯದ ನಡುವೆ ಹಲವಾರು ವರ್ಷಗಳಿಂದ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಿರುವ ಡಾ. ನಾಡಿಗ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ’ ಎಂದರು.<br /> <br /> ಪ್ರಶಸ್ತಿ ಮೊತ್ತ ರೂ 50 ಸಾವಿರ. ಶೀಘ್ರದಲ್ಲಿಯೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.<br /> ಪ್ರೊ.ಕಿ.ರಂ. ನಾಗರಾಜ ಅವರು 2008ನೇ ಸಾಲಿನಲ್ಲಿ ಮತ್ತು ಎಂ. ಅಂಕೇಗೌಡ ಅವರು 2009ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.<br /> <br /> <strong>ಚೊಚ್ಚಲ ಕೃತಿ:</strong> ಯುವ ಬರಹಗಾರರ ಮೊದಲ ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡಲಾಗುವ ಪ್ರೋತ್ಸಾಹ ಧನಕ್ಕೆ ಈ ಬಾರಿ 23 ಕೃತಿಗಳು ಆಯ್ಕೆಯಾಗಿವೆ.<br /> <br /> ‘ಪ್ರೋತ್ಸಾಹಧನ ಕೋರಿ ಒಟ್ಟು 125 ಹಸ್ತಪ್ರತಿಗಳು ಬಂದಿದ್ದವು. ಅವುಗಳಲ್ಲಿ 23ನ್ನು ಆಯ್ಕೆ ಮಾಡಿದ್ದೇವೆ. ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ಪ್ರತಿಯೊಬ್ಬರಿಗೂ ತಲಾ ರೂ 10 ಸಾವಿರ ನಗದು ಹಣ ನೀಡಲಾಗುವುದು. ಲೇಖಕರು ಚೊಚ್ಚಲ ಕೃತಿ 25 ಮುದ್ರಿತ ಪ್ರತಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು. <br /> <br /> ಅವುಗಳ ಬಿಡುಗಡೆ ಸಮಾರಂಭವನ್ನು ಪ್ರಾಧಿಕಾರವೇ ಏರ್ಪಡಿಸುತ್ತದೆ’ ಎಂದರು.<br /> ಪುಸ್ತಕ ಮೇಳ: ಇಲ್ಲಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇದೇ 5ರಿಂದ 8ರವರೆಗೆ ವಿಶೇಷ ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ ನಡೆಯಲಿದೆ. <br /> <br /> ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು 5ರಂದು ಬೆಳಿಗ್ಗೆ 11.30ಕ್ಕೆ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.<br /> <br /> ಒಂಬತ್ತು ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯದ ಎಲ್ಲ ವಿ.ವಿ.ಗಳ ಪ್ರಸಾರಾಂಗಗಳು, ಸಪ್ನ ಬುಕ್ ಹೌಸ್, ನವಕರ್ನಾಟಕ, ಅಂಕಿತ ಪುಸ್ತಕ ಸೇರಿದಂತೆ 70 ಪುಸ್ತಕ ಮಳಿಗೆಗಳು ಈ ಮೇಳದಲ್ಲಿ ಇರುತ್ತವೆ. ಪ್ರತಿ ಪುಸ್ತಕಕ್ಕೂ ಕನಿಷ್ಠ ಶೇಕಡ 25ರಷ್ಟು ರಿಯಾಯಿತಿ ಇರುತ್ತದೆ ಎಂದು ಮಾಹಿತಿ ನೀಡಿದರು.<br /> <br /> ಕಳೆದ ಬಾರಿ ಪುಸ್ತಕ ಮೇಳದಲ್ಲಿ 70 ಲಕ್ಷ ರೂಪಾಯಿ ವಹಿವಾಟು ನಡೆದಿತ್ತು. ಈ ಬಾರಿ ರೂ 1 ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಹಿರಿಯ ಸಾಹಿತಿ, ವಿಮರ್ಶಕ ಡಾ. ಸುಮತೀಂದ್ರ ನಾಡಿಗ ಅವರು ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ 2010ನೇ ಸಾಲಿನ ‘ಡಾ.ಜಿ.ಪಿ. ರಾಜರತ್ನಂ ಸಾಹಿತ್ಯ ಪರಿಚಾರಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.