<p><strong>ಬೆಂಗಳೂರು: </strong>ರಾಜ್ಯದಲ್ಲಿ 24, 452 ಮಂದಿ ಭಿಕ್ಷುಕರಿದ್ದು, ಬೆಂಗಳೂರು ಗ್ರಾಮಾಂತರ ಒಂದರಲ್ಲಿಯೇ 7, 745 ಭಿಕ್ಷುಕರನ್ನು ಗುರುತಿಸಲಾಗಿದೆ ಎಂದು ಸರ್ಕಾರದ ನಡೆಸಿದ ಸಮೀಕ್ಷಾ ವರದಿ ತಿಳಿಸಿದೆ.<br /> <br /> ಒಂದು ವಾರದ ಹಿಂದಷ್ಟೆ ಸರ್ಕಾರ ಬಿಡುಗಡೆ ಮಾಡಿದ ‘ರಾಜ್ಯದಲ್ಲಿ ಭಿಕ್ಷುಕರು’ ಕುರಿತ ವರದಿಯಲ್ಲಿ ಹೇಳಿದೆ.<br /> ಗುಲ್ಬರ್ಗದಲ್ಲಿ (1,302), ಚಿತ್ರದುರ್ಗ (847), ಯಾದಗಿರಿ (26), ಕೊಡಗು (36) ಹೀಗೆ ನಾನಾ ಭಾಗಗಳಲ್ಲಿ ಭಿಕ್ಷುಕರನ್ನು ಗುರುತಿಸಲಾಗಿದೆ.<br /> <br /> ಭಿಕ್ಷುಕರ ಸಮುದಾಯದಲ್ಲಿ ಶೇ 56.9 ರಷ್ಟು ಗಂಡಸರು, ಶೇ 42.2 ಮಹಿಳೆಯರು ಹಾಗೂ 0.9 ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.<br /> <br /> ಅಲ್ಲದೇ ಸುಮಾರು 13,677 ಮಂದಿ ದೈಹಿಕ ಹಾಗೂ ಮಾನಸಿಕ ಕಾಯಿಲೆಯಿಂದ ಬಳುತ್ತಿದ್ದಾರೆ. ಶೇ 20ರಷ್ಟು ಮಂದಿಗೆ ಅಂಗವೈಕಲ್ಯವಿದೆ. ರಾಜ್ಯದ ನಾನಾ ಭಾಗಗಳಲ್ಲಿರುವ ದೇವಸ್ಥಾನ, ಮಸೀದಿ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸಮೀಕ್ಷೆ ನಡೆಸಲಾಗಿದೆ.<br /> <br /> 2010ರಲ್ಲಿ ಭಿಕ್ಷುಕರ ಕಾಲೋನಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.<br /> <br /> ಸಾಮಾಜಿಕ ಪಿಡುಗಾಗಿರುವ ಭಿಕ್ಷಾಟನೆಯನ್ನು ನಿರ್ಮೂ ಲನೆಗೊಳಿಸುವ ಮೊದಲ ಹಂತದ ಪ್ರಯತ್ನವಾಗಿ ಸರ್ಕಾರ ಈ ಸಮೀಕ್ಷೆ ಕೈಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯದಲ್ಲಿ 24, 452 ಮಂದಿ ಭಿಕ್ಷುಕರಿದ್ದು, ಬೆಂಗಳೂರು ಗ್ರಾಮಾಂತರ ಒಂದರಲ್ಲಿಯೇ 7, 745 ಭಿಕ್ಷುಕರನ್ನು ಗುರುತಿಸಲಾಗಿದೆ ಎಂದು ಸರ್ಕಾರದ ನಡೆಸಿದ ಸಮೀಕ್ಷಾ ವರದಿ ತಿಳಿಸಿದೆ.<br /> <br /> ಒಂದು ವಾರದ ಹಿಂದಷ್ಟೆ ಸರ್ಕಾರ ಬಿಡುಗಡೆ ಮಾಡಿದ ‘ರಾಜ್ಯದಲ್ಲಿ ಭಿಕ್ಷುಕರು’ ಕುರಿತ ವರದಿಯಲ್ಲಿ ಹೇಳಿದೆ.<br /> ಗುಲ್ಬರ್ಗದಲ್ಲಿ (1,302), ಚಿತ್ರದುರ್ಗ (847), ಯಾದಗಿರಿ (26), ಕೊಡಗು (36) ಹೀಗೆ ನಾನಾ ಭಾಗಗಳಲ್ಲಿ ಭಿಕ್ಷುಕರನ್ನು ಗುರುತಿಸಲಾಗಿದೆ.<br /> <br /> ಭಿಕ್ಷುಕರ ಸಮುದಾಯದಲ್ಲಿ ಶೇ 56.9 ರಷ್ಟು ಗಂಡಸರು, ಶೇ 42.2 ಮಹಿಳೆಯರು ಹಾಗೂ 0.9 ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.<br /> <br /> ಅಲ್ಲದೇ ಸುಮಾರು 13,677 ಮಂದಿ ದೈಹಿಕ ಹಾಗೂ ಮಾನಸಿಕ ಕಾಯಿಲೆಯಿಂದ ಬಳುತ್ತಿದ್ದಾರೆ. ಶೇ 20ರಷ್ಟು ಮಂದಿಗೆ ಅಂಗವೈಕಲ್ಯವಿದೆ. ರಾಜ್ಯದ ನಾನಾ ಭಾಗಗಳಲ್ಲಿರುವ ದೇವಸ್ಥಾನ, ಮಸೀದಿ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಸಮೀಕ್ಷೆ ನಡೆಸಲಾಗಿದೆ.<br /> <br /> 2010ರಲ್ಲಿ ಭಿಕ್ಷುಕರ ಕಾಲೋನಿಯಲ್ಲಿ ಸಾಂಕ್ರಾಮಿಕ ರೋಗಗಳು ಹರಡಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.<br /> <br /> ಸಾಮಾಜಿಕ ಪಿಡುಗಾಗಿರುವ ಭಿಕ್ಷಾಟನೆಯನ್ನು ನಿರ್ಮೂ ಲನೆಗೊಳಿಸುವ ಮೊದಲ ಹಂತದ ಪ್ರಯತ್ನವಾಗಿ ಸರ್ಕಾರ ಈ ಸಮೀಕ್ಷೆ ಕೈಗೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>