<p>ರಾಯಚೂರು: ರಾಜ್ಯದಲ್ಲಿಯೇ ಅತ್ಯಂತ ಅವ್ಯವಸ್ಥೆಯ ಆಸ್ಪತ್ರೆ ಎಂದರೆ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ವಹಿಸುತ್ತಿರುವ ಜಿಲ್ಲಾ ಆಸ್ಪತ್ರೆಯಾಗಿದೆ. ವೈದ್ಯರು, ಸಿಬ್ಬಂದಿ ಸೇರಿ 340 ಜನರಿದ್ದಾರೆ. ಇಂದು 36 ವೈದ್ಯರು ಗೈರು ಹಾಜರಿದ್ದರೆ, 7 ವೈದ್ಯರು 20 ದಿನಗಳಿಂದ ಅನಧಿಕೃತ ರಜೆಯಲ್ಲಿದ್ದಾರೆ. ಅಸ್ವಚ್ಛತೆ ಎಲ್ಲೆಡೆ ಇದೆ. ಸಮರ್ಪಕ ಚಿಕಿತ್ಸೆ ದೊರಕಿಸುತ್ತಿಲ್ಲ ಹೀಗೆ ಅನೇಕ ಲೋಪಗಳಿವೆ. ಸಂಬಂಧಪಟ್ಟ ವೈದ್ಯರು ಮತ್ತು ಸಿಬ್ಬಂದಿಗೆ ನೋಟಿಸ್ ನೀಡಲಾಗುವುದು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಹೇಳಿದರು.<br /> <br /> ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತ ರಜೆಯಲ್ಲಿರುವವರಿಗೆ ನೋಟಿಸ್ ನೀಡಲಾಗುವುದು. ಈ ಲೋಪದ ಬಗ್ಗೆ ಅವರ ಸರ್ವಿಸ್ ಬುಕ್ನಲ್ಲಿ ದಾಖಲಿಸಲಾಗುವುದು. ಆಸ್ಪತ್ರೆ ಆವರಣ, ಚರಂಡಿ ಸ್ವಚ್ಛತೆ ಬಗ್ಗೆ ಬೇಜವಾಬ್ದಾರಿವಹಿಸಲಾಗಿದೆ. ಗುತ್ತಿಗೆ ಪಡೆದಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಗುತ್ತಿಗೆ ಒಪ್ಪಂದವನ್ನು ಕೂಡಲೇ ರದ್ದುಪಡಿಸಲು ಸೂಚಿಸಿರುವುದಾಗಿ ಹೇಳಿದರು.<br /> <br /> ಆಸ್ಪತ್ರೆಗೆ ದಾಖಲಾಗಿ ಮೂರು ದಿನಗಳಾದರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ನವಜಾತ ಅವಳಿ ಶಿಶುಗಳನ್ನು ಬೆಡ್ ಇಲ್ಲ ಎಂಬ ನೆಪದ ಮೇಲೆ ನೆಲದ ಮೇಲೆ ಮಲಗಿಸಿದ್ದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇಂದೇ 20 ಕಾಟ್ ಮತ್ತು ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು.<br /> <br /> ತುರ್ತು ಚಿಕಿತ್ಸೆಗೆ ತಾಲ್ಲೂಕು ಆಸ್ಪತ್ರೆಯ ವೈದ್ಯರು ಕಳುಹಿಸಿದ ರೋಗಿಗಳಿಗೆ ತುರ್ತು ಚಿಕಿತ್ಸೆ ಕಲ್ಪಿಸುವಲ್ಲಿ ನಿರ್ಲಕ್ಷ್ಯವಹಿಸಲಾಗಿದೆ. ಏಜೆಂಟ್ ಹಾವಳಿ, ಸಾರ್ವಜನಿಕರು ಅಹವಾಲು ಆಲಿಸದೇ ಇರುವುದು, ಚಿಕಿತ್ಸೆ ನೀಡದೇ ಇರುವುದು ಮುಂತಾದ ವಿಚಾರಗಳು ರೋಗಿಗಳು ಹೇಳಿಕೊಂಡಿದ್ದಾರೆ. ಈ ಎಲ್ಲ ವಿಷಯದ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.