<br /> <br /> ಇಲ್ಲಿನ ‘ಕನ್ನಡ ಭವನ’ದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಅವರು, ‘ಕನ್ನಡ ಮತ್ತು ಬಂಗಾಳಿ ಸಾಹಿತ್ಯದ ನಡುವೆ ಹಲವಾರು ವರ್ಷಗಳಿಂದ ಕೊಂಡಿಯಂತೆ ಕಾರ್ಯ ನಿರ್ವಹಿಸುತ್ತಿರುವ ಡಾ. ನಾಡಿಗ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ’ ಎಂದರು.<br /> <br /> ಪ್ರಶಸ್ತಿ ಮೊತ್ತ ರೂ 50 ಸಾವಿರ. ಶೀಘ್ರದಲ್ಲಿಯೇ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದರು.<br /> ಪ್ರೊ.ಕಿ.ರಂ. ನಾಗರಾಜ ಅವರು 2008ನೇ ಸಾಲಿನಲ್ಲಿ ಮತ್ತು ಎಂ. ಅಂಕೇಗೌಡ ಅವರು 2009ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.<br /> <br /> <strong>ಚೊಚ್ಚಲ ಕೃತಿ:</strong> ಯುವ ಬರಹಗಾರರ ಮೊದಲ ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡಲಾಗುವ ಪ್ರೋತ್ಸಾಹ ಧನಕ್ಕೆ ಈ ಬಾರಿ 23 ಕೃತಿಗಳು ಆಯ್ಕೆಯಾಗಿವೆ.<br /> <br /> ‘ಪ್ರೋತ್ಸಾಹಧನ ಕೋರಿ ಒಟ್ಟು 125 ಹಸ್ತಪ್ರತಿಗಳು ಬಂದಿದ್ದವು. ಅವುಗಳಲ್ಲಿ 23ನ್ನು ಆಯ್ಕೆ ಮಾಡಿದ್ದೇವೆ. ಪ್ರೋತ್ಸಾಹ ಧನಕ್ಕೆ ಆಯ್ಕೆಯಾದ ಪ್ರತಿಯೊಬ್ಬರಿಗೂ ತಲಾ ರೂ 10 ಸಾವಿರ ನಗದು ಹಣ ನೀಡಲಾಗುವುದು. ಲೇಖಕರು ಚೊಚ್ಚಲ ಕೃತಿ 25 ಮುದ್ರಿತ ಪ್ರತಿಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕು. <br /> <br /> ಅವುಗಳ ಬಿಡುಗಡೆ ಸಮಾರಂಭವನ್ನು ಪ್ರಾಧಿಕಾರವೇ ಏರ್ಪಡಿಸುತ್ತದೆ’ ಎಂದರು.<br /> ಪುಸ್ತಕ ಮೇಳ: ಇಲ್ಲಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇದೇ 5ರಿಂದ 8ರವರೆಗೆ ವಿಶೇಷ ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ ನಡೆಯಲಿದೆ. <br /> <br /> ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು 5ರಂದು ಬೆಳಿಗ್ಗೆ 11.30ಕ್ಕೆ ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.<br /> <br /> ಒಂಬತ್ತು ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಜ್ಯದ ಎಲ್ಲ ವಿ.ವಿ.ಗಳ ಪ್ರಸಾರಾಂಗಗಳು, ಸಪ್ನ ಬುಕ್ ಹೌಸ್, ನವಕರ್ನಾಟಕ, ಅಂಕಿತ ಪುಸ್ತಕ ಸೇರಿದಂತೆ 70 ಪುಸ್ತಕ ಮಳಿಗೆಗಳು ಈ ಮೇಳದಲ್ಲಿ ಇರುತ್ತವೆ. ಪ್ರತಿ ಪುಸ್ತಕಕ್ಕೂ ಕನಿಷ್ಠ ಶೇಕಡ 25ರಷ್ಟು ರಿಯಾಯಿತಿ ಇರುತ್ತದೆ ಎಂದು ಮಾಹಿತಿ ನೀಡಿದರು.<br /> <br /> ಕಳೆದ ಬಾರಿ ಪುಸ್ತಕ ಮೇಳದಲ್ಲಿ 70 ಲಕ್ಷ ರೂಪಾಯಿ ವಹಿವಾಟು ನಡೆದಿತ್ತು. ಈ ಬಾರಿ ರೂ 1 ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಇದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>