<p>ಬೆಂಗಳೂರು: ಎ.ಆರ್. ನವನೀತ್ ಮತ್ತು ಆರ್. ರಕ್ಷಾ ಇಲ್ಲಿ ನಡೆಯುತ್ತಿರುವ ಟಿವಿಎಸ್ ವೇಗೊ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಯೂತ್ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.<br /> <br /> ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ನ ಡಾ. ರಾಜೇಂದ್ರ ಪ್ರಸಾದ್ ಅಡಿಟೋರಿಯಂನಲ್ಲಿ ಸೋಮವಾರ ನಡೆದ ಯೂತ್ ಬಾಲಕರ ವಿಭಾಗದ ಫೈನಲ್ನಲ್ಲಿ ನವನೀತ್ 11-5, 11-3, 11-8, 11-9 ರಲ್ಲಿ ವೇದಾಂತ್ ಎಂ. ಅರಸ್ ವಿರುದ್ಧ ಜಯ ಪಡೆದರು.<br /> <br /> ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ನವನೀತ್ 11-9, 14-12, 11-4, 9-11, 11-9 ರಲ್ಲಿ ವಿ.ಪಿ. ಚರಣ್ ವಿರುದ್ಧವೂ, ವೇದಾಂತ್ 11-6, 11-4, 10-12, 9-11, 11-8, 11-8 ರಲ್ಲಿ ಶ್ರೇಯಲ್ ಕೆ. ತೆಲಾಂಗ್ ಎದುರೂ ಜಯ ಪಡೆದಿದ್ದರು.<br /> <br /> ಯೂತ್ ಬಾಲಕಿಯರ ವಿಭಾಗದ ಫೈನಲ್ನಲ್ಲಿ ರಕ್ಷಾ 12-10, 11-7, 11-6, 11-8 ರಲ್ಲಿ ಐಶ್ವರ್ಯ ಆರ್ ಬಿದರಿ ಅವರನ್ನು ಮಣಿಸಿದರು. ಪ್ರಭಾವಿ ಪ್ರದರ್ಶನ ನೀಡಿದ ರಕ್ಷಾ ನೇರ ಸೆಟ್ಗಳ ಗೆಲುವು ತಮ್ಮದಾಗಿಸಿಕೊಂಡರು.<br /> <br /> ನಾಲ್ಕರಘಟ್ಟದ ಪಂದ್ಯದಲ್ಲಿ ರಕ್ಷಾ 11-8, 12-10, 11-7, 12-10 ರಲ್ಲಿ ರಿಧಿ ರೋಹಿತ್ ಅವರನ್ನು ಮಣಿಸಿದ್ದರೆ, ಐಶ್ವರ್ಯ 6-11, 7-11, 11-4, 15-13, 11-9, 7-10, 11-6 ರಲ್ಲಿ ಪ್ರಯಾಸದ ಗೆಲುವು ಪಡೆದಿದ್ದರು. <br /> <br /> ಸಹನಾ, ಶ್ರೇಯಲ್ಗೆ ಕಿರೀಟ: ಸಹನಾ ಕುಲಕರ್ಣಿ ಮತ್ತು ಶ್ರೇಯಲ್ ಕೆ. ತೆಲಾಂಗ್ ಇದೇ ಟೂರ್ನಿಯಲ್ಲಿ ಕ್ರಮವಾಗಿ ಜೂನಿಯರ್ ಬಾಲಕಿಯರ ಹಾಗೂ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. <br /> <br /> ಫೈನಲ್ ಪಂದ್ಯದಲ್ಲಿ ಸಹನಾ 11-9, 12-14, 12-10, 7-11, 11-8, 11-4 ರಲ್ಲಿ ಎನ್. ಐಶ್ವರ್ಯ ವಿರುದ್ಧ ಗೆಲುವು ಪಡೆದರು. ಸೆಮಿಫೈನಲ್ ಪಂದ್ಯಗಳಲ್ಲಿ ಸಹನಾ 5-11, 11-8, 11-4, 11-5, 11-7 ರಲ್ಲಿ ವಿ. ಖುಷಿ ಎದುರೂ, ಐಶ್ವರ್ಯ 11-7, 8-11, 5-11, 11-8, 11-9, 11-9 ರಲ್ಲಿ ರಿಧಿ ಮೇಲೂ ಜಯ ಸಾಧಿಸಿದ್ದರು.<br /> <br /> ಜೂನಿಯರ್ ಬಾಲಕರ ವಿಭಾಗದ ಫೈನಲ್ನಲ್ಲಿ ಶ್ರೇಯಲ್ 11-2, 11-7, 5-11, 11-8, 11-4 ರಲ್ಲಿ ಸುನಂದ್ ವಾಸನ್ ಅವರನ್ನು ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡರು. ಚುರುಕಿನ ಆಟವಾಡಿದ ಶ್ರೇಯಲ್ ಕೇವಲ ಒಂದು ಗೇಮ್ನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟರು.<br /> <br /> ಸೆಮಿಫೈನಲ್ ಪಂದ್ಯದಲ್ಲಿ ಶ್ರೇಯಲ್ 13-11, 11-13, 11-8, 11-3, 11-5 ರಲ್ಲಿ ವಿ.ಪಿ. ಚರಣ್ ಅವರನ್ನು ಸೋಲಿಸಿದ್ದರು. ಸುನಂದ್ 12-10, 11-8, 8-11, 14-16, 1-11, 11-5, 11-3 ರಲ್ಲಿ ವೇದಾಂತ್ ಎಂ. ಅರಸ್ ವಿರುದ್ಧ ಗೆಲುವು ಪಡೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಎ.ಆರ್. ನವನೀತ್ ಮತ್ತು ಆರ್. ರಕ್ಷಾ ಇಲ್ಲಿ ನಡೆಯುತ್ತಿರುವ ಟಿವಿಎಸ್ ವೇಗೊ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಯೂತ್ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.<br /> <br /> ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್ನ ಡಾ. ರಾಜೇಂದ್ರ ಪ್ರಸಾದ್ ಅಡಿಟೋರಿಯಂನಲ್ಲಿ ಸೋಮವಾರ ನಡೆದ ಯೂತ್ ಬಾಲಕರ ವಿಭಾಗದ ಫೈನಲ್ನಲ್ಲಿ ನವನೀತ್ 11-5, 11-3, 11-8, 11-9 ರಲ್ಲಿ ವೇದಾಂತ್ ಎಂ. ಅರಸ್ ವಿರುದ್ಧ ಜಯ ಪಡೆದರು.<br /> <br /> ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ನವನೀತ್ 11-9, 14-12, 11-4, 9-11, 11-9 ರಲ್ಲಿ ವಿ.ಪಿ. ಚರಣ್ ವಿರುದ್ಧವೂ, ವೇದಾಂತ್ 11-6, 11-4, 10-12, 9-11, 11-8, 11-8 ರಲ್ಲಿ ಶ್ರೇಯಲ್ ಕೆ. ತೆಲಾಂಗ್ ಎದುರೂ ಜಯ ಪಡೆದಿದ್ದರು.<br /> <br /> ಯೂತ್ ಬಾಲಕಿಯರ ವಿಭಾಗದ ಫೈನಲ್ನಲ್ಲಿ ರಕ್ಷಾ 12-10, 11-7, 11-6, 11-8 ರಲ್ಲಿ ಐಶ್ವರ್ಯ ಆರ್ ಬಿದರಿ ಅವರನ್ನು ಮಣಿಸಿದರು. ಪ್ರಭಾವಿ ಪ್ರದರ್ಶನ ನೀಡಿದ ರಕ್ಷಾ ನೇರ ಸೆಟ್ಗಳ ಗೆಲುವು ತಮ್ಮದಾಗಿಸಿಕೊಂಡರು.<br /> <br /> ನಾಲ್ಕರಘಟ್ಟದ ಪಂದ್ಯದಲ್ಲಿ ರಕ್ಷಾ 11-8, 12-10, 11-7, 12-10 ರಲ್ಲಿ ರಿಧಿ ರೋಹಿತ್ ಅವರನ್ನು ಮಣಿಸಿದ್ದರೆ, ಐಶ್ವರ್ಯ 6-11, 7-11, 11-4, 15-13, 11-9, 7-10, 11-6 ರಲ್ಲಿ ಪ್ರಯಾಸದ ಗೆಲುವು ಪಡೆದಿದ್ದರು. <br /> <br /> ಸಹನಾ, ಶ್ರೇಯಲ್ಗೆ ಕಿರೀಟ: ಸಹನಾ ಕುಲಕರ್ಣಿ ಮತ್ತು ಶ್ರೇಯಲ್ ಕೆ. ತೆಲಾಂಗ್ ಇದೇ ಟೂರ್ನಿಯಲ್ಲಿ ಕ್ರಮವಾಗಿ ಜೂನಿಯರ್ ಬಾಲಕಿಯರ ಹಾಗೂ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. <br /> <br /> ಫೈನಲ್ ಪಂದ್ಯದಲ್ಲಿ ಸಹನಾ 11-9, 12-14, 12-10, 7-11, 11-8, 11-4 ರಲ್ಲಿ ಎನ್. ಐಶ್ವರ್ಯ ವಿರುದ್ಧ ಗೆಲುವು ಪಡೆದರು. ಸೆಮಿಫೈನಲ್ ಪಂದ್ಯಗಳಲ್ಲಿ ಸಹನಾ 5-11, 11-8, 11-4, 11-5, 11-7 ರಲ್ಲಿ ವಿ. ಖುಷಿ ಎದುರೂ, ಐಶ್ವರ್ಯ 11-7, 8-11, 5-11, 11-8, 11-9, 11-9 ರಲ್ಲಿ ರಿಧಿ ಮೇಲೂ ಜಯ ಸಾಧಿಸಿದ್ದರು.<br /> <br /> ಜೂನಿಯರ್ ಬಾಲಕರ ವಿಭಾಗದ ಫೈನಲ್ನಲ್ಲಿ ಶ್ರೇಯಲ್ 11-2, 11-7, 5-11, 11-8, 11-4 ರಲ್ಲಿ ಸುನಂದ್ ವಾಸನ್ ಅವರನ್ನು ಸೋಲಿಸಿ ಕಿರೀಟ ಮುಡಿಗೇರಿಸಿಕೊಂಡರು. ಚುರುಕಿನ ಆಟವಾಡಿದ ಶ್ರೇಯಲ್ ಕೇವಲ ಒಂದು ಗೇಮ್ನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟರು.<br /> <br /> ಸೆಮಿಫೈನಲ್ ಪಂದ್ಯದಲ್ಲಿ ಶ್ರೇಯಲ್ 13-11, 11-13, 11-8, 11-3, 11-5 ರಲ್ಲಿ ವಿ.ಪಿ. ಚರಣ್ ಅವರನ್ನು ಸೋಲಿಸಿದ್ದರು. ಸುನಂದ್ 12-10, 11-8, 8-11, 14-16, 1-11, 11-5, 11-3 ರಲ್ಲಿ ವೇದಾಂತ್ ಎಂ. ಅರಸ್ ವಿರುದ್ಧ ಗೆಲುವು ಪಡೆದಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>