<p><strong>ಮುಂಬೈ(ಐಎಎನ್ಎಸ್): </strong>ಮಹಾರಾಷ್ಟ್ರದಲ್ಲಿ ರಾಜ್ಯಸಭಾ ಚುನಾವಣಾ ಕಣ ರಂಗೇರತೊಡಗಿದ್ದು, ಇದೇ 30 ರಂದು ನಡೆಯುವ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದೆ.<br /> <br /> ಕೇಂದ್ರ ಚುನಾವಣಾ ಆಯೋಗ ಇದೇ 12ರಂದು 15 ರಾಜ್ಯಗಳಿಗೆ ಅನ್ವಯಿಸುವಂತೆ ಅಧಿಸೂಚನೆ ಹೊರಡಿಸಲಿದೆ. ಒಟ್ಟು 58 ಸದಸ್ಯರು ನಿವೃತ್ತರಾಗಲಿದ್ದಾರೆ. ಮಹಾರಾಷ್ಟ್ರದಲ್ಲಿ 6 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.<br /> <br /> ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವಿಲಾಸ್ರಾವ್ ದೇಶ್ಮುಖ್, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ರಾಜೀವ್ ಶುಕ್ಲ ಸೇರಿದಂತೆ ರಾಷ್ಟ್ರೀಯ ಕಾಂಗ್ರೆಸ್ನ (ಎನ್ಸಿಪಿ)ಇಬ್ಬರು ಸದಸ್ಯರು, ಬಿಜೆಪಿ ಮತ್ತು ಶಿವಸೇನೆಯ ತಲಾ ಒಬ್ಬರು ಸದಸ್ಯರ ಸ್ಥಾನಗಳು ತೆರವಾಗಲಿವೆ.<br /> <br /> <strong>ನಿವೃತ್ತರಾಗಲಿರುವ ಪ್ರಮುಖ ಸದಸ್ಯರು:</strong><br /> ಬಿಜೆಪಿ: ಅರುಣ್ ಜೇಟ್ಲಿ(ಗುಜರಾತ್), ರವಿಶಂಕರ್ ಪ್ರಸಾದ್(ಬಿಹಾರ್), ಹೇಮಾ ಮಾಲಿನಿ(ಕರ್ನಾಟಕ), ಕಲ್ರಾಜ್ ಮಿಶ್ರಾ, ವಿನಯ್ ಕಟಿಯಾರ್(ಉತ್ತರ ಪ್ರದೇಶ), <br /> <br /> ಕಾಂಗ್ರೆಸ್: ರಶೀದ್ ಅಲ್ವಿ(ಆಂಧ್ರ), ರೆಹಮಾನ್ ಖಾನ್(ಕರ್ನಾಟಕ), ಅಭಿಷೇಕ್ ಸಿಂಘ್ವಿ (ರಾಜಸ್ತಾನ),<br /> <br /> ಇತರರು: ನರೇಶ್ ಚಂದ್ರ(ಬಿಎಸ್ಪಿ-ಉತ್ತರ ಪ್ರದೇಶ), ಕೇಂದ್ರ ಸಚಿವ ಮುಖುಲ್ ರಾಯ್(ತೃಣ ಮೂಲ ಕಾಂಗ್ರೆಸ್- ಪಶ್ಚಿಮ ಬಂಗಾಳ), ರಾಜನೀತಿ ಪ್ರಸಾದ್(ಆರ್ಜೆಡಿ-ಬಿಹಾರ್).<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ(ಐಎಎನ್ಎಸ್): </strong>ಮಹಾರಾಷ್ಟ್ರದಲ್ಲಿ ರಾಜ್ಯಸಭಾ ಚುನಾವಣಾ ಕಣ ರಂಗೇರತೊಡಗಿದ್ದು, ಇದೇ 30 ರಂದು ನಡೆಯುವ ಚುನಾವಣೆಗೆ ವೇದಿಕೆ ಸಿದ್ಧಗೊಂಡಿದೆ.<br /> <br /> ಕೇಂದ್ರ ಚುನಾವಣಾ ಆಯೋಗ ಇದೇ 12ರಂದು 15 ರಾಜ್ಯಗಳಿಗೆ ಅನ್ವಯಿಸುವಂತೆ ಅಧಿಸೂಚನೆ ಹೊರಡಿಸಲಿದೆ. ಒಟ್ಟು 58 ಸದಸ್ಯರು ನಿವೃತ್ತರಾಗಲಿದ್ದಾರೆ. ಮಹಾರಾಷ್ಟ್ರದಲ್ಲಿ 6 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.<br /> <br /> ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವಿಲಾಸ್ರಾವ್ ದೇಶ್ಮುಖ್, ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ರಾಜೀವ್ ಶುಕ್ಲ ಸೇರಿದಂತೆ ರಾಷ್ಟ್ರೀಯ ಕಾಂಗ್ರೆಸ್ನ (ಎನ್ಸಿಪಿ)ಇಬ್ಬರು ಸದಸ್ಯರು, ಬಿಜೆಪಿ ಮತ್ತು ಶಿವಸೇನೆಯ ತಲಾ ಒಬ್ಬರು ಸದಸ್ಯರ ಸ್ಥಾನಗಳು ತೆರವಾಗಲಿವೆ.<br /> <br /> <strong>ನಿವೃತ್ತರಾಗಲಿರುವ ಪ್ರಮುಖ ಸದಸ್ಯರು:</strong><br /> ಬಿಜೆಪಿ: ಅರುಣ್ ಜೇಟ್ಲಿ(ಗುಜರಾತ್), ರವಿಶಂಕರ್ ಪ್ರಸಾದ್(ಬಿಹಾರ್), ಹೇಮಾ ಮಾಲಿನಿ(ಕರ್ನಾಟಕ), ಕಲ್ರಾಜ್ ಮಿಶ್ರಾ, ವಿನಯ್ ಕಟಿಯಾರ್(ಉತ್ತರ ಪ್ರದೇಶ), <br /> <br /> ಕಾಂಗ್ರೆಸ್: ರಶೀದ್ ಅಲ್ವಿ(ಆಂಧ್ರ), ರೆಹಮಾನ್ ಖಾನ್(ಕರ್ನಾಟಕ), ಅಭಿಷೇಕ್ ಸಿಂಘ್ವಿ (ರಾಜಸ್ತಾನ),<br /> <br /> ಇತರರು: ನರೇಶ್ ಚಂದ್ರ(ಬಿಎಸ್ಪಿ-ಉತ್ತರ ಪ್ರದೇಶ), ಕೇಂದ್ರ ಸಚಿವ ಮುಖುಲ್ ರಾಯ್(ತೃಣ ಮೂಲ ಕಾಂಗ್ರೆಸ್- ಪಶ್ಚಿಮ ಬಂಗಾಳ), ರಾಜನೀತಿ ಪ್ರಸಾದ್(ಆರ್ಜೆಡಿ-ಬಿಹಾರ್).<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>