<br /> <br /> ಅಮಾನತ್: ರೋಗಿಗಳಿಗೆ ಅನ್ನ-ಸಾಂಬಾರ, ಬಾಳೆ ಹಣ್ಣು ಪೂರೈಕೆ ಅವ್ಯವಸ್ಥೆ ಕಂಡು ಬಂದಿದೆ. ಯಾವುದೂ ಸರಿ ಇರಲಿಲ್ಲ. ಅಡುಗೆ ಮೇಲ್ವಿಚಾರಕ ರನ್ನು ಅಮಾನತ್ಗೊಳಿಸಲಾಗಿದೆ ಎಂದು ತಿಳಿಸಿದರು.<br /> <br /> ಅಧೀಕ್ಷಕರೇ ಹೊಣೆ: ಆಸ್ಪತ್ರೆ ಈ ರೀತಿಯ ಅವ್ಯವಸ್ಥೆಗೆ ಆಸ್ಪತ್ರೆ ಅಧೀಕ್ಷಕರೇ ಮುಖ್ಯ ಹೊಣೆ ಗಾರರಾಗುತ್ತಾರೆ. ಅವರನ್ನೇ ಜವಾಬ್ದಾರರ ನ್ನಾಗಿಸುತ್ತಿದ್ದು, ಅವರ ಮೇಲೂ ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ ಎಂದು ತಿಳಿಸಿದರು.<br /> <br /> ಖಾಸಗಿ ಸೇವೆ ನಿರ್ಬಂಧ: ಸರ್ಕಾರಿ ಆಸ್ಪತ್ರೆ ವೈದ್ಯರು ಹೆಚ್ಚಿನ ವೇತನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆದಿದ್ದು, ಕೇಂದ್ರದ ಜೊತೆ ಚರ್ಚಿಸಲಾಗುತ್ತಿದೆ. ಈ ವೇತನ ಹೆಚ್ಚಳ ಮಾಡಿದ ಬಳಿಕ ಸರ್ಕಾರಿ ವೈದ್ಯರು ನಡೆಸುವ ಖಾಸಗಿ ಸೇವೆ ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.<br /> <br /> ಈಗಿರುವ ಜಿಲ್ಲಾ ಆಸ್ಪತ್ರೆಯ ಮಿತಿ 250 ಹಾಸಿಗೆಗಳು. ಸದ್ಯ 350 ಹಾಸಿಗೆಗಳಿವೆ. ಈ ಹಿನ್ನೆಲೆಯಲ್ಲ ಒಪೆಕ್ ಆಸ್ಪತ್ರೆಯ ಕೆಳಭಾಗದಲ್ಲಿ ಖಾಲಿ ಇರುವ ಕೊಠಡಿಗಳನ್ನು ತಾತ್ಕಾಲಿಕವಾಗಿ ದೊರಕಿಸಲು ಪ್ರಸ್ತಾಪಿಸಿದ್ದಾರೆ. ಅದೇ ರೀತಿ ರಿಮ್ಸ್ ಆಸ್ಪತ್ರೆಯ 4 ಅಂತಸ್ತು ಪೂರ್ಣಗೊಂಡಿದ್ದು, ಏಪ್ರಿಲ್ 15ಕ್ಕೆ ಒಪ್ಪಿಸುತ್ತಿದ್ದಾರೆ. 5 ಮತ್ತು 6ನೇ ಅಂತಸ್ತು ಕಾಮಗಾರಿ, ಲಿಫ್ಟ್ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಕಾರ್ಯದರ್ಶಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಶೀಘ್ರ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಯಚೂರು: ರಾಜ್ಯದಲ್ಲಿಯೇ ಅತ್ಯಂತ ಅವ್ಯವಸ್ಥೆಯ ಆಸ್ಪತ್ರೆ ಎಂದರೆ ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ವಹಿಸುತ್ತಿರುವ ಜಿಲ್ಲಾ ಆಸ್ಪತ್ರೆಯಾಗಿದೆ. ವೈದ್ಯರು, ಸಿಬ್ಬಂದಿ ಸೇರಿ 340 ಜನರಿದ್ದಾರೆ. ಇಂದು 36 ವೈದ್ಯರು ಗೈರು ಹಾಜರಿದ್ದರೆ, 7 ವೈದ್ಯರು 20 ದಿನಗಳಿಂದ ಅನಧಿಕೃತ ರಜೆಯಲ್ಲಿದ್ದಾರೆ. ಅಸ್ವಚ್ಛತೆ ಎಲ್ಲೆಡೆ ಇದೆ. ಸಮರ್ಪಕ ಚಿಕಿತ್ಸೆ ದೊರಕಿಸುತ್ತಿಲ್ಲ ಹೀಗೆ ಅನೇಕ ಲೋಪಗಳಿವೆ. ಸಂಬಂಧಪಟ್ಟ ವೈದ್ಯರು ಮತ್ತು ಸಿಬ್ಬಂದಿಗೆ ನೋಟಿಸ್ ನೀಡಲಾಗುವುದು ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ರಾಮದಾಸ್ ಹೇಳಿದರು.<br /> <br /> ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತ ರಜೆಯಲ್ಲಿರುವವರಿಗೆ ನೋಟಿಸ್ ನೀಡಲಾಗುವುದು. ಈ ಲೋಪದ ಬಗ್ಗೆ ಅವರ ಸರ್ವಿಸ್ ಬುಕ್ನಲ್ಲಿ ದಾಖಲಿಸಲಾಗುವುದು. ಆಸ್ಪತ್ರೆ ಆವರಣ, ಚರಂಡಿ ಸ್ವಚ್ಛತೆ ಬಗ್ಗೆ ಬೇಜವಾಬ್ದಾರಿವಹಿಸಲಾಗಿದೆ. ಗುತ್ತಿಗೆ ಪಡೆದಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಗುತ್ತಿಗೆ ಒಪ್ಪಂದವನ್ನು ಕೂಡಲೇ ರದ್ದುಪಡಿಸಲು ಸೂಚಿಸಿರುವುದಾಗಿ ಹೇಳಿದರು.<br /> <br /> ಆಸ್ಪತ್ರೆಗೆ ದಾಖಲಾಗಿ ಮೂರು ದಿನಗಳಾದರೂ ವೈದ್ಯರು ಚಿಕಿತ್ಸೆ ನೀಡಿಲ್ಲ. ನವಜಾತ ಅವಳಿ ಶಿಶುಗಳನ್ನು ಬೆಡ್ ಇಲ್ಲ ಎಂಬ ನೆಪದ ಮೇಲೆ ನೆಲದ ಮೇಲೆ ಮಲಗಿಸಿದ್ದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇಂದೇ 20 ಕಾಟ್ ಮತ್ತು ಬೆಡ್ ವ್ಯವಸ್ಥೆ ಮಾಡಲಾಗಿದೆ ಎಂದರು.<br /> <br /> ತುರ್ತು ಚಿಕಿತ್ಸೆಗೆ ತಾಲ್ಲೂಕು ಆಸ್ಪತ್ರೆಯ ವೈದ್ಯರು ಕಳುಹಿಸಿದ ರೋಗಿಗಳಿಗೆ ತುರ್ತು ಚಿಕಿತ್ಸೆ ಕಲ್ಪಿಸುವಲ್ಲಿ ನಿರ್ಲಕ್ಷ್ಯವಹಿಸಲಾಗಿದೆ. ಏಜೆಂಟ್ ಹಾವಳಿ, ಸಾರ್ವಜನಿಕರು ಅಹವಾಲು ಆಲಿಸದೇ ಇರುವುದು, ಚಿಕಿತ್ಸೆ ನೀಡದೇ ಇರುವುದು ಮುಂತಾದ ವಿಚಾರಗಳು ರೋಗಿಗಳು ಹೇಳಿಕೊಂಡಿದ್ದಾರೆ. ಈ ಎಲ್ಲ ವಿಷಯದ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.<br /> <br /> ಅಮಾನತ್: ರೋಗಿಗಳಿಗೆ ಅನ್ನ-ಸಾಂಬಾರ, ಬಾಳೆ ಹಣ್ಣು ಪೂರೈಕೆ ಅವ್ಯವಸ್ಥೆ ಕಂಡು ಬಂದಿದೆ. ಯಾವುದೂ ಸರಿ ಇರಲಿಲ್ಲ. ಅಡುಗೆ ಮೇಲ್ವಿಚಾರಕ ರನ್ನು ಅಮಾನತ್ಗೊಳಿಸಲಾಗಿದೆ ಎಂದು ತಿಳಿಸಿದರು.<br /> <br /> ಅಧೀಕ್ಷಕರೇ ಹೊಣೆ: ಆಸ್ಪತ್ರೆ ಈ ರೀತಿಯ ಅವ್ಯವಸ್ಥೆಗೆ ಆಸ್ಪತ್ರೆ ಅಧೀಕ್ಷಕರೇ ಮುಖ್ಯ ಹೊಣೆ ಗಾರರಾಗುತ್ತಾರೆ. ಅವರನ್ನೇ ಜವಾಬ್ದಾರರ ನ್ನಾಗಿಸುತ್ತಿದ್ದು, ಅವರ ಮೇಲೂ ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ ಎಂದು ತಿಳಿಸಿದರು.<br /> <br /> ಖಾಸಗಿ ಸೇವೆ ನಿರ್ಬಂಧ: ಸರ್ಕಾರಿ ಆಸ್ಪತ್ರೆ ವೈದ್ಯರು ಹೆಚ್ಚಿನ ವೇತನಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆದಿದ್ದು, ಕೇಂದ್ರದ ಜೊತೆ ಚರ್ಚಿಸಲಾಗುತ್ತಿದೆ. ಈ ವೇತನ ಹೆಚ್ಚಳ ಮಾಡಿದ ಬಳಿಕ ಸರ್ಕಾರಿ ವೈದ್ಯರು ನಡೆಸುವ ಖಾಸಗಿ ಸೇವೆ ನಿರ್ಬಂಧಿಸಲಾಗುವುದು ಎಂದು ತಿಳಿಸಿದರು.<br /> <br /> ಈಗಿರುವ ಜಿಲ್ಲಾ ಆಸ್ಪತ್ರೆಯ ಮಿತಿ 250 ಹಾಸಿಗೆಗಳು. ಸದ್ಯ 350 ಹಾಸಿಗೆಗಳಿವೆ. ಈ ಹಿನ್ನೆಲೆಯಲ್ಲ ಒಪೆಕ್ ಆಸ್ಪತ್ರೆಯ ಕೆಳಭಾಗದಲ್ಲಿ ಖಾಲಿ ಇರುವ ಕೊಠಡಿಗಳನ್ನು ತಾತ್ಕಾಲಿಕವಾಗಿ ದೊರಕಿಸಲು ಪ್ರಸ್ತಾಪಿಸಿದ್ದಾರೆ. ಅದೇ ರೀತಿ ರಿಮ್ಸ್ ಆಸ್ಪತ್ರೆಯ 4 ಅಂತಸ್ತು ಪೂರ್ಣಗೊಂಡಿದ್ದು, ಏಪ್ರಿಲ್ 15ಕ್ಕೆ ಒಪ್ಪಿಸುತ್ತಿದ್ದಾರೆ. 5 ಮತ್ತು 6ನೇ ಅಂತಸ್ತು ಕಾಮಗಾರಿ, ಲಿಫ್ಟ್ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲು ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಕಾರ್ಯದರ್ಶಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಶೀಘ್ರ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗುವುದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>